ರಾಜೇಶ ಕೃಷ್ಣ ಖ್ಯಾತ ಚಲಚಿತ್ರ ಹಿನ್ನೆಲೆ ಗಾಯಕರು ಸಂಗೀತ ಲೋಕದಲ್ಲಿ ಹೇರಸು ಮಾಡಿದ ಪ್ರತಿಭಾನ್ವಿತರು ಇವರು. ಆದರೆ ಇವರ ವಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರು ಪೇರು ಗಳಾದವು ನಾವಿಂದು ಅವರ ಬಗ್ಗೆ ತಿಳಿದುಕೊಳ್ಳೋಣ.

ವೃತ್ತಿ ಬದುಕಿನಲ್ಲಿ ಸಾಕಷ್ಟು ಯಶಸ್ಸನ್ನು ಕಂಡ ಗಾಯಕರು ರಾಜೇಶ ಕೃಷ್ಣನ್. ಇವರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೆ ಬೇಳೆದಿದ್ದೆಲ್ಲವು ಬೆಂಗಳೂರಿನಲ್ಲಿ.ಹೀಗಾಗಿ ಕನ್ನಡದಲ್ಲೇ ಸಿನಿಮಾಗಳಿಗೆ ಅತೀ ಹೆಚ್ಚು ಧ್ವನಿಯಾಗಿದ್ದಾರೆ. ಕನ್ನಡದ ಗೌರಿ ಗಣೇಶ ಸಿನಿಮಾದ ಮೂಲಕ ತಮ್ಮ ಹಾಡಿನ ಪಯಣವನ್ನು ಆರಂಭಿಸುತ್ತಾರೆ ತದ ನಂತರದಲ್ಲಿ ಸಾವಿರಾರು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಬೇರೆಬೇರೆ ಭಾಷೆಗಳಲ್ಲಿ ಹಾಡಿನ ಮೂಲಕ ಮೋಡಿಯನ್ನು ಮಾಡಿದ್ದಾರೆ.ಅವರ ಹಾಡಿನ ಬಗ್ಗೆ ಯಾವುದೇ ಚಕಾರವನ್ನು ತೆಗೆಯುವಂತಿಲ್ಲ ಅಷ್ಟು ಅದ್ಭುತವಾದ ಹಾಡುಗಾರ ಇವರು.

ರಾಜೇಶ್ ಕೃಷ್ಣನ್ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ ಅದು ಸೌಮ್ಯ ರಾವ್ ಜೊತೆಗೆ . ಸೌಮ್ಯ ರಾವ್ ಕೂಡ ಪ್ರಸಿದ್ಧ ಗಾಯಕಿ ಆ ವೇಳೆಗೆ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಇವರು ಈ ಹಿಂದೆ ಸಾಕಷ್ಟು ಹೆಸರು ಮಾಡಿದ್ದ ಖ್ಯಾತ ಗಾಯಕಿ ಬಿ ಕೆ ಸುಮಿತ್ರಾ ಅವರ ಮಗಳು. ಸೌಮ್ಯ ರಾವ್ ಕೂಡ ಬೇರೆ ಬೇರೆ ಭಾಷೆಗಳಲ್ಲಿ ಹಾಡುವ ಮೂಲಕ ಸಾಕಷ್ಟು ಮೊಡಿಯನ್ನು ಮಾಡಿರುತ್ತಾರೆ.

ರಾಜೇಶ್ ಕೃಷ್ಣನ್ ಮತ್ತು ಸೌಮ್ಯ ರಾವ್ ಇಬ್ಬರೂ ಸುಮಾರು ವೇದಿಕೆಗಳಲ್ಲಿ ಒಟ್ಟೊಟ್ಟಿಗೆ ಹಾಡಿರುತ್ತರೆ ಇಬ್ಬರದ್ದೂ ಸಂಗೀತ ಹಿನ್ನೆಲೆ ಆದ ಕಾರಣ ಬಹಳ ಬೇಗ ಪರಿಚಯವಾಗುತ್ತದೆ ಆ ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ಮನೆಯವರ ಒಪ್ಪಿಗೆ ಮೇಲೆ ಇಬ್ಬರೂ ಮದುವೆಯಾಗುತ್ತಾರೆ. ಆರಂಭದಲ್ಲಿ ಇವರ ಸಂಸಾರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ಬರ್ತಾ ಬರ್ತಾ ಭಿನ್ನಾಭಿಪ್ರಾಯ ವೈಮನಸ್ಸು ಉಂಟಾಗುತ್ತದೆ ಆ ನಂತರ ಇಬ್ಬರೂ ಬೇರೆ ಆಗುವ ನಿರ್ಧಾರ ಮಾಡಿ ಅಂತಿಮವಾಗಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ ಅಲ್ಲಿಗೆ ಸೌಮ್ಯ ರಾವ್ ಮತ್ತು ರಾಜೇಶ್ ಕೃಷ್ಣನ್ ಅವರನಡುವಿನ ಸಂಬಂಧ ಭಾಂದವ್ಯ ಮುರಿದು ಬೀಳುತ್ತದೆ.

ನಂತರ ರಾಜೇಶ್ ಕೃಷ್ಣನ್ ಹರಿಪ್ರಿಯಾ ಎಂಬ ಡೆಂಟಿಸ್ಟ್ ಅವರನ್ನ ಪರಿಚಯ ಮಾಡಿಕೊಳ್ಳುತ್ತಾರೆ. ಅವರಜೋತೆಗು ಸ್ನೇಹ ಆತ್ಮೀಯತೆ ಪ್ರೀತಿ ಎಲ್ಲವೂ ಶುರುವಾಗುತ್ತದೆ ಅಂತಿಮವಾಗಿ ಹರಿಪ್ರಿಯಾ ಅವರನ್ನು ಮದುವೆಯಾಗುತ್ತಾರೆ ಆದರೆ ಕೆಲವೇ ತಿಂಗಳುಗಳಲ್ಲಿ ಇವರ ಸಂಬಂಧ ಮುರಿದು ಬೀಳುತ್ತದೆ . ಇದಾದ ನಂತರ ರಾಜೇಶ್ ಕೃಷ್ಣನ್ ತುಂಬಾ ಕುಗ್ಗಿ ಹೋಗ್ತಾರೆ ಒಂಟಿ ಜೀವನ ನಡೆಸುವುದಕ್ಕೆ ಶುರುಮಾಡುತ್ತಾರೆ

ಒಂದಷ್ಟು ವರ್ಷಗಳ ಕಾಲ ಒಂಟಿಯಾಗಿರುತ್ತರೆ ಯಾರ ಸುದ್ದಿಗು ಹೋಗೋದಿಲ್ಲ. ಇಂಥ ಸಂದರ್ಭದಲ್ಲಿ ಎರಡು ಸಾವಿರದ ಒಂಬತ್ತರಲ್ಲಿ ಮತ್ತೋರ್ವ ಯುವತಿಯ ಪರಿಚಯವಾಗುತ್ತದೆ ಅವರೆ ರಮ್ಯಾ ವಸಿಷ್ಠ. ಇವರು ರಾಜೇಶ ಕೃಷ್ಣನ್ ಅವರಿಗೆ ಒಂದು ಕಾರ್ಯ ಕ್ರಮ ದಾಲ್ಲಿ ಪರಿಚಯವಾಗುತ್ತಾರೆ ಇವರು ಕೂಡ ಗಾಯಕಿ ಹಾಗೆ ಮುಕ್ತ ಮುಕ್ತ ಧಾರಾವಾಹಿ ಯಲ್ಲಿ ನಟಿಸಿದ್ದಾರೆ ಹಾಗೂ ಟಿವಿ ನಿರೂಪಕಿ ಆಗಿ ತಕ್ಕ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದರು ರಾಜೇಶ್ ಕೃಷ್ಣನ್ ಜೊತೆಗೆ ಒಂದಷ್ಟು ಹಾಡುಗಳನ್ನು ಹಾಡಿರುತ್ತಾರೆ ಹಾಗಾಗಿ ಅವರಿಬ್ಬರಿಗೆ ಬಹಳ ಬೇಗ ಪರಿಚಯವಾಗುತ್ತದೆ ಎರಡು ಸಾವಿರದ ಒಂಬತ್ತರಲ್ಲಿ ಪರಿಚಯವಾದರು ಆ ನಂತರ ಅವರ ಸ್ನೇಹದಲ್ಲಿ ಸ್ವಲ್ಪ ಬಿರುಕು ಬಂದು ಇಬ್ಬರೂ ಬೇರೆ ಬೇರೆ ಆಗಿರುತ್ತಾರಂತೆ

