ಪ್ರತಿ ವರ್ಷ ಬಂದ ಹಾಗೆ ಎಲ್ಲರಿಗೂ ಒಂದಲ್ಲ ಒಂದು ಕುತೂಹಲ ಇರುತ್ತದೆ ಅದರಲ್ಲಿ ರಾಶಿ ಭವಿಷ್ಯದ ಕುತೂಹಲವೂ ಒಂದು. ಎರಡು ಸಾವಿರದ ಇಪ್ಪತ್ತೆರಡು ಈ ವರ್ಷ ಎಲ್ಲಾ ಹನ್ನೆರಡು ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು ತರುತ್ತದೆ ಇದರ ಪರಿಣಾಮವು ಖಂಡಿತವಾಗಿಯೂ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಬೀರುತ್ತದೆ.

ಹಾಗೆಯೇ ಅದರಲ್ಲಿ ಕೆಲವು ಅದೃಷ್ಟ ರಾಶಿಗಳಲ್ಲಿ ಶುಭ ಫಲಗಳು ಇರುತ್ತದೆ. ಪ್ರತಿಯೊಬ್ಬರು ಹಿಂದಿನ ವರ್ಷಕ್ಕಿಂತ ಮುಂದಿನ ವರ್ಷದ ಭವಿಷ್ಯದ ಬಗ್ಗೆ ಕುತೂಹಲ ಹೊಂದುವುದು ಸಹಜ ಅದರಲ್ಲಿ ಕುಂಭ ರಾಶಿಯವರಿಗೆ ಹೆಚ್ಚಿನ ಶುಭಫಲಗಳು ಇದೆ ಹಾಗೆಯೇ ವ್ಯಾಪಾರ ವಿದ್ಯೆ ಎಲ್ಲದರಲ್ಲಿಯೂ ಒಳ್ಳೆಯ ಶುಭಫಲಗಳನ್ನು ಹೊಂದಿರುತ್ತಾರೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಕುಂಭ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ವಿದ್ಯೆ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ ಕುಂಭ ರಾಶಿಯವರಿಗೆ ಯಾವುದೇ ಶುಭ ಹಾಗೂ ದರಿದ್ರಗಳು ಬಂದರೆ ಅಧಿಕವಾಗಿಯೇ ಬರುತ್ತದೆ ಹಣ ಬಂದರೂ ಸಹ ಅಧಿಕವಾಗಿಯೇ ಬರುತ್ತದೆ ಕುಂಭ ರಾಶಿಯವರು ಜಾಸ್ತಿ ಜ್ಞಾಪಕ ಶಕ್ತಿಯನ್ನು ಹೊಂದಿರುತ್ತಾರೆ ಯಾವುದೇ ನಿರ್ಧಾರವನ್ನು ತಕ್ಷಣ ಕೈಗೊಳ್ಳುವುದಿಲ್ಲ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ ಹಾಗೆಯೇ ಸುಗಂಧ ದ್ರವ್ಯವನ್ನು ಕಂಡರೆ ತುಂಬಾ ಇಷ್ಟ ನೋಡಲು ಒರಟಾಗಿ ಕಂಡರೂ ಸಹ ತುಂಬಾ ಮೃದು ಸ್ವಭಾವದವರು.

ಸಮಾಜಕ್ಕೆ ಎಸ್ಟು ಬೇಕು ಅಷ್ಟು ಮಾನವೀಯತೆ ಇರುತ್ತದೆ ಆದರೆ ಅಂತರಂಗದಲ್ಲಿ ಕ್ರೌರ್ಯದ ಮುಖವಾಡ ಇರುತ್ತದೆ ಹಾಗೆಯೇ ಯಾವುದೇ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಬಿಟ್ಟುಕೊಡುವುದಿಲ್ಲ ಯಾವಾಗಲು ಸಂತೋಷ ಉತ್ಸಾಹದಲ್ಲಿ ಇರುತ್ತಾರೆ ಕುಂಭ ರಾಶಿಯವರಿಗೆ ಮೂವತ್ತರ ನಂತರ ಜೀವನದಲ್ಲಿ ಅಭಿವೃದ್ದಿ ಅಗುತ್ತದೆ .

ಸುಳ್ಳು ಹೇಳುವರು ಆಗಿರುತ್ತಾರೆ ಹಾಗೆಯೇ ಮೋಸ ಮಾಡುವ ಮತ್ತು ಅಧಿಕಾರವನ್ನು ಕಸಿದುಕೊಳ್ಳುವ ಗುಣ ಇವರದ್ದು ಆಗಿರುತ್ತದೆ ಆದರೆ ಅವರು ಹೊರಗೆ ಕಾಣಿಸುವುದೇ ಆಗಿರುವುದಿಲ್ಲ ತುಂಬಾ ಕಷ್ಟ ಪಟ್ಟು ದುಡಿಮೆ ಮಾಡುತ್ತಾರೆ ಪಿತ್ರಾರ್ಜಿತ ಆಸ್ತಿ ಇರುವುದಿಲ್ಲ ತುಂಬಾ ಹಾರ್ಡ್ ವರ್ಕ್ ಮಾಡುತ್ತಾರೆ ಸೋಂಬೇರಿ ತನವನ್ನು ಸಹಿಸಿಕೊಳ್ಳುವುದಿಲ್ಲ ಒಂದಕ್ಕಿಂತ ಹೆಚ್ಚು ಪ್ರೀತಿಯಲ್ಲಿ ಸಿಲುಕಿ ಹಾಕಿ ಕೊಳ್ಳುತ್ತಾರೆ ಕುಂಭ ರಾಶಿಯಲ್ಲಿ ಹುಟ್ಟಿದವರು ಬೇಗನೆ ಕೋಪ ಬರುವುದಿಲ್ಲ ಬಂದರೆ ತುಂಬಾ ಕೋಪ ಬರುತ್ತದೆ.

ಒಂದು ಸಲ ಬೇಡ ಎಂದರೆ ಬೇಡ ಹಾಗೆ ನಿರ್ಧಾರ ಕೈಗೊಳ್ಳುತ್ತಾರೆ ಮೊದಲನೇ ಮಗುವಿನಲ್ಲಿ ಅಷ್ಟೊಂದು ನೆಮ್ಮದಿ ಇರುವುದಿಲ್ಲ ಅಜೀರ್ಣದ ಸಮಸ್ಯೆ ಜಾಸ್ತಿ ಬಾಧಿಸುತ್ತದೆ ತಲೆ ನೋವಿನ ಸಮಸ್ಯೆ ಜಾಸ್ತಿ ಇರುತ್ತದೆ ಐಟಿಐ ಕಬ್ಬಿಣ ಪಿಟ್ಟರ್ ಹುದ್ದೆಗಳು ಹೆಚ್ಚಿನ ಲಾಭವನ್ನು ತರುತ್ತದೆ ಅಧಿಕಾರಿಯಾಗುವ ಸಾಧ್ಯತೆ ಇರುತ್ತದೆ ಶುಕ್ರ ಮತ್ತು ಶನಿ ಗ್ರಹಗಳು ತುಂಬಾ ಚೆನ್ನಾಗಿ ಶುಭ ಯೋಗವನ್ನು ತರುತ್ತದೆ ಅದೇ ರೀತಿ ಕುಜ ಚಂದ್ರ ಗುರು ಪರಮ ಪಾಪಿ ಗಳಾಗಿ ಕೆಲಸವನ್ನು ಮಾಡುತ್ತಾರೆ ಈಶ್ವರನ ಆರಾಧನೆ ಮಾಡುವ ಮೂಲಕ ಪರಿಹಾರವನ್ನು ಮಾಡಿಕೊಳ್ಳಬಹುದು ಅದರಲ್ಲಿ ಪ್ರತಿ ಸೋಮವಾರ ಒಪ್ಪತ್ತು ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹೀಗೆ ಕುಂಭ ರಾಶಿಯವರಿಗೆ ಒಳ್ಳೆಯ ಶುಭಫಲಗಳು ಇದೆ.

Leave a Reply

Your email address will not be published. Required fields are marked *