ಬಹುದಿನದ ನಂತರ ಮೇಘನಾರಾಜ್ ಕಡೆಯಿಂದ ಸಿಹಿಸುದ್ದಿ

0 0

ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಚಿರು ಅವರು ಸತ್ತಾಗ 6 ತಿಂಗಳ ಪ್ರಗ್ನೆಂಟ್ ಆಗಿದ್ದರು. ಮೇಘನಾ ರಾಜ್ ಅವರಿಗೆ  ಜೂನಿಯರ್ ಚಿರು ಅವರ ಫೋಟೋವನ್ನು ಪೋಸ್ಟ್ ಮಾಡುವುದನ್ನು ಹೇಳಿದ್ದನ್ನು ನಾವು ಇಲ್ಲಿ ತಿಳಿಯೋಣ.

ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದರು. ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹುಟ್ಟುವ ಮಗುವಿಗೆ ಹಾರೈಸಿದ್ದರು. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿತ್ತು. ಅಕ್ಟೋಬರ್  22 2020ರಂದು ಬೆಳಿಗ್ಗೆ 11.07ರ  ಹೊತ್ತಿಗೆ ಜೂನಿಯರ್ ಚಿರು ಅವರು ಭೂಮಿಗೆ ಕಾಲಿಟ್ಟಿದ್ದಾರೆ. ಇದರಿಂದ ಎಲ್ಲರೂ ಬಹಳ ಸಂತೋಷವಾಗಿದ್ದಾರೆ.

ಕೆಲವರು ಮಗು ಹುಟ್ಟಿದ ತಕ್ಷಣ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಆದರೆ ಮೇಘನಾ ರಾಜ್ ಅವರು ಮಗು ಹುಟ್ಟಿ ಸುಮಾರು ಮೂರು ತಿಂಗಳುಗಳು ಕಳೆದರೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಲ್ಲ. ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳು ಚಿರಂಜೀವಿ ಸರ್ಜಾ ಅವರ ಪುತ್ರನನ್ನು ನೋಡಲು ಆತುರದಿಂದ ಕಾಯುತ್ತಿದ್ದಾರೆ. ಆದರೆ ಅವರ ಆತುರಕ್ಕೆ ಇನ್ನೂ ಕೊನೆ ಬಂದಿಲ್ಲ ಎಂದು ಹೇಳಬಹುದು.

ಆದರೆ ಮೇಘನಾ ರಾಜ್ ಅವರು ಹೇಳಿರುವ ಪ್ರಕಾರ ಅವರು ಚಿರಂಜೀವಿ ಸರ್ಜಾ ಅವರ ಜೊತೆಗಿನ ತಮ್ಮ ನಿರ್ಮಲವಾದ ಪ್ರೀತಿಯ ಸಂಕೇತವಾದ ತಮ್ಮ ಪುತ್ರನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಇನ್ನೂ ಉಸ್ತುಕರಾಗಿ ಕಾಯುತ್ತಿದ್ದಾರೆ. ಹಾಗೆಯೇ ಮೇಘನಾ ರಾಜ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಮೆಂಟ್ ಗಳು ಇದರ ಬಗ್ಗೆಯೇ ಬರುತ್ತಿದೆ ಎಂದು ಹೇಳಬಹುದು.

Leave A Reply

Your email address will not be published.