ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೆ ಜನ್ಮರಾಶಿ, ಜನ್ಮನಕ್ಷತ್ರ ಹೊಂದಿರುತ್ತಾನೆ ಅದರಂತೆ ಹುಟ್ಟಿದ ವಾರ ಯಾವುದು ಎನ್ನುವುದರ ಮೇಲೆ ಅವನ ಭವಿಷ್ಯ ನಿರ್ಧಾರವಾಗುತ್ತದೆ. ವಾರದ ಏಳು ದಿನಗಳಲ್ಲಿ ಯಾವ ದಿನ ಹುಟ್ಟಿದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು. ಹಾಗಾದರೆ ಗುರುವಾರ ಹುಟ್ಟಿದ ವ್ಯಕ್ತಿ ಯಾವ ಗುಣಗಳನ್ನು ಹೊಂದಿರುತ್ತಾನೆ, ಅವನ ಭವಿಷ್ಯ ಹೇಗಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ ಇರುವಷ್ಟು ದಿನ ಖುಷಿಯಿಂದ ಇರಬೇಕು. ತಾಯಿಯ ಗರ್ಭದಲ್ಲಿ ಮಗು ಬೆಳೆಯುವಾಗ ಒಂಭತ್ತು ಗ್ರಹಗಳ ಕಾರ್ಯ ಇರುತ್ತದೆ. ಒಂಭತ್ತು ತಿಂಗಳುಗಳಲ್ಲಿ 9 ಗ್ರಹಗಳು ಮಗುವಿನ ದೇಹ ರಚನೆಯಲ್ಲಿ ಕಾರ್ಯಮಾಡುತ್ತವೆ. ಗುರುವಾರ ಬ್ರಾಹ್ಮಣ ವಾರ, ಶ್ರೇಷ್ಠವಾದ ವಾರ ಎಂತಲೂ ಕರೆಯುತ್ತಾರೆ, ಗುರುವಾರಕ್ಕೆ ಹೆಚ್ಚಿನ ಮಹತ್ವವಿದೆ. ಸರ್ವಶಾಸ್ತ್ರ ಸಂಪನ್ನನಾದ ಗುರುವನ್ನು ಶಿವನ ರೂಪದಲ್ಲಿ, ರಾಯರ ರೂಪದಲ್ಲಿ ನೋಡುತ್ತೇವೆ.

ಇಂತಹ ಶ್ರೇಷ್ಠ ಗುರುವಾರದಂದು ಹುಟ್ಟಿದ ಗಂಡು ಮಗುವಿನ ಹಣೆ ಎತ್ತರವಾಗಿರುತ್ತದೆ, ಕೆಂಪು ಛಾಯೆ, ಗಿಣಿಯ ಮೂಗಿನಂತ ಮೂಗು, ಅವರ ತುಟಿ ಮತ್ತು ಕೆನ್ನೆಯಲ್ಲಿ ಕೃಷ್ಣನ ಲಕ್ಷಣ, ಭುಜ ಮತ್ತು ಹುಬ್ಬು ಲಕ್ಷ್ಮಿ ರೂಪದಲ್ಲಿ, ದೇಹವು ಸಂಪೂರ್ಣವಾಗಿ ಗುರುವಿನ ರೂಪದಲ್ಲಿರುತ್ತದೆ. ಶುಕ್ರ ಮತ್ತು ಗುರುವಿನ ಲಕ್ಷಣಗಳುಳ್ಳ ವ್ಯಕ್ತಿಗಳ ದೇಹ ಬಹಳ ದೈತ್ಯ ರೂಪದಲ್ಲಿರುತ್ತದೆ. ಇವರು ಸರ್ವಶಾಸ್ತ್ರ ಪಾಂಡಿತ್ಯವನ್ನು ಹೊಂದಿರುತ್ತಾರೆ, ಎಲ್ಲವನ್ನು ತಿಳಿದ ಜ್ಞಾನಿಗಳಾಗಿರುತ್ತಾರೆ.

ಗುರುವಾರ ಹುಟ್ಟಿದ ಗಂಡು ಮಕ್ಕಳಿಗೆ ವಿದ್ಯೆಯು ಒಲಿಯುತ್ತದೆ. ಗುರುವಾರ ಹುಟ್ಟಿದವರು ತಂದೆಗೆ ಬಹಳ ಪ್ರಿಯರಾಗಿರುತ್ತಾರೆ. ಗುರುವಾರ ಹುಟ್ಟಿದ ಮಕ್ಕಳಿಂದ ತಂದೆಯ ಜೀವನದಲ್ಲಿ ಅನೇಕ ಒಳ್ಳೆಯ ಬದಲಾವಣೆಗಳಾಗುತ್ತವೆ. ಅವರ ಮನೆಯಲ್ಲಿ ಧನ ಕನಕ ಲಕ್ಷ್ಮಿ ಸಮೃದ್ಧಿಯಾಗುತ್ತದೆ, ಮನೆಗೆ ಸಂಕಷ್ಟ ದೂರವಾಗುತ್ತದೆ. ಗುರುವಾರ ಜನಿಸಿದವರು ಅದೃಷ್ಟಶಾಲಿಗಳಾಗಿರುತ್ತಾರೆ, ಬುದ್ಧಿವಂತರಾಗಿರುತ್ತಾರೆ. ಗುರುವಾರ ಹುಟ್ಟಿದ ಮಗನಿಗೆ 14 ವರ್ಷದ ಒಳಗಡೆ ಆತನ ದೇಹ, ಮನಸ್ಸು, ಜ್ಞಾನ ನಿಯಂತ್ರಣಕ್ಕೆ ಬಂದರೆ ಅವನೊಬ್ಬ ಮಹಾನ್ ವ್ಯಕ್ತಿಯಾಗಿ ಬದಲಾಗುತ್ತಾನೆ.

ಹದಿನಾಲ್ಕು ವರ್ಷದೊಳಗಿನ ಜೀವನದಲ್ಲಿ ಯಾವುದೆ ದುಷ್ಟ ಘಟನೆಗಳಿಂದ ಅವನ ಮನಸ್ಸು ಪರಿವರ್ತನೆಯಾದರೆ ಕ್ಷುದ್ರ ಗ್ರಹಗಳಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ. ಗುರುವಾರ ಹುಟ್ಟಿದ ಗಂಡು ಮಕ್ಕಳಿಗೆ ರಾಯರ ಪೂಜೆ ಮಹತ್ವದ ಬಗ್ಗೆ ತಿಳಿಸಿಕೊಡುವುದು ಒಳ್ಳೆಯದು, ಆಧ್ಯಾತ್ಮಿಕತೆಯ ಬಗ್ಗೆ ಒಲವು ತೋರುವಂತೆ ಮಾಡಿ. ಶಿವನ ಆರಾಧನೆಯನ್ನು ಮಾಡಬೇಕು.

ಗುರುವಾರ ಹುಟ್ಟಿದವರ ಹೆಸರಿನಲ್ಲಿ ಪ್ರತಿ ಸೋಮವಾರ ರುದ್ರಾಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಮಾಡುವುದರಿಂದ ಕರ್ಮಗಳು ವಿಮೋಚನೆಯಾಗಿ ಸಕಲ ಸಮೃದ್ಧಿ, ಸಂಪತ್ತು, ವಿದ್ಯಾಯೋಗ, ಆಯುಷ್ಯ, ಆರೋಗ್ಯ ಹೊಂದಿ ಮಹಾನ್ ವ್ಯಕ್ತಿಯಾಗಿ ಬೆಳೆಯುತ್ತಾನೆ. ಹುಣ್ಣಿಮೆ ಅಥವಾ ಅಮಾವಾಸ್ಯೆ ಬಂದ ಸೋಮವಾರದಂದು ರುದ್ರಾಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಎಲ್ಲಾ ಶಿವಾಲಯಗಳಲ್ಲಿ ಅಂತಹ ಸೋಮವಾರದಂದು ಪೂಜೆ-ಪುನಸ್ಕಾರಗಳು ಹೆಚ್ಚಾಗಿ ನಡೆಯುತ್ತದೆ, ಶಿವನಿಗೆ ಪ್ರಿಯವಾದ ಪೂಜೆಯಾಗಿದೆ. ಈ ಮಾಹಿತಿಯನ್ನು ಗುರುವಾರ ಹುಟ್ಟಿದವರಿಗೆ ತಪ್ಪದೆ ತಿಳಿಸಿ, ಗುರುವಾರ ಹುಟ್ಟಿದವರ ಭವಿಷ್ಯವನ್ನು ತಿಳಿದುಕೊಳ್ಳಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *