ರಾಶಿಚಕ್ರದಲ್ಲಿ ನಾಲ್ಕನೇ ರಾಶೀಚಕ್ರ ಚಿಹ್ನೆ ಕಟಕ ರಾಶಿ. ಈ ರಾಶಿಯವರು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮನೆ ಮತ್ತು ಕುಟುಂಬವನ್ನು ಪ್ರೀತಿಸುತ್ತಾರೆ. ಈ ರಾಶಿಯವರು ಬಲವಾದ ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಮಾನಸಿಕ ಶಕ್ತಿಯನ್ನು ಉಳ್ಳವರು ಹಾಗಾಗಿ ಜನರನ್ನು ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಕೆಲವರು ಹೊರಗೆ ಒರಟರಂತೆ ಕಂಡರೂ ಇವರ ಮನಸ್ಸು ಮೃದುವಾಗಿರುತ್ತಾರೆ. ಇವರು ನಿಷ್ಠೆ, ಅತೀ ಭಾವುಕತೆ ಹಾಗೂ ಕಾಳಜಿಗೆ ಹೆಸರುವಾಸಿ.

ಇನ್ನೊಂದು ಕಡೆಯಲ್ಲಿ ಆಗಾಗ ಬದಲಾಗಬಲ್ಲ, ಭಾವುಕ ಮತ್ತು ಅತಿಯಾಗಿ ಒಬ್ಬರನ್ನ ಹಚ್ಚಿಕೊಳ್ಳುವಂತಹ ವ್ಯಕ್ತಿ. ರಾಶಿಚಕ್ರದ ಅಧಿಪತಿ ಚಂದ್ರನಾಗಿದ್ದಾನೆ. ಈ ರಾಶಿಯಲ್ಲಿ ಜನಿಸಿದವರು ತಮ್ಮ ಕುಟುಂಬ ಸದಸ್ಯರು ಮತ್ತು ಮನೆಯವರೊಂದಿಗೆ ಬಹಳ ಆಳವಾಗಿ ಸಂಪರ್ಕ ಹೊಂದಿರುತ್ತಾರೆ. ಅವರು ಸಾಕಷ್ಟು ಸೂಕ್ಷ್ಮ ಮತ್ತು ಭಾವನಾತ್ಮಕ ಸ್ವಭಾವವನ್ನು ಹೊಂದಿದ್ದಾರೆ. ಈ ರಾಶಿಯನ್ನು ಪ್ರತಿನಿಧಿಸುವ ಚಿಹ್ನೆ ಏಡಿ, ಅದಕ್ಕಾಗಿಯೇ ಈ ರಾಶಿಯವರು ಸೂಕ್ಷ್ಮತೆ, ಅಂಜುಬುರುಕತೆ, ಸೂಕ್ಷ್ಮತೆ ಮತ್ತು ದಯೆಯಂತಹ ಭಾವನೆಗಳಿಂದ ತುಂಬಿರುತ್ತಾರೆ. ಚಂದ್ರನನ್ನು ಒಬ್ಬರ ಮನಸ್ಸಿನ ಮಹತ್ವಪೂರ್ಣ ಎಂದು ಪರಿಗಣಿಸಲಾಗುತ್ತದೆ.

ಕಟಕ ರಾಶಿಯವರು ವಿಸ್ತಾರವಾದ ಹಾಗೂ ಅಗಾಧ ಕಲ್ಪನೆಗಳಿಂದ ಕೂಡಿದವರು, ಒಂದು ನಿಮಿಷದಲ್ಲಿ ಒಂದು ಪದವನ್ನು ಕಥೆಯಾಗಿ ಪರಿವರ್ತಿಸಬಲ್ಲ ಸಾಮರ್ಥ್ಯ ಇವರಿಗಿದೆ. ಆದ್ದರಿಂದ ಇವರನ್ನು ಸೃಜನಶೀಲ ವ್ಯಕ್ತಿಗಳೆಂದು ಕರೆಯುವುದು ತಪ್ಪಲ್ಲ. ಕವನಗಳು ಮತ್ತು ಬರಹಗಳ ಮೂಲಕ ತಮ್ಮ ಭಾವನೆಗಳನ್ನು ಯಾರಿಗಾದರೂ ಅಥವಾ ಯಾವುದನ್ನಾದರೂ ಹಂಚಿಕೊಳ್ಳಲು ಸಂತೋಷ ಪಡುವವರು ಇವರು. ಕೆಲವರು ಕಲೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಸೃಜನಶೀಲ ಮತ್ತು ಕಲಾತ್ಮಕ ರೀತಿಯಲ್ಲಿ ತಮ್ಮನ್ನು ಪ್ರಸ್ತುತ ಪಡಿಸಲು ಇಷ್ಟಪಡುವರು.

ಕಟಕ ರಾಶಿಯವರು ತಮ್ಮ ಸಂಬಂಧಗಳ ಮೇಲೆ ಹೆಚ್ಚು ಕಾಳಜಿ ಹಾಗೂ ಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ. ಮನೆ ಮತ್ತು ಕುಟುಂಬದವರನ್ನು ಪ್ರೀತಿಸುವವರು. ಆಳವಾದ ಭಾವನಾತ್ಮಕ ಸಂಬಂಧಗಳನ್ನೊ ಹೊಂದಿಲ್ಲದಿದ್ದರೆ ಸಂತೋಷವಾಗಿರುವುದಿಲ್ಲ. ಸಂಗಾತಿಗೆ ನಿಷ್ಠಾವಂತರಾಗಿರುವ ಇವರು ಸಾಯಲೂ ಸಿದ್ಧವಾಗಿರುವವರು. ಪ್ರೀತಿಯಲ್ಲಿ ಕುರುಡರಂತಾಗುವ ಇವರು ಬಹುತೇಕ ಎಲ್ಲವನ್ನೂ ಕಡೆಗಣಿಸುತ್ತಾರೆ.

ಇವರು ಹೆಚ್ಚು ಮಾತುಗಾರರು ಅಲ್ಲ. ಎಷ್ಟು ಬೇಕೋ ಸಮಯ ಸಂಧರ್ಭಕ್ಕೆ ಅನುಸಾರವಾಗಿ ಮಾತನಾಡುವವರು ಇವರು. ಎಲ್ಲರನ್ನೂ ಪ್ರೀತಿಸುವ ಕಾಳಜಿ ತೋರುವ ಇವರು ಎಲ್ಲವನ್ನೂ ಮನಸ್ಸಿನಿಂದ ಹೃದಯದಿಂದ ಮಾಡುತ್ತಾರೆ. ಈ ಕಾರಣದಿಂದಾಗಿ ಪ್ರೀತಿಯಲ್ಲಿ ಅತ್ಯಂತ ಸೂಕ್ಷ್ಮಜೀವಿಗಳು. ತಮಾಷೆ, ಭಾವೋದ್ರಿಕ್ತ, ಸಾಹಸಮಯ ಹಾಗೂ ಆಡಂಬರ ಇಷ್ಟಪಡುವ ಇವರು ಸಮಯವನ್ನು ಹೇಗೆ ಕಳೆಯಬೇಕೆನ್ನುವುದನ್ನು ತಿಳಿದುಕೊಂಡಿರುತ್ತಾರೆ. ಇವರು ಅಲೌಕಿಕ ಪ್ರಜ್ಞೆಯನ್ನು ಹೊಂದಿರುವವರು. ಇತರರ ಮನಸ್ಸಿನಲ್ಲಿ ಏನಿದೆ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳುವವರು ಇವರು. ಇವರನ್ನು ಮೋಸಗೊಳಿಸುವುದು ಹಾಗೂ ಜಾಣತನದಿಂದ ನಿರ್ವಹಿಸುವುದು ಸ್ವಲ್ಪ ಕಷ್ಟವೇ. ರಹಸ್ಯಗಳನ್ನು ಹೊರಹಾಕುವ ಇವರ ಸಹಜ ಸಾಮರ್ಥ್ಯದಿಂದ ಸೂಕ್ಷ್ಮವಾಗಿರುತ್ತಾರೆ. ನಿಮ್ಮ ರಹಸ್ಯಗಳನ್ನು ಹೊರಹಾಕುವವರೆಗೆ ಇವರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಇವರು ತಮ್ಮ ನೈಜ ಭಾವನೆಗಳನ್ನು ಹೊರಹಾಕಲು ಕಷ್ಟಪಡುತ್ತಾರೆ. ನೋವುಂಟಾದಾಗ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇತರರ ಭಾವನೆಯನ್ನು ಸುಲಭವಾಗಿ ಗ್ರಹಿಸುವ ಇವರು ಇತರರ ಭಾವನೆಗಳಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಇತರರ ಭಾವನೆಗಳನ್ನು ತಮ್ಮದೇ ಭಾವನೆ ಎಂದು ಪರಿಗಣಿಸುತ್ತಾರೆ. ಕಟಕ ರಾಶಿಯವರು ಮೂಡಿ ಸ್ವಭಾವವನ್ನು ಹೊಂದಿರುವವರು. ಸಾಮಾನ್ಯವಾಗಿ ಇವರು ಧೈರ್ಯಶಾಲಿಗಳು ಹಾಗೂ ರಕ್ಷಣೆಗೆ ಬದ್ಧವಾಗಿರುವವರು. ಇವರ ಮನಃಸ್ಥಿತಿ ವೇಗವಾಗಿ ಬದಲಾಗುತ್ತದೆ. ಒಂದು ಕ್ಷಣದಲ್ಲಿ ನಗುವ ಮನುಷ್ಯ, ಇನ್ನೊಂದು ಕ್ಷಣ ತಮಾಷೆ ಮಾಡಬಹುದು, ಕೆಲವು ನಿಮಿಷಗಳ ನಂತರ ಕಣ್ಣೀರೂ ಹಾಕಬಹುದು. ಇದು ಇವರ ದೈನಂದಿನ ಜೀವನದ ಭಾಗವಾಗಿರುತ್ತದೆ. ಹಾಗಾಗಿ ಭಾವನೆಗಳು ಆಗಾಗ ಬದಲಾಗುತ್ತಿರುತ್ತದೆ.

ಕಟಕ ರಾಶಿಯು ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುವುದರಿಂದ ಚಂದ್ರನು ಮನೋಕಾರಕನು. ಹಾಗಾಗಿ ಮನಸ್ಸು ಆಗಾಗ ಬದಲಾಗುತ್ತಿರುತ್ತದೆ. ಕಡಿಮೆ ಸ್ವಾಭಿಮಾನಿಯಾಗಿರುವ ಇವರು ಇತರರ ವಿರುದ್ಧ ಅಜೀವ ದ್ವೇಷವನ್ನು ಕಾರುವುದು ಸಾಮಾನ್ಯವಾಗಿದೆ. ಇವರು ಅರ್ಧದಷ್ಟು ತುಂಬುವ ಬದಲು , ಲೋಟವನ್ನು ಅರ್ಧ ಖಾಲಿಯಾಗಿ ಮಾಡುವಂತಹ ವ್ಯಕ್ತಿ. ಮನಸ್ಸಿಗೆ ಆಗಿರುವ ಗಾಯ, ಭಾವನೆಗಳ ಮೇಲಾಗಿರುವ ಹಾನಿಯನ್ನು ಎಂದಿಗೂ ಮರೆಯುವುದಿಲ್ಲ.

ನಿದ್ದೆ ಪ್ರಿಯರಾಗಿರುವ ಕರ್ಕ ರಾಶಿಯವರು. ಇವರು ತುಂಬ ಹಗಲುಗನಸು ಕಾಣ್ತಾರೆ.
ಇನ್ನು ಕರ್ಕ ರಾಶಿಯವರಿಗೆ ಕಫ, ಶೀತ, ಉಸಿರಾಟದ ಸಮಸ್ಯೆ ಹೆಚ್ಚಿರುತ್ತದೆ. ಕಟಕ ರಾಶಿಯವರು ಸಮಸ್ಯೆಗಳು ಎದುರಾದಾಗ ತಮ್ಮನ್ನು ರಕ್ಷಿಸಿಕೊಳ್ಳಲು ಒಲವು ತೋರುತ್ತಾರೆ. ಸಂಬಂಧಗಳು ಸುರಕ್ಷಿತವೆಂದು ಭಾವಿಸಿದಾಗ ಮಾತ್ರ ನಂಬಿಕೆಯನ್ನು ಇಡುತ್ತಾರೆ. ವ್ಯಕ್ತಿಗಳು ವಿಶ್ವಾಸಾರ್ಹರಲ್ಲದಿದ್ದಾಗ ಅಥವಾ ಅವರೊಂದಿಗೆ ಸುರಕ್ಷಿತ ಭಾವನೆ ಇಲ್ಲದಿದ್ದಾಗ ನಿಮ್ಮ ಆಂತರಿಕ ಜಗತ್ತನ್ನು ಆಶ್ರಯಿಸುವರು. ಆಗಾಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಅಸಮಾಧಾನ ತಾಳುತ್ತಾರೆ. ಅದು ಎಲ್ಲಿಯವರೆಗೆ ಅಂದರೆ ಅದು ಸಂಪೂರ್ಣವಾಗಿ ಸ್ಫೋಟಗೊಳ್ಳುವವರೆಗೂ ಅಸಮಾಧಾನವನ್ನು ಹೊರಹಾಕುತ್ತಲೇ ಇರುತ್ತಾರೆ. ಇವರು ಉತ್ತಮ ಕಲ್ಪನೆಗಳನ್ನು ಹೊಂದಿದ್ದರೂ , ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದ್ದರೂ ಅದನ್ನು ವಿನಾಶಕಾರಿಯಾಗಿ ಬಳಸುವರು.

Leave a Reply

Your email address will not be published. Required fields are marked *