ಗುರು ಗ್ರಹವೂ ಪಸ್ತುತ್ತ 2024ರಲ್ಲಿ ಮೇಷ ರಾಶಿಯಲ್ಲಿ ನೇರವಾಗಿ ಸಂಚಾರ ಮಾಡುತ್ತಾನೆ, ಇದರಿಂದ ಕೆಲವು ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಗೋಚರವಾಗುತ್ತದೆ. ಅಧ್ಯಾತ್ಮದ ಕಡೆ ಸೆಳೆತವನ್ನು ಉಂಟು ಮಾಡುತ್ತದೆ. ಯಾವ ರಾಶಿಗಳಿಗೆ ಗುರುವಿನಿಂದ ಮಾರ್ಗ ದರ್ಶನ ಸಿಗುತ್ತದೆ ಎಂದು ತಿಳಿಯೋಣ.

ಮೇಷ ರಾಶಿ : ಕಂಕಣ ಭಾಗ್ಯ ಸಿದ್ಧಿಯಾಗುತ್ತದೆ, ಅವಿವಾಹಿತರಿಗೆ ಕಲ್ಯಾಣ ಯೋಗವಿದೆ. ಆರೋಗ್ಯದ ವಿಚರದಲ್ಲಿ ಎಚ್ಚರಿಕೆ ವಹಿಸಬೇಕು ತೂಕ ಹೆಚ್ಚಾಗುವ ಸಾಧ್ಯತಗಳಿವೆ ಆದ್ದರಿಂದ ಆ ಕಡೆ ಬಹಳ ಗಮನ ಕೊಡುವುದು ಉತ್ತಮ. ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೆ ಇರುವುದು ಒಳ್ಳೆಯದು. ಜೀವನದಲ್ಲಿ ಯಾವುದೇ ರೀತಿಯ ಗೊಂದಲಗಳು ಇದ್ದರು ಎಲ್ಲದಕ್ಕೂ ಪರಿಹಾರ ದೊರಕುತ್ತದೆ. ಪ್ರಗತಿ ಸಾಧನೆ ಮಾಡುವ ಎಲ್ಲಾ ಅವಕಾಶವಿದೆ ಮತ್ತು ಮಾಡುವ ಪ್ರತಿ ಕೆಲಸದಲ್ಲಿ ಅದೃಷ್ಟ ಹುಡುಕಿ ಬರುತ್ತದೆ. ಉನ್ನತ ವ್ಯಾಸಂಗ ಮಾಡುವುದಕ್ಕೆ ಈ ಸಮಯ ಶುಭಕರ.

ಮಿಥುನ ರಾಶಿ : ವೃತ್ತಿಯ ಜೀವನದಲ್ಲಿ ಹೆಚ್ಚು ಶುಭದಾಯಕ, ವಿದೇಶಿ ಕಂಪನಿಗಳಿಂದ ಲಾಭಗಳು ಸಿದ್ಧಿಯಾಗುತ್ತದೆ. ಆಸ್ತಿ ಖರೀದಿ ಮಾಡಲು ಒಳ್ಳೆಯ ಕಾಲ ಇದು. ಕುಟುಂಬದ ಜೊತೆಗಿನ ಸಂಬಂಧಗಳು ಗಟ್ಟಿಯಾಗುತ್ತವೆ. ಹಣ ಕಾಸಿನ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಇರುತ್ತದೆ ಆದರೆ ಯಾವ ನಷ್ಟ ಸಂಭವಿಸುವುದಿಲ್ಲ. ಸುಧೀರ್ಘವಾಗಿ ನಡೆದ ಯಾವುದೇ ಕಲಹ ಮತ್ತು ತೊಂದರೆಗಳಿಗೆ ಮುಕ್ತಿ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ಸುಖ ನೆಮ್ಮದಿ ಪ್ರಾಪ್ತಿಯಾಗುತ್ತೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಯೋಗವಿದೆ.

ಕಟಕ ರಾಶಿ : ಮಾಡುವ ಕೆಲಸಗಳಲ್ಲಿ ಕಾರ್ಯಗಳಲ್ಲಿ ಜಯ ಸಿಗುತ್ತದೆ. ಪರಿವಾರದ ಜೊತೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಇದೆ. ದುಡ್ಡಿನ ವಿಷಯದಲ್ಲಿ ಉತ್ತಮವಾಗಿರುವುದು ಗುರು ಗ್ರಹದಿಂದ ಸಿದ್ಧಿಯಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದ್ದರು ಕೈ ಹಿಡಿಯುತ್ತದೆ. ಜೀವನದಲ್ಲಿ ಇರುವ ಎಲ್ಲಾ ಅಡೆ-ತಡೆಗಳು ದೂರವಾಗಿ ಅದೃಷ್ಟ ಲಭ್ಯವಾಗುತ್ತದೆ. ಕೆಲಸವನ್ನು ಬದಲಾವಣೆ ಮಾಡಿದರೆ ಇನ್ನು ಉತ್ತಮ ಕೆಲಸ ದೊರಕುತ್ತದೆ. ಅದು, ಒಳ್ಳೆಯ ಪ್ಯಾಕೆಜ್ ಜೊತೆಗೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಬರುವ ಎಲ್ಲಾ ತೊಡಕುಗಳು ದೂರವಾಗುತ್ತವೆ.

ಧನು ರಾಶಿ : ಪರಿವಾರದಲ್ಲಿ ಇರುವ ಎಲ್ಲಾ ಭಿನ್ನಾಭಿಪ್ರಯಗಳು ಸರಿದು ಹೋಗುತ್ತವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆ ಪ್ರಗತಿ ಸಿಗುತ್ತದೆ. ಜೀವನದಲ್ಲಿ ಇರುವ ಎಲ್ಲಾ ರೀತಿಯ ಗೊಂದಲಗಳಿಗೆ ತೆರೆ ಬೀಳುತ್ತದೆ. ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಜೊತೆಗೆ ಅಧ್ಯಾತ್ಮದ ಸೆಳೆತ ಹೆಚ್ಚಿಗೆ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಗುರುವಿನ ದಯೆಯಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಕುಂಭ ರಾಶಿ : ದೇವ ಗ್ರಹದ ಅನುಗ್ರಹದಿಂದ ಕುಂಭ ರಾಶಿಯವರಿಗೆ ತುಂಬ ಅನುಕೂಲಕರ. ಶತ್ರುಗಳ ವಿರುದ್ಧ ಯಶಸ್ಸು ಗಳಿಸುತ್ತೀರಿ. ವ್ಯಾಸಂಗದ ಕ್ಷೇತ್ರದಲ್ಲಿ ಮುಂದುವರೆಯಲು ಒಳ್ಳೆಯ ಕಾಲ ಇದು. ಹಣ ಕಾಸಿನ ವಿಚಾರದಲ್ಲಿ ಆರ್ಥಿಕತೆ ಮತ್ತು ಚೇತರಿಕೆ ಸಿಗುತ್ತದೆ. ಆಯೋಗ್ಯದಲ್ಲಿ ಉತ್ತಮ ಜೀವನ ಲಭ್ಯವಿದೆ. ಇನ್ನು ಉದ್ಯೋಗ ಸ್ಥಳದಲ್ಲಿ ಒಳ್ಳೆ ಮಾತುಗಳು ಕೇಳಿಬರುತ್ತವೆ ಮತ್ತು ಎಲ್ಲಾರಿಗೂ ಪ್ರೀತಿ ಪಾತ್ರರಾಗುತ್ತೀರಿ. ದುಡ್ಡಿನ ವಹಿವಾಟು ಸುಗಮವಾಗಿ ಸಾಗುತ್ತದೆ. ಆಸ್ತಿ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲಾ ತೊಡಕು ಇಲ್ಲವಾಗುತ್ತದೆ ಮತ್ತು ಪರಿಹಾರ ಸಿಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚು ಇದೆ.

ಮೇಷ ರಾಶಿಯಲ್ಲಿ ನೇರವಾಗಿ ಗುರು ಸಾಗುತ್ತ ಇರುವುದರಿಂದ ಅದರ ಫಲಗಳ ಆಧಾರದ ಮೇಲೆ. ಈ ಮೇಲೆ ತಿಳಿಸಿರುವ ಬೇರೆ ರಾಶಿಯವರಿಗೆ ಕೂಡ ಒಳ್ಳೆ ಮಂಗಳ ಫಲಗಳು ಸಿಗುತ್ತವೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *