ದ್ರಾಕ್ಷಿಹಣ್ಣಿನಿಂದ ಮನುಷ್ಯನ ಆರೋಗ್ಯಕ್ಕೆ ಬಹಳ ಪ್ರಯೋಜನಗಳು ಇವೆ. ಇದರಲ್ಲಿ ಹಲವಾರು ವಿಧಗಳಿವೆ. ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಪ್ಪುದ್ರಾಕ್ಷಿ ಮತ್ತು ಹಸಿರುದ್ರಾಕ್ಷಿ ಸಿಗುತ್ತದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಇದನ್ನು ದಿನನಿತ್ಯ ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ನಾವು ಇಲ್ಲಿ ದ್ರಾಕ್ಷಿಹಣ್ಣಿನ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಣದ್ರಾಕ್ಷಿಯಲ್ಲಿ ಉಳಿದ ಡ್ರೈ ಫ್ರೂಟ್ಸ್ ಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ಇದರಲ್ಲಿ ಬಂಗಾರದ ಬಣ್ಣದ ದ್ರಾಕ್ಷಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಇದನ್ನು ನೇರವಾಗಿ ತಿನ್ನುವವರು ಬಹಳ ಕಡಿಮೆ. ದಿನನಿತ್ಯ ರಾತ್ರಿ ಮಲಗುವ ಮುನ್ನ 7 ರಿಂದ 8 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಬೇಕು. ಇದು ಬೆಳಿಗ್ಗೆ ನೀರಿನಲ್ಲಿ ಚೆನ್ನಾಗಿ ನೆನೆದಿರುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹಾಗೆಯೇ ಈ ನೀರನ್ನು ಕುಡಿಯಬೇಕು. ಹಾಗೆಯೇ ಇದನ್ನು ಬೀಸಿ ಜ್ಯೂಸ್ ಮಾಡಿ ಕೂಡ ಕುಡಿಯಬಹುದು.

ಇದರಿಂದ ಅನೇಕ ಪ್ರಯೋಜನಗಳು ಇವೆ. ಇದರಲ್ಲಿ ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಶಿಯಂ ಮತ್ತು ಫೈಬರ್ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚಾಗಿ ಮಲಬದ್ಧತೆ ಕಡಿಮೆಯಾಗುತ್ತದೆ.ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಹಾಗೇ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಬಾಯಿ ದುರ್ವಾಸನೆ ಬರುವವರು ಕೂಡ ನೆನೆಸಿದ ದ್ರಾಕ್ಷಿಯನ್ನು ತಿಂದು ಹೋಗಲಾಡಿಸಿಕೊಳ್ಳಬಹುದು.

ಇದರಿಂದ ಕೀಲುನೋವು ಮತ್ತು ಕಾಲುಗಂಟಿನ ನೋವುಗಳು ಇದ್ದರೆ ದೂರವಾಗುತ್ತದೆ. ಇದು ಅನಿಮಿಯಾನ್ನು ದೂರ ಮಾಡುತ್ತದೆ. ಇದು ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದನ್ನು ದಿನವೂ ತಿಂದರೆ ಇಡೀ ದಿನ ಸುಸ್ತಾಗುವುದಿಲ್ಲ. ಹಾಗೆಯೇ ನಿಶ್ಯಕ್ತಿ ಇದ್ದರೆ ದೂರವಾಗುತ್ತದೆ. ಹಾಗೆಯೇ ಕಿಡ್ನಿಯ ಆರೋಗ್ಯ ಹೆಚ್ಚುತ್ತದೆ. ಕಿಡ್ನಿಯಲ್ಲಿ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಕಿಡ್ನಿಯ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಹಾಗೆಯೇ ಕಣ್ಣಿನ ಸಮಸ್ಯೆ ಕೂಡ ದೂರವಾಗುತ್ತದೆ. ಹಾಗೆಯೇ ನರಗಳನ್ನು ಗಟ್ಟಿಗೊಳಿಸುತ್ತದೆ. ಕೊನೆಯದಾಗಿ ಹೇಳುವುದೇನೆಂದರೆ ಇದನ್ನು ದಿನನಿತ್ಯ ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave a Reply

Your email address will not be published. Required fields are marked *