ದರ್ಶನ್ ತಮ್ಮ 21ನೇ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಕೊಟ್ಟ ಗಿಫ್ಟ್ ಏನು ಗೋತ್ತಾ?

0 3

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಚಿತ್ರದ ಸಕ್ಸಸ್ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಆದರೆ ಇನ್ನೇನು ಚಿತ್ರೀಕರಣ ಆರಂಭ ಆಗಬೇಕು ಎನ್ನುವಷ್ಟೊತ್ತಿಗೆ ಕೊರೊನಾ ಹಾವಳಿ ಹೆಚ್ಚಾಗಿ ಲಾಕ್ ಡೌನ್ ಮಾಡಲಾಯಿತು. ಸದ್ಯ ದರ್ಶನ್ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿಯಾಗಿರುವ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 14ಕ್ಕೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ದರ್ಶನ್ ಈ ಲಾಕ್ ಡೌನ್ ಸಮಯದಲ್ಲಿ ಮಗ ವಿನೀಶ್ ವಿದ್ಯಾಭ್ಯಾಸ ಮತ್ತು ಪೋಷಣೆ ಮಾಡುತ್ತಾ ಮಗನ ಜೊತೆ ಇದ್ದಾರೆ. ಮೇ ಹದಿನಾಲ್ಕರಂದು ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವನ್ನು ತಮ್ಮ ತೋಟದಲ್ಲಿ ಅದ್ಭುತವಾಗಿ ಆಚರಣೆ ಮಾಡಿಕೊಂಡಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ನಟ ದರ್ಶನ್ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರನ್ನು ಪರಿಚಯದ ಫ್ರೆಂಡ್ ಒಬ್ಬರ ಮೂಲಕ ಮೊದಲ ಬಾರಿಗೆ ಭೇಟಿಯಾದವರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಸ್ನೇಹ ಪ್ರೀತಿಯಾಗಿ ಇಬ್ಬರು ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಈ ವರ್ಷ ದರ್ಶನ್ ಅವರ ದಾಂಪತ್ಯ ಜೀವನಕ್ಕೆ 21 ವರ್ಷಗಳ ಸಂಭ್ರಮ. 2000, ಮೇ 14 ರಂದು ಮದುವೆಯಾಗಿದ್ದರು. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಪವಿತ್ರ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು ಚಿತ್ರತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಮನಸ್ತಾಪ ಜಗಳಗಳು ಬಂದಿದ್ದವು ಆದರೆ ಅವೆಲ್ಲವನ್ನೂ ಮೆಟ್ಟಿ ನಿಂತು ಇಂದು ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ. ಈಗ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ ನಟ ದರ್ಶನ್.

ಇನ್ನು ಮೊನ್ನೆ ಅಷ್ಟೇ ಆಚರಿಸಿಕೊಂಡ 21ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ನಟ ದರ್ಶನ್ ತನ್ನ ಪತ್ನಿಗೆ ಬಹಳ ವಿಶೇಷವಾದ ಉಡುಗೊರೆ ನೀಡಿದ್ದಾರೆ. ದುಬಾರಿ ಬೆಲೆಯ ಪಕ್ಷಿಯೊಂದನ್ನು ಪತ್ನಿ ವಿಜಯಲಕ್ಷ್ಮಿ ಅವರಿಗೆ ವಿವಾಹ ವಾರ್ಷಿಕೋತ್ಸವದ ಗಿಫ್ಟ್ ಆಗಿ ನೀಡಿದ್ದಾರೆ. ಬೇರೆ ಸಮಯದಲ್ಲಿ ದರ್ಶನ್ ಅವರು ಪತ್ನಿ ಮತ್ತು ಮಗನ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ. ಸಿನಿಮಾ ಚಿತ್ರೀಕರಣ ಮತ್ತು ಇನ್ನಿತರ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಆದರೆ ಈಗ ಲಾಕ್ ಡೌನ್ ಇರುವ ಕಾರಣ ಪತ್ನಿ ಮತ್ತು ಮಗನ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮೈಸೂರಿನ ಹತ್ತಿರ ತಮ್ಮ ತೋಟದಲ್ಲಿ ತಮ್ಮ ಪತ್ನಿ ಹಾಗು ಪುತ್ರ ವಿನೀಶ್ ಜೊತೆ ದರ್ಶನ್ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಅದ್ಭುತವಾಗಿ ಆಚರಣೆ ಮಾಡಿಕೊಂಡಿದ್ದು ಸ್ಪೆಷಲ್ ಅಡುಗೆಗಳನ್ನು ಕೂಡ ಮಾಡಿಸಿ ಎಲ್ಲರೂ ಪ್ರೀತಿಯಿಂದ ಕಾಲ ಕಳೆದಿದ್ದಾರೆ. ಸದ್ಯ ಲಾಕ್ ಡೌನ್ ಕಾರಣ ತಮ್ಮ ಕುಟುಂಬದ ಜನರ ಜೊತೆ ದರ್ಶನ್ ತಮ್ಮ ತೋಟದಲ್ಲೇ ಇದ್ದು ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಬರಬಹುದು ಎಂದು ತಿಳಿದು ಬಂದಿದೆ. ದರ್ಶನ್ ದಂಪತಿಗೆ ವಿನೀಶ್ ಮಗನಿದ್ದಾನೆ. ವಿನೀಶ್ ಈಗಾಗಲೇ ಐರಾವತ ಮತ್ತು ಯಜಮಾನ ಸಿನಿಮಾದ ಚಿಕ್ಕ ದೃಶ್ಯದಲ್ಲಿ ನಟಿಸಿದ್ದಾನೆ.

Leave A Reply

Your email address will not be published.