ಸಾವಯುವ ಪದ್ದತಿಯಲ್ಲಿ ತೆಂಗು ಕೃಷಿ ಮಾಡಿ 12 ಲಕ್ಷ ಆಧಾಯ ಗಳಿಸುತ್ತಿರುವ ರೈತ

0 4

ಸಾವಯುವ ಕೃಷಿಯಿಂದ ಅಧಿಕ ಲಾಭವನ್ನು ಪಡೆಯಬಹುದು ಹಾಗೆಯೇ ಭೂಮಿಯು ಫಲವತ್ತತೆ ಯಿಂದ ಕೂಡಿ ಇರುತ್ತದೆ ರಾಸಾಯನಿಕಗಳು ಗೊಬ್ಬರಗಳು ಪ್ರತಿವರ್ಷ ಇಳುವರಿಯನ್ನು ಕಡಿಮೆ ಮಾಡುತ್ತದೆ ಮಣ್ಣಿನಲ್ಲಿ ಪೋಷಕಾಂಶ ಹಾಗೂ ಎರೆಹುಳ ಎಲ್ಲವೂ ನಶಿಸಿ ಹೋಗುತ್ತದೆ .ರಾಸಾಯನಿಕಗಳು ಪಟ್ರೋಲಿಯಂ ಪ್ರೋಡೇಕ್ಟ್ ಗಳಾಗಿದೆಸಾವಯುವ ಕೃಷಿ ಮಾಡುವುದರಿಂದ ಖರ್ಚು ಬರುವುದಿಲ್ಲತೆಂಗಿನಮರವನ್ನು ಕಲ್ಪವೃಕ್ಷಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ ಇದರ ಎಲೆ ಗರಿ ಕತ್ತ ಕಾಂಡ ಎಲ್ಲ ಉಪಯೋಗಕಾರಿಯಾಗಿದೆ ಹಸಿ ಎಲೆಗಳಿಂದ ಚಾಪೆ ಬುಟ್ಟಿ ಮುಂತಾದ ಅಲಂಕಾರಿಕ ಸಾಮಗ್ರಿಗಳನ್ನು ಹೆಣೆಯುತ್ತಾರೆ ಹಸಿ ಎಲೆಗಳಿಂದ ಹುಡುಗರು ಊದುವ ಪೀಪಿ ಹಾವು ಜಡೆಸರಗಳನ್ನು ತಯಾರಿಸುವರು ಹೀಗೆ ಅನೇಕ ಉಪಯೋಗ ಹೊಂದಿರುವ ತೆಂಗಿನ ಬೆಳೆಯನ್ನು ಬೆಳೆಯುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು ನಾವು ಈ ಲೇಖನದ ಮೂಲಕ ಸಾವಯುವ ಕೃಷಿಯಲ್ಲಿ ತೆಂಗಿನ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ.

ಮಂಜಣ್ಣ ಎನ್ನುವ ರೈತರು ಆರ್ಗಾನಿಕ್ ಕೃಷಿಯನ್ನು ಮಾಡುತ್ತಿದ್ದಾರೆ ಅವರಿಗೆ ಹದಿಮೂರು ಎಕರೆ ಜಮೀನು ಇದೆ ರಾಗಿ ಜೋಳವನ್ನು ಬೆಳೆಯುತ್ತಿದ್ದರು ಆದರೆ ಈ ಬೆಳೆ ತುಂಬಾ ನಷ್ಟವನ್ನು ತಂದು ಕೊಟ್ಟಿತು ನಂತರ ಒಂಬತ್ತು ಎಕರೆ ಜಮೀನಿಗೆ ತೆಂಗನ್ನು ಬೆಳೆದರು ರಾಸಾಯನಿಕಗಳು ಗೊಬ್ಬರಗಳು ಪ್ರತಿವರ್ಷ ಇಳುವರಿಯನ್ನು ಕಡಿಮೆ ಮಾಡುತ್ತದೆ ಮಣ್ಣಿನಲ್ಲಿ ಪೋಷಕಾಂಶ ಹಾಗೂ ಎರೆಹುಳ ಎಲ್ಲವೂ ನಶಿಸಿ ಹೋಗುತ್ತದೆ.

ರಾಸಾಯನಿಕಗಳು ಪಟ್ರೋಲಿಯಂ ಪ್ರೋಡೇಕ್ಟ್ ಗಳಾಗಿದೆ ಮುಂದಿನ ಪೀಳಿಗೆಗೆ ಭೂಮಿ ಫಲವತ್ತಾಗಿ ಇಡಬೇಕು ಎಂದರೆ ರಾಸಾಯನಿಕ ಗೊಬ್ಬರವನ್ನು ಬಳಸಬಾರದು ಸಾವಯುವ ಕೃಷಿ ಮಾಡುವುದರಿಂದ ಖರ್ಚು ಬರುವುದಿಲ್ಲ ಮೂರು ವರ್ಷದ ತೆಂಗಿನ ಸಸಿ ಇದ್ದರೆ ಎರಡು ಮುದು ಅಡಿ ಕುಳಿಯನ್ನು ಮಾಡಬೇಕು ಎರಡು ವರ್ಷದ ಸದಿ ಇದ್ದರೆ ಎರಡು ಅಡಿ ಆಳ ಮೂರು ಅಡಿ ಅಗಲದ ಕುಳಿ ಯನ್ನು ತೆಗಿಯಬೇಕು ತೆಂಗಿನ ಸಸಿ ಮಾಡುವಾಗ ನಲವತ್ತು ವರ್ಷದ ಹಳೆಯ ಮರದ ರೌಂಡ್ ಕಾಯಿಯನ್ನು ತೆಗೆದುಕೊಳ್ಳಬೇಕು.

ನಂತರ ತೆಂಗಿನ ಕಾಯಿಯ ಕಣ್ಣು ಕಾಣುವ ಹಾಗೆ ಮುಚ್ಚಬೇಕು ಮರಳು ಮಿಕ್ಸ್ ಮಾಡಿದ ಮಣ್ಣನ್ನು ಹಾಕಬೇಕು ಎರಡು ಮೂರು ದಿನಕ್ಕೆ ಅದರ ಮೇಲೆ ನೀರನ್ನು ಹಾಕಿದರೆ ಮೊಳಕೆ ಬರುತ್ತದೆ ಆರು ತಿಂಗಳು ಬೇಕಾಗುತ್ತದೆ ಸಸಿ ಒಂದುವರೆ ಅಡಿ ಅದ ಮೇಲೆ ಸಸಿಯನ್ನು ಬೇರ್ಪಡಿಸಿ ಹಾಕಿದರೆ ದೊಡ್ಡ ಸಸಿ ಆಗುತ್ತದೆ ನಂತರ ದೊಡ್ಡ ಅದ ಸಸಿಗೆ ಗುಂಡಿಯನ್ನು ತೆಗೆದು ನೆಟ್ಟು ಸಾವಯುವ ಗೊಬ್ಬರವನ್ನು ಹಾಕಬೇಕು ನಂತರ ಪ್ರತಿದಿನ ನೀರನ್ನು ಹಾಕಬೇಕು .ತೆಂಗಿನ ಮರ ಏಳು ವರ್ಷದಲ್ಲಿ ಕಾಯಿ ಬಿಡಲು ಪ್ರಾರಂಭ ಆಗುತ್ತದೆ ಹತ್ತು ವರ್ಷದಲ್ಲಿ ಹೆಚ್ಚು ಕಾಯಿ ಬಿಡಲು ಪ್ರಾರಂಭ ಆಗುತ್ತದೆ ಎಪ್ಪತ್ತೈದು ವರ್ಷಗಳ ಕಾಲ ಕಾಯಿ ಬಿಡುತ್ತದೆ ಸಾವಾಯುವದಲ್ಲಿ ಗಂಜಲ ಬೇವಿನ ಹಿಂಡಿ ಎಲ್ಲವನ್ನು ಕಾಲ ಕಾಲಕ್ಕೆ ಕೊಡುತ್ತ ಬಂದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಆಗುತ್ತದೆ .

ಸಗಣಿ ಗೊಬ್ಬರವನ್ನು ಮಾಡುತ್ತಾರೆ ಡ್ರಿಪ್ ಲೈನ್ ಮೂಲಕ ಮರಗಳಿಗೆ ಎಲ್ಲ ಗೊಬ್ಬರ ಹಾಕುತ್ತಾರೆ ಬಯೋ ಡೈಜೆಸ್ಟ್ ಮೂಲಕ ಗೊಬ್ಬರವನ್ನು ಮರಗಳಿಗೆ ಹಾಕುತ್ತಾರೆ ತೆಂಗಿನ ಹೆಡೆಯನ್ನು ಚಾಪ್ ಕಟರ್ ಗೆ ಹಾಕಿ ಪುಡಿ ಮಾಡುತ್ತಾರೆ ಮೊದಲು ಒಂದು ತೊಟ್ಟಿಯಲ್ಲಿ ಸಗಣಿ ಹಾಕಿ ನಂತರ ಅದಕ್ಕೆ ಪುಡಿ ಮಾಡಿದ ಹೆಡೆಯನ್ನು ಹಾಕುತ್ತಾರೆ ನಂತರ ಅದಕ್ಕೆ ಮತ್ತೆ ಸಗಣಿ ಹಾಕುತ್ತಾರೆ ಎರೆ ಹುಳವನ್ನು ಬಿಡುತ್ತಾರೆ ಅದು ತಿಂದು ಗೊಬ್ಬರ ಆಗುತ್ತದೆ ಮಂಜಣ್ಣ ಅವರು ವರ್ಷದಲ್ಲಿ ಮೂವತ್ತು. ಲೋಡ್ ಎರೆಹುಳ ಗೊಬ್ಬರವನ್ನ ಮಾಡುತ್ತಾರೆ ತೊಟ್ಟಿಯಿಂದ ಗೊಬ್ಬರ ತೆಗೆಯುವಾಗ ಒಂದು ವಾರದ ಮುಂಚೆಯೇ ನೀರನ್ನು ಹಾಕುವುದು ಇಲ್ಲ .ಮಂಜಣ್ಣ ಅವರು ಎಂಟು ಟನ್ ಅಷ್ಟು ತೆಂಗಿನ ಕಾಯಿಯನ್ನು ಮಾರಾಟ ಮಾಡುತ್ತಾರೆ

ಒಂದು ಕ್ವಿಂಟಾಲ್ ಗೆ ಹದಿನೆಂಟು ಸಾವಿರ ಬೆಲೆ ಇರುತ್ತದೆ ಒಂದು ವರ್ಷದಲ್ಲಿ ಹನ್ನೆರಡು ಲಕ್ಷ ಆದಾಯ ಗಳಿಸುತ್ತಾರೆ ಖರ್ಚು ಇರುವುದಿಲ್ಲ ಬದಲಾಗಿ ಲಾಭವೇ ಜಾಸ್ತಿ ಇರುತ್ತದೆ ಗರಿಷ್ಟ ಎರಡು ಲಕ್ಷ ಖರ್ಚು ಬರುತ್ತದೆ ಕೊಬ್ಬರಿ ಸಿಪ್ಪೆಯಿಂದಲೂ ಸಹ ಹಣ ಬರುತ್ತದೆ ತೆಂಗಿನ ಕಾಯಿ ಚಿಪ್ಪಿನಿಂದ ಎಂಬತ್ತು ಸಾವಿರ ಆದಾಯ ಗಳಿಸುತ್ತಾರೆ ಹೀಗೆ ಸಾವಯುವ ಕೃಷಿಯ ಮೂಲಕ ಅಧಿಕ ಲಾಭವನ್ನು ಗಳಿಸಬಹುದು.

Leave A Reply

Your email address will not be published.