Capricorn Horoscope Today: 2023 ಏಪ್ರಿಲ್ ತಿಂಗಳ ಪ್ರಾರಂಭದಿಂದ ಕೊನೆಯ ತನಕ ಮಕರ (Capricorn) ರಾಶಿಯವರ ಮಾಸ ಭವಿಷ್ಯವು ಹೇಗಿರಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ. ಉತ್ತರಾಷಾಢ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಪಾದಗಳು, ಶ್ರವಣಾ ನಕ್ಷತ್ರದ ನಾಲ್ಕು ಪಾದಗಳು ಹಾಗೂ ಧನಿಷ್ಟಾ ನಕ್ಷತ್ರದ ಮೊದಲೆರಡು ಪಾದಗಳನ್ನು ಸೇರಿರುವಂತಹ ಮಕರ (Capricorn) ರಾಶಿಯ ಅದೃಷ್ಟದ ಬಣ್ಣ ನೀಲಿ ಹಾಗೂ ಕಪ್ಪು ಬಣ್ಣವಾಗಿದೆ. ಇವರ ಮಿತ್ರ ರಾಶಿಯು ಕುಂಭವಾದರೆ, ಶತೃ ರಾಶಿಯು ಸಿಂಹ ರಾಶಿಯಾಗಿದೆ.

Capricorn Horoscope Today

ಇನ್ನು‌ ಮಕರ ರಾಶಿಯಲ್ಲಿ ಜನಿಸಿದವರು ಎಂತಹುದೆ ಪರಿಸ್ಥಿತಿ ಬಂದರು ಸಹ ಎದುರಿಸಿ ನಿಲ್ಲುವಂತಹ ಗುಣದವರಾಗಿದ್ದರೆ. ಎಷ್ಟೇ ವಿಷಮ ಸ್ಥಿತಿ ಎದುರಾದರೂ ಸಹ ತಮ್ಮವರನ್ನು ಬಿಟ್ಟು ಹೋಗುವುದಿಲ್ಲ. ಇವರಲ್ಲಿ ಬುದ್ಧಿಯು ಚಾಣಕ್ಯನಿಗೆ ಸಮಾನವಾಗಿದ್ದು, ಆಡಳಿತದಲ್ಲಿಯೂ ಸಹ ತಮ್ಮ ಜಾಣತನವನ್ನು ಮರೆಯುತ್ತಾರೆ. ದಿವಾಳಿಯಾಗುವ ಸಂಸ್ಥೆಗಳು ಅಥವಾ ಉದ್ಯಮಗಳನ್ನು ಇವರಿಗೆ ನೀಡಿದ್ದೆ ಆದಲ್ಲಿ, ಇವರು ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಬಹಳಷ್ಟು ಲಾಭವನ್ನು ತರುತ್ತಾರೆ. ಅಷ್ಟು ಬುದ್ದಿ ಇವರಿಗೆ ಇರುತ್ತದೆ.

ಏಪ್ರಿಲ್ ತಿಂಗಳಿನ 2,8, 11, 15, 19, 26, 29ನೇ ತಾರಿಕು ಮಕರ ರಾಶಿಯವರಿಗೆ ಒಳ್ಳೆಯ ದಿನಗಳಾಗಿದ್ದು, ಈ ದಿನಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಈ ತಿಂಗಳಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತವೆ. ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ‌ ಆದಷ್ಟು ನಿಮ್ಮ ಸಮಸ್ಯೆಗಳನ್ನು ಇತರರಿಗೆ ತಿಳಿಸಲು ಹೋಗಬೇಡಿ. ಎಷ್ಟು ಗುಪ್ತವಾಗಿ ವ್ಯವಹಾರ‌ ಮಾಡುತ್ತಿರೋ ಅಷ್ಟು ಸುಲಭದಲ್ಲಿ ಕೆಲಸ ಸಾಗುತ್ತದೆ‌. ಬೇರೆಯವರ ಹತ್ತಿರ ಹೇಳಿಕೊಂಡಲ್ಲಿ, ಮುಂದೆ ಅದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.

ಮನಸ್ಸು ಮಾಡಿದರೆ ಯಾವುದನ್ನು ಬೇಕಾದರೂ ಸಾಧಿಸುವ ಶಕ್ತಿ ನಿಮಗಿದೆ. ಆದರೆ ಅದನ್ನು ಇನ್ನೊಬ್ಬರ ಮುಂದೆ ಆಡಿ ತೋರಿಸಿಕೊಂಡು ಹಾಳು ಮಾಡಿಕೊಳ್ಳಬೇಡಿ. ಸೋಮಾರಿತನವನ್ನು ಬಿಟ್ಟು ಕೆಲಸವನ್ನು ಕೈಗೆತ್ತಿಕೊಳ್ಳುವ ಮನಸ್ಸು ಬರುವುದಿಲ್ಲ. ಆದಾಗ್ಯೂ ಮನಸ್ಸಿಟ್ಟು ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ಪಾಲುದಾರಿಕೆ ಉದ್ಯಮಗಳಲ್ಲಿ ಈ ತಿಂಗಳು ಅಂತಹ ಯಶಸ್ಸೇನು ಸಿಗುವುದಿಲ್ಲ. ಆದರೂ ನಷ್ಟವು ಆಗುವುದಿಲ್ಲವಾದ್ದರಿಂದ ಅದನ್ನು ಮುಂದುವರೆಸಬಹುದು. ಕುಲ ಕಸುಬನ್ನು ಆಧರಿಸಿ ಮಾಡುವಂತಹ ಕೆಲಸಗಳು ಈ ತಿಂಗಳಲ್ಲಿ ಆದಾಯವನ್ನು ತರಲಿದೆ.

ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರಿಗೆ ಈ ತಿಂಗಳು ವ್ಯಾಪಾರ ಚೆನ್ನಾಗಿ ನಡೆಯಲಿದೆ. ಇದರಿಂದಾಗಿ ಒಂದಷ್ಟು ಹಣವನ್ನು ಕಾಣುತ್ತೀರಿ. ಯಾವುದಾದರೂ ಹೋಮ್ ಪ್ರಾಡಕ್ಟ್ ಉದ್ಯಮಗಳಲ್ಲಿ ತೊಡಗಿಕೊಂಡಿದ್ದರೆ ಒಳ್ಳೆಯ ಲಾಭವಿದೆ. ಈ ತಿಂಗಳು ಗ್ರಹಿಣಿಯರಿಗೆ ಉತ್ತಮ ಆದಾಯದ ಜೊತೆಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳು ದೊರೆಯಲಿವೆ. ಆಹಾರ ಪದಾರ್ಥಗಳ ವ್ಯಾಪಾರ ಮಾಡುವವರಿಗೂ ಈ ತಿಂಗಳು ಅನುಕೂಲಕರವಾಗಿದೆ.

ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಈ ಏಪ್ರಿಲ್ ತಿಂಗಳಿನಲ್ಲಿ ವರ್ಗಾವಣೆ ಆಗುವ ಸಾಧ್ಯತೆಗಳಿದ್ದು, ನಿಮ್ಮಿಷ್ಟದ ಸ್ಥಳಗಳಿಗೆ ವರ್ಗಾವಣೆ ಸಿಗಬಹುದು. ಕಬ್ಬಿಣ ಸಗಟು ವ್ಯಾಪಾರಸ್ಥರಿಗೆ, ವಕೀಲರುಗಳಿಗೆ ಈ ತಿಂಗಳು ಎಚ್ಚರಿಕೆಯಿಂದ ಇರಬೇಕಾದದ್ದು ಅಗತ್ಯ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ತಿಂಗಳಲ್ಲಿ ಅಂತಹ ಉತ್ತಮ ಬೆಳವಣಿಗೆಗಳೇನು ಕಂಡು ಬಾರದು. ಹಾಗೇಯೆ ಜನರ ನಿಂದನೆಗೆ ಗುರಿಯಾಗುವ ಸಂಭವವೇ ಹೆಚ್ಚಾಗಿರುತ್ತದೆ. ಶುದ್ಧವಾದ ನಡೆ ನುಡಿಯಿದ್ದರೆ ಮುಂದಿನ ದಿನಗಳು ಶುಭ ತರಲಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!