Kodi Mutt Swamiji prection Shravana Masa ಹಾಸನದ ಕೋಡಿಮಠದ ಸ್ವಾಮೀಜಿಗಳಾದಂತಹ ಶಿವಾನಂದ ಶಿವಯೋಗಿ ಮಹಾ ಸ್ವಾಮಿಗಳು ತಾವು ನುಡಿಯುವ ಭವಿಷ್ಯದಿಂದ ಪ್ರಸಿದ್ಧಿ ಹೊಂದಿದ್ದಾರೆ. ಇದೀಗ ಅದೇ ಸ್ವಾಮಿಗಳು ಇನ್ನೊಂದು ಭಯಾನಕ ಭವಿಷ್ಯವನ್ನ ನುಡಿದಿದ್ದು ಎಲ್ಲರಲ್ಲೂ ಆತಂಕವನ್ನ ಹುಟ್ಟಿಸಿದ್ದಾರೆ ಅದೇನೆಂದರೆ ಶ್ರಾವಣ ಮಾಸದ ಮಧ್ಯಂತರದಲ್ಲಿ ಅತಿಯಾಗಿ ಮಳೆಯಾಗುತ್ತದೆ ಹಾಗೂ ಅತಿಯಾದ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಶ್ರೀಗಳು ಹೇಳಿದ್ದಾರೆ.

ತೀವ್ರ ಮಳೆಯಿಂದಾಗಿ ಭೂಕಂಪ ಸುನಾಮಿ ಭೂಕುಸಿತ ಇತ್ಯಾದಿ ಅನೇಕ ಘಟನೆಗಳು ನಡೆಯುತ್ತವೆ. ಜನರು ಹಾನಿಗೊಳಗಾಗುತ್ತಾರೆ ಹಾಗೂ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದೆ ಎಂಬುದಾಗಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ವಿಪರೀತ ಮಳೆಯಿಂದಾಗಿ ಎರಡು ದೇಶಗಳು ಸಂಪೂರ್ಣವಾಗಿ ನಾಶವಾಗುತ್ತವೆ ಭಾರತದಲ್ಲಿಯೂ ಕೂಡ ಜಲಪ್ರಳಯ ಕಾಣಿಸಿಕೊಳ್ಳುತ್ತದೆ ಜಾಗತಿಕ ಮಟ್ಟದಲ್ಲಿ ವಿಷಾನಿಲವು ಕಾಣಿಸಿಕೊಳ್ಳಲಿದೆ ಎಂಬುದಾಗಿ ಪ್ರಕೃತಿ ವಿಕೋಪದ ಬಗ್ಗೆ ಶ್ರೀಗಳು ಹೇಳಿದ್ದರು.

ಅಷ್ಟೇ ಅಲ್ಲದೆ ಈ ವಾತಾವರಣದ ತೀವ್ರತೆಯಿಂದ ದಕ್ಷಿಣ ಭಾಗಗಳಲ್ಲಿ ಅಷ್ಟೇನೂ ತೊಂದರೆ ಉಂಟಾಗುವುದಿಲ್ಲ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ತೊಂದರೆ ಉಂಟಾಗುತ್ತದೆ ಎಂಬುದಾಗಿ ತಮ್ಮ ಮಾತುಗಳಲ್ಲಿ ನುಡಿದ ಶ್ರೀಗಳು ಚಂದ್ರಯಾನದ ಬಗ್ಗು ಮಾತನಾಡಿದ್ದಾರೆ. ಮೂರನೇ ಚಂದ್ರಯಾನವು ಯಶಸ್ವಿಯಾಗಲಿದ್ದು ಭಾರತಕ್ಕೆ ಉತ್ತಮ ಹೆಸರನ್ನ ತರುತ್ತದೆ ಎಂಬುದಾಗಿ ಕೂಡ ಭವಿಷ್ಯ ನುಡಿದಿದ್ದಾರೆ.

Kodi Mutt Swamiji prection Shravana Masa 2023

ಇನ್ನು ದೈವ ಬಲದ ಬಗ್ಗೆ ಮಾತನಾಡಿದ ಶ್ರೀಗಳು ದೈವ ಬಲ ಮನುಷ್ಯನಿಗೆ ಅತಿ ಮುಖ್ಯ ಯಾರು ದೈವವನ್ನು ನಂಬುತ್ತಾರೋ ಅಂಥವರಿಗೆ ಯಾವ ತೊಂದರೆಯೂ ಬರುವುದಿಲ್ಲ ವಾದರೆ ಆಪತ್ತು ಖಂಡಿತ. ಇನ್ನು ಕೆಲವರು ದೈವವನ್ನು ನಂಬುತ್ತಿದ್ದರು ಕೆಲವೊಮ್ಮೆ ತೊಂದರೆಗೆ ಒಳಗಾಗುವುದುಂಟು ಆದರೆ ಇದು ಪ್ರಕೃತಿಯ ನಿಯಮ ಇದಕ್ಕೊಂದು ದೈವವನ್ನು ದೂರುವುದು ಒಳ್ಳೆಯದಲ್ಲ ಎಂಬುದಾಗಿ ದೈವದ ಮಹತ್ವವನ್ನು ಸಾರಿದರು.

ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳಿಂದ ಜನರ ಜೀವನಶೈಲಿ ಬದಲಾಗುತ್ತದೆ ಆಹಾರ ಪದ್ಧತಿಯಲ್ಲಿ ಕೂಡ ಬದಲಾವಣೆಯಾಗುತ್ತದೆ ಇದು ಜನರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದಿದ್ದಾರೆ. ಮನುಷ್ಯನು ಭಗವಂತನನ್ನು ಪ್ರಕೃತಿಯನ್ನು ಮರೆತಿದ್ದಾನೆ ಆದ್ದರಿಂದ ಪ್ರಕೃತಿಯು ಮಾನವನ ಮೇಲೆ ಮುನಿಸಿಕೊಳ್ಳುತ್ತದೆ ಮಾನವನು ಪ್ರಕೃತಿಗೆ ಮಾಡುತ್ತಿರುವ ಅನಾಚಾರಗಳು ಅವನಿಗೆ ತಿರುಗಿಟು ಹಾಕುತ್ತವೆ ಹೀಗಾಗಿ ಪ್ರಕೃತಿಯಾದರೂ ಎಷ್ಟು ಸಹಿಸಬಲ್ಲಳು ಎಂಬ ಪ್ರಶ್ನೆಯನ್ನ ಜನರ ಮುಂದೆ ಇಟ್ಟರು.

ಇನ್ನು ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀಗಳು ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಸದ್ಯಕ್ಕೆ ಇಲ್ಲ ಆದರೂ ಸ್ವಲ್ಪ ಮಟ್ಟಿಗೆ ಆಲೋಲಕಲ್ಲೋಲವಾಗಲಿದೆ ಮುಂಬರುವ ದಿನಗಳಲ್ಲಿ ಅಸ್ತಿರತೆಯನ್ನ ಸರ್ಕಾರವು ಕಾಣುತ್ತದೆ ಎಂದರು. ಹಾಗೆ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗವೂ ಕೂಡ ಇದ್ದು ನಂತರದ ಸರ್ಕಾರದಲ್ಲಿ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ ಎಂದು ಭವಿಷ್ಯ ನುಡಿದರು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *