ಕಡಿಮೆ ಅಂದರೂ ದಿನಕ್ಕೆ 15 ಲೀಟರ್ ಹಾಲು ಕೊಡುವ ಮುರ್ರಾ ತಳಿ ಎಮ್ಮೆಗಳ ಮಾಹಿತಿ

0 62

ರೈತರು ಹೆಚ್ಚಾಗಿ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಕೂಡ ಮಾಡುತ್ತಾರೆ. ಹೈನುಗಾರಿಕೆ ಮಾಡುವವರು ಮುರ್ರಾ ತಳಿಯ ಎಮ್ಮೆಗಳನ್ನು ಸಾಕುತ್ತಾರೆ. ಮುರ್ರಾ ತಳಿಯ ಎಮ್ಮೆಗಳನ್ನು ಹೇಗೆ ನಿರ್ವಹಿಸಬೇಕು, ಈ ತಳಿಯ ಎಮ್ಮೆಗಳನ್ನು ಸಾಕುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಮುಂತಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರೈತರಿಗೆ ಸಾಮಾನ್ಯವಾಗಿ ಮುರ್ರಾ ತಳಿಯ ಎಮ್ಮೆಗಳ ಬಗ್ಗೆ ಗೊತ್ತಿರುತ್ತದೆ. ಹೆಚ್ಚಿನ ರೈತರು ಹೈನುಗಾರಿಕೆ ಮಾಡುವುದಿದ್ದರೆ ಮುರ್ರಾ ತಳಿಯ ಎಮ್ಮೆಗಳನ್ನು ಸಾಕಲು ಇಷ್ಟಪಡುತ್ತಾರೆ ಏಕೆಂದರೆ ಹಾಲನ್ನು ಉತ್ಪಾದಿಸುತ್ತದೆ. ಈ ತಳಿಯ ಎಮ್ಮೆಗಳು ದಿನಕ್ಕೆ ಕಡಿಮೆ ಅಂದರೂ 15 ಲೀಟರ್ ಹಾಲು ಕೊಡುತ್ತದೆ, ಕರು ಹಾಕಿದ ಸಮಯದಲ್ಲಿ ಕಡಿಮೆ 8 ಲೀಟರ್ ಹಾಲು ಕೊಡುತ್ತದೆ

ದಿನಕಳೆದಂತೆ ಹದಿನೈದು-ಇಪ್ಪತ್ತು ಲೀಟರ್ ಹಾಲು ಕೊಡುತ್ತದೆ. ಈ ತಳಿಯ ಎಮ್ಮೆಗಳು ದಿನಕ್ಕೆ ಇಪ್ಪತ್ತೈದು ಲೀಟರ್ ಹಾಲು ಕೊಡುತ್ತವೆ. ಮುರ್ರಾ ಎಮ್ಮೆ ತಳಿಯು ಮೂಲತಃ ಹರಿಯಾಣ ರಾಜ್ಯದ್ದಾಗಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಮುರ್ರಾ ಎಮ್ಮೆಗಳನ್ನು ಮಾರಾಟ ಮಾಡುತ್ತಾರೆ. ಗುಲ್ಬರ್ಗದಲ್ಲಿ ಮುರ್ರಾ ತಳಿಯಲ್ಲಿ ಎಲ್ಲಾ ರೀತಿಯ ಎಮ್ಮೆಗಳನ್ನು ನೋಡಬಹುದು.

ಮುರ್ರಾ ತಳಿಯ 15 ಲೀಟರ್ ಹಾಲು ಕೊಡುವ ಎಮ್ಮೆಗೆ 80 ಸಾವಿರ, 20 ಲೀಟರ್ ಹಾಲು ಕೊಡುವ ಎಮ್ಮೆಗೆ ಮೂರು ಲಕ್ಷ ರೂಪಾಯಿವರೆಗೆ ಇರುತ್ತದೆ. ಗುಲ್ಬರ್ಗದಲ್ಲಿ ಕರು ಹೊಂದಿರುವ ಎಮ್ಮೆ ಬೇಕಾದರೆ ಕರು ಇರುವ ಎಮ್ಮೆಯನ್ನು ಕೊಡುತ್ತಾರೆ. ಗಬ್ಬದಲ್ಲಿರುವ ಎಮ್ಮೆ ಬೇಕಾದರೆ ಗಬ್ಬದ ಎಮ್ಮೆಯನ್ನು ಕೊಡುತ್ತಾರೆ. ಮುರ್ರಾ ತಳಿಯ ಎಮ್ಮೆಯನ್ನು ಹೇಗೆ ನೋಡಿಕೊಳ್ಳಬೇಕು, ಅವುಗಳಿಗೆ ಯಾವ ರೀತಿ ಆಹಾರ ಕೊಡಬೇಕು, ಎಷ್ಟು ಪ್ರಮಾಣದಲ್ಲಿ ಆಹಾರ ಕೊಡಬೇಕು, ಯಾವಾಗ ಕೊಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಅವರಿಂದ ತಿಳಿದುಕೊಳ್ಳಬಹುದು.

ಎರಡು ಮುರ್ರಾ ತಳಿಯ ಎಮ್ಮೆಯನ್ನು ಸಾಕಿದರೂ ಹಾಲು ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು. ಮುರ್ರಾ ತಳಿಯ ಎಮ್ಮೆಗಳ ನಿರ್ವಹಣೆ ಸುಲಭವಾಗಿರುತ್ತದೆ, ಈ ತಳಿಯ ಎಮ್ಮೆಗಳ ಮೇಲೆ ವಾತಾವರಣ ಪ್ರಭಾವ ಬೀರುವುದಿಲ್ಲ. ಯಾವುದೇ ವಾತಾವರಣಕ್ಕೂ ಈ ತಳಿಯ ಎಮ್ಮೆಗಳು ಹೊಂದಿಕೊಳ್ಳುತ್ತವೆ.

ದೇಶಿಯ ಎಮ್ಮೆಗಳಿಗಿಂತ ಮುರ್ರಾ ಎಮ್ಮೆಗಳು ಹೆಚ್ಚು ದಿವಸ ಹೆಚ್ಚು ಹಾಲನ್ನು ಕೊಡುತ್ತದೆ ಮತ್ತು ಹಾಲು ಗಟ್ಟಿಯಾಗಿರುತ್ತದೆ. ಎಮ್ಮೆಗಳನ್ನು ಕಟ್ಟಿಹಾಕಲು ಸರಳವಾದ ಸುಸಜ್ಜಿತವಾದ ಕೊಟ್ಟಿಗೆಯನ್ನು ಕಟ್ಟಬೇಕು, ಹೆಚ್ಚು ಹಣ ಖರ್ಚು ಮಾಡಿ ಕೊಟ್ಟಿಗೆಯನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಮುರ್ರಾ ಎಮ್ಮೆಗಳಿಗೆ ಹಸಿರು ಹುಲ್ಲನ್ನು ಕೊಡಬಹುದು. ಒಟ್ಟಾರೆಯಾಗಿ ಮುರ್ರಾ ಎಮ್ಮೆಗಳನ್ನು ಸಾಕುವುದು ಸುಲಭವಾಗಿದ್ದು, ಅಧಿಕ ಹಾಲನ್ನು ಕೊಡುತ್ತದೆ ಇದರಿಂದ ಹೆಚ್ಚು ಆದಾಯ ಗಳಿಸಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.