ಹುಳುಕಡ್ಡಿ ಚರ್ಮದ ಸಮಸ್ಯೆ ನಿವಾರಿಸುವ ಅತಿಸುಲಭ ಮನೆಮದ್ದು ಇಲ್ಲಿದೆ

0 95

ಚರ್ಮದ ಮೇಲಿನ ಹುಳುಕಡ್ಡಿ ನೋಡಲು ಸ್ವಲ್ಪ ವಿಚಿತ್ರವಾಗಿರುತ್ತದೆ. ಪುಟ್ಟ ಮಕ್ಕಳಂತೂ ಕೆರೆದೂ ಕೆರೆದೂ ಹುಣ್ಣು ಮಾಡಿಕೊಳ್ಳುತ್ತಾರೆ. ನಿಮ್ಮ ಕೋಮಲ ತ್ವಚೆಯ ಸುಂದರತೆ ಹಾಳಾಗುತ್ತದೆ ಆದ್ದರಿಂದ ಈ ಕಾಯಿಲೆಗೆ ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು.

ಆಪಲ್ ಸೈಡರ್ ವಿನೆಗರ್ ನಲ್ಲಿ ಆಂಟಿ ಫಂಗಲ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಫಂಗಸ್ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಪಡೆದಿರುತ್ತದೆ. ಹುಳುಕಡ್ಡಿ ಸಮಸ್ಯೆ ಕೂಡ ಫಂಗಸ್ ನಿಂದ ಉಂಟಾಗುವ ಕಾರಣ ಆಪಲ್ ಸೈಡರ್ ವಿನಿಗರ್ ಅನ್ನು ಇದರ ನಿವಾರಣೆಗೆ ಉಪಯೋಗಿಸಬಹುದು. ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ಡೈಲ್ಯೂಟ್ ಮಾಡದೆ ಇರುವ ವಿನೆಗರ್ ನಲ್ಲಿ ಅದ್ದಿ ಹುಳುಕಡ್ಡಿ ಉಂಟಾಗಿರುವ ಪ್ರದೇಶದ ಮೇಲೆ ನಿಧಾನವಾಗಿ ಉಜ್ಜಿ ಪ್ರತಿ ದಿನ ಮೂರು ಬಾರಿ ಹೀಗೆ ಮಾಡುವುದರಿಂದ ಕೆಲವು ದಿನಗಳಲ್ಲಿ ಹುಳುಕಡ್ಡಿ ಮಾಯವಾಗುತ್ತದೆ.

ಅಲೋವೆರಾ ಮನುಷ್ಯನ ದೇಹದ ಆರೋಗ್ಯಕ್ಕೆ ಬಹಳಷ್ಟು ಆಯಾಮಗಳಲ್ಲಿ ಪ್ರಯೋಜನಕಾರಿಯೆಂದು ದಿನೇ ದಿನೇ ಸಂಶೋಧನೆಗಳಲ್ಲಿ ಸಾಬೀತಾಗುತ್ತಲೇ ಇದೆ. ಏಕೆಂದರೆ ಇದರಲ್ಲಿ ಹಲವಾರು ಪೌಷ್ಟಿಕ ಸತ್ವಗಳ ಜೊತೆಗೆ ಚರ್ಮಕ್ಕೆ ಮುಖ್ಯವಾಗಿ ಬೇಕಾಗಿರುವ ಆಂಟಿ ಸೆಪ್ಟಿಕ್ ಅಂಶಗಳು ಸಹ ಸೇರಿವೆ. ಇನ್ನು ಆಂಟಿ ಫಂಗಲ್, ಆಂಟಿ ಬ್ಯಾಕ್ಟರಿಯಲ್ ಮತ್ತು ಆಂಟಿ – ವೈರಲ್ ಗುಣ ಲಕ್ಷಣಗಳು ಸಹ ಅಲೋವೆರಾದಲ್ಲಿವೆ ಎಂದು ಸಂಶೋಧನೆಯೊಂದು ತಿಳಿಸಿದೆ. ಹುಳುಕಡ್ಡಿ ಉಂಟಾಗಿರುವ ಜಾಗಕ್ಕೆ ಪ್ರತಿ ದಿನ 3 ರಿಂದ 4 ಬಾರಿ ಅಲೋವೆರಾ ಗಿಡದ ಜೆಲ್ ಹಚ್ಚಿ. ಅಲೋವೆರಾ ಜೆಲ್ ನಲ್ಲಿ ಚರ್ಮವನ್ನು ತಂಪಾಗಿಸುವ ಗುಣಲಕ್ಷಣಗಳಿದ್ದು ಚರ್ಮದ ಕೆರೆತ ಮತ್ತು ಊತವನ್ನು ಕಡಿಮೆ ಮಾಡುವ ಶಕ್ತಿಯಿದೆ.

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಸೋಂಕು ನಿವಾರಕ ಎಂದು ಕರೆಯುತ್ತಾರೆ. ಹಲವಾರು ಬಗೆಯ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಈಗಾಗಲೇ ಗುಣಪಡಿಸಿ ಯಶಸ್ಸು ಕಂಡಿರುವ ಬೆಳ್ಳುಳ್ಳಿಯನ್ನು ಆಯುರ್ವೇದ ಪದ್ಧತಿಯಲ್ಲಿ ಸಹ ಬಹಳ ಹಿಂದಿನಿಂದಲೇ ಬಳಸುತ್ತ ಬಂದಿದ್ದಾರೆ. ಹುಳುಕಡ್ಡಿ ನಿವಾರಣೆಗೆ ಮೊದಲು ಬೆಳ್ಳುಳ್ಳಿ ಎಸಳುಗಳನ್ನು ಚೆನ್ನಾಗಿ ಕುಟ್ಟಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಹಚ್ಚಬೇಕು.ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು, ಬಿಸಿನೀರಿನಲ್ಲಿ ಉಪ್ಪಿನ ಮಿಶ್ರಣ ಮಾಡಿ ಅದರಿಂದ ಹುಳು ಕಡ್ಡಿಯನ್ನು ತೊಳೆಯಬೇಕು. ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಯನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತೇವೆ.

ಅದರಂತೆ ಫ್ಯಾಟಿ ಆಮ್ಲಗಳು ಸೇರಿರುವ ತೆಂಗಿನ ಎಣ್ಣೆಯಲ್ಲಿ ವಿಶೇಷವಾದ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವಂತಹ ಅದ್ಬುತ ಶಕ್ತಿ ಇದೆ. ಕೆಲವು ಸಂಶೋಧನೆಗಳು ಹೇಳುವ ಹಾಗೆ ತೆಂಗಿನ ಎಣ್ಣೆ ಚರ್ಮದ ವ್ಯಾಧಿಗಳು ಮತ್ತು ಹಲವಾರು ಸೋಂಕುಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹುಳುಕಡ್ಡಿ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಒಂದು ದಿನಕ್ಕೆ ಮೂರು ಬಾರಿ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪಪ್ಪಾಯಿ ಹಣ್ಣಿನ ರಸವನ್ನು ಗಾಯದ ಜಾಗಕ್ಕೆ ಹಚ್ಚಬೇಕು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.