ಭವಿಷ್ಯ ನುಡಿಯುವುದು ಕಟ್ಟು ಕಥೆ ಎಂದು ಮಾತನಾಡುವ ಜನರಿಗೆ ಈಗ ಕೊಡಿ ಮಠದ ಶ್ರೀಗಳ ಭವಿಷ್ಯ ನಿಜವದಂತೆ ಮುಂದೆ ನಡೆಯುವ ರಾಷ್ಟ್ರ ರಾಜ್ಯ ಮಟ್ಟದ ಘಟನೆಗಳ ಬಗ್ಗೆ ನಿಖರವಾಗಿ ಹೇಳುವ ಮೂಲಕ ಜನಪ್ರಿಯರಾದ ಕೊಡಿ ಮಠದ ಶ್ರೀಗಳು ಕಳೆದ ತಿಂಗಳು 2024 ರ ಭವಿಷ್ಯವನ್ನು ಹೇಳಿದ್ದರು.

ಈ ಹಿಂದೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ರಾಷ್ಟ್ರದಲ್ಲಿ ಮತಾಂಧತೆ ಹೆಚ್ಚಾಗಲಿದೆ. ಭುಕಂಪನಗಳು ನಡೆಯಲಿವೆ. ಬಾಂಬ್ ಸ್ಫೋ’ಟಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಧಾರ್ಮಿಕ ಮುಖಂಡರ ಸಾವು ಸಂಭವಿಸುವ ಸಾಧ್ಯತೆ ಇದೆ. ಹಾಗೂ ಪ್ರಪಂಚದ ಶ್ರೇಷ್ಠ ಪ್ರಧಾನಿಗಳು ಸಾಯುತ್ತಾರೆ ಎಂಬುದಾಗಿ ಭವಿಷ್ಯ ನುಡಿದಿದ್ದರು.

ಇವರು ನುಡಿದ ಭವಿಷ್ಯವು ತಿಂಗಳ ಒಳಗೆ ನಿಜವಾಗಿದೆ. ಬೆಂಗಳೂರಿನ ನಗರದ ರಾಮೇಶ್ವರ ಕೆಫೆಯಲ್ಲಿಯ ನಿನ್ನೆ ನಡೆದ ಬಾಂಬ್ ಸ್ಫೋಟದಿಂದ ಹತ್ತಾರು ಮಂದಿ ಗಾಯ ಗೊಂಡಿದೆ. ಇದರಿಂದ ಶ್ರೀಗಳ ಭವಿಷ್ಯ ಮತ್ತೊಮ್ಮೆ ನಿಜವಾದಂತೆ ಆಗಿದೆ. ಇದರಿಂದ ಹಲವು ಮುಂದೆ ಏನು ಅನಾಹುತ ಆಗಲಿದೆ ಎಂಬ ಭಯವೂ ಸಹ ಜನರನ್ನು ಕಾಡಲಿದೆ.

ಮುಂದಿನ ಭವಿಷ್ಯದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ವಿಚಾರಗಳ ಬಗ್ಗೆ ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂಬರುವ ಯುಗಾದಿ ಹಬ್ಬದ ಬಳಿಕ ರಾಷ್ಟ್ರ ಚುಕ್ಕಾಣಿ ಯಾರ ಪಾಲಾಗಲಿದೆ ಮತ್ತು ರಾಜ್ಯ ರಾಜಕಾರಣದಲ್ಲಿ ಆಗುವ ಬದಲಾವಣೆಯ ಬಗ್ಗೆ ತಿಳಿಸುತ್ತೇನೆ ಎಂದು ಶ್ರೀಗಳು ಹೇಳಿದರು. ಯುಗಾದಿಯ ಬಳಿಕ ಮುಂದಿನ ವರ್ಷದ ಮಳೆ ಮತ್ತು ಬೆಲೆ ಮಗ್ಗೆ ಸಹ ಶ್ರೀಗಳು ಭವಿಷ್ಯ ನುಡಿಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *