Kodi Mutt Swamiji Prediction About Lok Sabha Election: ನಮ್ಮ ರಾಜ್ಯದಲ್ಲಿ ತಮ್ಮ ಮಾತುಗಳ ಮೂಲಕವೇ ಸುದ್ದಿಯಾಗುವವವರಲ್ಲಿ ಒಬ್ಬರು ಕೋಡಿ ಮಠದ ಶ್ರೀಗಳು. ಕರ್ನಾಟಕದಲ್ಲಿ, ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ನಡೆಯುವ ಘಟನೆಗಳ ಬಗ್ಗೆ, ಆಗು ಹೋಗುಗಳು, ರಾಜಕೀಯ ವಿಚಾರಗಳು, ಪ್ರಕೃತಿ ವಿಕೋಪ. ಇದೆಲ್ಲದರ ಬಗ್ಗೆ ಕೂಡ ಕೋಡಿ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಇವರು ನುಡಿಯುವ ಭವಿಷ್ಯ ಬಹಳಷ್ಟು ಸಾರಿ ನಿಜ ಆಗಿರುವುದರಿಂದ ಜನರಿಗು ಕೂಡ ಇವರ ಮೇಲೆ ನಂಬಿಕೆ..

ಹೀಗೆ ಹಲವು ವಿಚಾರಗಳ ಬಗ್ಗೆ ಭವಿಷ್ಯ ನುಡಿಯುವ ಶ್ರೀಗಳ ಮಾತುಗಳು ವೈರಲ್ ಆಗುತ್ತದೆ.. ಈ ವರ್ಷ ನಮ್ಮ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಕೂಡ ಬರಲಿದೆ. ಈ ಸಮಯದಲ್ಲಿ ಕೋಡಿ ಶ್ರೀಗಳು ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅಧಿಕಾರದಲ್ಲಿ ಏನಾದರೂ ಬದಲಾವಣೆ ಆಗಬಹುದಾ ಎನ್ನುವ ಪ್ರಶ್ನೆಯನ್ನು ಕೋಡಿ ಶ್ರೀಗಳಿಗೆ ಕೇಳಲಾಗಿದ್ದು, ಅದಕ್ಕೆ ಅವರು ನೀಡಿರುವ ಉತ್ತರ ಈಗ ವೈರಲ್ ಆಗಿದೆ.

ಕೋಡಿ ಶ್ರೀಗಳು ಲೋಕಸಭಾ ಚುನಾವಣೆ ಬಗ್ಗೆ ಭವಿಷ್ಯ ಹೇಳಿದ್ದು, ರಾಷ್ಟ್ರಮಟ್ಟದ ರಾಜಕೀಯದಲ್ಲಿ ಅಂದುಕೊಂಡಿರದ ಹಾಗೆ ಫಲಿತಾಂಶ ಬರುತ್ತದೆ, ಅದರಿಂದ ಆಗುವ ದೊಡ್ಡ ಬದಲಾವಣೆ ಇಂದ ದೇಶದಲ್ಲಿ ಸ್ಥಿರತೆ ನಾಶ ಆಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ. ಲೋಕಸಭಾ ಎಲೆಕ್ಷನ್ ಮುಗಿದ ನಂತರ ಪರಿಸ್ಥಿತಿಗಳು ಇದೇ ರೀತಿ ಇರುತ್ತಾ ಎನ್ನುವ ಪ್ರಶ್ನೆ ಕೂಡ ಕೇಳಿಬಂದಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಶ್ರೀಗಳು.. ಆ ವಿಷಯ ನೋಡ್ತೀನಿ, ಅದ ಬಗ್ಗೆ ಇನ್ನೊಂದು ಸಾರಿ ಉತ್ತರ ಕೊಡ್ತೀನಿ ಎಂದು ಹೇಳಿದ್ದಾರೆ.

ಹಾಗೆಯೇ, ಲೋಕಸಭೆ ಚುನಾವಣೆಗೆ ಇನ್ನು ತುಂಬಾ ಟೈಮ್ ಇದೆ ಎಂದು ಕೂಡ ಹೇಳಿದ್ದಾರೆ. ಡಿಸೆಂಬರ್ ಶುರುವಾಗುವ ಸಮಯಕ್ಕೆ ಎಲೆಕ್ಷನ್ ಬರುತ್ತದೆ, ಅದಕ್ಕಿಂತ ಮೊದಲೇ ಏನಾದರೂ ಬದಲಾವಣೆ ಆಗುತ್ತಾ ಎಂದು ಶ್ರೀಗಳನ್ನು ಕೇಳಿದ್ದು, ಆ ಪ್ರಶ್ನೆಗೆ ಅವರು ನಾವು ಮತ್ತೆ ಊರಿಗೆ ಹೋಗಬೇಕು ಎಂದು ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಅವರು ಆ ಪ್ರಶ್ನೆಗೆ ಉತ್ತರ ಕೊಡಲು ಆಗುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ನಾವು ಏನೋ ಹೇಳಿ ಇನ್ನೇನೋ ತೊಂದರೆ ಆಗೋದು ಬೇಡ, ಅಪಾಯ ಬರುವುದು ಬೇಡ ಎಂದು ಹೇಳಿದ್ದಾರೆ. ಶ್ರೀಗಳು ಹೇಳಿದ ಮಾತು ಈಗ ವೈರಲ್ ಆಗಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಶುರುವಾಗಿದೆ.

By AS Naik

Leave a Reply

Your email address will not be published. Required fields are marked *