ಕನ್ನಡ ಸಿನಿಮಾರಂಗದಲ್ಲಿ ಕ್ರೇಜಿಸ್ಟಾರ್ ಎಂದೇ ಗುರುತಿಸಿಕೊಂಡ ರವಿಚಂದ್ರನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಯುವಜನರಿಗೆ ಪ್ರೇಮಲೋಕದ ಬಗ್ಗೆ ಸುಂದರವಾಗಿ ಕಲ್ಪನೆಯನ್ನು ಮೂಡಿಸಿದಂತವರು ಅವರು. ಅವರ ಸಿನಿಮಾಗಳನ್ನು ನೋಡಿದವರು ಯಾರು ಇಲ್ಲ ಅವರು ಮಾಡಿರುವಂತಹ ಬಹುತೇಕ ಸಿನಿಮಾಗಳು ಯಶಸ್ಸನ್ನ ಕಂಡಿವೆ. ಕನ್ನಡದ ಬಹುತೇಕ ಎಲ್ಲಾ ನಟಿಯರೊಂದಿಗೆ ರವಿಚಂದ್ರನ್ ಅವರು ಆ ಕಾಲದಲ್ಲಿ ಸಿನಿಮಾವನ್ನು ಮಾಡಿದ್ದರು. ರವಿಚಂದ್ರನ್ ಅವರು ತಮ್ಮ ಸಿನಿ ಬದುಕಿನ ಬಗ್ಗೆ ಹೇಳಿಕೊಂಡ ಒಂದೆರಡು ವಿಷಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.

ರಾಮಾಚಾರಿ ಸಿನಿಮಾ ಬರುವವರೆಗೂ ರವಿಚಂದ್ರನ್ ಅವರು ಮಾಲಾಶ್ರೀ ಅವರೊಟ್ಟಿಗೆ ನಟನೆಯನ್ನು ಮಾಡಿರುವುದಿಲ್ಲ. ಮಾಲಾಶ್ರೀ ಅವರು ಕೂಡ ಕನ್ನಡ ಸಿನಿಮಾರಂಗದಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಂಡ ನಟಿಯಾಗಿದ್ದರು. ರಾಮಾಚಾರಿ ಸಿನಿಮಾ ಬರುವುದಕ್ಕಿಂತ ಮೊದಲೇ ಹತ್ತಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿದ್ದರು. ಆದರೆ ರವಿಚಂದ್ರನ್ ಅವರ ಜೊತೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ರಾಮಾಚಾರಿ ಸಿನಿಮಾ ಕೂಡ ಖುಷ್ಬು ಅವರನ್ನು ಹಾಕಿಕೊಂಡು ಮಾಡುವ ಯೋಜನೆ ಇತ್ತು. ಆದರೆ ಅವರು ದೊರಕದ ಕಾರಣ ಮಾಲಾಶ್ರೀ ಅವರನ್ನ ಹಾಕಿಕೊಳ್ಳುತ್ತಾರೆ. ಇದಕ್ಕೂ ಮೊದಲೇ ಮಾಲಾಶ್ರೀ ಅವರು ರವಿಚಂದ್ರನ್ ಅವರಿಗೆ ಕೆಲವು ಸಿನಿಮಾಗಳನ್ನು ಮಾಡುವುದಕ್ಕೆ ಕರೆದಿರುತ್ತಾರೆ ಆದರೆ ರವಿಚಂದ್ರನ್ ಅವರಿಗೆ ಆ ಸಿನಿಮಾಗಳನ್ನು ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ರವಿಚಂದ್ರನ್ ಅವರಿಗೂ ಹಾಗೂ ಮಾಲಾಶ್ರೀಯವರಿಗೆ ಪರಿಚಯ ಇರುತ್ತದೆ. ಆಗ ಮಾಲಾಶ್ರೀ ಅವರು ರವಿಚಂದ್ರನ್ ಅವರಿಗೆ ನೀನು ನನ್ನ ಜೊತೆ ಸಿನಿಮಾವನ್ನು ಮಾಡುವುದಿಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ. ಆಗ ರವಿಚಂದ್ರನ್ ಅವರು ಮಾಡುತ್ತೇನೆ ಆದರೆ ನೀನು ಕರೆದು ನಾನು ಸಿನಿಮಾವನ್ನು ಮಾಡುವುದಿಲ್ಲ ನಾನು ಈಶ್ವರಿ ಪ್ರೊಡಕ್ಷನ್ಸ್ ಪ್ರೋಡಿಸರ್ ನಾನು ಕರೆದಾಗ ನೀನು ಸಿನಿಮಾವನ್ನು ಮಾಡು ಎಂದು ಹೇಳುತ್ತಾರೆ. ಆಗ ಮಾಲಾಶ್ರೀ ಅವರು ನಾವಿಬ್ಬರೂ ಯಾವಾಗ ಮಾಡೋಣ ಎಂದು ಕೇಳುತ್ತಾರೆ ರವಿಚಂದ್ರನ್ ಅವರು ಮಾಲಾಶ್ರೀ ಅವರಿಗೆ ಹೇಳುತ್ತಾರೆ ನಾನು ಯಾವಾಗಲೆ ಕಾಲ್ ಮಾಡಿದಾಗ ನೀನು ಹ ಹೇಳು ಎಂದು ಹೇಳುತ್ತಾರೆ. ನಂತರ ಯಾವಾಗ ರಾಮಾಚಾರಿ ಸಿನಿಮಾಕ್ಕೆ ಖುಷ್ಬು ಅವರು ಸಿಗುವುದಿಲ್ಲ ಎಂದಾಗ ಮಾಲಾಶ್ರೀ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಅವರಿಗೆ ರವಿಚಂದ್ರನ್ ಅವರು ಕರೆಯನ್ನು ಮಾಡಿದಾಗ ಅವರು ಹ ಹ ಎಂದು ಹೇಳುತ್ತಿರುತ್ತಾರೆ. ಆ ರೀತಿಯಾಗಿ ರಾಮಾಚಾರಿ ಸಿನಿಮಾಕ್ಕೆ ಮಾಲಾಶ್ರೀಯವರ ಆಯ್ಕೆಯಾಗುತ್ತಾರೆ. ಆ ಸಮಯದಲ್ಲಿ ಮಾಲಾಶ್ರೀ ಅವರು ಅನೇಕ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ರಾಮಾಚಾರಿ ಸಿನಿಮಾಕ್ಕಾಗಿ ಹಗಲು-ರಾತ್ರಿ ಚಿತ್ರೀಕರಣವನ್ನು ಮಾಡಿಕೊಡುತ್ತಾರೆ. ಅವರೆಲ್ಲರೂ ಪ್ರೀತಿಯಿಂದ ಸಿನಿಮಾವನ್ನು ಮಾಡಿಕೊಟ್ಟಿದ್ದಕ್ಕಾಗಿ ರಾಮಾಚಾರಿ ಯಶಸ್ಸನ್ನು ಕಂಡಿತು ಎಂದು ರವಿಚಂದ್ರನ್ ಅವರು ಹೇಳುತ್ತಾರೆ. ಅದೇ ರೀತಿ ರಾಜೇಂದ್ರ ಬಾಬು ಹಾಗೂ ರವಿಚಂದ್ರನ್ ಅವರು ತುಂಬಾ ಒಳ್ಳೆ ಸ್ನೇಹಿತರು ಅವರಿಬ್ಬರ ನಡುವೆ ಒಳ್ಳೆಯ ತಿಳುವಳಿಕೆ ಇತ್ತು ಅಲ್ಲಿಯವರೆಗೂ ಅವರ ಸಿನಿಮಾ ಗೆಲುವನ್ನ ಕಾಣುತ್ತಿತ್ತು. ಯಾವಾಗ ಇಬ್ಬರ ನಡುವೆ ತಿಳುವಳಿಕೆ ಕಡಿಮೆಯಾಗುತ್ತದೆ ಆಗ ದಾರಿ ಎಡವುತ್ತೇವೆ ಸೋಲಾಗುತ್ತದೆ ಎಂದು ರವಿಚಂದ್ರನ್ ಅವರು ಹೇಳುತ್ತಾರೆ.

ದಕ್ಷಿಣ ಭಾರತದ ಸಿನಿಮಾದಲ್ಲಿ ಖುಷ್ಬೂ ಅವರ ಹೆಸರು ಮನೆಮಾತಾಗುವುದಕ್ಕೆ ಕಾರಣ ರವಿಚಂದ್ರನ್ ಅವರು. ಅವತ್ತಿನಿಂದ ಇವತ್ತಿನವರೆಗೂ ರವಿಚಂದ್ರನ್ ಹಾಗೂ ಖುಷ್ಬು ನಡುವೆ ಉತ್ತಮವಾದ ಸ್ನೇಹವಿದೆ ರವಿಚಂದ್ರನ್ ಅವರ ತಂದೆಯಿಂದ ಖುಷ್ಬು ಯಾವಾಗಲೋ ಒಂದು ಸಾರಿ ಸಹಾಯವನ್ನು ಪಡೆದಿರುತ್ತಾರೆ ಅದನ್ನು ಅವರು ಇಂದಿಗೂ ಮರೆತಿಲ್ಲ. ಯಾರು ಜೀವನದಲ್ಲಿ ಮಾಡಿರುವ ಚಿಕ್ಕ ಚಿಕ್ಕ ಸಹಾಯವನ್ನು ಮರೆಯುವುದಿಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಆ ಸಹಾಯ ಮಾಡಿದವರನ್ನು ಪೂಜಿಸುತ್ತಾರೆ ಅಂತಹ ವ್ಯಕ್ತಿಗಳು ಬೆಳೆಯುತ್ತಾರೆ ಎನ್ನುವುದಕ್ಕೆ ಖುಷ್ಬೂ ಅವರು ಒಂದು ಉದಾಹರಣೆ ಎಂದು ರವಿಚಂದ್ರನ್ ಅವರು ಹೇಳುತ್ತಾರೆ. ಇದು ನಾವು ನಿಮಗೆ ತಿಳಿಸುತ್ತಿರುವ ರವಿಚಂದ್ರನ್ ಅವರ ಸಿನಿ ಜೀವನದ ಕೆಲವು ಘಟನೆಗಳಾಗಿವೆ.

Leave a Reply

Your email address will not be published. Required fields are marked *