Ultimate magazine theme for WordPress.

ಮನೆಯಲ್ಲಿ ಗೋಮತಿ ಚಕ್ರ ಇದ್ರೆ ಏನಾಗುತ್ತೆ ಗೊತ್ತೇ ಇದರ ಮಹತ್ವ ತಿಳಿಯಿರಿ

0 38

ಹಿಂದೂ ಧರ್ಮದಲ್ಲಿ ಹಲವು ವಿಶೇಷತೆ ಹಾಗೂ ಮಹತ್ವವನ್ನು ನೋಡುವುದಾದರೆ ಹಲವು ಬಗೆಯ ಆಚರಣೆಯನ್ನು ಹಿಂದೂ ಧರ್ಮದಲ್ಲಿ ಕಾಣಬಹುದಾಗಿದೆ, ಸಾಮಾನ್ಯವಾಗಿ ಈ ಗೋಮತಿ ಚಕ್ರದ ಬಗ್ಗೆ ನೀವು ಕೇಳಿರುತ್ತೀರ ಅಥವಾ ನೋಡಿರುತ್ತೀರ. ಒಂದು ವೇಳೆ ಇದರ ಬಗ್ಗೆ ತಿಳಿಯದೆ ಇದ್ರೆ ಈ ಮೂಲಕ ಇದರ ವಿಶೇಷತೆ ಏನು ಹಾಗೂ ಇದರ ಮಹತ್ವವೇನು ಅನ್ನೋದನ್ನ ತಿಳಿದುಕೊಳ್ಳಿ. ನಿಮ್ಮ ಬಳಿ ಈ ಗೋಮತಿ ಚಕ್ರ ಇದ್ರೆ ಸುಖ ನೆಮ್ಮದಿ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಸಂವೃದಿಯಾಗುವದು. ಇದನ್ನು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳುವುದರಿಂದ ಅಂದರೆ ನಿಮ್ಮ ಬ್ಯಾಗ್ ಪರ್ಸ್ಅಥವಾ ಕಿಸೆಯಲ್ಲಿ ಇಟ್ಟುಕೊಳ್ಳುವುದರಿಂದ ಉತ್ತಮ ಫಲವನ್ನು ಕಾಣಬಹುದಾಗಿದೆ.

ಈ ಗೋಮತಿ ಚಕ್ರ ಎಲ್ಲಿ ಸಿಗುತ್ತೆ ಅನ್ನೋದನ್ನ ಹೇಳುವುದಾರೆ, ಗೋಮತಿ ಎಂಬ ನದಿಯಲ್ಲಿ ಮಾತ್ರ ಈ ಗೋಮತಿ ಚಕ್ರ ಸಿಗುವ ಕಾರಣಕ್ಕೆ ಇದನ್ನು ಗೋಮತಿ ಚಕ್ರ ಎಂಬುದಾಗಿ ಕರೆಯಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಗೋಮತಿ ಎಂಬುದು ಋಷಿ ಮಹರ್ಷಿ ವಶಿಷ್ಟನ ಪುತ್ರಿ ಅನ್ನೋದನ್ನ ಹೇಳಲಾಗುತ್ತದೆ, ಇಂತಹ ವಿಶೇಷತೆ ಹೊಂದಿರುವಂತ ಈ ನದಿಯಲ್ಲಿ ಏಕಾದಶಿ ದಿನದಂದು ಸ್ನಾನ
ಮಾಡಿದರೆ ಸಕಲ ಕರ್ಮಾ ಪಾಪಗಳು ನಿವಾರಣೆಯಾಗುತ್ತವೆ.

ಈ ಗೋಮತಿ ಚಕ್ರ ನೋಡಲು ಆಕಾರದಲ್ಲಿ ಚಿಕ್ಕದಾದರೂ ಕಲ್ಲಿನಂತೆ ಇರುತ್ತದೆ ನೋಡಲು ಒಂದು ಕಡೆ ಬಿಳಿಬಣ್ಣ ಇನ್ನೊಂದು ಕಡೆ ವೃತ್ತಾಕಾರದಲ್ಲಿರುತ್ತದೆ. ಗೋಮತಿ ಚಕ್ರವನ್ನು ಸದಾ ಕಿಸೆಯಲ್ಲಿ ಅಥವಾ ಪರ್ಸ್ ನಲ್ಲಿ ಇಟ್ಟು ಕೊಳ್ಳುವುದರಿಂದ ನೆಮ್ಮದಿ ಸಿಗುವುದು, ಆರ್ಥಿಕವಾಗಿ ಸಫಲತೆಯನ್ನು ಕಾಣಬುದಾಗಿದೆ. ಇನ್ನು ಇದರ ವಿಶೇಷತೆ ಏನು ಅನ್ನೋದನ್ನ ಹೇಳೋದಾದರೆ ಮನೆಯನ್ನು ಕಟ್ಟಿಸುವ ಹೊಸತರಲ್ಲಿ ಮನೆಯ ಪಾಯ ತಗೆಯುವಾಗ 11 ಗೋಮತಿ ಚಕ್ರವನ್ನು ಪಾಯದಲ್ಲಿ ಹೋತು ಹಾಕಿ ಮನೆ ನಿರ್ಮಿಸುವುದರಿಂದ ಯಾವುದೇ ತೊಂದರೆ ಇಲ್ಲದೆ ಮನೆ ಬಹುಬೇಗನೆ ನಿರ್ಮಾಣವಾಗುತ್ತದೆ.

ಈ 11 ಗೋಮತಿ ಚಕ್ರವು 11 ರುದ್ರರನ್ನು ಈ ಚಕ್ರ ಪ್ರತಿನಿಧಿಸುತ್ತದೆ, ಹಾಗಾಗಿ ಮನೆಯ ಕಾರ್ಯಗಳಿಗೆ ಉತ್ತಮ ಫಲವನ್ನು ನೀಡುತ್ತದೆ ಅನ್ನೋದನ್ನ ಹಿಂದಿನಿಂದಲೂ ಋಷಿ ಮುನಿಗಳು ಪಂಡಿತರು ಹೇಳಿಕೊಂಡು ಬಂದಿದ್ದಾರೆ. ಸಾಲ ಭಾದೆ ಅನ್ನೋದು ಹೆಚ್ಚಾಗಿ ಕಾಡುತ್ತಿದ್ದರೆ ಅಂತವರು ಗೋಮತಿ ಚಕ್ರವನ್ನು 11 ತಗೆದುಕೊಂಡು ಅದಕ್ಕೆ ಅರಿಶಿನ ಹಚ್ಚಿ ಶಿವನ ನೆನೆದು ಶಿಲಿಂಗದ ಮುಂದಿಟ್ಟು ಶಿವ ನಾಮ ಜಪಿಸಬೇಕು ಇದಾದ ನಂತರ ಆ 11 ಚಕ್ರಗಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಎಲ್ಲ ಮೂಲೆಗಳಲ್ಲಿಯೂ ಕಟ್ಟಬೇಕು. ಇದಾದ ನಂತರ ಹರಿಯೋ ನದಿಯಲ್ಲಿ ಅದನ್ನು ಹಾಕಬೇಕು.

ಇನ್ನು ಆರ್ಥಿಕ ಸಮಸ್ಯೆ ಬಿಡದೆ ಕಾಡುತ್ತಿದ್ದರೆ 11 ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಂಡರೆ ಹಣದ ಮೂಲ ಹರಿದು ಬರುತ್ತದೆ ಅನ್ನೋದನ್ನ ಹೇಳಲಾಗುವುದು, ಇನ್ನು ನಿಮ್ಮ ಮೇಲೆ ಅಥವಾ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಇದನ್ನು ನಿವಾರಿಸಲು 7 ಸಲ ಈ ಚಕ್ರವನ್ನು ತಲೆಗೆ ಸುತ್ತು ಬರೆಸಿ ಹಿಂದಕ್ಕೆ ಬಿಸಾಕಬೇಕು, ಬಿಸಾಕಿದ ನಂತರ ಹಿಂದಕ್ಕೆ ನೋಡದೆ ನೇರವಾಗಿ ಮನೆಗೆ ಹೊಂದಬೇಕು. ಅಷ್ಟೇ ಅಲ್ದೆ ಮದುವೆಯಲ್ಲಿ ವಿಳಂಬ ಆಗುತ್ತಿದ್ದರೆ ಗೋಮತಿ ಚಕ್ರವನ್ನು ಕೆಂಪು ಕುಂಕುಮದೊಂದಿಗೆ ಇಟ್ಟುಕೊಂಡರೆ ಮದುವೆ ಕಾರ್ಯ ಬಹುಬೇಗನೆ ನೆರವೇರುವುದು ಅನ್ನೋ ನಂಬಿಕೆ ಹಿಂದಿನಿಂದಲೂ ಜನರಲ್ಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಇಂತಹ ಕಠಿಣ ಸಮಸ್ಯೆ ಇದ್ರೂ ಕೂಡ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡು ಕೋಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ 984 5559 493

Leave A Reply

Your email address will not be published.