ಧನಸ್ಸು ರಾಶಿ ಅಧಿಪತಿ ಗುರು ಇನ್ನೂ ಹನ್ನೆರಡು ರಾಶಿಗಳಲ್ಲಿ 9 ನೆ ರಾಶಿ ಈ ಧನಸ್ಸು ರಾಶಿ ಕುದುರೆ ಮನುಷ್ಯನು ಈ ರಾಶಿಯ ಚಿನ್ಹೆ ಇನ್ನೂ ಇದರ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿ ಬಿಲ್ಲು ಹೊತ್ತಿರುವ ಮನುಷ್ಯ.ಕೂದಲು ಹಾಗೂ ಕಣ್ಣು ಆಕರ್ಷಕ ಜೊತೆಗೆ ಬಲವಾದ ಮೈಕಟ್ಟು ಹೊಂದಿರುತ್ತಾರೆ

ಧನಸ್ಸು ರಾಶಿಯವರು ಮೂಲ ನಕ್ಷತ್ರದ ನಾಲ್ಕೂ ಪದ ಉತ್ತರಷದ ನಕ್ಷತ್ರದ ಒಂದನೇ ಪದ ಹಾಗೂ ಪೂರ್ವ ಶಾಡ ನಕ್ಷತ್ರದ ನಾಲ್ಕನೇ ಪಾದ ಈ ರಾಶಿಯ ಅಡಿಯಲ್ಲಿ ಬರುವುದು ಇನ್ನು ಈ ರಾಶಿಯ ಅಧಿಪತಿ ಗುರು ಆಗಿರುವುದರಿಂದ ವ್ಯಕ್ತಿಗಳು ಆಕರ್ಷಣೀಯ ಹಾಗೂ ಸೆಳೆಯುವ ಗುಣವಿದ್ದು ನೋಡಲು ಎತ್ತರವಿದ್ದು ಎಲ್ಲರಿಗಿಂತ ವಯಸ್ಸು ಆದವರಂತೆ ಕಾಣಿಸುತ್ತಾರೆ.

ಇನ್ನು ಗುರುವಿನ ಪ್ರಭಾವದಿಂದ ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಧಿಕ ಆಸಕ್ತಿ ಹೊಂದಿರುತ್ತಾರೆ ಇವರು ಅತ್ಯಂತ ಬುದ್ದಿವಂತರು ಹಾಗೂ ಶ್ರೇಷ್ಟ ವ್ಯಕ್ತಿತ್ವ ಹೊಂದಿರುವುದರಿಂದ ಇವರ ಅತಿಯಾದ ಜ್ಞಾನ ದಿಂದ ಅಹಂಕಾರ ಬುದ್ಧಿ ಹೊಂದಿರುತ್ತಾರೆ ಇನ್ನು ಎಲ್ಲ ಸಂದರ್ಭದಲ್ಲಿ ಧೈರ್ಯ ಹಾಗೂ ದೃಡತೆಯಿಂದ ಎದುರಿಸುತ್ತಾರೆ ಹೊಸ ಹೊಸ ವಿಷಯಗಳ ಪರಿವರ್ತನೆಗೆ ದಾರಿ ಆಗುತ್ತಾರೆ ತಮ್ಮ ವಿಚಾರದಲ್ಲಿ ಯಾರನ್ನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ ಏಳವು ತನ್ನ ಸ್ವಂತ ನಿರ್ಧಾರ ಕಾರ್ಯ ಕೈಗೊಳ್ಳುವ ನಡತೆ ಹೊಂದಿದ್ದು ತನ್ನ ಸ್ನೇಹಿತರು ಕುಟುಂಬದವರು ಹಾಗೂ ಪರಿವಾರದವರ ಜೊತೆ ಅನೋನ್ಯವಾಗಿ ಜೀವನ ಸಾಗಿಸುತ್ತಾರೆ.

ಯಾರಿಗೆ ಆದರೂ ಅನ್ಯಾಯ ಆದರೆ ಸಹಿಸುವುದಿಲ್ಲ ಇವರು ಪ್ರಕೃತಿ ಪ್ರೇಮಿ ಆಗಿದ್ದು ಆಗಾಗ ಪ್ರವಾಸವನ್ನು ಕೈಗೊಳ್ಳುವರು ಹಾಸ್ಯ ಪ್ರವೃತ್ತಿ ಹಾಗೂ ಕಲ್ಪನಾ ಶೀಲಾ ಗುಣವಿದ್ದು ಹಾಗೂ ಇವರಲ್ಲಿ ನಾಯಕತ್ವ ಗುಣವಿದ್ದು ವಾಚಾಳಿ ಗುಣ ಇರುವುದರಿಂದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಲಭ್ಯ ಇವರು ಚಂಚಲ ಸ್ವಭಾವ ಹೊಂದಿರುತ್ತಾರೆ ಇನ್ನು ಕಾಸಿದ್ದರೆ ನಾನೇ ರಾಜ ಎನ್ನುವ ಹಾಗೆ ಅಧಿಕ ಖರ್ಚು ಹಾಗೂ ಮಧ್ಯಪಾನ ಮತ್ತು ಧೂಮಪಾನ ಮುಂತಾದ ಅಭ್ಯಾಸಗಳಿಗ ಆಕರ್ಷಣೆ ಹೊಂದುತ್ತಾರೆ ಈ ರಾಶಿಯವರು ಬಹಳ ಮಹತ್ವಾಕಾಂಕ್ಷಿ ಹಾಗೂ ಉಚ್ಚ ಜೀವನ ನಡೆಸಲು ಇಚ್ಛಿಸುತ್ತಾರೆ ಪ್ರೀತಿಯ ವಿಚಾರದಲ್ಲಿ ನಿಷ್ಠೆ ಹೊಂದಿದ್ದು ಸಂಗಾತಿಯನ್ನು ತುಂಬ ಪ್ರೀತಿಸುತ್ತಾರೆ.

ತಮ್ಮ ಜೀವನದಲ್ಲಿ ನಕ್ಷೆ ಮೊದಲು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ ಯಾವ ವಿಷಯದಲ್ಲಿ ಏನು ಮಾಡಬೇಕು ಎಂದು ತಿಳಿದಿರುತ್ತಾರೆ ಹೊಸ ವಿಷ್ಯ ಕಲಿಯುವುದರಲ್ಲಿ ಜಾಸ್ತಿ ಆಸಕ್ತಿ ಹೊಂದಿದ್ದಾರೆ ಈ ರಾಶಿಯಲ್ಲಿ ಸಲ್ಸ್ ಮನ್ ಟ್ರಾವೆಲ್ ಏಜೆಂಟ್ ಛಾಯಾಗ್ರಾಹಕ ಇಂಪೋರ್ಟ್ ಹಾಗೂ ಎಕ್ಸ್ಪೊಟ್ ವ್ಯವಹಾರ ಇನ್ನೂ ವಕೀಲ ಬ್ಯಾಂಕಿಂಗ್ ಐಟಿ ವ್ಯವಸ್ಥೆಯಲ್ಲಿ ತೊಡಗಿದರೆ ಒಳ್ಳೆಯ ಜೀವನ ಆದರೂ ತಮ್ಮ ಪಾರಂಪರಿಕ ವ್ಯವಹಾರ ಆಸಕ್ತಿ ಜಾಸ್ತಿ ಇನ್ನು ಆರೋಗ್ಯದ ದೃಷ್ಟಿಯಿಂದ ನೋಡಿದರೆ ಹೊಟ್ಟೆ ಸಂಬಂಧಿಸಿದ ಖಾಯಿಲೆ ಜ್ವರ ಮಂಡಿನೋವು ಲಿವರ್ ಸಂಬಂಧಪಟ್ಟ ರೋಗ ಬರುವ ಸಾಧ್ಯತೆ ಅತಿಯಾದ ಆಹಾರ ಸೇವನೆಯಿಂದ ಬೊಜ್ಜು ರಕ್ತದೊತ್ತಡ ಹೊಂದಿರುತ್ತಾರೆ

ಇನ್ನೂ ಹಳದಿ ಬಣ್ಣದ ಕರ್ಚೀಫ್ ಹಾಗೂ ಬಟ್ಟೆ ಧರಿಸಿ ಹಾಗೂ ಗುರುವಾರ ರಾಯರ ಪೂಜೆ ಮಾಡುವುದರಿಂದ ಒಳ್ಳೆಯದು ಗುರುವಾರ ಮಾಂಸಾಹಾರ ಸೇವನೆ ನಿಷಿದ್ಧ ಮಾಡಿದಲ್ಲಿ ಒಳ್ಳೆಯದು ಗುರು ಹಿರಿಯರ ತಂದೆ ತಾಯಿಯರ ಆಶೀರ್ವಾದ ಹಾಗೂ ಅವರ ಮಾರ್ಗದರ್ಶನ ಇಂದ ಜೀವನದಲ್ಲಿ ಮುಂದೆ ಬರಲು ಒಳ್ಳೆಯ ಮಾರ್ಗ ವಿಷ್ಣು ಹಾಗೂ ಸತ್ಯನಾರಾಯಣ ಸ್ವಾಮಿ ಆರಾಧನೆ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ .

Leave a Reply

Your email address will not be published. Required fields are marked *