ಭಾರತದಲ್ಲಿ ಕೋರೋನ ಮಹಾಮಾರಿ ಎರಡನೇ ಅಲೆಯನ್ನು ಮುಗಿಸಿ ಮಾಧ್ಯಮದವರ ಪ್ರಕಾರ ಮೂರನೇ ಅಲೆಕೂಡಾ ಈಗಾಗಲೇ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಏರುತ್ತಿದ್ದ ಹಾಗೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಈ ಕೋರೋನ ವ್ಯಾಕ್ಸೀನ್ ತೆಗೆದುಕೊಂಡ ವ್ಯಕ್ತಿಗಳು ಸಾಮನ್ಯವಾಗಿ ವೈದ್ಯರ ಬಳಿ ಎಲ್ಲರೂ ಹೇಳುವುದು ಒಂದೇ ಮಾತು.

ನಾನು ವ್ಯಾಕ್ಸೀನ್ ತೆಗೆದುಕೊಂಡು ಎರಡು ಮೂರು ದಿನಗಳು ಆಗಿವೆ ಇಲ್ಲಾ ಒಂದು ವಾರ ಆಗಿದೆ ಬಹಳ ಸುಸ್ತು ಎಂದು. ಸಾಮಾನ್ಯವಾಗಿ ನಾವು ಕೋರೋನ ವ್ಯಾಕ್ಸೀನ್ ಅಂತಾ ಅಲ್ಲಾ ಯಾವುದೇ ವ್ಯಾಕ್ಸೀನ್ ತೆಗೆದುಕೊಂಡರೂ ಸಹ ಅದರ ಪರಿಣಾಮ ಸರಿಸುಮಾರು ಎರಡರಿಂದ ಮೂರು ದಿನಗಳವರೆಗೆ ಇದ್ದೇ ಇರುತ್ತದೆ. ಅದರ ಪರಿಣಾಮವಾಗಿ ಕೈ ನೋವು, ಸ್ವಲ್ಪ ಸಣ್ಣದಾಗಿ ಜ್ವರ ಬರುವುದು ಆಗುತ್ತದೆ. ಇದು ವ್ಯಾಕ್ಸೀನ್ ತೆಗೆದುಕೊಂಡ ಕಾರಣಕ್ಕೆ ನಮಗೆ ಏನೋ ಅಡ್ಡಪರಿಣಾಮ ಆಗಿದೆ ಎಂದು ಅರ್ಥವಲ್ಲ. ವ್ಯಾಕ್ಸೀನ್ ತೆಗೆದುಕೊಂಡ ಮೇಲೆ ಸಣ್ಣದಾಗಿ ಜ್ವರ ಬರಲೇಬೇಕು ಎನ್ನುತ್ತಾರೆ ವೈದ್ಯರು.

ಆದರೆ ಕೋವಿಡ್ – 19 ಲಸಿಕೆ ಹಾಕಿಸಿಕೊಳ್ಳುವ ಮುನ್ನ ಅಥವಾ ನಂತರ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ರೋಗಲಕ್ಷಣಗಳನ್ನು ತಡೆಗಟ್ಟಲು ಪ್ರಯತ್ನಿಸಲು ನೋವು ನಿವಾರಕ ಮಾತ್ರೆಗಳನ್ನು ಲಸಿಕೆ ತೆಗೆದುಕೊಳ್ಳುವ ಮುಂಚಿತವಾಗಿಯೇ ತೆಗೆದುಕೊಳ್ಳಬೇಡಿ. ಆದರೆ ನಿಮ್ಮ ವೈದ್ಯರು ಒಪ್ಪಿದರೆ ಹಾಗೂ ಅಗತ್ಯವಿದ್ದರೆ ಆ ಮಾತ್ರೆಗಳನ್ನು ಬಳಸಬಹುದು.

ಇನ್ನೂ ಕೆಲವರಲ್ಲಿ ವ್ಯಾಕ್ಸೀನ್ ತೆಗೆದುಕೊಂಡು ಜ್ವರಬಂದು ಹೋದರೂ ಒಂದು ವಾರ ಆದರೂ ಸಹ ಇನ್ನೂ ಸುಸ್ತು ನಿಶ್ಯಕ್ತಿ ಹಾಗೆಯೇ ಇದೆ ಸರಿಯಾಗಿ ನಿದ್ರೆ ಕೂಡಾ ಆಗುತ್ತಿಲ್ಲ ಎನ್ನುತ್ತಾರೆ. ಇದು ವ್ಯಾಕ್ಸೀನ್ ನದ್ದೇ ಅಡ್ಡಪರಿಣಾಮ ಎಂದು ಹೇಳಲು ಸಾಧ್ಯವಿಲ್ಲ. ಆಯಾ ವ್ಯಕ್ತಿಗಳ ದೇಹ ಪ್ರಕೃತಿ ಅಥವಾ ಮಾನಸಿಕ ಸ್ಥಿತಿಯ ಮೇಲೂ ಕೂಡಾ ಅವಲಂಬಿತವಾಗಿ ಇರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಈ ಕೆಲವು ಟಿಪ್ಸ್ ಗಳು ಅನುಕರಣೆ ಮಾಡಿನೋಡಿ. ದೇಹದ ಸುಸ್ತು ನಿಶ್ಯಕ್ತಿ ಎಲ್ಲಾ ಕಡಿಮೆ ಆಗುವುದು. ಮಾರ್ಕೆಟ್ ನಲ್ಲಿ ಸಿಗುವ ಅಶ್ವಗಂಧ ಪುಡಿಯನ್ನು ತಂದು ಅದನ್ನು ಶುದ್ಧವಾದ ಆಕಳ ತುಪ್ಪದಲ್ಲಿ ಚೆನ್ನಾಗಿ ಹುರಿದು ರಾತ್ರಿ ಮಲಗುವ ಮೊದಲು ಎರಡು ಚಮಚ ತುಪ್ಪದಲ್ಲಿ ಹುರಿದ ಅಷ್ವಗಂಧ ಪುಡಿಯನ್ನು ಬಿಸಿಯಾದ ಹಾಲಿಗೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನೂ ಸೇರಿಸಿ ಕುಡಿಯಬೇಕು. ಇದನ್ನು ಸಾಮಾನ್ಯ ಒಂದು ವಾರದ ಕಾಲ ಮಾಡಿದಾಗ ಪರಿಣಾಮ ತಿಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *