ಹಾವು ಕಚ್ಚಿದ್ರೆ ತಕ್ಷಣ ಏನ್ ಮಾಡಬೇಕು ವೈದ್ಯರ ಸಲಹೆ ನೋಡಿ

0 47

ಹಳ್ಳಿಗಳಲ್ಲಿ ಹಾವು ಕಚ್ಚುತ್ತದೆ ಆಗ ಅವರು ಕೆಲವು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ಮಂತ್ರ ಹಾಕಿಸುವುದು, ದಾರವನ್ನು ಗಟ್ಟಿಯಾಗಿ ಕಟ್ಟುವುದು, ನಿದ್ರೆ ಮಾಡಲು ಕೊಡದೆ ಇರುವುದು ಮುಂತಾದವು. ಡಾಕ್ಟರ್ ಅಂಜನಪ್ಪ ಅವರು ಹಾವು ಕಚ್ಚಿದಾಗ ಏನು ಮಾಡಬೇಕು ಎಂದು ಹೇಳಿದ್ದಾರೆ. ಅವರು ಹಾವು ಕಚ್ಚಿದಾಗ ಯಾವ ಅಂಶಗಳನ್ನು ಅನುಸರಿಸಬೇಕು ಎಂದು ಹೇಳಿರುವುದನ್ನು ಈ ಲೇಖನದಲ್ಲಿ ನೋಡೋಣ.

ಹಾವುಗಳಲ್ಲಿ ಎರಡು ವಿಧಗಳಿರುತ್ತವೆ ವಿಷರಹಿತ ಹಾವುಗಳು ಮತ್ತು ವಿಷಕಾರಿ ಹಾವುಗಳು. ನಾಗರಹಾವು, ಕಟಕಲ ಹಾವು, ಮಂಡಲ ಹಾವು ಇವು ವಿಷಸಹಿತ ಹಾವುಗಳಾಗಿವೆ. ನೀರುಳ್ಳೆ ಹಾವು, ಹಸಿರುಳ್ಳೆ ಹಾವುಗಳು ವಿಷರಹಿತ ಹಾವುಗಳಾಗಿವೆ. ವಿಷಕಾರಿ ಹಾವುಗಳು ಕಚ್ಚಿದರೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ವಿಷರಹಿತ ಹಾವುಗಳು ಕಚ್ಚಿದರೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಹಾವು ಕಚ್ಚಿದ ಮಾರ್ಕ್ ನೋಡಿದಾಗ ವೈದ್ಯರಿಗೆ ಇದು ಯಾವ ಹಾವು ಕಚ್ಚಿದೆ ಎಂದು ತಿಳಿಯುತ್ತದೆ. ಹಳ್ಳಿಗಳಲ್ಲಿ ಅಟ್ಟ, ಸಂದಿಗಳಲ್ಲಿ ಮಲಗಿದ ಹಾವು ಕೈ ಹಾಕಿದಾಗ ಕಚ್ಚುತ್ತದೆ ಯಾವುದೇ ಹಾವು ಅಟ್ಟಿಸಿಕೊಂಡು ಬಂದು ಕಚ್ಚುವುದಿಲ್ಲ. ಹಾವು ಕಚ್ಚಿದ ತಕ್ಷಣ ಬ್ಲೇಡ್ ನಲ್ಲಿ ಕೊರೆದು ಬಾಯಿಯಿಂದ ವಿಷ ತೆಗೆಯುತ್ತಾರೆ ಹಾಗೆ ಮಾಡುವುದು ತಪ್ಪು ಮಾಡಬಾರದು.

ಮೊದಲಿನ ಕಾಲದಲ್ಲಿ ಹಾವು ಕಚ್ಚಿದಾಗ ಕೋಳಿಯನ್ನು ತಂದು ಆ ಜಾಗದ ಹತ್ತಿರ ಇಟ್ಟರೆ ಅದು ವಿಷ ತೆಗೆಯುತ್ತದೆ ನಂತರ ಕೊಳಿಯು ಸತ್ತು ಹೋಗುತ್ತದೆ. ಹಾವು ಕಚ್ಚಿದಾಗ ಮಂತ್ರ ಹಾಕಿಸಿದರೆ ಏನು ಆಗುವುದಿಲ್ಲ ಎಂದು ಹೇಳುತ್ತಾರೆ ಆದರೆ ಅದನ್ನು ನಂಬಬಾರದು. ನಾಗರ ಹಾವು ಕೂಡ ತನ್ನ ಭೇಟೆಯನ್ನು ತಿಂದು ಯಾರಾದರೂ ಅದರ ಬಾಲ ತುಳಿದಾಗ ಅದಕ್ಕೆ ಕೋಪ ಬಂದು ಕಚ್ಚುತ್ತದೆ ಆದರೆ ಪಾಯಿಸನ್ ಇರುವುದಿಲ್ಲ. ಹಾವಿನ ಹಲ್ಲಿನಲ್ಲಿ ಪಾಯಿಸನ್ ಇದ್ದರೆ ಮಾತ್ರ ಅದು ಕಚ್ಚಿದಾಗ ವಿಷ ಇರುತ್ತದೆ. ಸುಬ್ರಮಣಿ ಎನ್ನುವವನು ಇಂಟರ್ನ್ಯಾಷನಲ್ ಹೆಂಡಿಕ್ಯಾಪಡ್ ಪ್ಲೇಯರ್ ಡಾಕ್ಟರ್ ಅಂಜನಪ್ಪ ಅವರ ಊರಿನವನಾಗಿದ್ದು ಅವನು 7 ವರ್ಷದವನಿದ್ದಾಗ ಅಂಜನಪ್ಪ ಅವರು ಊರಿಗೆ ಹೋದಾಗ ಆ ಹುಡುಗನ ಎಡ ಕೈಗೆ ಹಾವು ಕಚ್ಚಿದೆ ಅವನ ಕೈಯ್ ಗೆ ದಾರ ಕಟ್ಟಿದ್ದಾರೆ, ಅವನನ್ನು ನಿದ್ರೆ ಮಾಡಲು ಬಿಡದೆ ಹಾಡು ಹೇಳುತ್ತಾರೆ.

ಅವನ ಕೈ ಕಪ್ಪಾಗಾಗಿ ಗ್ಯಾಂಗ್ರಿನ್ ಆಗಿತ್ತು ಆಗ ಅಂಜನಪ್ಪ ಅವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೈಯನ್ನು ತೆಗೆಯುತ್ತಾರೆ. ಹಾವು ಕಚ್ಚಿದರೆ ಆ ಹಾವನ್ನು ಹೊಡೆಯುತ್ತಾರೆ ಹಾಗೆ ಮಾಡುವುದು ತಪ್ಪು ಮಾಡಬಾರದು. ಹಾವು ಕಚ್ಚಿದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅವರು ಸರಿಯಾದ ಟ್ರೀಟ್ಮೆಂಟ್ ಕೊಟ್ಟು ಗುಣಪಡಿಸುತ್ತಾರೆ. ಹಳ್ಳಿಗಳಲ್ಲಿ ಹಾವಿನ ಬಗ್ಗೆ ಹಲವಾರು ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ ಅಲ್ಲದೆ ಕೆಲವರು ಹಾವಿನ ಬಗ್ಗೆ ತಪ್ಪು ಮಾಹಿತಿಯನ್ನು ಕೊಡುತ್ತಾರೆ. ಈ ಮಾಹಿತಿ ಉಪಯುಕ್ತವಾಗಿದೆ ಎಲ್ಲರಿಗೂ ತಿಳಿಸಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.