ಪೈರ್ ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯ ಮಾಹಿತಿ ಇಲ್ಲಿದೆ

0 2

ನೀವೇನಾದರೂ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ನಾವಿಂದು ನಿಮಗೆ ಎರಡೆರಡು ಸರ್ಕಾರಿ ಹೆದ್ದೆಗಳ ನೇಮಕಾತಿಯ ಬಗ್ಗೆ ತಿಳಿಸುತ್ತೇವೆ. ಮೊದಲನೆಯದಾಗಿ ಫೈರ ಮ್ಯಾನ್ ಮತ್ತು ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಒಟ್ಟು ಇಪ್ಪತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಉದ್ಯೋಗ ಸ್ಥಳ ಕರ್ನಾಟಕ ಸೇರಿ ಅಖಿಲ ಭಾರತ ಮೈಸೂರಿನಲ್ಲಿ. ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಚಾಲಕ ಮತ್ತು ಉಪ ಅಧಿಕಾರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಸಂಬಳ ಇಪ್ಪತ್ತೊಂದು ಸಾವಿರದಿಂದ ಮೂವತ್ತೈದು ಸಾವಿರ ವರೆಗೆ ಇರುತ್ತದೆ.

ಇನ್ನು ಬಾರ್ಕ್ ಹುದ್ದೆಯ ವಿವರಗಳನ್ನು ನೋಡುವುದಾದರೆ, ಚಾಲಕ ಪಂಪ್ ಆಪರೇಟರ್ ಮತ್ತು ಅಗ್ನಿ ಶಾಮಕ ಹದಿನಾರು ಹುದ್ದೆಗಳಿವೆ. ಉಪ ಅಧಿಕಾರಿ ನಾಲ್ಕು ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಬಾರ್ಕ ನೇಮಕಾತಿ ಎರಡು ಸಾವಿರದ ಇಪ್ಪತ್ತೊಂದು ಅರ್ಹತೆ ವಿವರಗಳನ್ನು ನೋಡುವುದಾದರೆ ಬಾರ್ಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದಿರುವ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿಯನ್ನು ಪೂರ್ಣ ಗೊಳಿಸಿರಬೇಕು.

ವಯಸ್ಸಿನ ಮಿತಿಯನ್ನು ನೋಡುವುದಾದರೆ ಚಾಲಕ ಪಂಪ್ ಆಪರೇಟರ್ ಮತ್ತು ಅಗ್ನಿ ಶಾಮಕದವರಿಗೆ ಇಪ್ಪತ್ತೇಳು ವರ್ಷ ನಿಗದಿಪಡಿಸಲಾಗಿದೆ ಮತ್ತು ಉಪ ಅಧಿಕಾರಿಗಳಿಗೆ ನಲವತ್ತು ವರ್ಷವನ್ನು ನಿಗದಿಪಡಿಸಲಾಗಿದೆ. ವಯಸ್ಸಿನ ಸಡಿಲಿಕೆ ಕೂಡ ಇದೆ. ಒಬಿಸಿ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ಇಡಬ್ಲ್ಯೂ ಎಸ್ ಮೂರು ವರ್ಷ. ಆಯ್ಕೆ ಪ್ರಕ್ರಿಯೆಯನ್ನು ನೋಡುವುದಾದರೆ ದೈಹಿಕ ಸಹಿಷ್ಣುತೆ ಪರೀಕ್ಷೆ, ಚಾಲನಾ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

ಬಾರ್ಕಾ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಆಡಳಿತಾಧಿಕಾರಿ III, ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್
ಮೈಸೂರು ಇಲ್ಲಿಗೆ ಅಕ್ಟೋಬರ್ ಹತ್ತು ಎರಡುಸಾವಿರದ ಇಪ್ಪತ್ತೊಂದರೊಳಗೆ ಅರ್ಜಿಯನ್ನು ಕಳುಹಿಸಬೇಕು. ಹದಿನೆಂಟು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದರಿಂದ ಅರ್ಜಿ ಸಲ್ಲಿಸುವಿಕೆ ಪ್ರಾರಂಭವಾಗಿದೆ.

ಅಧಿಸೂಚನೆ ಮತ್ತು ಅರ್ಜಿ ನಮೂನೆಗಾಗಿ ಲಿಂಕನ್ನು ತೆರೆದು ಅಲ್ಲಿ ಆರನೇ ಪುಟದಲ್ಲಿ ಅರ್ಜಿ ನಮೂನೆ ಕಾಣಿಸುತ್ತದೆ ಅದರ ಪ್ರತಿಯನ್ನು ತೆಗೆದು ಕೊಂಡು ಅಲ್ಲಿರುವ ಮಾಹಿತಿಯನ್ನು ತುಂಬಿ ಅಲ್ಲಿ ಕೆಳಗೆ ವಿಳಾಸ ಇರುತ್ತದೆ ಅದಕ್ಕೆ ಕಳುಹಿಸಬೇಕು. ಇನ್ನು ಎರಡನೇಯದಾಗಿ ಅಬಕಾರಿ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಯಾವ ಹುದ್ದೆಗಳಿಗೆ ಮತ್ತು ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೆವೆ.

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಿಂದ ಒಟ್ಟು ಒಂದು ಸಾವಿರದ ಏಳು ನೂರಾ ಒಂಬತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹತ್ತನೇ ತರಗತಿ ತೇರ್ಗಡೆ ಹೊಂದಿದವರು ಪಿಯುಸಿ ಮತ್ತು ಡಿಗ್ರಿ ಮುಗಿಸಿರುವವರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಕ್ರಮವಾಗಿ ಮದ್ಯ ಮಾರಾಟ ಮತ್ತು ಕಳ್ಳಬಟ್ಟಿ ತಡೆಯಲು ಅಬಕಾರಿ ಇನ್ ಸ್ಪೆಕ್ಟರ್ ಅಬಕಾರಿ ಸಬ್ ಇನ್ ಸ್ಪೆಕ್ಟರ್ ಮತ್ತು ಪೇದೆ ಕರ್ತವ್ಯಗಳು ಪ್ರಮುಖವಾಗಿರುತ್ತದೆ.

ಅಬಕಾರಿ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳು ಕಾಲಿ ಇವೆ ಎಂಬುದನ್ನು ನೋಡುವುದಾದರೆ ಅಬಕಾರಿ ಅಧೀಕ್ಷಕ ನಲವತ್ತು ಹುದ್ದೆಗಳು, ಉಪ ಅಧೀಕ್ಷಕ ಮೂವತ್ತೆಂಟು ಹುದ್ದೆಗಳು, ಹಿರಿಯ ರಸಾಯನ ಶಾಸ್ತ್ರಜ್ಞ ಒಂದು ಹುದ್ದೆ, ಸಹಾಯಕ ಖಾತೆ ಅಧಿಕಾರಿ ಒಂದು ಹುದ್ದೆ, ಕೀರಿಯ ರಸಾಯನ ಶಾಸ್ತ್ರಜ್ಞ ಎರಡು ಹುದ್ದೆ, ಅಬಕಾರಿ ಹೆಚ್ಚುವರಿ ಆಯುಕ್ತ ಒಂದು ಹುದ್ದೆ, ಅಬಕಾರಿ ಜಂಟಿ ನಿರ್ದೇಶಕ ಐದು ಹುದ್ದೆ, ಅಬಕಾರಿ ಉಪ ಆಯುಕ್ತ ಒಂದು ಹುದ್ದೆ, ಉಪ ಆಯುಕ್ತ ಏಳು ಹುದ್ದೆ, ಪ್ರಥಮ ದರ್ಜೆ ಸಹಾಯಕ ಒಂದುನೂರಾಏಳು ಹುದ್ದೆ, ಸ್ಟೆನೊಗ್ರಾಫರ್ ಮೂವತ್ತೊಂದು ಹುದ್ದೆ, ದ್ವೀತಿಯ ದರ್ಜೆ ಸಹಾಯಕ ಒಂದುನೂರ ಇಪ್ಪತ್ತೊಂಬತ್ತು ಹುದ್ದೆ,

ಬೆರಳಚ್ಚುಗಾರ ನಲವತ್ತೈದು ಹುದ್ದೆ, ಅಬಕಾರಿ ಮುಖ್ಯಪೇದೆ ಮೂನ್ನುರಾಐವತ್ತೆಂಟು ಹುದ್ದೆ, ಲ್ಯಾಬ್ ಸಹಾಯಕ ಎರಡು ಹುದ್ದೆ,ಕಚೇರಿ ಅಧೀಕ್ಷಕ ಇಪ್ಪತ್ತಾರು ಹುದ್ದೆ, ಅಬಕಾರಿ ಇನ್ ಸ್ಪೆಕ್ಟರ್ ಅರವತ್ನಾಲ್ಕು ಹುದ್ದೆ, ಅಬಕಾರಿ ಸಬ್ ಇನ್ ಸ್ಪೆಕ್ಟರ್ ಮುನ್ನೂರ ಆರು ಹುದ್ದೆ, ಅಬಕಾರಿ ಪೇದೆ ಮುನ್ನೂರಾ ನಲವತ್ತೆಂಟು ಹುದ್ದೆ, ಹಿರಿಯಚಾಲಕ ಹದಿನಾಲ್ಕು ಹುದ್ದೆ, ಚಾಲಕ ನೂರಾನಲವತ್ತೆಳು ಹುದ್ದೆ, ಗ್ರೂಫ ಡಿ ಮೂವತ್ತೇಳು ಹುದ್ದೆಗಳು, ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ನೀವು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಆಪ್ತರಿಗು ಈ ವಿಷಯದ ಬಗ್ಗೆ ಮಾಹಿತಿ ನೀಡಿ. ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಲೇ ಇರುತ್ತದೆ ನೀವು ಇದರ ಲಾಭ ಪಡೆದುಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.