ಕೆಜಿಎಫ್ ಚಿತ್ರ ಪ್ರತಿಯೊಬ್ಬರೂ ವೀಕ್ಷಿಸಿ ಮೆಚ್ಚುಗೆಯನ್ನು ನೀಡಿದ್ದಾರೆ. ಕನ್ನಡ ಭಾಷೆ ಬಿಟ್ಟು ಅನೇಕ ಭಾಷೆಗಳಲ್ಲಿ ಸಿನಿಮಾ ಯಶಸ್ಸನ್ನು ಕಂಡಿದೆ. ಪ್ರಶಾಂತ್ ನೀಲ್ ಅವರ ಕೈಚಳಕದಲ್ಲಿ ಈ ಚಿತ್ರ ಮತ್ತು ಕನ್ನಡದ ಚಲನಚಿತ್ರ ಮಂಡಳಿಯು ಹೆಚ್ಚಿನ ಹೆಸರನ್ನು ಮಾಡುವಂತಾಗಿದೆ. ಕೆಜಿಎಫ್ ಮೊದಲ ಭಾಗದಲ್ಲಿಯೇ ಕೆಜಿಎಫ್ ಎರಡನೇ ಭಾಗದ ತುಣುಕುಗಳನ್ನು ಬಳಸಿಕೊಂಡು ಜನರಿಗೆ ಕೆಜಿಎಫ್ ಟು ಚಿತ್ರವನ್ನು ವೀಕ್ಷಿಸಲು ಕುತೂಹಲವನ್ನು ಉಂಟು ಮಾಡಿದೆ. ಆದ್ದರಿಂದ ನಾವು ಇಲ್ಲಿ ಇದರ ಅಭಿಪ್ರಾಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಸಿನೆಮಾದಲ್ಲಿ ಯಶ್ ಅವರು ನಾಯಕನ ಪಾತ್ರವನ್ನು ವಹಿಸಿ ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ. ಯಶ್ ಅವರು ಕನ್ನಡ ಚಿತ್ರರಂಗದಲ್ಲಿ ಮೊಗ್ಗಿನ ಮನಸ್ಸು ಎಂಬ ಮೊದಲ ಸಿನೆಮಾವನ್ನು ಮಾಡಿದ್ದರು. ನಂತರದಲ್ಲಿ ಒಂದೊಂದೇ ಸಿನಿಮಾಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಾ ರಾಕಿಂಗ್ ಸ್ಟಾರ್ ಎಂದು ಬಿರುದನ್ನು ಪಡೆಯುತ್ತಾರೆ. ಕೆ.ಜಿ.ಎಫ್. ಎನ್ನುವ ಸಿನೆಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಈಗ ಕೆ.ಜಿ.ಎಫ್-2 ಟ್ರೇಲರ್ ಬಿಡುಗಡೆಯಾಗಿದ್ದು ಅದರ ಬಗ್ಗೆ ಹಲವಾರು ನಾಯಕನಟರು ಜೊತೆಗೆ ಬಹುಬೇಡಿಕೆಯ ನಟರಾದ ಕಿಚ್ಚ ಸುದೀಪ್ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ಭಾಗ-1 ಸುಮಾರು 100 ದಿನಗಳ ತನಕವೂ ಓಡಿ ಹೆಚ್ಚಿನ ಹೆಸರು ಕಂಡಿದೆ. ವಿದೇಶದಲ್ಲಿಯೂ ಕೂಡ ಕನ್ನಡ ಸಿನಿಮಾದ ಪ್ರೇಕ್ಷಕರನ್ನು ಹೆಚ್ಚಾಗಿಸಿದೆ. ಕೊರೊನ ಎಂಬ ಮಹಾಮಾರಿ ಬರದೆ ಇದ್ದರೆ ಇಷ್ಟು ಹೊತ್ತಿಗೆ ಕೆಜಿಎಫ್ ಭಾಗ-2 ರಿಲೀಸ್ ಆಗುತ್ತಿತ್ತು. ಕಿಡಿಗೇಡಿಗಳ ಕಾರಣದಿಂದ ಅನಿರೀಕ್ಷಿತವಾಗಿ ಸಮಯಕ್ಕಿಂತ ಮುಂಚೆಯೇ ಟೀಸರ್ ಲೀಕಾಗಿತ್ತು. ಅದಕ್ಕಾಗಿ ಅವರ ಯೋಚನೆಗಿಂತ ಮೊದಲೇ ಯಶ್ ಅವರ ಹುಟ್ಟುಹಬ್ಬದ ದಿನ ಕೆ.ಜಿ.ಎಫ್ ಭಾಗ-2ರ ಟೀಸರ್ ನ್ನು ರಿಲೀಸ್ ಮಾಡಲಾಗಿದೆ. ಈ ಸಿನಿಮಾದ ಟೀಸರ್ ದಿನಕ್ಕೊಂದು ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.

ಕೆಜಿಎಫ್ ಸಿನೆಮಾಕ್ಕೆ ಬಾಲಿವುಡ್ ನ ಹೃತಿಕ್ ರೋಷನ್, ಕನ್ನಡದ ರಿಷಬ್ ಶೆಟ್ಟಿ ಪುನೀತ್ ರಾಜಕುಮಾರ್ ಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೆ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕೂಡ ಈ ಸಿನಿಮಾದ ಟೀಸರ್ ಕಂಡು ಚಿತ್ರದ ವಿಶುವಲ್ಸ್ ಅನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಬಂಡವಾಳ ಹಾಕಿದ ಮಾತ್ರಕ್ಕೆ ಒಂದು ಸಿನಿಮಾ ಯಶಸ್ಸನ್ನು ಕಾಣುವುದಿಲ್ಲ. ಅದಕ್ಕೆ ಪ್ರಶಾಂತ ಅಂತಹ ನಿರ್ದೇಶಕ ಮತ್ತು ಯಶ್ ರಂತಹ ನಾಯಕನಟ ಹಾಗೂ ಶ್ರದ್ಧೆ ಇಂದ ಕೆಲಸ ಮಾಡುವಂತಹ ಚಿತ್ರತಂಡ ಬೇಕಾಗುತ್ತದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *