Kodi Mutt swamiji Prediction

Kodi Mutt Swamiji prediction: ಕೋಡಿಮಠದ ಶ್ರೀಗಳು ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು ಅದು ಈಗ ನಿಜವಾಗಿದೆ. ಈಗ ಕಾಂಗ್ರೆಸ್ ಪಕ್ಷ (Congress party) ಅಧಿಕಾರಕ್ಕೆ ಬಂದಮೇಲೆ ಮತ್ತೊಮ್ಮೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.

ಈ ಮೊದಲು ಕೋಡಿಮಠದ ಶ್ರೀಗಳು ಚುನಾವಣೆಯ ವಿಷಯವಾಗಿ ನುಡಿದ ವಿಷಯ ಸತ್ಯವಾಗಿದೆ. ಶ್ರೀಗಳು ಯಾವುದಾದರೂ ಒಂದು ಪಕ್ಷ ಬಹುಮತದಿಂದ ಆಯ್ಕೆಯಾಗಿ ಬರುತ್ತದೆ ಎಂದು ಹೇಳಿದ್ದರು ಅದೇ ರೀತಿ ಕಾಂಗ್ರೆಸ್ ಬಹುಮತದಿಂದ ಆಯ್ಕೆಯಾಗಿ ಬಂದಿದೆ. ಈಗ ಶ್ರೀಗಳು ಮುಂದೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಜನಸಾಮಾನ್ಯರು ಹೇಗಿರುತ್ತಾರೆ ಅವರ ಕಷ್ಟಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕೊಡಿ ಮಠದ ಶ್ರೀಗಳು ಜನಸಾಮಾನ್ಯರು ನೆಮ್ಮದಿಯಿಂದ ಇರುತ್ತಾರೆ ಆದರೆ ಒಂದು ಎರಡು ದೊಡ್ಡ ಸಮಸ್ಯೆಗಳು ಉಂಟಾಗಬಹುದು ಹಾಗೆ ಈ ಬಾರಿ ಅತಿಯಾದ ಮಳೆ ಬೀಳುವ ಸಾಧ್ಯತೆ ಇದೆ ಆದರೂ ಕೂಡ ಬೆಳೆ ಹಾನಿಯಾಗುವ ಸಂಭವನೀಯತೆ ಕಡಿಮೆ. ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ, ದೇವರಲ್ಲಿ ನಂಬಿಕೆ ಇಡುವುದಾಗಿ ಶ್ರೀಗಳು ಹೇಳಿದ್ದಾರೆ.

ಈಗ ಕಾಂಗ್ರೆಸ್ ಪಕ್ಷದ ಗೆಲುವಾಗಿದ್ದು ಸಿಎಂ ಕುರ್ಚಿ ಯಾರಿಗೆ ಸೇರುತ್ತದೆ ಎಂಬ ವಿಷಯದ ಬಗ್ಗೆ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು ಆದರೆ ಇದೀಗ ಇವರಿಬ್ಬರ ಜಗಳವನ್ನು ಹೈಕಮಾಂಡ್ ಬಗೆಹರಿಸಿ ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನ ನೇಮಕ ಮಾಡಿದೆ. ಇವರು ರಾಜ್ಯದ ಮುಖ್ಯಮಂತ್ರಿಗಳಾಗಿ ಹೇಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ:ಕನ್ಯಾ ರಾಶಿಯವರಿಗೆ ಜೂನ್ ತಿಂಗಳಲ್ಲಿ ದೈವ ಬಲ ಇರುವುದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ

Leave a Reply

Your email address will not be published. Required fields are marked *