2024 ನೂತನ ವರ್ಷದ ಪ್ರಥಮ ಹಬ್ಬ ಮಕರ ಸಂಕ್ರಾಂತಿ. ಸೂರ್ಯ ಮಕರ ರಾಶಿಗೆ ಪ್ರವೇಶ ಪಡೆಯುತ್ತಾನೆ ಇದರಿಂದ ಗ್ರಹಗಳ ಸ್ಥಾನ ಬದಲಾವಣೆ ರಾಶಚಕ್ರದಲ್ಲಿ ಕೂಡ ಸಾಕಷ್ಟು ಬದಲಾವಣೆ ತರುತ್ತದೆ.

ಕುಂಭ ರಾಶಿಯ ಮಕರ ಸಂಕ್ರಾಂತಿಯ ಮಾಸ ಭವಿಷ್ಯವನ್ನು ನೋಡೋಣ. ಕುಂಭ ರಾಶಿಯವರ ಜನವರಿ ತಿಂಗಳಿನ ಭವಿಷ್ಯ ಅತ್ಯುತ್ತಮವಾಗಿ ಇರುತ್ತದೆ ಎಂದು ಊಹೆ ಮಾಡಲಾಗಿದೆ. ಬುಧ ಗ್ರಹ ಮತ್ತು ಶುಕ್ರ ಗ್ರಹ ಮಾಸದ ಪ್ರಾರಂಭದಲ್ಲಿ 10ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಮಂಗಳ ಗ್ರಹ ಮತ್ತು ಸೂರ್ಯ ಗ್ರಹ 11ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ.

ವೃತ್ತಿಯಲ್ಲಿ ಮಾಡುವ ಕೆಲಸದಲ್ಲಿ ಮೇಲಧಿಕಾರಿಗಳ ಬೆಂಬಲ ದೊರಕುತ್ತದೆ. ಯಾವುದೇ ರೀತಿಯ ಸವಾಲನ್ನು ಎದುರಿಸಲು ದೈರ್ಯ ತೋರಿಸುವುದು ಮತ್ತು ಸಿದ್ಧವಾಗಿ ಇರುವುದು ಕುಂಭ ರಾಶಿಯವರ ಗುಣ. ಯಾವ ತೊಂದರೆ ಬಂದರು ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿರುತ್ತಿರಿ.

ಅದ್ಭುತವಾದ ಆತ್ಮವಿಶ್ವಾಸವನ್ನು ಹೊಂದಿರುವ ಕಾರಣ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ದೊರಕುವುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ವಿದೇಶ ಸಂಪರ್ಕಗಳು ವ್ಯಾಪಾರದ ದೃಷ್ಟಿಯಿಂದ ಪ್ರಯೋಜನ ನೀಡುತ್ತದೆ.

ಜನವರಿ ತಿಂಗಳ ಆರಂಭದಲ್ಲಿ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಏರು ಪೇರು ಇರುತ್ತದೆ. ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಸಾಧ್ಯವಿದೆ. ಕೌಟುಂಬಿಕ ಜೀವನ ಸುಗಮವಾಗಿ ಸಾಗುತ್ತದೆ ಹಾಗೂ ಸುಖಕರವಾಗಿ ಇರುತ್ತದೆ. ಮಾತಿನ ಮೇಲೆ ಹಿಡಿತ ಸಾಧಿಸಬೇಕು ಇಲ್ಲದೆ ಹೋದರೆ ಬಾಯಿ ತಪ್ಪಿ ಬಂದ ಮಾತು ನಿಮ್ಮನು ಸಂಕಷ್ಟಕ್ಕೆ ದೂಡುತ್ತದೆ. ಕಟು ಮಾತು ಎದುರು ಇರುವ ವ್ಯಕ್ತಿ ಮನಸ್ಸಿಗೆ ಬಹಳ ನೋವು ನೀಡುತ್ತದೆ ಅದರಿಂದ ಸಂಬಂಧ ಕಳಚಿ ಬೀಳುವ ಸಾಧ್ಯತೆ ಹೆಚ್ಚಿಗೆ ಇದೆ.

ಪ್ರೀತಿ ಮತ್ತು ಮದುವೆಯ ವಿಚಾರದಲ್ಲಿ ಏರು ಪೇರು ಕಾಡಬಹುದು. ಹೆಚ್ಚು ವಾದ ಪ್ರೀತಿಯಲ್ಲಿ ಬಿರುಕು ತರುತ್ತದೆ. ಪಾಲುದಾರಿಕೆಯಲ್ಲಿ ಹೆಚ್ಚು ಗಮನ ನೀಡಬೇಕು ಇಲ್ಲದೆ ಹೋದರೆ ನಷ್ಟ ಕಟ್ಟಿಟ್ಟ ಬುತ್ತಿ. ಆರ್ಥಿಕ ಸ್ಥಿತಿಯ ಬಗ್ಗೆ ಜಾಗರೂಕವಾಗಿ ಇರಬೇಕು, ಜನವರಿ ತಿಂಗಳಿನಲ್ಲಿ ಹೆಚ್ಚು ಸುಧಾರಣೆ ತರುತ್ತದೆ. ವೈವಾಹಿಕ ಜೀವನದಲ್ಲಿ ಯಾವುದೆ ದುಡುಕು ನಿರ್ಧಾರ ಕೈಗೊಳ್ಳಬಾರದು. ಗುರುವಿನ ದಯೆಯಿಂದ ಉದ್ಯೋಗ ಅವಕಾಶಗಳು ಹುಡುಕಿ ಬರುತ್ತವೆ.

ಆದಾಯ ಗಳಿಕೆಯಿಂದ ಲಾಭ ಲಭಿಸುತ್ತದೆ. ಆರೋಗ್ಯದ ವಿಚಾರದಲ್ಲಿ ರಾಶಿಯ ಅಧಿಪತಿ ಹೆಚ್ಚು ಗಮನ ಕೊಡುವ ಕಾರಣ ಅದು ಉತ್ತಮವಾಗಿ ಇರುತ್ತದೆ. ಆಲಸ್ಯ ಬಿಟ್ಟು, ಹೆಚ್ಚು ಪ್ರಯತ್ನ ಮಾಡಿದರೆ ಸಾಕು ಜೀವನ ಸುಗಮವಾಗಿ ಸಾಗುತ್ತದೆ. ಅಪಘಾತ ಮತ್ತು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಅದರಲ್ಲಿ ಹೆಚ್ಚು ಗಮನ ನೀಡಬೇಕು. ವಾಹನ ಚಾಲನೆ ಮಾಡುವಾಗ ಎಚ್ಚರ ವಹಿಸುವುದು ಒಳ್ಳೆಯದು. ಕಣ್ಣಿಗೆ ಕಾಣದೆ ಇರುವ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು.

ಪರಿಹಾರ : ಶನಿವಾರದ ದಿನದಂದು ಅರಳಿಮರದ ಕೆಳಗೆ ಸಾಸಿವೆ ಎಣ್ಣೆ ದೀಪ ಬೆಳಗಬೇಕು ಹಾಗೆ ಶನಿ ಮಹಾತ್ಮನ ಧ್ಯಾನ ಮಾಡುವುದರಿಂದ ವಿಶೇಷ ಲಾಭ ಪಡೆಯಲು ಸಾಧ್ಯ ಜೊತೆಗೆ ತೊಂದರೆಗಳಿಂದ ಹೊರ ಬರಲು ಸಾಧ್ಯ. ನಾವು ಭಕ್ತಿಯಿಂದ ದೇವರ ಕಾರ್ಯಕ್ರಮದಲ್ಲಿ ಭಾಗಿಯಾದರೆ ದೇವರ ಅನುಗ್ರಹ ನಮ್ಮಗೆ ಸಿಗುತ್ತದೆ. ನಂಬಿಕೆ ಒಂದು ಬಲವಾದ ಅಸ್ತ್ರ ಅದನ್ನು ದೇವರ ಮೇಲೆ ಇಡಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *