ರಾಜಕುಮಾರ್ ಅವರ ಕುಟುಂಬದವರು ಒಳ್ಳೆಯ ಗುಣಕ್ಕೆ ಹೆಸರಾಗಿದ್ದಾರೆ. ಶಿವರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುತ್ತಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿದೆ ಬೇರೆ ಭಾಷೆಯ ಸಿನಿಮಾದೊಂದಿಗೆ ಹೋಲಿಕೆ ಮಾಡುತ್ತಾರೆ. ಈ ಕುರಿತು ಶಿವಣ್ಣ ಅವರು ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಶಿವಣ್ಣ ಅವರು ಯಾವುದೆ ಸಿನಿಮಾದ ಬಗ್ಗೆ ವಾದ ವಿವಾದ ಮಾಡಬಾರದು ಸಿನಿಮಾ ಬಗ್ಗೆ ಅದರ ಹಿಂದಿನ ಶ್ರಮದ ಬಗ್ಗೆ ದೇವರಿಗೆ ಗೊತ್ತಿದೆ, ನಿರ್ಮಾಪಕರಿಗೆ ಗೊತ್ತಿದೆ ಅಷ್ಟರ ಮಟ್ಟಿಗೆ ಗೊತ್ತಾದರೆ ಸಾಕು. ಸಿನಿಮಾ ಬಗ್ಗೆ ವಾದ ವಿವಾದ ಮಾಡುತ್ತಿದ್ದರೆ ಅದರಿಂದ ಪ್ರಯೋಜನ ಇಲ್ಲ. ಸಿನಿಮಾ ರಂಗ ಸಮುದ್ರವಿದ್ದಂತೆ ಅದರಲ್ಲಿ ಯಾರು ಬೇಕಾದರೂ ಈಜಬಹುದು ಈಜಿ ದಡ ಸೇರಬಹುದು. ಯಾರೂ ಬೇಕಾದರೂ ಕೆಳಗೆ ಇಳಿಯಬಹುದು, ಅದರ ಬಗ್ಗೆ ಮಾತನಾಡಬಾರದು. ಸಿನಿಮಾ ಚೆನ್ನಾಗಿ ಓಡುತ್ತಿದೆ ಎಂದರೆ ಸಂತೋಷ ಪಡಬೇಕು ಸಿನಿಮಾ ಬಗ್ಗೆ ವಾದ ಮಾಡಬಾರದು ಎಂದು ಶಿವಣ್ಣ ಹೇಳಿದರು.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಟ್ರೈಲರ್ ಲಾಂಚ್ ಮಾಡಿದ ಶಿವಣ್ಣ ಅವರು ಅಪ್ಪು ಅವರನ್ನು ನೆನೆಸಿಕೊಂಡು ನಂತರ ಯಶ್ ಅವರ ಡೈಲಾಗ್ ಹೇಳುವ ಮೂಲಕ ಯಶ್, ನಿರ್ದೇಶಕ ಪ್ರಶಾಂತ್, ಸಂಜಯ್ ದತ್ ಇಡಿ ಸಿನಿಮಾ ತಂಡಕ್ಕೆ ಶುಭ ಕೋರಿದರು. ಯಶ್ ಎಂದರೆ ನನಗೆ ಇಷ್ಟ, ಕನ್ನಡ ಚಿತ್ರರಂಗದಲ್ಲಿ ಹ್ಯಾಂಡ್ ಸಮ್ ಹೀರೊ, ರಾಧಿಕಾ ಅವರು ಸಹ ನಮ್ಮ ಕುಟುಂಬಕ್ಕೆ ಕ್ಲೋಸ್ ಇದ್ದಾರೆ. ರಾಧಿಕಾ ಅವರು ಯಶ್ ಅವರನ್ನು ಮದುವೆಯಾದ ನಂತರ ಯಶ್ ಅವರ ಅದೃಷ್ಟ ಹೆಚ್ಚಾಯಿತು ಎಂದು ಶಿವಣ್ಣ ಅವರು ಹೇಳಿದರು.

ಕೆಜಿಎಫ್ 2 ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಅವರು ಅಪ್ಪು ಅವರನ್ನು ನೆನೆದು ಅವರ ಬಗ್ಗೆ ನಾನು ಮಾತನಾಡಿಲ್ಲ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ರಾರಂಭವಾಗಿದ್ದು ಅಪ್ಪು ಅವರಿಂದ ನಿನ್ನಿಂದಲೆ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಪ್ರಾರಂಭವಾಯಿತು. ಅಪ್ಪು ಅವರು ನಮ್ಮೊಂದಿಗೆ ನಮ್ಮೆಲ್ಲರ ಮಧ್ಯೆ ಜೀವಂತವಾಗಿದ್ದಾರೆ.

ಅವರು ಮಾಡಿದ ಕೆಲಸ ನಮ್ಮ ಹೃದಯದಲ್ಲಿದೆ. ಅಪ್ಪು ಅವರು ಇದ್ದಾಗಲೂ ಅವರ ಬಗ್ಗೆ ಮಾತಾಡಲು ನನಗೆ ಅವಕಾಶ ಸಿಕ್ಕಿತ್ತು ಎಂದು ಹೇಳುತ್ತಾ ಈ ಕಾರ್ಯಕ್ರಮಕ್ಕೆ ಶಿವಣ್ಣ ಅವರು ಫೋನ್ ಮಾಡಿ ಹೇಳಿದರೆ ಸಾಕು ಅಂದರು ಅದು ಶಿವಣ್ಣ ಅವರ ದೊಡ್ಡತನ ಎಂದು ಯಶ್ ಅವರು ಹೇಳಿದರು. ನೀವೆಲ್ಲರೂ ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ನಾವು ನಡೆಯುತ್ತೇವೆ ಎಂದು ಯಶ್ ಹೇಳಿದರು. ಯಶ್ ಹಾಗೂ ಶಿವಣ್ಣ ಅವರು ಆತ್ಮೀಯತೆಯಿಂದ ಇರುವುದು ನೋಡಲು ಸಂತೋಷ ಎನಿಸುತ್ತದೆ ಈ ಆತ್ಮೀಯತೆ ಯಾವಾಗಲೂ ಹಾಗೆಯೆ ಇರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *