ಮತ್ತೊಮ್ಮೆ ಕನ್ನಡಾಭಿಮಾನ ಮೆರೆದ ಡೇವಿಡ್ ವಾರ್ನೆರ್, ಇವರ ಪ್ರೀತಿಗೆ ಸಲಾಂ ಅಂದ್ರು ಕನ್ನಡಿಗರು

0 1

ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಮಗಳ ವೀಡಿಯೋ ಒಂದಕ್ಕೆ ಕನ್ನಡ ಹಾಡೊಂದನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಮೆಚ್ಚುಗೆ ಸೂಚಿಸಿಸುವ ಮೂಲಕ ಡೇವಿಡ್ ವಾರ್ನರ್ ನ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ ಆಗಿದ್ದಾರೆ ಎಂದೇ ಹೇಳಬಹುದು.

ವಾರ್ನರ್ ಗೆ ಭಾರತ ಮತ್ತು ಇಲ್ಲಿನ ಸಿನಿಮಾ, ಹಾಡುಗಳೆಂದರೆ ತುಂಬಾ ಇಷ್ಟ. ವಾರ್ನರ್ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಭಾರತದ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ರಂಜಿಸುತ್ತಿರುತ್ತಾರೆ. ಅದರಲ್ಲೂ ವಾರ್ನರ್‍ಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ವಿಶೇಷವಾದ ಒಲವಿದೆ. ಹಾಗಾಗಿ ಪ್ರತಿ ಬಾರಿ ಇಲ್ಲಿನ ಸಿನಿಮಾ ಹಾಡುಗಳನ್ನು ಕೇಳುತ್ತಿರುತ್ತಾರೆ. ಅದಲ್ಲದೆ ವಾರ್ನರ್ ಹೈದರಾಬಾದ್ ತಂಡದ ಪರ ಆಡುವುದರಿಂದ ತೆಲುಗು ಹಾಡುಗಳಿಗೆ ಸಾಕಷ್ಟು ಬಾರಿ ನೃತ್ಯ ಮಾಡಿದ್ದಾರೆ.

ಇದೀಗ ವಾರ್ನರ್ ತಮ್ಮ ಮಗಳ ಮುದ್ದಾದ ವೀಡಿಯೋ ಒಂದಕ್ಕೆ ಕನ್ನಡದ ಚೌಕ ಚಿತ್ರದ ಅಪ್ಪ ಐ ಲವ್ ಯು ಪಾ ಎಂಬ ಹಾಡನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಸಾವಿರಾರು ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಸಲಾಂ ಹೊಡೆದಿದ್ದಾರೆ.

ಈ ವೀಡಿಯೋದಲ್ಲಿ ವಾರ್ನರ್ ಮಗಳು ಐಪಿಎಲ್ ವೇಳೆ ಗ್ಯಾಲರಿಯಲ್ಲಿ ಕೂತು ವಾರ್ನರ್ ಗೆ ಹುರಿದುಂಬಿಸಿರುತ್ತಾಳೆ. ಇದಕ್ಕೆ ವಾರ್ನರ್ ನಾನು ನನ್ನ ಕುಟುಂಬವನ್ನು ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಲು ಬಯಸುತ್ತೇನೆ. ನಾವು ನಮ್ಮ ಅಭಿಮಾನಿಗಳ ಮುಂದೆ ಆಡುವ ಕ್ಷಣದಿಂದ ವಂಚಿತರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು IPL ಸಂದರ್ಭದಲ್ಲಿ ನಾಲ್ಕು ತಂಡಗಳ ಆಟಗಾರರಲ್ಲಿ ಕೊರೊನಾ ವೈರಸ್‌ ಪತ್ತೆಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದು ನಮಗೆಲ್ಲ ತಿಳಿದೇ ಇದೆ. ಇದರ ಬೆನ್ನಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮಾಜಿ ನಾಯಕ ಹಾಗೂ ಆಸೀಸ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ಗೆ ಮನೆಯಿಂದ ವಿಶೇಷ ಪತ್ರವೊಂದು ಬಂದಿದ್ದು, ಭಾವನಾತ್ಮಕ ಸಂದೇಶ ಹೊಂದಿದ್ದ ಈ ಪತ್ರವನ್ನು ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಕುಟುಂಬದಿಂದ ತಾವು ಸ್ವೀಕರಿಸಿದ ವಿಶೇಷ ಪತ್ರದ ಫೋಟೊವನ್ನು ವಾರ್ನರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರಿ ಸದ್ದು ಮಾಡಿದೆ. ವಾರ್ನರ್‌ ಪುತ್ರಿ “ಪ್ಲೀಸ್‌ ಡ್ಯಾಡಿ, ನೇರವಾಗಿ ಮನೆಗೆ ಬನ್ನಿ,” ಎಂದು ಆತಂಕದಿಂದ ಬರೆದಿರುವ ಪತ್ರ ಅಭಿಮಾನಿಗಳ ಹೃದಯ ಕರಗುವಂತೆ ಮಾಡಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.