ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಎನ್ನುವುದು ಜನರಲ್ಲಿ ಸಾಕಷ್ಟು ವೇಗವಾಗಿ ಹರಡುತ್ತಿದೆ. ಇದು ಪ್ರಾರಂಭವಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕಡಿಮೆ ನೀರು ಕುಡಿಯುವುದು ಸೇರಿದಂತೆ ಇನ್ನೂ ಹಲವಾರು ಕಾರಣಗಳು ಪ್ರಮುಖವಾಗಿರುತ್ತವೆ. ಕಿಡ್ನಿ ಸ್ಟೋನ್ ಹೋಗಬೇಕು ಎನ್ನುವ ಕಾರಣಕ್ಕಾಗಿ ಹಲವರು ಆಪರೇಷನ್ ಗಳನ್ನು ಹಾಗೂ ಮೆಡಿಸಿನ್ ಗಳನ್ನು ಕೂಡ ತೆಗೆದುಕೊಂಡಿರುತ್ತೇವೆ ಆದರೆ ಅದು ಸಂಪೂರ್ಣವಾಗಿ ಹೋಗಿರುವುದಿಲ್ಲ.

ವೈದ್ಯಕೀಯ ಲೋಕದ ತಿಳುವಳಿಕೆಯ ಪ್ರಕಾರ ಕಿಡ್ನಿ ಸ್ಟೋನ್ ಒಮ್ಮೆ ಆದರೆ ಅದು ಏನೇ ಮಾಡಿದರೂ ಕೂಡ ಮತ್ತೆ ಮತ್ತೆ ಬರುತ್ತಾರೆ ಇರುತ್ತದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಇದೊಂದು ಎಲೆಯನ್ನು ನೀವು ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಶಾಶ್ವತವಾಗಿ ಸಂಪೂರ್ಣ ಪರಿಹಾರವನ್ನು ಪಡೆದುಕೊಳ್ಳಬಹುದು ಎಂಬುದಾಗಿ ತಿಳಿದು ಬಂದಿದೆ. ಆ ಎಲೆಯ ಹೆಸರು ಕಾಡು ಬಸಳೆ ಎನ್ನುವುದಾಗಿ.

ಹೌದು ಗೆಳೆಯರೇ, ಚಿಕ್ಕವರಿರಬೇಕಾದರೆ ನಾವು ಈ ಎಲೆಯನ್ನು ಪುಸ್ತಕದ ಒಳಗೆ ಇಟ್ಟುಕೊಳ್ಳುತ್ತಿದ್ದೆವು ಎಂಬುದನ್ನು ನೀವು ಕೂಡ ನೆನಪಿಸಿಕೊಳ್ಳಬಹುದಾಗಿದೆ. ಈ ಎಲೆಯನ್ನು ನೀವು ಸೇವಿಸಿದರೆ ಖಂಡಿತವಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಹಾಗೂ ಅದರಿಂದ ಪಡುವ ಬಾಧೆಯಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದಾಗಿದೆ. ಅರ್ಧ ಎಲೆಯನ್ನು ತೆಗೆದುಕೊಂಡು ಎಳೆನೀರಿನ ಜೊತೆಗೆ ಮಿಕ್ಸ್ ಮಾಡಿಕೊಂಡು 15 ದಿನಗಳ ಕಾಲ ಒಂದು ದಿನ ಬಿಟ್ಟು ಬಿಡದಂತೆ ಸೇವಿಸಬೇಕು.

ಇದನ್ನು ಸೇವನೆ ಮಾಡುವ ಹೊತ್ತಿನಲ್ಲಿ ನೀವು ಹಾಲಿನ ಯಾವುದೇ ಉತ್ಪನ್ನಗಳನ್ನು ಕೂಡ ಸೇವಿಸಬಾರದು. ನೀವು ಇದನ್ನು ತಪ್ಪದೆ ಸೇವಿಸಿದರೆ ಎಷ್ಟೇ ದೊಡ್ಡ ಸ್ಟೋನ್ ಇದ್ದರೂ ಕೂಡ ಅದು ಕರಗಿ ನೀರಾಗುತ್ತದೆ ಹಾಗೂ ಇದರಿಂದ ನಿಮಗೆ ಬೇರೆ ಯಾವುದೇ ಸೈಡ್ ಎಫೆಕ್ಟ್ ಗಳು ಕೂಡ ಸಿಗುವುದಿಲ್ಲ. ಒಂದು ವೇಳೆ ನೀವು ಕೂಡ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವಿಧಾನವನ್ನು ಪ್ರಯೋಗ ಮಾಡಿ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.

Leave a Reply

Your email address will not be published. Required fields are marked *