Ultimate magazine theme for WordPress.

ಕುಂಭ ರಾಶಿಯವರು ಬಹಳ ಬುದ್ದಿವಂತರು ಹಾಗೂ ಆತ್ಮವಿಶ್ವಾಸಿಗಳು

0 180

ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯು ಒಂದಾಗಿದ್ದು ಈ ರಾಶಿಯ ಅಧಿಪತಿಯು ಶನಿ ಆಗಿರುತ್ತಾನೆ ಇನ್ನು ಈ ರಾಶಿಯಲ್ಲಿ ಹುಟ್ಟಿದವರು ಬಹಳ ಬುದ್ಧಿವಂತರು ಹಾಗೂ ಆತ್ಮವಿಶ್ವಾಸಿಗಳಾಗಿರುತ್ತಾರೆ ಇನ್ನು ಕಲಾತ್ಮಕ ಮನೋಭಾವ ಹೊಂದಿರುತ್ತಾರೆ ಈ ರಾಶಿಯವರು ತಮ್ಮಲ್ಲಿ ಅನೇಕ ವಿಚಾರಗಳನ್ನು ಗುಪ್ತವಾಗಿರಿಸಿ ಇರುವುದರಲ್ಲಿ ನಿಸ್ಸೀಮರು ಈ ರಾಶಿಯವರನ್ನು ಒಬ್ಬಂಟಿ ಹೋರಾಟಗಾರ ಎಂದೇ ಕರೆಯಬಹುದು ಏಕೆಂದರೆ ತಮಗೆ ಯಾವುದೇ ಕಷ್ಟ ತೊಂದರೆ ಒಳಪಟ್ಟಿದ್ದರು ಯಾರಲ್ಲೂ ಹೇಳಿಕೊಳ್ಳದೆ ಅದನ್ನು ಸ್ವತಃ ತಾವೇ ಒಬ್ಬಂಟಿಯಾಗಿ ಹೋರಾಡುತ್ತಾರೆ ಇನ್ನು ಈ ರಾಶಿಯಲ್ಲಿ ಜನಿಸಿದವರು ತಮ್ಮ ಬಾಲ್ಯ ಜೀವನದಲ್ಲಿ ಅನೇಕ ಕಷ್ಟಸುಖ ನೋವುಗಳನ್ನು ಅನುಭವಿಸುತ್ತಾ ತನ್ನ ಸಂಬಂಧಿಕರು ಸ್ನೇಹಿತರು ಎಲ್ಲರಿಂದಲೂ ನೋವು ತಿಂದು ದೂರ ಇದ್ದು ಸಾಕಷ್ಟು ನೋವನ್ನು ಅನುಭವಿಸುತ್ತಾರೆ ಆದರೂ ಕೂಡ ಇವರು ಸದಾ ಹಸನ್ಮುಖಿಯಾಗಿ ಇರುತ್ತಾರೆ

ಸಾಮಾನ್ಯವಾಗಿ ಈ ರಾಶಿಯವರು ಇವರದೇ ಗುಣನಡತೆಯ ಹಾವಭಾವ ಹೊಂದಿರುವ ಜನರ ಸ್ನೇಹವನ್ನು ಬಯಸುತ್ತಾರೆ ಇನ್ನು ಬೇರೆಯವರು ಇವರ ಹತ್ತಿರ ಚೆನ್ನಾಗಿ ಕೆಲಸ ಮಾಡಿಸಿಕೊಳ್ಳುತ್ತಾರೆ ಆದರೆ ಇವರ ಜೀವನದಲ್ಲಿ ಇವರೇ ಅಪಾಯಕಾರಿ ಆಗುತ್ತಾರೆ ಪರರಿಗೆ ಉಪಕಾರಿ ಆಗುತ್ತಾರೆ ಇನ್ನು ತುಂಬಾ ಸೋಂಬೇರಿ ಸ್ವಭಾವ ಹೊಂದಿದ್ದು ಬೇರೆಯವರ ಮಾತು ಕೇಳದೆ ಇವರ ಮಾತೇ ಕೊನೆ ಎನ್ನುವ ದೃಢ ನಿರ್ಧಾರವನ್ನು ಹೊಂದಿರುತ್ತಾರೆ ಬೇರೆಯವರ ಮಾತನ್ನು ಯಾವತ್ತೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಇವರು ತುಂಬಾ ಮುಂಗೋಪಿಗಳಾಗಿರುತ್ತಾರೆ ತಾನು ಒಂದು ಮಾತನಾಡಬೇಕಾದರೆ ಹಿಂದೆ ಮುಂದೆ ಯಾರಿರುತ್ತಾರೆ ಯಾವ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಇದೆ ಎಂದು ನೋಡದೆ ಮಾತನಾಡಿ ಬಿಟ್ಟು ಜನರ ಕೆಂಗಣ್ಣಿಗೆ ಗುರಿಯಾಗುತ್ತರೆ

ಶನಿ ಅಧಿಪತಿಯಾಗಿರುವುದರಿಂದ ಅನೇಕ ಸಮಸ್ಯೆಗಳ ಸುರುಳಿಯ ಸುಳಿಯಲ್ಲಿ ಸುತ್ತುತ್ತಿರುತ್ತಾರೆ ಇನ್ನೂ ಇವರು ಉತ್ಸಾಹಿಗಳು ಸಂವೇದನಾಶೀಲರು ವಿನಮ್ರ ಜೀವನವನ್ನು ತನ್ನದೇ ಚೌಕಟ್ಟಿನಲ್ಲಿ ನಡೆಸಲು ಬಯಸುತ್ತಾರೆ ಆದರೆ ತಾಯಿಯೇ ದೇವರು ಎನ್ನುವಂತೆ ತಾಯಿಯ ಮಾತಿನ ಮೇಲೆ ಅಪಾರ ನಂಬಿಕೆ ವಿಶ್ವಾಸವನ್ನು ಹೊಂದಿರುವವರು ತಾಯಿಯ ಮಾತು ವೇದವಾಕ್ಯ ಎಂದು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ

ಜೀವನದಲ್ಲಿ ಏನನ್ನಾದರೂ ಸಾಧನೆ ಗುರಿಮುಟ್ಟಲು ಒಬ್ಬಂಟಿಯಾಗಿ ಗುರಿಮುಟ್ಟಲು ಅಸಾಧ್ಯ ಜೊತೆಗೆ ಯಾರಾದಾದರೂ ಸಹಾಯವನ್ನು ಪಡೆಯಲೇಬೇಕು ಹಾಗಾಗಿ ಆದಷ್ಟು ಹಿರಿಯರು ಹಿತೈಷಿ ಸಲಹೆಯನ್ನು ಪಡೆಯಿರಿ ಕಡೆಗಣಿಸಬೇಡಿ ವೈವಾಹಿಕ ಜೀವನ ಬಗ್ಗೆ ನೋಡಿದರೆ ಶನಿಕಾಟದಿಂದ ವಿವಾಹ ವಿಳಂಬವಾಗುತ್ತದೆ ಇನ್ನೂ ದುಡುಕುವ ಸ್ವಭಾವದಿಂದ ಒಳ್ಳೆಯ ಅವಕಾಶಗಳು ಕಳೆದುಕೊಳ್ಳುತ್ತಾರೆ ಆದಷ್ಟು ತಾಳ್ಮೆ ಇದ್ದರೆ ಒಳಿತು

ದೇವರ ಧ್ಯಾನ ಭಕ್ತಿ ಪೂಜೆ ಆಧ್ಯಾತ್ಮದ ಕಡೆ ಒಲವು ಈ ರಾಶಿಯವರಿಗೆ ಜಾಸ್ತಿ ಇದು ಕಥೆ ಪುಸ್ತಕ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಇನ್ನು ಮುಪ್ಪಿನಲ್ಲಿ ಇಲ್ಲ ವಯಸ್ಕ ಜೀವನದಲ್ಲಿ ತಮ್ಮ ಮಕ್ಕಳು ಸಂಬಂಧಿಕರು ಇಂದ ಆಸ್ತಿ ವಿಚಾರದಲ್ಲಿ ಕೋರ್ಟ್ ಕಚೇರಿ ಓಡಾಡುವ ಸಾಧ್ಯತೆ ಆದಷ್ಟು ಜಾಗ್ರತೆ ಅವಶ್ಯ ಇನ್ನೂ ಇವರು ಅಂತರ್ಮುಖಿ ಹಾಗೂ ಮೂಡಿಗಳು ಆಗಿದ್ದು ಸಾಮಾಜಿಕ ಜೀವನ ಹಾಗೂ ಏನಾದರೂ ಸಾಧನೆ ಮಾಡ್ಬೇಕು ಎಂದು ಪ್ರಗತಿಪರ ಯೋಚನೆಯನ್ನು ಮಾಡುತ್ತಾರೆ ಚಂಚಲ ಮನಸ್ಸು ಹೊಂದಿದ್ದು ಸಂಕುಚಿತ ಮನೋಭಾವ ಹೊಂದಿರುತ್ತಾರೆ ಇವರು ಯಾವುದೇ ಕೆಲಸಕ್ಕೆ ಮುಂದೆ ಹೋಗದೆ ಅವರೇ ಬರಲಿ ಎಂದು ಕಾಯುತ್ತಾರೆ

ಉದ್ಯೋಗದಲ್ಲಿ ಕಬ್ಬಿಣ ಕೆಲಸ ಇಂಜಿನಿಯರಿಂಗ್ ಮೆಕ್ಯಾನಿಕ್ ಸಂಶೋಧನೆ ವಿಜ್ಞಾನ ನಾಟಕ ಶಿಕ್ಷಕ ವೃತಿ ವ್ಯಾಪಾರ ಇಂತಹ ವ್ಯವಹಾರ ತೊಡಗಿಸಿಕೊಂಡರೆ ಯಶಸ್ಸು ಲಭ್ಯವಾಗುತ್ತದೆ ಆರೋಗ್ಯ ವಿಚಾರದಲ್ಲಿ ನೋಡುವುದಾದರೆ ವಾಯುತತ್ವ ಗುಣವನ್ನು ಹೊಂದಿರುವ ರಾಶಿಯಾಗಿರುವುದರಿಂದ ಕಣ್ಣಿನ ನರಕ್ಕೆ ಸಂಬಂಧಪಟ್ಟ ಸಂಬಂಧಪಟ್ಟಿದ್ದು ಕಾಯಿಲೆಗಳು ಸಮಸ್ಯೆಗಳು ಕಣ್ಣು ನೋವು ತಲೆನೋವು ಹಾಗೂ ಹೊಟ್ಟೆಗೆ ಸಂಬಂಧಪಟ್ಟಿ ಕಾಯಿಲೆಗಳು ಕಂಡು ಬರುವುದು ಇನ್ನು ತಮ್ಮ ಜೀವನಕ್ಕೆ ಒದಗಿದ ಕಷ್ಟಗಳನ್ನು ತಕ್ಕಮಟ್ಟಿಗೆ ಪರಿಹಾರ ಮಾಡಬೇಕೆಂದರೆ ಆದಷ್ಟು ಶನಿಮಹಾತ್ಮ ಮತ್ತು ಆಂಜನೇಯ ಸ್ವಾಮಿ ದೇವಾಲಯಕ್ಕೆ ಶನಿವಾರ ಅಥವಾ ಮಂಗಳವಾರಪೂಜೆ ಮಾಡಿಸಿ ಶನಿ ದೇವರ ಶ್ಲೋಕವನ್ನು ಪಟನೆ ಮಾಡಿದಲ್ಲಿ ಶನಿಯ ಅನುಗ್ರಹಕ್ಕೆ ಪಾತ್ರರಾಗಿ ಒಳ್ಳೆಯದು ಆಗುವುದು..

Leave A Reply

Your email address will not be published.