ಸರಿಯಾದ ಆಹಾರ ತಿಂದ್ರು ಕೂಡ ಗ್ಯಾಸ್ಟ್ರಿಕ್ ಆಗತ್ತಾ? ಇದಕ್ಕೆ ಪರಿಹಾರ ನೋಡಿ

0 19

kannada Health tips: ಆಹಾರ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸಗಳು ಬಂದರೂ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಧೂಮಪಾನ ಮಧ್ಯಪಾನ ಮಾಡಿಲ್ಲ. ಜೀವನದಲ್ಲಿ ಯಾವತ್ತೂ ಮಾಂಸಾಹಾರಿ ಆಹಾರ ತಿಂದಿಲ್ಲ. ಆಹಾರ ಸೇವನೆಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು, ಸಾತ್ವಿಕ ಆಹಾರ ತೆಗೆದುಕೊಳ್ಳುತ್ತಿದ್ದಾಗಲೂ ಹೊಟ್ಟೆಯಲ್ಲಿ ಉರಿ ಅನುಭವ, ಗ್ಯಾಸ್ ಸಮಸ್ಯೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಎದೆಯಲ್ಲಿ ಉರಿ, ಹೊಟ್ಟೆಯಲ್ಲಿ ಸಂಕಟ ಆಗುತ್ತದೆ ಎನ್ನುತ್ತಾರೆ. ಇವುಗಳಿಗೆ ಕಾರಣ ಏನು ಎಂಬುದನ್ನು ಡಾಕ್ಟರ್.ಪ್ರವೀಣ್ ಬಾಬು ಅವರು ತಿಳಿಸಿದ್ದಾರೆ. ಅವುಗಳಿಗೆ ಕಾರಣ ಹಾಗೂ ಪರಿಹಾರವನ್ನು ನಾವೂ ತಿಳಿಯೋಣ.

ಹೊಟ್ಟೆಯಲ್ಲಿ ಸಮಸ್ಯೆಗಳು, ಗಾಬರಿ ಆಗುವುದು, ತಲೆಸುತ್ತು, ಇಂತಹ ಸಮಸ್ಯೆಗಳು ಪ್ರಾರಂಭವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಲ್ಲಾ ತರಹದ ಚೆಕಪ್ ಮಾಡಿಸಿಕೊಂಡಾಗೂ ನಾರ್ಮಲ್ ಎಂದು ಬರುತ್ತದೆ‌. ಆದರೆ ಸಮಸ್ಯೆಗಳು ನಿಲ್ಲುವುದಿಲ್ಲ. ಹಾಗಾದರೆ ಇದಕ್ಕೆ ಕಾರಣ ಏನು ಎಂದರೆ ನಾಭಿಯ ಸ್ಥಾನ ಜರುಗಿರುವುದು. ಈ ಸಮಸ್ಯೆಗಳು ಪ್ರಾರಂಭವಾಗಿರುವುದು ಯಾವಾಗ ಎಂದರೆ ಎಲ್ಲರಿಂದ ಬರುವ ಉತ್ತರ ಬಿದ್ದಾಗ ಎಂದು. ಬಿದ್ದಾಗ ನಾಭಿ ಅದರ ಸ್ಥಾನದಿಂದ ಜರುಗಿದ್ದರೆ ಅಸಿಡಿಟಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾದರೆ ಈ ನಾಭಿ ಜರುಗಿರುವುದನ್ನು ಪರೀಕ್ಷೆ ಮಾಡುವುದು ಹೇಗೆ ಎಂದರೆ ಮೊದಲನೆಯ ವಿಧಾನ- ಎಡಗಡೆಯ ಎದೆಯ ನಿಪ್ಪಲ್ ನಿಂದ ಹೊಕ್ಕಳವರೆಗಿನ ಅಳತೆ, ಬಲಗಡೆ ಎದೆಯ ನಿಪ್ಪಲ್ ನಿಂದ ಹೊಕ್ಕಳವರೆಗಿನ ಅಳತೆ ಎರಡೂ ಒಂದೆ ಇದ್ದರೆ, ಹಾಗೂ ಹೊಕ್ಕಳಿನಿಂದ ಎಡಗಾಲಿನ ಹೆಬ್ಬೆರಳಿನ ವರೆಗಿನ ಅಳತೆ ಹಾಗೂ ಹೊಕ್ಕಳಿನಿಂದ ಬಲಗಾಲಿನ ಹೆಬ್ಬೆರಳಿನ ವರೆಗಿನ ಅಳತೆ ಒಂದೆ ಇದ್ದರೆ ಆಗ ನಾಭಿ ಸರಿಯಾದ ಜಾಗದಲ್ಲಿ ಇದೆ ಎಂದು ಅರ್ಥ. ಎರಡನೆಯ ವಿಧಾನ- ಅಂಗಾತ ಮಲಗಿ ಕೈಯಲ್ಲಿನ ಮೂರು ಬೆರಳುಗಳನ್ನು ಒಟ್ಟುಗೂಡಿಸಿ ಹೊಕ್ಕಳಿನಲ್ಲಿ ಹಾಕಿದಾಗ, ಮೂರು ಬೆರಳುಗಳ ಮಧ್ಯದಲ್ಲಿ ಸಣ್ಣದಾದ ಬಡಿತದ ಅನುಭವ ಆಗುತ್ತಿದ್ದರೆ ನಾಭಿ ಸರಿಯಾದ ಜಾಗದಲ್ಲಿ ಇದೆ ಎಂದು ಅರ್ಥ. ಮೇಲೆ, ಬಲಗಡೆ ಅಥವಾ ಎಡಗಡೆ ನಾಭಿ ಬಡಿತದ ಅನುಭವವಾದರೆ ನಾಭಿ ಜರುಗಿದೆ ಎಂದು ಅರ್ಥ. ಹಾಳೆಯ ಕಾಲದಲ್ಲಿ ಬಟ್ಟಿ ಜರುಗುವುದು ಎನ್ನುತ್ತಾರೆ. ಆದರೆ ಜನಪದ ಭಾಷೆಯಲ್ಲಿ ಬಟ್ಟಿ, ಕನ್ನಡದಲ್ಲಿ ಹೊಕ್ಕುಳು, ಸಂಸ್ಕೃತದಲ್ಲಿ ನಾಭಿ ಎನ್ನುತ್ತಾರೆ.

ನಾಭಿ ಕೆಳಗೆ ಜರುಗಿದರೆ ಮಲಬದ್ಧತೆ ಬರುತ್ತದೆ ಅದೆ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಸ್ಯೆ, ಗರ್ಭಕೋಶದ ಸಮಸ್ಯೆ ಬರುತ್ತದೆ. ನಾಭಿ ಮೇಲೆ ಜರುಗಿದರೆ ಗ್ಯಾಸ್, ಅಸಿಡಿಟಿ ಸಮಸ್ಯೆ, ಪಿತ್ತ, ಕಣ್ಣು ಮಂಜಾಗುವುದು, ವಾಂತಿ ಸಮಸ್ಯೆ ಬರುತ್ತದೆ. ನಾಭಿ ಎಡಗಡೆ ಜರುಗಿದರೆ ಮಧುಮೇಹ ಮತ್ತು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಹಾಗೆ ನಾಭಿ ಬಲಗಡೆ ಜರುಗಿದರೆ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಾಭಿ ಸರಿದರೆ ಆಸ್ಪತ್ರೆಗಳ ಯಾವ ಚೆಕಪ್ ಗಳಲ್ಲಿಯೂ ಇದು ಕಾಣಸಿಗುವುದಿಲ್ಲ. ಯಾವ ಚಿಕಿತ್ಸೆ, ಮಾತ್ರೆಗಳು ಪ್ರಭಾವ ಬಿರುವುದಿಲ್ಲ. ಯಾವುದೆ ಶಸ್ತ್ರ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ನಾಭಿ ಸರಿದಾಗ ಅದರ ಸುತ್ತಲಿರುವ ಜಠರ, ಮೂತ್ರಕೋಶ, ಹೆಣ್ಣು ಮಕ್ಕಳಲ್ಲಿ ಗರ್ಭಕೋಶ, ಲಿವರ್, ಬೆನ್ನು ಹುರಿ ಇವೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ನಾಭಿಯನ್ನು ಸರಿಯಾದ ಸ್ಥಾನದಲ್ಲಿ ಕೂರಿಸಲು ಆದಿ ಚಿಕಿತ್ಸೆ ಮಾಡಿಕೊಳ್ಳಬೇಕು. ನಾಭಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಆಸ್ಪತ್ರೆಗಳ ಮಾತ್ರೆಗಳ ಅವಶ್ಯಕತೆ ಇಲ್ಲದೆ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಈ ಚಿಕಿತ್ಸೆಗಳು ಹಿಂದಿನ ಕಾಲದಿಂದಲೂ ಇರುವ ಚಿಕಿತ್ಸೆಯ ಪದ್ಧತಿಯೆ ಆಗಿದೆ ಎಂದು ಡಾಕ್ಟರ್.ಪಿ.ಕೆ. ಪ್ರವೀಣ್ ಕುಮಾರ್ ಹೇಳುತ್ತಾರೆ.

ಭಾರತ ಒಂದು ಅದ್ಭುತ ರಾಷ್ಟ್ರ. ಇಲ್ಲಿಯ ಆಯುರ್ವೇದದಲ್ಲಿ ಇಲ್ಲದ ಚಿಕಿತ್ಸೆಗಳು ಇಲ್ಲ. ಎಲ್ಲವೂಗಳಿಗೂ ಆಸ್ಪತ್ರೆಗಳ ಇಂಗ್ಲೀಷ್ ಮಾತ್ರೆಗಳು ಪರಿಹಾರ ನೀಡುವುದಿಲ್ಲ. ಈ ಮೇಲಿನ ಸಮಸ್ಯೆ ಇದ್ದವರು ನಾಭಿ ಚಿಕಿತ್ಸೆ ಬೇಕಾದಲ್ಲಿ ಡಾಕ್ಟರ್ ಅನ್ನು ಸಂಪರ್ಕಿಸಬಹುದು. ಅವರ ವಿಳಾಸವನ್ನು ಕೆಳಗಡೆ ನೀಡಲಾಗಿದೆ.

ಡಾಕ್ಟರ್. ಪಿ.ಕೆ ಪ್ರವೀಣ್ ಕುಮಾರ್ M.B.B.S ಉತ್ತಮ್ ಬಡಾವಣೆ, ಚಿತ್ರದುರ್ಗ ರೋಡ್ ರಿಲಯನ್ಸ್ ಪೆಟ್ರೋಲ್ ಬಂಕ್ ಹಿಂದೆ ದಾವಣಗೆರೆ. ದೂರವಾಣಿ ಸಂಖ್ಯೆ: 6360104359

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave A Reply

Your email address will not be published.