ಕಟಕ ರಾಶಿಯವರಿಗೆ ಗುರುವಿನ ಫಲ ಹೇಗಿದೆ ಹಾಗೂ ಪರಿಹಾರವೇನು ನೋಡಿ

0 0

ಕಟಕ ಲಗ್ನದವರಿಗೆ ಗುರುವಿನ ಫಲ ಹೇಗಿದೆ ಹಾಗೂ ಪರಿಹಾರವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಟಕ ರಾಶಿ, ಕಟಕ ಲಗ್ನದವರಿಗೆ ಗುರುವಿನ ಸಂಪೂರ್ಣ ಬೆಂಬಲವಿದೆ. ಈ ಲಗ್ನದವರಿಗೆ ಏಪ್ರೀಲ್ 6 ರಿಂದ ನವಂಬರ್ ರವರೆಗೂ ಗುರುಬಲ ಕ್ಷೀಣಿಸುತ್ತದೆ. ಈ ಲಗ್ನದವರು ಗುರುವಿನಿಂದ ಅದ್ಭುತ ಫಲವನ್ನು ನಿರೀಕ್ಷೆ ಮಾಡಬಹುದಾಗಿದೆ. ದುಡಿಮೆ, ತಂದೆಯ ಆರೋಗ್ಯ, ಕನಸು ಈಡೇರಲು, ಹಿರಿಯರ ಸಹಕಾರ ಇವುಗಳಿಗೆ ಗುರು ಅಧಿಪತಿಯಾಗಿರುತ್ತಾನೆ. ಶನಿ ಪತಿ ಪತ್ನಿಯ ಸಂಬಂಧ, ವ್ಯಾಪಾರ ಇವುಗಳಿಗೆ ಅಧಿಪತಿಯಾಗಿರುತ್ತಾನೆ. ಪೂರ್ವ ಜನ್ಮದ ಕರ್ಮದ ಮೇಲೂ ಗುರು ಪ್ರಭಾವ ಬೀರುತ್ತಾನೆ, ಅಣ್ಣ- ತಮ್ಮಂದಿರು, ಮಾನಸಿಕ ಸ್ಥಿತಿ, ಸಹದ್ಯೋಗಿಗಳ, ಸಂಬಂಧಿಕರ ಮೇಲೂ ಗುರು ಪ್ರಭಾವ ಬೀರುತ್ತಾನೆ ಗುರು ಬಲದಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಸಂಬಂಧಗಳಲ್ಲಿ ಬಿರುಕು ಇದ್ದರೆ ಗುರು ಬಲದಿಂದ ಹೊಂದಾಣಿಕೆ ಆಗುತ್ತದೆ. ಬಹಳ ದಿನಗಳಿಂದ ಮಾಡಿದ ಪ್ರಯತ್ನಕ್ಕೆ ಫಲ ಸಿಗುತ್ತದೆ ಹಾಗೂ ಭಾಗ್ಯ ಲಭಿಸುತ್ತದೆ, ಪ್ರತಿಭೆಯೂ ವೃದ್ದಿಯಾಗುತ್ತದೆ.

ಗುರು ರಾಜಕೀಯದಲ್ಲಿರುವವರಿಗೆ ಸಂಘಟನಾ ಸಾಮರ್ಥ್ಯ ಕೊಡುವ ಮೂಲಕ ಅವರನ್ನು ಮುಂದುವರೆಸುತ್ತಾನೆ, ಸ್ವಂತ ಬಿಸಿನೆಸ್ ಮಾಡುವವರಿಗೆ ಇದು ಉತ್ತಮ ಸಮಯವಾಗಿದೆ. ಹೆಸರು, ಕೀರ್ತಿ, ಗೌರವ ಬರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಕಟಕ ಲಗ್ನದವರಿಗೆ ಕೆಲವು ಸಮಸ್ಯೆಗಳು ಪರಿಹಾರವಾಗಬಹುದು. ಈ ಸಮಯದಲ್ಲಿ ದುಡ್ಡಿನ ಅನುಕೂಲ ಆಗುತ್ತದೆ. ಈ ಸಮಯದಲ್ಲಿ ಶತ್ರುಗಳು ಸಹಾಯಕ್ಕೆ ಬರುವ ಸಂಭವವಿರುತ್ತದೆ, ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿರುತ್ತದೆ.

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಇಷ್ಟಪಟ್ಟವರನ್ನು ಮದುವೆಯಾಗುವ ಸಾಧ್ಯತೆ ಇರುತ್ತದೆ. ಕಾನೂನಾತ್ಮಕ ವಿವಾದಗಳಿದ್ದರೆ ಪರಿಹಾರವಾಗುವ ಸಾಧ್ಯತೆಗಳಿರುತ್ತದೆ. ಏಪ್ರೀಲ್ ನಂತರ ಖರ್ಚಿನ ಬಗ್ಗೆ ನಿಗಾ ವಹಿಸಬೇಕು, ಉದ್ಯೋಗದಲ್ಲಿ ಇದು ಕಷ್ಟದ ಸಮಯವಾಗಿರುತ್ತದೆ. ಈ ಸಮಯದಲ್ಲಿ ಅಪವಾದಗಳು ಬರುವ ಸಂಭವವಿರುತ್ತದೆ. ಏಪ್ರೀಲ್ ನಂತರ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಮಾರ್ಗದರ್ಶನ ಪಡೆದು ಯಾವುದೇ ಕೆಲಸವನ್ನು ಮಾಡಬೇಕು. ಕಟಕ ಲಗ್ನದವರಿಗೆ ಕನಕ ಪುಷ್ಪರಾಗವನ್ನು ತೋರು ಬೆರಳಿಗೆ ಹಾಕಿಕೊಳ್ಳುವುದು ಒಳ್ಳೆಯದು.

Leave A Reply

Your email address will not be published.