ಆನಂತರ ಎರಡು ಸಾವಿರದ ಹನ್ನೊಂದರಲ್ಲಿ ಮತ್ತೆ ಒಂದು ವೇದಿಕೆಯಲ್ಲಿ ಭೇಟಿ ಆದಾಗ ಅದೇ ಆತ್ಮೀಯತೆ ಬೇಳೆಯುತ್ತದೆ ನಂತರ ಪ್ರೀತಿಯಾಗಿ ಇಬ್ಬರೂ ಮದುವೆಯಾಗುತ್ತಾರೆ. ಮದುವೆಯಾಗಿ ಸ್ವಲ್ಪ ಸಮಯದಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗುತ್ತದೆ ರಮ್ಯಾ ವಸಿಷ್ಠ ರಾಜೇಶ್ ಕೃಷ್ಣನ್ ಅವರ ವಿರುದ್ಧ ತಿರುಗಿ ಬೀಳ್ತಾರೆ ತಮ್ಮ ಮದುವೆಯನ್ನು ರದ್ದು ಗೊಳಿಸುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ ಯಾವ ಕಾರಣಕ್ಕಾಗಿ ಅಂತ ಕಾರಣ ಕೇಳಿದ ಸಂದರ್ಭದಲ್ಲಿ ರಮ್ಯಾ ವಸಿಷ್ಠ ಸಾಕಷ್ಟು ಆರೋಪಗಳನ್ನು ಮಾಡುತ್ತಾರೆ ಅದರಲ್ಲಿ ರಾಜೇಶ್ ಕೃಷ್ಣನ್ ಅವರಿಗೆ ಪುರುಷತ್ವವೆ ಇಲ್ಲಾ ಎಂದು ಆರೋಪಿಸುತ್ತಾರೆ ಜೊತೆಗೆ ಸೌಮ್ಯಾ ರಾವ್ ಮತ್ತು ಹರಿಪ್ರಿಯ ಅವರ ಜೊತೆಗೆ ಸಂಬಂಧ ಮುರಿದುಬಿಳಲು ಇದೆ ಕಾರಣ ಎಂದು ಹೇಳುತ್ತಾರೆ

ಜೊತೆಗೆ ಇನ್ನೂ ಹಲವಾರು ಆರೋಪಗಳನ್ನು ಮಾಡುತ್ತಾರೆ ಇದರಿಂದಾಗಿ ರಾಜೇಶ್ ಕೃಷ್ಣನ್ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ ಅವರು ತಿರುಗೆಟನ್ನು ಕೊಡುವ ಕೆಲಸ ಮಾಡ್ತಾರೆ ಇಲ್ಲ ಅವರಿಗೆ ನನ್ನ ಜೊತೆ ಜೀವನ ಮಾಡುವುದಕ್ಕೆ ಇಷ್ಟವಿಲ್ಲ ಹಾಗಾಗಿ ದೂರ ಆಗ್ತಿದ್ದಾರೆ ಅದಕ್ಕಾಗಿ ಹಾಗೆಲ್ಲ ಆರೋಪ ಮಾಡುತ್ತಿದ್ದಾರೆ ಹೀಗೆ ಆರೋಪ ಮಾಡುವುದು ಸರಿಯಲ್ಲ ಎಂದು ರಾಜೇಶ್ ಕೃಷ್ಣನ್ ಹೇಳುತ್ತಾರೆ. ಹೀಗೆ ಅಂತಿಮವಾಗಿ ಹದಿನೆಂಟು ತಿಂಗಳಿಗೆ ಇವರಿಬ್ಬರ ಸಂಬಂಧ ಮುರಿದು ಬೀಳುತ್ತದೆ.

ಮೂರು ಮದುವೆಯಾದರು ಅವರ ಜೀವನದಲ್ಲಿ ನೆಮ್ಮದಿ ಸುಖ ಇರಲ್ಲಿಲ್ಲ ಒಂಟಿ ಜೀವನವನ್ನು ನಡೆಸುವ ಸಂದರ್ಭ ರಾಜೇಶ ಕೃಷ್ಣನ್ ಅವರದ್ದಾಗುತ್ತದೆ. ಸಧ್ಯ ಇವರ ತಾಯಿಯೊಂದಿಗೆ ಆರಾಮಾಗಿದ್ದಾರೆ.ಮದುವೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸಮಾಜದಲ್ಲಿ ರಾಜೇಶ ಕೃಷ್ಣನ್ ಅವರು ಎಲ್ಲರೂ ನೋಡುವ ರೀತಿಯಲ್ಲಿ ಸಭ್ಯ ಹಾಗೂ ಒಳ್ಳೆ ವ್ಯಕ್ತಿತ್ವ ಇವರದ್ದು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *