2024 ರಲ್ಲಿ ಸಂಭವಿಸಲಿದೆ ದುರಂತ! ಈ ವರ್ಷ ಕೂಡ ಮಳೆ ಕಡಿಮೆಯಾಗುತ್ತಾ, ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

0 15,270

ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಆಗಾಗ ಭವಿಷ್ಯ ನುಡಿಯುತ್ತಾರೆ. ಇವರು ನುಡಿಯುವ ಭವಿಷ್ಯ ನಿಜ ಆಗಿರುವ ಕಾರಣ, ಇವರ ಮಾತಿನ ಮೇಲೆ ಎಲ್ಲರಿಗೂ ನಂಬಿಕೆ ಇದೆ. ವಿಶ್ವದ, ದೇಶದ ಹಾಗೂ ರಾಜ್ಯದ ಕುರಿತ ಹಾಗೆ, ಆಗು ಹೋಗುಗಳು, ರಾಜಕೀಯ ವಿಚಾರ ಎಲ್ಲದರ ಬಗ್ಗೆ ಇವರು ನುಡಿಯುವ ಭವಿಷ್ಯ ಬಹುತೇಕ ಖಚಿತವಾಗಿದೆ. ಇದೀಗ ಇವರು ಹೊಸ ವರ್ಷದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಈ ವರ್ಷ ದೊಡ್ಡ ದುರ್ಘಟನೆಗಳು ಸಂಭವಿಸುತ್ತದೆ, ಬಾಂ’ಬ್ ಸಿಡಿಯುತ್ತದೆ, ಇಡೀ ವಿಶ್ವಕ್ಕೆ ಇದು ಸಮಸ್ಯೆ ಎಂದು ಗದಗದಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಹಿಂದಿನ ವರ್ಷಗಳಿಗಿಂತ ಈ ವರ್ಷ ಸಮಸ್ಯೆ ಜಾಸ್ತಿ ಇರುತ್ತದೆ ಎಂದು ತಿಳಿಸಿದ್ದಾರೆ. ಈ ವರ್ಷ ಅಕಾಲಿಕವಾಗಿ ಮಳೆಯಾಗುವ ಕಾರಣ ಹೆಚ್ಚು ಜನರಿಗೆ ಅನಾನುಕೂಲ ನಷ್ಟ ಸಂಭವಿಸುತ್ತದೆ ಎಂದು ಹೇಳಿದ್ದಾರೆ ಶ್ರೀಗಳು. ಈ ವರ್ಷ ಬಾಂಬ್ ಸಿಡಿತಕ್ಕೆ ಅನೇಕ ಜನರು ಅಸುನೀಗುತ್ತಾರೆ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಪ್ರಕೃತಿ ವಿಕೋಪ ಕೂಡ ಸಂಭವಿಸಲಿದ್ದು, ಭೂಕಂಪದ ಜೊತೆಗೆ, ನೀರಿನ ವಿಚಾರದಲ್ಲೂ ವಿಕೋಪ ಉಂಟಾಗಲಿದೆ. ಈ ವರ್ಷ ಭಯಾನಕವಾಗಿರುತ್ತದೆ ಎಂದು ಹೇಳಿದ್ದಾರೆ. 2024ರಲ್ಲಿ ವಿಶ್ವದಲ್ಲಿ ಒಂದಿಬ್ಬರು ಪ್ರಧಾನಿಗಳ ಮರಣ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಇದೆಲ್ಲವೂ ಭಯಾನಕವಾಗಿ ಇರಲಿದೆ ಎಂದು ತಿಳಿಸಿದ್ದಾರೆ. ಜನರಲ್ಲಿ ಮತೀಯ ಸಮಸ್ಯೆ ಇಂದ ದುಃಖ ಶುರುವಾಗುತ್ತದೆ.

ದೊಡ್ಡ ದೊಡ್ಡ ಸಂತರುಗಳ ಕೊಲೆ ನಡೆಯುತ್ತದೆ, ಯುದ್ಧದ ಭಯ ಇರುತ್ತದೆ, ಅಣು ಬಾಂಬ್ ಸ್ಫೋಟವಾಗಬಹುದು. ದೇಶದಲ್ಲಿ ಸ್ಥಿರತೆ ಇರುವುದಿಲ್ಲ, ಜಾಗತಿಕವಾಗಿ ಮತ್ತೊಮ್ಮೆ ರೋಗ ಹರಡಬಹುದು, ದೊಡ್ಡ ಸುನಾಮಿ ಬರುವ ಸಾಧ್ಯತೆ ಇದೆ. ದೇವರನ್ನು ನಂಬಿ, ದೇವರ ಮೊರೆ ಹೋಗುವುದು ಒಂದೇ ಇದಕ್ಕೆ ಪರಿಹಾರ ಎಂದು ಹೇಳಿದ್ದಾರೆ.

Leave A Reply

Your email address will not be published.