ಲೈವ್ ಬಂದು ತಾಯಿ ಆಗುತ್ತಿರುವ ಸುದ್ದಿ ಹಂಚಿಕೊಂಡ ಸೀರಿಯಲ್ ನಟಿ

0 0

ಅಮೃತ ಅವರು ಕಲರ್ಸ್ ಕನ್ನಡದಲ್ಲಿ ಸಂಜೆ ಆರು ವರೆಗೆ ಪ್ರಸಾರವಾಗುತ್ತಿದ್ದ ಕುಲವಧು ಎಂಬ ಧಾರಾವಾಹಿಯಲ್ಲಿ ವಚನ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಹಾಗೆಯೇ ರಾಘವೇಂದ್ರ ಅವರು ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಧಾರಾವಾಹಿ ಮಾಡುವ ಟೈಮ್‌ನಲ್ಲಿ ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಧಾರಾವಾಹಿ ಮುಗಿದ ನಂತರದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಮಿಸ್ ಮಾಡಿಕೊಳ್ಳಲು ಆರಂಭಿಸಿದ್ದರು. ಆದ್ದರಿಂದ ನಾವು ಇಲ್ಲಿ ಈ ಜೋಡಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರಿಬ್ಬರು ಸಂಬಂಧವನ್ನು ಗಟ್ಟಿ ಮಾಡುವ ಸಲುವಾಗಿ ಮದುವೆಯಾಗಲು ನಿರ್ಧಾರ ಮಾಡಿದ್ದರು. ಒಂದು ದಿನವೂ ಈ ಜೋಡಿ ಐ ಲವ್‌ ಯೂ ಎಂದೆಲ್ಲ ಹೇಳಿ ಸಿನಿಮೀಯ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರಲಿಲ್ಲ. ಮದುವೆಯಾದ ಆರಂಭದಲ್ಲೂ ಕೂಡ ಈ ಜೋಡಿ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ಪರಸ್ಪರ ಒಬ್ಬರಿಗೊಬ್ಬರು ಸಮಯ ಕೊಡಲಾಗುತ್ತಿರಲಿಲ್ಲ. ಆದ್ದರಿಂದ ಮದುವೆ ಆಗುವ ನಿರ್ಧಾರ ಮಾಡಿದರು. ಕುಲವಧು ಧಾರಾವಾಹಿ ಖ್ಯಾತಿಯ ವಚನಾ ಎರಡು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಗಂಡ ರಾಘವೇಂದ್ರ ಕೂಡ ಜನಪ್ರಿಯ ಕಿರುತೆರೆ ನಟ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ & ಮಿಸ್‌ಸ್ ರಂಗೇಗೌಡ ಧಾರಾವಾಹಿಯಲ್ಲಿ ನಟ ರಾಘವೇಂದ್ರ ಹಾಗೂ ನಟಿ ಅಮೃತಾ ರಾಮಮೂರ್ತಿ ಲೀಡ್ ಪಾತ್ರದಲ್ಲಿ ನಟಿಸಿದ್ದರು.

ಈ ಸೀರಿಯಲ್ ಹಿಟ್ ಆಗಿತ್ತು. ತದನಂತರದಲ್ಲಿ ಇವರಿಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿದರು. ಆದರೆ ರಿಯಲ್ ಲೈಫ್‌ನಲ್ಲಿ ಮಾತ್ರ ಒಂದಾಗಿದ್ದಾರೆ. ತಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದು ನಟ ರಾಘವೇಂದ್ರ ಇನ್‌ಸ್ಟಾಗ್ರಾಮ್‌ನಲ್ಲಿ ಹಳೆಯ ಫೋಟೋಗಳನ್ನು ಕಥೆಯ ರೀತಿಯಲ್ಲಿ ಜೋಡಿಸಿ ಅದಕ್ಕೆ ಸಂಭಾಷಣೆಯ ಟಚ್ ಕೊಟ್ಟು ವಿಶೇಷವಾಗಿ ಪತ್ನಿ ಅಮೃತಾಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದರು. ಮದುವೆಯಾದ ಆರಂಭದಲ್ಲೂ ಕೂಡ ಈ ಜೋಡಿ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ಪರಸ್ಪರ ಒಬ್ಬರಿಗೊಬ್ಬರು ಸಮಯ ಕೊಡಲಾಗುತ್ತಿರಲಿಲ್ಲ.

ಈಗ ಲಾಕ್ ಡೌನ್ ಟೈಮ್‌ನಲ್ಲಿ ಈ ಸೆಲೆಬ್ರಿಟಿ ಜೋಡಿ ಒಟ್ಟಾಗಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಮೃತಾ ಮತ್ತು ರಾಘವೇಂದ್ರ ಪ್ರತಿನಿತ್ಯ ಒಟ್ಟಾಗಿ ವ್ಯಾಯಾಮ, ಸಿನಿಮಾ ವೀಕ್ಷಣೆ ಮಾಡುತ್ತಾರೆ. ಅಮೃತಾರಿಂದ ರಾಘವೇಂದ್ರ ವಿಷ್ಣು ಸಹಸ್ರನಾಮ ಓದೋದನ್ನೂ ಕೂಡ ಕಲಿತಿದ್ದಾರಂತೆ. ಅಮೃತಾ ಪ್ರಸ್ತುತ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ರಾಘವೇಂದ್ರ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಈಗ ಅವರು ಪ್ರಗ್ನೆಂಟ್ ಆಗಿದ್ದು ಈ ಖುಷಿ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹಾಗೆಯೇ ಈ ಜೋಡಿ ತಮಗೆ ಯಾವ ಮಗು ಹುಟ್ಟಿದರೂ ಇಷ್ಟವೇ ಎಂದು ಹೇಳಿದ್ದಾರೆ.

Leave A Reply

Your email address will not be published.