2024ರ ಫೆಬ್ರವರಿ ಮಾಸದಲ್ಲಿ ಕುಂಭ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ. ಪೂರ್ತಿ ತಿಂಗಳ ಭವಿಷ್ಯ ನೋಡೋದಾದರೆ ಮಿಶ್ರ ಫಲ ಕಾಣಬಹುದು.

ಗ್ರಹಗಳ ಸಂಚಾರದಿಂದ ಸಂಭವಿಸುವ ಬದಲಾವಣೆಯಿಂದ ಹೆಚ್ಚಾಗಿ ಇರುವ ಕೋಪ ತಾಪ ಎಲ್ಲಾ ಇಳಿದು ಹೋಗುತ್ತದೆ. ಇನ್ನು ಅದಮ್ಯ ಧೈರ್ಯದಿಂದ ಯಾವುದೇ ಕಠಿಣ ಪರಿಸ್ಥಿತಿ ಎದುರಾದರು ಅದನ್ನು ಮೆಟ್ಟಿ ನಿಲ್ಲುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಮಿಶ್ರ ಪಲಿತಂಶ ಕಾಣಿಸುತ್ತಿದೆ. ಮೇಲಿನ ಅಧಿಕಾರಿಗಳ ಜೊತೆ ಒಳ್ಳೆ ಸಂಬಂಧ ಕಾಪಾಡಿಕೊಂಡು ಇರುತ್ತೀರಿ ಅದು ಮುಂದೆ ಬರುವ ದಿನಗಳಲ್ಲಿ ಪ್ರತಿಫಲ ಕೊಡುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ, ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಸಹ ಇದೆ.

ಪರಿವಾರದ ಹಿರಿಯರಿಂದ ಎಲ್ಲಾ ಕಾರ್ಯಗಳಿಗೆ ಬೆಂಬಲ ದೊರಕುತ್ತದೆ. ಕಿರಿಯ ಸಹೋದರ ಮತ್ತು ಸಹೋದರಿಯರ ಜೊತೆ ಕಲಹ ಸೃಷ್ಟಿ ಆಗದಂತೆ ನೋಡಿಕೊಳ್ಳುವುದು ಒಳ್ಳೇದು. ವ್ಯಾಪಾರ ವ್ಯವಹಾರಗಳನ್ನು ಹೊಸದಾಗಿ ಪ್ರಾರಂಭ ಮಾಡುವವರಿಗೆ ಬೆಳವಣಿಗೆ ಸಿಗುತ್ತೆ. 7ನೇ ಮನೆಯಲ್ಲಿ ಶನಿ ಮಹಾತ್ಮ ಇರುವುದರಿಂದ ದೇವರು ಮಾಡುವ ವ್ಯವಹಾರದಲ್ಲಿ ಯಶಸ್ಸು ಕಾಣಲು ಸಹಾಯ ಮಾಡುತ್ತಾನೆ. ಇನ್ನು ವ್ಯವಹಾರ, ಉದ್ಯೋಗ, ನೌಕರಿ ಯಾವುದರಲ್ಲಿ ಇದ್ದರು ಅದರಲ್ಲಿ ಒಳ್ಳೆ ಲಾಭ ಸಿಗುತ್ತದೆ.

ಇನ್ನು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ಅವಕಾಶ ಇದೆ. ಮಂಗಳ ಗ್ರಹ ಮತ್ತು ಶುಕ್ರ ಗ್ರಹ 5ನೇ ಮನೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಸಕಾರಾತ್ಮಕ ಪ್ರತಿಫಲ ಲಭಿಸುತ್ತದೆ. ಗುರು ಗ್ರಹ ಪೂರಾ ತಿಂಗಳು 3ನೇ ಮನೆಯಲ್ಲಿ ಇರುವುದರಿಂದ ಕೌಟುಂಬಿಕ ಜೀವನ ಸುಗಮವಾಗಿ ನಡೆಯುತ್ತದೆ. ಇನ್ನು ಒಡಹುಟ್ಟಿದವರ ಜೊತೆ ಇರುವ ಸಂಬಂಧ ಗಟ್ಟಿಯಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಧಾನ ಧರ್ಮ ಮಾಡುವುದರಲ್ಲಿ ಒಡಹುಟ್ಟಿದವರು ಜೊತೆಯಾಗಿ ಪಾಲುಗೊಳ್ಳುತ್ತಾರೆ.

5ನೇ ಮನೆಯಲ್ಲಿ ಮಂಗಳ ಗ್ರಹ ಮತ್ತು ಶುಕ್ರ ಗ್ರಹದ ಸಂಯೋಗ ಆಗುವುದರಿಂದ ಅದು ಪ್ರೀತಿ ಪ್ರೇಮದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತೊಂದರೆ ಕಾಡುವುದಿಲ್ಲ ಅದು ಕೂಡ ತಿಂಗಳ ಆರಂಭದಲ್ಲಿ. ಇನ್ನು ದ್ವಿತಯಾರ್ಧದಲ್ಲಿ ವಾದ ಮಾಡುವುದರಿಂದ ದೂರ ಉಳಿಯಬೇಕು ಇಲ್ಲದೆ ಹೋದರೆ ಬಿರುಕು ಮೂಡುವ ಸಂಭವ ಇದೆ.

ಇನ್ನು ವೈವಾಹಿಕ ಜೀವನದ ಪರೀಕ್ಷೆ ಮಾಡುವುದು ಶನಿ ದೇವರು ಸ್ವಲ್ಪ ಮಟ್ಟಿಗೆ ಏರು ಪೇರು ಕಾಡಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ಗಳಿಗೆ ಹೆಚ್ಚಾಗುತ್ತದೆ, ಆಸ್ತಿ ವಿಚಾರದಲ್ಲಿ ಮುನ್ನಡೆ ಸಾಧಿಸುವ ಅವಕಾಶ ಇದೆ. ಮನೆ ಅಥವ ವಾಹನ ಖರೀದಿ ಮಾಡಲು ಒಳ್ಳೆಯ ಕಾಲ.

ಇನ್ನು ದ್ವಿತಯಾರ್ಧದಲ್ಲಿ ಮಂಗಳ ಗ್ರಹ ಮತ್ತು ಶುಕ್ರ ಗ್ರಹ 12ನೇ ಮನೆಗೆ ಹೋಗುವುದರಿಂದ ಖರ್ಚು ಮತ್ತು ವೆಚ್ಚ ಹೆಚ್ಚಾಗುತ್ತದೆ ಆದಾಯದಲ್ಲಿ ಕೊರತೆ ಕಾಣಬಹುದು. ಆರೋಗ್ಯದ ವಿಚಾರದಲ್ಲಿ ಕೂಡ ಏರಿಳಿತ ಸಾಮಾನ್ಯವಾಗಿದ್ದು ಅದು 8ನೇ ಮನೆಯಲ್ಲಿ ಕೇತು ಗ್ರಹದ ಪ್ರಭಾವದಿಂದ ಆಗುತ್ತದೆ. ಕಣ್ಣಿನ ಉರಿ, ಕಣ್ಣಿಂದ ನೀರು ಬರುವುದು, ಕಣ್ಣಿನ ನೋವು, ಪಾದದ ಉರಿ, ಕಾಲಿನಲ್ಲಿ ಕೀಲುನೋವು. ಜಾಗರೂಕತೆ ವಹಿಸಬೇಕು ಹಾಗೆ ತಕ್ಷಣಕ್ಕೆ ವೈದ್ಯಕೀಯ ಪರೀಕ್ಷೆ ಪಡೆಯುವುದು ಒಳ್ಳೆಯದು.

ಪರಿಹಾರದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶನಿವಾರ ಕುಂಭ ರಾಶಿಯವರು ದಶರಥ್’ಕೃತ ಶನಿ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ದೇವರ ಮೇಲೆ ಭಕ್ತಿ ಮತ್ತು ನಂಬಿಕೆ ಎರಡು ಮುಖ್ಯ ಇರುತ್ತದೆ. ದೇವರ ಕೃಪೆಗೆ ಪಾತ್ರರಾಗಲು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *