ಯಾವ ಕೆಲಸದಲ್ಲೂ ಯಶಸ್ಸು ಸಿಗ್ತಾ ಇಲ್ವಾ ಕಾಳುಮೆಣಸಿನಿಂದ ಹೀಗೆ ಮಾಡಿ ಚಮತ್ಕಾರ ನೋಡಿ

0 32

ಜಗತ್ತಿನಲ್ಲಿ ಸಮಸ್ಯೆ ಇಲ್ಲದ ವ್ಯಕ್ತಿಯೇ ಇಲ್ಲ. ಪ್ರತಿಯೊಬ್ಬರೂ ಒದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ಕಾರ್ಯ ಕೈಗೊಂಡರು ಯಶಸ್ಸು ಸಿಗುತ್ತಿಲ್ಲ. ಆರೋಗ್ಯದಲ್ಲಿ ಏರುಪೇರು,ಉದ್ಯೋಗದಲ್ಲಿ ಕಿರಿಕಿರಿ,ಆಸ್ತಿ ವಿವಾದ,ಮದುವೆ ವಿಚಾರ,ಸಾಲಬಾಧೆ, ಮನಸ್ತಾಪ ನಾವು ಮಾಡುವ ಕೆಲಸದಲ್ಲಿ ಯಾವುದೇ ರೀತಿಯ ಏಳಿಗೆ ಸಹ ಆಗುತ್ತಿಲ್ಲ ಎಂದು ನೊಂದುಕೊಳ್ಳುವವರೇ ಜಾಸ್ತಿ. ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಒಂದು ಸರಳ ಪರಿಹಾರವನ್ನು ತಿಳಿದುಕೊಳ್ಳೋಣ.

ತಂತ್ರ – ಮಂತ್ರಗಳ ಪ್ರಯೋಗದಿಂದ ಓರ್ವ ವ್ಯಕ್ತಿಯ ಜೀವನವೇ ಹಾಳಾಗುವ ಸಂದರ್ಭಗಳು ಇರುತ್ತದೆ . ಆದ್ದರಿಂದ ಇನ್ನೊಬ್ಬರಿಗೆ ಎಂದಿಗೂ ತೊಂದರೆಯನ್ನು ನೀಡುವಂತಹ ಕಾರ್ಯಗಳನ್ನು ಮಾಡಬಾರದು . ಇದರಿಂದ ಇನ್ನೊಬ್ಬರಿಗೆ ಎಷ್ಟು ತೊಂದರೆಗಳು ಎದುರಾಗುತ್ತದೆಯೋ ಅದೇ ರೀತಿ ಒಂದಲ್ಲ ಒಂದು ದಿನ ನಮಗೂ ಈ ಸಮಸ್ಯೆಗಳು ಎದುರಾಗುತ್ತದೆ .

ಮನುಷ್ಯರ ದೃಷ್ಟಿ ಬಹಳಷ್ಟು ಪ್ರಭಾವವನ್ನು ಬೀರುತ್ತದೆ ಇದರಿಂದ ಕಲ್ಲು ಕೂಡ ಒಡೆಯುತ್ತದೆ ಎಂದು ಹೇಳುತ್ತಾರೆ ಹಾಗಾಗಿ ಒಳ್ಳೆಯ ಭಾವನೆಯಿಂದ ಒಳ್ಳೆ ಮನಸ್ಸಿನಿಂದ ಏನೇ ನೋಡಿದರೂ ಕೂಡ ಅದು ಒಳ್ಳೆಯದಾಗುತ್ತದೆ ಅದೇ ರೀತಿಯಾಗಿ ಅಸೂಯೆ ಭಾವನೆಯಿಂದ ನೋಡಿದರೆ ಅದರ ಪ್ರಭಾವ ಕೆಟ್ಟದಾಗಿ ಬೀರುತ್ತದೆ ಇದಕ್ಕೆ ನರದೃಷ್ಟಿ ಅಥವಾ ದೃಷ್ಟಿ ದೋಷ ಎಂದು ಹೇಳುತ್ತಾರೆ ಇದರಿಂದ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಆಗಾಗ ಕಾಡುತ್ತದೆ ಇದರಿಂದ ಅನೇಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ವ್ಯಕ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತಿದ್ದರೆ ಆರ್ಥಿಕವಾಗಿ ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿ ಇದ್ದರೆ ಆಗ ಅವರ ಮೇಲೆ ಅನೇಕ ಜನರ ಕಣ್ಣು ಬೀಳುತ್ತದೆ ಅವರ ಅಭಿವೃದ್ಧಿಯನ್ನು ಸಹಿಸದೆ ಅಸೂಯೆಯನ್ನು ಪಡುವ ಜನರು ಹೆಚ್ಚಾಗುತ್ತಾರೆ ಉನ್ನತ ಜೀವನವನ್ನು ಹೊಂದಿ ಕುಟುಂಬದವರೊಂದಿಗೆ ಸಂತೋಷವಾಗಿ ಅವರು ಮಾಡುವ ಕೆಲಸ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಪಡೆದಿರುವ ವ್ಯಕ್ತಿಗಳನ್ನು ನಾಶಮಾಡಲು ಅವರ ಶತ್ರುಗಳು ಅವರ ವಿರುದ್ಧ ಅನೇಕ ರೀತಿಯ ಷಡ್ಯಂತಾರವನ್ನು ಮಾಡುತ್ತಾರೆ ಹೇಗಾದರೂ ಮಾಡಿ ಅವರನ್ನು ನಾಶ ಮಾಡಬೇಕು ಎನ್ನುವ ಭಾವನೆಯನ್ನು ಹೊಂದಿರುತ್ತಾರೆ ಅದಕ್ಕಾಗಿ ಹಲವಾರು ರೀತಿಯ ಮಾಟ – ಮಂತ್ರ ವಾಮಾಚಾರ ಪ್ರಯೋಗವನ್ನು ಕೂಡ ಮಾಡುತ್ತಾರೆ ಇದರಿಂದ ಅನೇಕ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಸಂತೋಷ ಸಮೃದ್ಧಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಈ ರೀತಿ ಶತ್ರುಗಳ ಬಾದೆ ನಿವಾರಣೆ ಮಾಡಿಕೊಳ್ಳಲು ಮಾಟ – ಮಂತ್ರ ವಾಮಾಚಾರದಿಂದ ಆಗುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಅನೇಕ ಪೂಜೆ ಹೋಮಗಳನ್ನು ಮಾಡಿದರು ಕೂಡ ನಿವಾರಣೆಯಾಗುವುದಿಲ್ಲ ಆರ್ಥಿಕವಾಗಿ ಸಾಮಾಜಿಕವಾಗಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನಷ್ಟ ಉಂಟಾಗುತ್ತದೆ .

ನಮ್ಮ ಜೀವನದಲ್ಲಿ ಸಮಸ್ಯೆಗಳು ಒಂದು ಭಾಗವಾಗಿದೆ. ಈ ಕಣ್ಣು ದೃಷ್ಠಿ, ಮಾಟಮಂತ್ರ ಇಂತಹ ಯಾವುದೇ ಸಮಸ್ಯೆಗಳಿಗೂ ನಮ್ಮ ದಿನನಿತ್ಯ ಬಳಕೆಯ ವಸ್ತುಗಳನ್ನ ಬಳಸಿ ಸರಳ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಾವು ದಿನನಿತ್ಯ ಅಡುಗೆಗೆ ಬಳಸುವ ಸಾಂಬಾರು ಪದಾರ್ಥಗಳಲ್ಲಿ ಕರಿಮೆಣಸು ಸಹ ಒಂದಾಗಿದೆ. ಇದು ಅಡುಗೆಗೆ ಏಷ್ಟು ರುಚಿಕೊಡುತ್ತೋ ಹಾಗೇ ಇದನ್ನ ಮಾಟಮಂತ್ರ ಕ್ರಿಯೆಗೂ ಬಳಸುತ್ತಾರೆ. ಜೊತೆಗೆ ಕಾಳು ಮೆಣಸಿನಲ್ಲಿ ತುಂಬಾ ಔಷಧೀಯ ಗುಣಗಳನ್ನು ಹೊಂದಿದೆ. ಶೀತ, ಕೆಮ್ಮು ,ಕಫ ಇನ್ನಿತರ ಆರೋಗ್ಯ ಸಮಸ್ಯೆಗೂ ಕಾಳುಮೆಣಸನ್ನು ಬಳಕೆ ಮಾಡಲಾಗುತ್ತದೆ. ಇದರ ನಿಯಮಿತ ಬಳಕೆಯಿಂದ ಕ್ಯಾನ್ಸರ್ ಅಂತಹ ಮಾರಕ ರೋಗವನ್ನು ಹೋಗಲಾಡಿಸಬಹುದು.

ಕಾಳುಮೆಣಸು ಎಷ್ಟು ಸಕಾರಾತ್ಮಕ ಗುಣ ಹೊಂದಿದೆಯೋ ಅಷ್ಟೇ ನಕಾರಾತ್ಮಕ ಶಕ್ತಿ ಯನ್ನೂ ಹೊಂದಿದೆ. ಇದನ್ನು ಮಾಟ ಮಂತ್ರದಲ್ಲೂ ಬಳಕೆ ಮಾಡುತ್ತಾರೆ. ಕಾಳುಮೆಣಸು ಶನಿ ಮಹಾತ್ಮರ ಒಂದು ಸಂಕೇತ. ಕಷ್ಟಗಳು ಬರುವುದೇ ನಾವು ಮಾಡಿದ ಕರ್ಮಫಲದಿಂದ ಇದರ ನಿವಾರಣೆಗೆ ಕಾಳುಮೆಣಸಿನ ಬಳಕೆ ಹೇಗೆ ಎಂದು ತಿಳಿದುಕೊಳ್ಳೋಣ.

ಯಾವುದೇ ಉತ್ತಮ ಕೆಲಸ ಮಾಡಲು ಹೊರಡುವ ಸಮಯದಲ್ಲಿ ಒಂದು ಕಾಳುಮೆಣಸನ್ನು ತಗೊಂಡು ಬಲ ಕಾಲಿನ ಅಡಿ ಇಟ್ಟು ಮೆಣಸಿನಕಾಳನ್ನ ಮೆಟ್ಟಿ ಜರುಗಿಸಿ ತಿರುಗಿ ನೋಡದೆ ಮತ್ತು ಯಾವ ಕಾರಣಕ್ಕೂ ಮನೆಗೆ ಹಿಂದಿರುಗಿ ಬಾರದೆ ನಮ್ಮ ಕೆಲಸದ ಕಡೆ ಹೋಗ್ಬೇಕು. ಇದರಿಂದ ಪ್ರತಿ ಕೆಲಸಕ್ಕೂ ಖಂಡಿತವಾಗಿ ಯಶಸ್ಸು ಲಭಿಸುತ್ತದೆ. ಈ ತಂತ್ರವನ್ನು ಕೋರ್ಟ್ ವ್ಯಾಜ್ಯ, ಆಸ್ತಿ ವಿವಾದ, ಉದ್ಯೋಗ ಸಮಸ್ಯೆ, ಬ್ಯುಸಿನೆಸ್ ಡೀಲಿಂಗ್, ಮದುವೆ ಕಾರ್ಯಗಳು ನಿರ್ವಿಘ್ನವಾಗಿ ನಡೆಸಲು ಹೀಗೆ ಯಾವುದೇ ಉತ್ತಮ ಕಾರ್ಯ ಮಾಡುವಾಗಲೂ ಕಾಳು ಮೆಣಸಿನಿಂದ ಹೀಗೆ ಮಾಡುವುದರಿಂದ ಜಯ ಕಟ್ಟಿಟ್ಟ ಬುತ್ತಿ.

ಶನಿ ಸಾಡೇಸಾತಿ ನಡೆಯುತ್ತಿರುವ ಸಮಯದಲ್ಲಿ ಇನ್ನೊಂದು ತಂತ್ರದ ಮೂಲಕ ಸರಳ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅದೇನೆಂದರೆ 8 ಕಾಳುಮೆಣಸು ಹಾಗೂ 8 ರೂಪಾಯಿ ನಾಣ್ಯವನ್ನು ಒಂದು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇಡುವುದು ಮತ್ತು ಇದನ್ನ ಒಂದು ವಾರದ ನಂತರ ದೇವರ ಹುಂಡಿಗೆ ಹಾಕುವುದು ಹೀಗೆ 8 ವಾರಗಳ ಕಾಲ ಮಾಡುವುದರಿಂದ ಸಾಡೇಸಾತಿ ಶನಿ ಪ್ರಭಾವದಿಂದ ಪಾರಾಗಬಹುದು. ಈ ರೀತಿ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.