ರೈತರು ದೇಶದ ಬೆನ್ನೆಲೆಬು ಆದರೂ ಸಹ ಇಂದು ರೈತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ನಮ್ಮ ದೇಶದಲ್ಲಿ ರೈತರು ಮಳೆಯನ್ನೇ ಅವಲಂಬಿಸಿದ್ದು ಇದರಿಂದ ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ ಮೇಲೆ ಇದ್ದರೆ ಮಾತ್ರ ಬೆಳೆ ಇಲ್ಲವಾದರೆ ಬೆಳೆ ಇರುವುದಿಲ್ಲ ಗಡಿ ಕಾಯುವ ಯೋಧರು ಶತ್ರುಗಳ ಜೊತೆ ಹೋರಾಟ ನಡೆಸುತ್ತಲೇ ವೀರ ಮರಣವನ್ನಪ್ಪುತ್ತಿದ್ದರೆ ಅನ್ನದಾತ ಅತಿವೃಷ್ಟಿಯಲ್ಲಿ ಒಂದು ರೀತಿಯ ಸಂಕಟಕ್ಕೆ ಸಿಲುಕಿ ಅನಾವೃಷ್ಟಿಯಲ್ಲಿ ಇನ್ನೊಂದು ರೀತಿಯ ಸಂಕಷ್ಟದ ಸುಳಿಗೆ ಸಿಲುಕಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದ್ದಾನೆ ಸಮೃದ್ಧ ಬೆಳೆಯಾದ ಸಂದರ್ಭದಲ್ಲಿ ರೈತ ಬೆಳೆದ ಬೆಳೆಗೆ ನ್ಯಾಯಬೆಲೆ ದೊರೆಯುವುದಿಲ್ಲ. ಬರಗಾಲ ಬಂದಾಗಲಂತೂ ರೈತನ ಬದುಕು ನಿಜಕ್ಕೂ ಹೇಳಲಾಗದು

ಇಂತಹ ಎರಡೂ ಸಂದರ್ಭದಲ್ಲಿ ರೈತನನ್ನು ಶೋಷಣೆಗೆ ಗುರಿ ಮಾಡುವವರು ಲೇವಾದೇವಿಗಾರರು ಹಾಗು ಕೃಷಿ ಮಾರುಕಟ್ಟೆಗಳ ದಲ್ಲಾಳಿಗಳು ಇವೆಲ್ಲ ಸಂಕಷ್ಟಗಳ ನಡುವೆ ರೈತರಿಗೆ ಮಧ್ಯಂತರದಲ್ಲಿ ಇರುವ ಜಮೀನಿಗೆ ಹೋಗಿ ಬಂದು ಮಾಡಲು ಸಹ ದಾರಿಯಿರುವುದಿಲ್ಲ ಇದೊಂದು ದೈನಂದಿನ ಸಮಸ್ಯೆಯಾಗುತ್ತದೆ ದಾರಿ ಮಾಡಿಸುವಂತ ಯಾವುದೇ ಕ್ರಮಗಳ ಬಗ್ಗೆ ತಿಳಿಯದೆ ಚಿಂತನೆಯಲ್ಲಿ ತೊಡಗುತ್ತಾರೆ ನಾವು ಈ ಲೇಖನದ ಮೂಲಕ ಹೇಗೆ ಜಮೀನಿಗೆ ದಾರಿ ಇಲ್ಲದವರು ಹೇಗೆ ಕಾನೂನಾತ್ಮಕ ದಾರಿಯನ್ನು ಮಾಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಜಮೀನಿಗೆ ಹೋಗಲು ಒಂದು ಬಂಡಿ ದಾರಿಯು ಇಲ್ಲದೇ ಇರುವ ಸ್ಥಳ ಇರುತ್ತದೆ ಕರ್ನಾಟಕ ರಾಜ್ಯ ಭೂ ಕಂದಾಯ ಕಾಯ್ದೆ ಪ್ರಕಾರ ಯಾವುದೇ ಒಂದು ಜಮೀನಿಗೆ ಹೋಗಿ ಬರಲು ಖಚಿತವಾದ ದಾರಿ ಇದ್ದೆ ಇರುತ್ತದೆ ಹಾಗೆಯೇ ದಾರಿ ಇಲ್ಲದ ಜಮೀನು ಇಲ್ಲವೇ ಇರುವುದಿಲ್ಲ ಅನೇಕ ರೈತರು ದಾರಿ ಇಲ್ಲದೇ ಕಷ್ಟ ಎದುರಿಸುತ್ತಾರೆ ಆಗ ರೈತರು ಪಕ್ಕದ ಜಮೀನಿನ ಮಾಲೀಕರ ಜೊತೆ ಮಾತುಕತೆ ಮಾಡಬೇಕು ನಂತರ ಮಾತುಕತೆ ಮೂಲಕ ಬಗೆಹರಿಯದ್ದಿದರೆ ರೈತರಿಗೆ ಏನು ಮಾಡಬೇಕು ಎಂದು ಯೋಚಿಸುತ್ತಾರೆ ಇಸಮೆಂಟ್ ಕಾಯ್ದೆ ಪ್ರಕಾರ ರೈತರ ಹಕ್ಕನ್ನು ಪಡೆದುಕೊಳ್ಳಬಹುದು

ಈ ಕಾಯ್ದೆಯ ಪ್ರಕಾರ ನ್ಯಾಯವನ್ನು ಪಡೆಯಲು ಅನೇಕ ದಾಖಲೆಗಳನ್ನು ನೀಡಬೇಕು ಅವುಗಳೆಂದರೆ ಜಮೀನಿನ ಸರ್ವೆ ನಂಬರ್ ಹಾಗೂ ಆಜು ಬಾಜು ಅಂದರೆ ಜಮೀನಿನ ನಾಲ್ಕು ದಿಕ್ಕಿನ ನಕ್ಷೆ ಬೇಕಾಗುತ್ತದೆ ಮತ್ತು ಸರ್ವೆ ನಂಬರ್ ಮೇಲೆ ಕಾಲ ಕಾಲಕ್ಕೆ ಟಿಪ್ಪಣಿ ಗಳು ಬೇಕಾಗುತ್ತದೆ ಹಾಗೆಯೇ ಪಹಣಿ ಮತ್ತು ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಎದುರುದಾರರ ಪಹಣಿ ಮತ್ತು ವಿಳಾಸ ಬೇಕಾಗುತ್ತದೆ ಮತ್ತು ತಾಲೂಕು ಸರ್ವೆ ಕಚೇರಿಯಿಂದ ದಾರಿ ಇಲ್ಲ ಎಂದುಪ್ರಮಾಣ ಪತ್ರ ಪಡೆಯುವುದು ಬಹಳ ಮುಖ್ಯವಾಗಿದೆ.

ಸರ್ವೆ ಇಲ್ಲವೆಂದು ಬರೆಸಿಕೊಂಡು ಬಂದ ಪ್ರಮಾಣ ಪತ್ರ ಕಡ್ಡಾಯವಾಗಿ ಮಾಡಲು ಬೇಕಾಗುತ್ತದೆ ಹಾಗೆಯೇ ಜಮೀನಿಗೆ ದಾರಿ ಇಲ್ಲ ಎಂದು ಅರ್ಜಿ ಬರೆಯಬೇಕು ಇವೆಲ್ಲ ಮಾಹಿತಿಗಳನ್ನು ತಾಲೂಕಿನ ಡಿ ಡಿ ಎಲ್ ಏರ್ ಕಚೇರಿಗೆ ಸಲ್ಲಿಸಬೇಕು ಹಾಗೆಯೇ ಕೊಟ್ಟಿರುವ ಅರ್ಜಿಗೆ ಪುನಃ ಸರ್ವೆ ಮಾಡಬಹುದು ಮತ್ತು ವರದಿಯನ್ನು ಪರಿಶೀಲಿಸಿ ಎದುರುದಾರರಿಗೆ ನೋಟೀಸು ನೀಡಲಾಗುತ್ತದೆ ಮತ್ತು ಕ್ಲಿಷ್ಟ ಕರ ಕೆಲ ಸಂದರ್ಭಗಳ ಲ್ಲಿ ಸ್ವತಃ ಡಿಡಿಎಲ್ ಏರ್ ಅಧಿಕಾರಿ ಗಳು ಸ್ಥಳಕ್ಕೆ ಬರುತ್ತಾರೆ ಇಮೇಲಿನ ಕ್ರಮವನ್ನು ಅನುರಿಸುವ ಮೂಲಕ ಬಂಡಿ ದಾರಿ ಮತ್ತು ಕಾಲು ದಾರಿಯನ್ನು ಅನುಭವಿಸಲು ಸಾಧ್ಯಈ ಲೇಖನ ಮಾಹಿತಿಗಾಗಿ ಮಾತ್ರವಾಗಿರುತ್ತದೆ ಹಾಗೂ ರೈತರ ಸಂಕಷ್ಟದಲ್ಲಿ ದಾರಿಯ ಸಮಸ್ಯೆಯು ಒಂದಾಗಿದ್ದು ಇದನ್ನು ಕಾನೂನಾತ್ಮಕವಾಗಿ ಹೀಗೆ ಬಗೆಹರಿಸಿಕೊಳ್ಳುವ ಕ್ರಮವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *