ಡಾರ್ಲಿಂಗ್ ಕೃಷ್ಣ ಮದರಂಗಿ ಮತ್ತು ಲವ್ ಮಾಕ್ಟೇಲ್ ಚಿತ್ರದ ಮೂಲಕ ತನ್ನ ಹೆಸರನ್ನು ಪ್ರಚಲಿತಗೊಳಿಸಿ ಕೊಂಡವರು ಜೊತೆಗೆ ಅತ್ಯುತ್ತಮ ಪ್ರೇಕ್ಷಕರ ಮನ ಗೆದ್ದವರು ಕೂಡ ಆಗಿದ್ದಾರೆ. ಇವರ ಒಂದು ವಿಭಿನ್ನ ಪ್ರಯತ್ನ ಚಿತ್ರವು ಗೆಲುವನ್ನು ಕಂಡಿದೆ. ಇವರ ಮೊದಲ ಹೆಸರು ಸುನಿಲ್ ನಾಗಪ್ಪ.  ಸುನಿಲ್ ನಾಗಪ್ಪ ಅವರು 12 ಜೂನ್ 1985 ರಂದು ಮೈಸೂರಿನಲ್ಲಿ ಜನಿಸುತ್ತಾರೆ. ಇವರ ತಂದೆ ನಾಗಪ್ಪ ಅವರು ರಿಟೈರ್ಡ್ ಪೊಲೀಸ್ ಆಫೀಸರ್ ಆಗಿದ್ದಾರೆ. ಸುನಿಲ್ ನಾಗಪ್ಪ ಅವರು ಎಂಬಿಎ ಗ್ರಾಜುಯೇಷನ್ ಪಡೆದಿರುತ್ತಾರೆ. ಆದ್ದರಿಂದ ಕೃಷ್ಣ ಅವರ ಹುಟ್ಟು ಹಬ್ಬದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಜಾಕಿ ಚಿತ್ರದ ಮೂಲಕ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಜೊತೆಗೆ ಸಣ್ಣ ಪಾತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಾರೆ. ನಂತರ 2011ರಲ್ಲಿ ಹುಡುಗರು ಚಿತ್ರದಲ್ಲಿ ಗೆಸ್ಟ್ ರೋಲ್ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಾರೆ.2013ರಲ್ಲಿ ಮದರಂಗಿ ಚಿತ್ರದ ಮೂಲಕ ನಾಯಕ ನಟರಾಗಿ ಪಾದಾರ್ಪಣೆ ಮಾಡುತ್ತಾರೆ. ನಂತರ 2020ರಲ್ಲಿ ಲವ್ ಮಾಕ್ಟೇಲ್ ಎಂಬ ಚಿತ್ರವನ್ನು ಮಾಡಿ ಯಶಸ್ಸನ್ನು ಕಾಣುತ್ತಾರೆ. ಈಗ ಲವ್ ಮಾಕ್ಟೇಲ್ ಭಾಗ ಎರಡು ಚಿತ್ರವನ್ನು ನಿರ್ದೇಶನದ ಮೂಲಕ ನಾಯಕ ನಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ ಮಿಲನ ನಾಗರಾಜ್ ಅವರು ನಾಗರಾಜ್ ಹಾಗೂ ಚಂದ್ರಕಲಾ ದಂಪತಿಗೆ   25 ಏಪ್ರೀಲ್ 1989ರಲ್ಲಿ ಹಾಸನದಲ್ಲಿ ಜನಿಸುತ್ತಾರೆ. ಅವರು ತನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಹಾಸನದಲ್ಲಿಯೇ ತೆಗೆದುಕೊಂಡರು. ಬೆಂಗಳೂರಿನ ವಿಕೆಐಟಿ ಕಾಲೇಜಿನಿಂದ ಎಂಜಿನಿಯರಿಂಗ್ ಮಾಡಿದರು.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಇಂಜಿನಿಯರಿಂಗ್ ಗೆ ಆಯ್ಕೆಯಾದರು. ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾದರು. ನಂತರ ಅವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಲವು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಾರೆ. ಲವ್ ಮಾಕ್ಟೇಲ್ ನ ಮೂಲಕ ಮಿಲನ ನಾಗರಾಜ್ ಮತ್ತು  ಡಾರ್ಲಿಂಗ್ ಕೃಷ್ಣ ಅವರು ಮುಖ್ಯಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಮೊದಲು ನಮ್ಮ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ಇವರಿಬ್ಬರಿಗೂ ಪರಿಚಯವಾಗಿರುತ್ತದೆ. ಈ ಮೂಲಕ ಇವರು ತುಂಬಾ ಸ್ನೇಹಿತರಾಗುತ್ತಾರೆ. ಸ್ನೇಹ ಪ್ರೀತಿಗೆ ತಿರುಗುತ್ತದೆ ಮತ್ತು ಮತ್ತು ಮೀಡಿಯಾದಲ್ಲಿ ಇವರ ಪ್ರೇಮಗಳ ವಿಚಾರವಾಗಿ ಅನೇಕ ವಿಚಾರಗಳು ಕೂಡ ಹೊರಹೊಮ್ಮುತ್ತದೆ.

ಸುಮಾರು ಐದು ವರ್ಷಗಳಿಂದ ಸ್ನೇಹ, ಪ್ರೀತಿ ಸಂಬಂಧವನ್ನು ಹೊಂದಿರುತ್ತಾರೆ. ನಂತರ ಇವರ ಪ್ರೀತಿಗೆ ಎರಡು ಮನೆಯಿಂದ ಒಪ್ಪಿಗೆ ದೊರೆತು ಮದುವೆಗೆ ಸಿದ್ಧರಾಗಿದ್ದಾರೆ. ಎರಡು ಕುಟುಂಬಗಳಲ್ಲಿಯೂ ಒಳ್ಳೆಯ ಬಾಂಧವ್ಯ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಈ ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದೇ ಇವರ ವಿವಾಹ ನೆರವೇರಿದೆ. ಈಗ ಕೊರೊನಾ ಲಾಕ್ ಡೌನ್ ಇರುವುದರಿಂದ ಮನೆಯಲ್ಲಿ ಕ್ರಿಕೆಟ್ ಆಡುತ್ತಾ ಇಬ್ಬರೂ ಜೊತೆಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಹಾಗೆಯೇ ಇತ್ತೀಚೆಗೆ ಕೃಷ್ಣ ಅವರ ಹುಟ್ಟು ಹಬ್ಬ ಇತ್ತು. ಮಿಲನ ನಾಗರಾಜ್ ಅವರು ಕೇಕ್ ತಂದು ಆಶ್ಚರ್ಯವಾಗುವಂತೆ ಕೃಷ್ಣ ಅವರಿಗೆ ಮಾಡಿದ್ದಾರೆ. ಹಾಗೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅವರನ್ನು ಕರೆದುಕೊಂಡು ಬಂದು ಒಂದು ಸರ್ಪ್ರೈಸ್ ನೀಡಿ ನಂತರ ಕೇಕ್ ಕಟ್ ಮಾಡಿದ್ದಾರೆ. ಇಬ್ಬರೂ ಕೇಕ್ ತಿನ್ನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *