Diwali Horoscope: ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ ಈ ದೀಪಾವಳಿಯು ಯಾವ ರಾಶಿಯವರ ಭಾಗ್ಯದ ಬಾಗಿಲನ್ನ ತೆರೆಯಲಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಕಾರ್ತಿಕ ಮಾಸದ ಅಮಾವಾಸ್ಯೆ ಎಂದು ಆಚರಿಸುವ ದೀಪಾವಳಿ ಹಬ್ಬವನ್ನು ಈ ತಿಂಗಳ 12ನೇ ತಾರೀಖಿನಿಂದ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಕೆಲವೊಂದು ರಾಶಿಗಳಿಗೆ ಅದೃಷ್ಟ ಒದಗಿ ಬರಲಿದೆ ಆ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವವು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.

ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯಿಂದ ರಾಹು ಹೊರಟಿದ್ದು ಶುಕ್ರ ಗ್ರಹವು ಮೇಷ ರಾಶಿಯಲ್ಲಿ ಸಂಚರಿಸುತ್ತಾ ಇದ್ದಾನೆ ಹಾಗಾಗಿ ಈ ದೀಪಾವಳಿಯ ಸಂದರ್ಭದಲ್ಲಿ ಮೇಷ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಫಲಿತಾಂಶಗಳನ್ನು ನೀವು ಪಡೆಯಬಹುದು ನಿಮ್ಮ ರಾಶಿಯಿಂದ ರಾಹು ಹೊರ ಹೋಗಿದ್ದರಿಂದ ನಿಮ್ಮ ಋಣಾತ್ಮಕ ಅಂಶಗಳು ಈಗಾಗಲೇ ನಿಮ್ಮಿಂದ ದೂರ ಹೋಗಿರುತ್ತವೆ ಹಾಗಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಈ ಸಂದರ್ಭ ಬಹಳ ಅನುಕೂಲಕರವಾಗಿರಲಿದೆ.

ಎರಡನೆಯದಾಗಿ ವೃಷಭ ರಾಶಿ. ಈ ವೃಷಭ ರಾಶಿಯವರಿಗೆ ದೀಪಾವಳಿಯ ಸಂದರ್ಭದಲ್ಲಿ ಹಣದ ವಿಚಾರವಾಗಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಮಾತ್ರವೇ ನಿಮ್ಮ ಕೆಲಸದಲ್ಲಿ ಯಶಸ್ಸನ್ನ ಗಳಿಸಲು ಸಾಧ್ಯ ಅದೃಷ್ಟ ಇದೆ ಎಂದು ಸುಮ್ಮನೆ ಕೈಕಟ್ಟಿ ಕೂರಬಾರದು, ವಿಶೇಷವಾಗಿ ಈ ಸಮಯದಲ್ಲಿ ವೃಷಭ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಕೆಂದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಇದನ್ನ ಹೊರತುಪಡಿಸಿ ಈ ದೀಪಾವಳಿ ಹಬ್ಬದ ಅವಧಿಯಲ್ಲಿ ನಿಮಗೆ ಒಳ್ಳೆಯ ಅದೃಷ್ಟಗಳು ಒದಗಿ ಬರುತ್ತವೆ.

ಇನ್ನು ಮಿಥುನ ರಾಶಿ. ಈ ಮಿಥುನ ರಾಶಿಯವರು ದೀಪಾವಳಿಯ ಸಂದರ್ಭದಲ್ಲಿ ಕೈಗೊಳ್ಳುವಂಥ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರಲಿದ್ದು ನಿಮ್ಮ ಕುಟುಂಬದವರ ಆರೋಗ್ಯದ ಮೇಲೆ ಸ್ವಲ್ಪ ನಿಗಾ ವಹಿಸಬೇಕು ಈ ಸಂದರ್ಭದಲ್ಲಿ ಋತುಮಾನದಿಂದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆದ್ದರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಕಟಕ ರಾಶಿ. ಕಟಕ ರಾಶಿಯವರು ಈ ಸಮಯದಲ್ಲಿ ನಿಮ್ಮ ಕೆಲಸಗಳಿಗೆ ಸಕಾರಾತ್ಮಕ ಫಲಿತಾಂಶವನ್ನು ಪಡೆಯಲಿದ್ದೀರಿ ಹಾಗೆಯೇ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲವಾಗಿ ಅತ್ಯಂತ ಹೆಚ್ಚಿನ ಲಾಭವನ್ನ ಪಡೆಯುತ್ತೀರಿ ಹೀಗೆ ಎಲ್ಲಾ ಕಾರ್ಯಗಳಲ್ಲಿಯೂ ಉತ್ತಮ ಫಲಿತಾಂಶವನ್ನೇ ನೀವು ಪಡೆಯುತ್ತೀರಿ.

ಇನ್ನು ಸಿಂಹ ರಾಶಿ ಅವರಿಗೂ ಕೂಡ ದೀಪಾವಳಿಯ ಸಂದರ್ಭ ಬಹಳ ಉತ್ತಮವಾಗಿದ್ದು ವಿಶೇಷವಾಗಿ ಸಂಬಂಧದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಇದನ್ನ ಹೊರತುಪಡಿಸಿ ಉದ್ಯೋಗ ವ್ಯವಹಾರ ಇತರೆ ಕ್ಷೇತ್ರಗಳಲ್ಲಿ ತುಂಬಾ ಚೆನ್ನಾಗಿ ಅಭಿವೃದ್ಧಿಯನ್ನು ಕಾಣಲಿದ್ದೀರಿ ಆರ್ಥಿಕ ಕ್ಷೇತ್ರದಲ್ಲಿಯೂ ಸಹ ಸಣ್ಣ ಪುಟ್ಟ ನಷ್ಟಗಳು ಕಂಡು ಬರಬಹುದು.

ಕನ್ಯಾ ರಾಶಿ. ಈ ದೀಪಾವಳಿಯ ಸಂದರ್ಭದಲ್ಲಿ ಬುಧ ಗ್ರಹದ ರಾಶಿ ಪರಿವರ್ತನೆ ಯಿಂದಾಗಿ ಕನ್ಯಾ ರಾಶಿಯ ಉನ್ನತಿಯ ಅತ್ಯುತ್ತಮ ಮಾರ್ಗಗಳು ಗೋಚಾರ ವಾಗುತ್ತವೆ ಕನ್ಯಾ ರಾಶಿಯ ಉದ್ಯೋಗಸ್ಥರಿಗೆ ಕೆಲಸದಲ್ಲಿ ನೆಮ್ಮದಿ ಹಾಗೂ ವ್ಯಾಪಾರಿಗಳಿಗೆ ಉತ್ತಮ ಲಾಭವನ್ನು ಪಡೆಯುವಂತಹ ಯೋಗಗಳು ಕೂಡ ಕಂಡು ಬರಲಿವೆ ಈ ಸಂದರ್ಭದಲ್ಲಿ ನಿಮಗೆ ನಿಮ್ಮ ಯೋಜನೆಗೆ ಸ್ಪಷ್ಟವಾದ ದಾರಿಯು ಕಂಡು ಬರಲಿದ್ದು ನಿಮ್ಮ ಜೀವನದ ದಾರಿಯು ಸುಗಮವಾಗುತ್ತದೆ.

ಇನ್ನು ತುಲಾ ರಾಶಿ. ತುಲಾ ರಾಶಿಯವರು ಯಾವ ರೋಗದಿಂದ ಹಲವು ವರ್ಷಗಳಿಂದ ನರಳುತ್ತಿದ್ದೀರೋ ಆ ರೋಗದಿಂದ ನೀವು ಮುಕ್ತಿಯನ್ನು ಹೊಂದುತ್ತೀರಿ ಆದರೆ ಆರ್ಥಿಕವಾಗಿ ಸ್ವಲ್ಪ ಹಾನಿಯನ್ನು ಕಾಣಬಹುದು ಹಾಗಾಗಿ ಖರ್ಚಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ ಹಾಗೆಯೇ ಸಂಬಂಧಗಳನ್ನು ಸಹ ಅವಧಿಯಲ್ಲಿ ನೀವು ಉತ್ತಮವಾಗಿ ಕಾಪಾಡಿಕೊಳ್ಳಬೇಕಾಗುತ್ತದೆ.

ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯ ಜನರಿಗೆ ಸೇರಿದ ಮಾನಸಿಕ ಸಮಸ್ಯೆ ಈ ಸಮಯದಲ್ಲಿ ಹೆಚ್ಚಾಗುತ್ತದೆ ಹಾಗೆ ಒತ್ತಡ ಕೂಡ ಜಾಸ್ತಿಯಾಗುತ್ತದೆ ನೀವು ತಾಳ್ಮೆಯನ್ನು ಕಳೆದುಕೊಳ್ಳುವ ಸಂದರ್ಭ ಕಂಡು ಬರಬಹುದು ಹಾಗಾಗಿ ಮಾತನಾಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಯೋಚಿಸಿ ಮಾಡುವುದು ಒಳ್ಳೆಯದು ನಿಮ್ಮ ಕುಟುಂಬದೊಂದಿಗೆ ನ ಸಂಬಂಧವನ್ನು ನೀವು ಹದಗೆಡಿಸಿಕೊಳ್ಳಬಾರದು.

ಧನು ರಾಶಿ ಗುರುವಿನ ಕೃಪೆಯೊಂದಿಗೆ ಧನು ರಾಶಿಯವರ ಶಕ್ತಿ ಪರಾಕ್ರಮ ಹೆಚ್ಚಿಗೆಗೊಂಡು ಭಾಗ್ಯೋದಯವನ್ನು ಹೊಂದಲಿದ್ದೀರಿ ದೀಪಾವಳಿಯ ಸಮಯದಲ್ಲಿ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ ಹಾಗೆಯೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧನು ರಾಶಿಯ ಜನರು ತಮ್ಮ ಕೆಲಸದ ಸ್ಥಳಗಳಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶಗಳಿಗೆ ಸಾಕ್ಷಿಯಾಗುತ್ತೀರಿ ಉತ್ತಮ ಪ್ರಶಂಸೆಯನ್ನ ನೀವು ಪಡೆಯಲು ಸಾಧ್ಯವಾಗುತ್ತದೆ.

ಮಕರ ರಾಶಿ. ಮಕರ ರಾಶಿಗೆ ಸೇರಿದ ಜನರಿಗೆ ಶನಿಯ ಸಂಚಾರದಿಂದ ಮತ್ತು ಬುಧನ ಸಂಚಾರದಿಂದ ಉತ್ತಮ ಲಾಭಗಳು ಸೃಷ್ಟಿಯಾಗುತ್ತವೆ ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೇಗದ ಪ್ರಗತಿ ಕಾಣಬಹುದು ಹಾಗೆಯೇ ನೀವು ಈ ಸಮಯದಲ್ಲಿ ಹೆಚ್ಚಿನ ಖ್ಯಾತಿಯನ್ನ ಪಡೆಯಲಿದ್ದೀರಿ.

ಕುಂಭ ರಾಶಿ ದೀಪದ ಹಬ್ಬದ ಸಂದರ್ಭದಲ್ಲಿ ಕುಂಭ ರಾಶಿಯವರ ಕೆಲಸದಲ್ಲಿ ಭರ್ತಿ ಹೊಂದುವ ಯೋಗ ಕಂಡುಬರಲಿದ್ದು ನಿಮ್ಮ ಮೇಲೆ ಶನಿ ಮತ್ತು ಲಕ್ಷ್ಮಿ ದೇವಿಯ ಅಪಾರವಾದ ಕೃಪೆ ಇರಲಿದೆ ಹಾಗಾಗಿ ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ.

ಮೀನ ರಾಶಿ. ಮೀನ ರಾಶಿಗೆ ಸೇರಿದ ಜನರಿಗೆ ಶನಿ ಹಾಗೂ ಗುರುವಿನ ಕೃಪೆಯೊಂದಿಗೆ ಈ ದೀಪಾವಳಿಯ ಸಂದರ್ಭ ಶುಭ ಫಲಗಳು ದೊರಕಲಿದೆ ನಿಮ್ಮ ಕೆಲಸದಲ್ಲಿ ಹೆಚ್ಚಿನ ಗೌರವ ಹಾಗೂ ಖ್ಯಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ ನಿಮಗೆ ಇದ್ದಂತಹ ಸಣ್ಣಪುಟ್ಟ ಸಮಸ್ಯೆಗಳು ದೀಪಾವಳಿಯ ನಂತರದ ದಿನಗಳಲ್ಲಿ ಸರಿ ಹೋಗುತ್ತದೆ ಈ ದೀಪಾವಳಿ ನಿಮ್ಮ ಜೀವನವನ್ನ ದೀಪದಂತೆ ಬೆಳಗುತ್ತದೆ. (ಇದನ್ನೂ ಓದಿ) 2024 ಹೊಸವರ್ಷ ಮೀನ ರಾಶಿಯವರ ಪಾಲಿಗೆ ಹೇಗಿರತ್ತೆ? ಬದಲಾಗುತ್ತಾ ಜೀವನ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *