ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು ಗೋತ್ತಾ

0 120

ನಾವಿಂದು ನಿಮಗೆ ಕೆಲವು ವಿಷಯಗಳ ಕುರಿತು ತಿಳಿಸಿಕೊಡುತ್ತೇವೆ. ವೇಗವಾಗಿ ಬದಲಾಗುತ್ತಿರುವ ಆಧುನಿಕ ದಿನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದುವುದು ಅವಶ್ಯಕವಾಗಿದೆ ನಾವಿಂದು ನಿಮಗೆ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಒಂದನೆಯದಾಗಿ ಭಾರತದಲ್ಲಿ ಮೊದಲ ಪ್ರಜೆ ಎಂದು ಯಾರನ್ನು ಕರೆಯಲಾಗುತ್ತದೆ ಎಂದರೇ ದೇಶದ ರಾಷ್ಟ್ರಪತಿಯನ್ನು ನಮ್ಮ ದೇಶದ ಮೊದಲ ಪ್ರಜೆ ಎಂದು ಕರೆಯಲಾಗುತ್ತದೆ. ಎರಡನೆಯದಾಗಿ ಭಾರತದ ಮೊದಲ ಉಪಗ್ರಹ ಯಾವುದು ಎಂದರೇ ಆರ್ಯಭಟ. ಆರ್ಯಭಟ ಭಾರತದ ಮೊಟ್ಟ ಮೊದಲ ಕೃತಕ ಉಪಗ್ರಹದ ಹೆಸರು ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇಡಲಾಗಿದೆ.

ಮೂರನೆಯದಾಗಿ ಆಧಾರ್ ಕಾರ್ಡನ್ನು ಮೊದಲು ಸ್ವೀಕರಿಸಿದವರು ಯಾರು ಎಂದರೆ ರಂಜನ ಸೋನಾವನೆ. ಮಹಾರಾಷ್ಟ್ರ ರಾಜ್ಯದಲ್ಲಿ ಇಪ್ಪತ್ತೊಂಬತ್ತು ಸೆಪ್ಟೆಂಬರ್ ಎರಡು ಸಾವಿರದ ಹತ್ತರಂದು ಆಧಾರ್ ಯೋಜನೆಯನ್ನು ಪ್ರಾರಂಭಿಸಲಾಯಿತು. ರಂಜನ ಸೋನಾವನೆ ಆಧಾರ್ ಗುರುತಿನ ಚೀಟಿ ಪಡೆದ ಮೊದಲಿಗರಾಗಿದ್ದಾರೆ. ನಾಲ್ಕನೆಯದಾಗಿ ಭಾರತದ ಮುಖ್ಯ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ಎಂದರೆ ಅರವತ್ತೈದು ವರ್ಷ. ಐದನೆಯದಾಗಿ ಭಾರತದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ ಎಂದರೆ ಜನವರಿ ಇಪ್ಪತ್ತೈದರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

ಆರನೆಯದಾಗಿ ಭಾರತದ ರಾಜಧಾನಿ ಯಾವುದು ಎಂದರೆ ನವದೆಹಲಿಯಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸಮಾಡುತ್ತಾರೆ ಜೊತೆಗೆ ಇದು ಅಭಿವೃದ್ಧಿಹೊಂದಿದ ಮೂಲಸೌಕರ್ಯಗಳ ನಗರವಾಗಿದ್ದು ಇದು ದೇಶದ ಅತಿದೊಡ್ಡ ವೈಜ್ಞಾನಿಕ ಮತ್ತು ಆರ್ಥಿಕ ಸಾರಿಗೆ ಕೇಂದ್ರವಾಗಿದೆ. ಏಳನೆಯದಾಗಿ ಭಾರತದ ಯಾವ ರಾಜ್ಯ ಕೇವಲ ಭಾರತದ ಒಂದು ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಎಂದರೆ ಅದು ಸಿಕ್ಕಿಂ ರಾಜ್ಯದೊಂದಿಗೆ. ಎಂಟನೆಯದಾಗಿ ಹಿಂದಿ ಲಗಾನ್ ಚಿತ್ರದ ನಿರ್ದೇಶಕರು ಯಾರು ಎಂದರೆ ಅಶುತೋಷ್ ಗೋವರಿಕರ್.

ಒಂಬತ್ತನೇಯದಾಗಿ ಭಾರತದಲ್ಲಿ ಪಿಂಕ್ ಸಿಟಿ ಎಂದು ಹೆಸರಾಗಿರುವ ನಗರ ಯಾವುದು ಎಂದರೆ ಅದು ಜೈಪುರ. ಹತ್ತನೆಯ ದಾಗಿ ಭಾರತದ ಯಾವ ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇದೆ ಎಂದರೆ ಅದು ಸಿಕ್ಕಿಂ ರಾಜ್ಯವಾಗಿದೆ. ಹನ್ನೊಂದನೇಯದಾಗಿ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು ಎಂದರೆ ಕಿರಣ್ ಬೇಡಿ ಅವರು. ಹನ್ನೆರಡನೆಯದಾಗಿ ಭಾರತದ ಅತ್ಯಂತ ಹಳೆಯ ಹಿಂದೂ ಕಾವ್ಯ ಯಾವುದು ಎಂದರೆ ರಾಮಾಯಣವಾಗಿದೆ.ಇದು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಸಾಮಾನ್ಯ ಜ್ಞಾನದ ವಿಷಯಗಳು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗು ತಿಳಿಸಿರಿ.

Leave A Reply

Your email address will not be published.