ನಿರ್ದೇಶಕ ಪ್ರೇಮ್ ಅವರು ದರ್ಶನ್ ಅವರನ್ನು ನಾಯಕ ನಟನನ್ನಾಗಿ ಮಾಡಿ ಕರಿಯ ಎಂಬ ಸಿನೆಮಾವನ್ನು ಮಾಡಿದ್ದರು. ಕರಿಯ ಎಂಬ ಸಿನಿಮಾದಿಂದ ದರ್ಶನ್ ಅವರ ಸಿನೆಮಾದ ಯಶಸ್ಸಿನ ಹಾದಿ ಶುರುವಾಯಿತು ಎಂದು ಹೇಳಬಹುದು. ಅದರ ನಂತರ ಪ್ರೇಮ್ ನಿರ್ದೇಶನದ ಯಾವ ಚಿತ್ರವನ್ನು ದರ್ಶನ್ ಅವರು ನಟನೆ ಮಾಡಲಿಲ್ಲ. ಈಗ ಪ್ರೇಮ್ ಅವರು ದರ್ಶನ್ ಅವರ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಾರೆ ಎಂದು ಸುದ್ದಿಯಾಗಿ ಹಬ್ಬುತ್ತಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪ್ರೇಮ್ ಅವರು ಸಿನೆಮಾಗಳನ್ನು ನಿರ್ದೇಶನ ಮಾಡಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾ ಹೋದರು. ಹಾಗೆಯೇ ಅದೆಷ್ಟೋ ಪ್ರಶಸ್ತಿಗಳನ್ನು ಸಹ ಇವರು ಗೆದ್ದಿದ್ದಾರೆ. ಇವರು ನಟಿ ರಕ್ಷಿತಾ ಅವರನ್ನು ವಿವಾಹವಾಗಿದ್ದಾರೆ. ಅವರಿಬ್ಬರಿಗೆ ಒಂದು ಗಂಡು ಮಗು ಇದೆ. ನಟಿ ರಕ್ಷಿತಾ ಅವರು ಪ್ರೇಮ್ ಅವರ ಜೊತೆ ಬಹಳ ಸಂತೋಷದಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದು. ರಕ್ಷಿತಾ ಅವರು ಸಹ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಾಗೆಯೇ ನಿರ್ದೇಶಕ ಪ್ರೇಮ್ ಅವರು ಹಿಂದೆ ವಿಲನ್ ಎಂಬ ಸಿನೆಮಾವನ್ನು ನಿರ್ದೇಶನ ಮಾಡಿದ್ದರು. ಅದರಲ್ಲಿ ಸುದೀಪ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಹಾಗೆಯೇ ಅದರಲ್ಲಿ ಶಿವರಾಜ್ ಕುಮಾರ್ ಕೂಡ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದರಲ್ಲಿ ಇರುವ ಹಾಡುಗಳು ಬಹಳ ಸುಂದರವಾಗಿ ಇವೆ. ಹಾಗೆಯೇ ಕೇಳುಗರ ಮನವನ್ನು ಮುಟ್ಟುತ್ತವೆ. ನಂತರದಲ್ಲಿ ಇವರು ಸುದೀಪ್ ಅವರ ಯಾವ ಸಿನೆಮಾಕ್ಕೂ ಇವರು ನಿರ್ದೇಶನ ಮಾಡಲಿಲ್ಲ.

ಮೊದಲು ಕರಿಯ ಸಿನೆಮಾದ ನಂತರ ಪ್ರೇಮ್ ಅವರು ಯಾವುದೇ ದರ್ಶನ್ ಅವರ ಸಿನೆಮಾಕ್ಕೂ ನಿರ್ದೇಶನ ಮಾಡಲಿಲ್ಲ. ಹಾಗಾಗಿ ದರ್ಶನ್ ಅವರ ಅಭಿಮಾನಿಗಳು ಪ್ರೇಮ್ ಅವರ ನಿರ್ದೇಶನದ ಸಿನಿಮಾಕ್ಕೆ ದರ್ಶನ್ ನಾಯಕ ನಟನಾಗಬೇಕು ಎಂದು ಬಯಸುತ್ತಿದ್ದಾರೆ. ಹಾಗೆಯೇ ಮಾಡುತ್ತಾರೆ ಎಂಬ ಸುದ್ದಿ ರಾಜಾಜಿನಗರದಲ್ಲಿ ಹರಿದಾಡುತ್ತಿದೆ. ಪ್ರೇಮ್ ಅವರು ದರ್ಶನ್ ಅವರ ಮನೆಗೆ 2 ಬಾರಿ ಹೋಗಿ ಬಂದಿದ್ದಾರೆ ಎಂದು ಸುದ್ದಿ ಹರಡುತ್ತಿದೆ. ಇನ್ನು ಸದ್ಯದಲ್ಲೇ ಕಾದು ನೋಡಬೇಕಿದೆ

Leave a Reply

Your email address will not be published. Required fields are marked *