ಮಕರ ರಾಶಿಯವರಿಗೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕಷ್ಟಗಳು ಕಳೆದು ನೆಮ್ಮದಿ ಸಿಗಲಿದೆ ಯಾಕೆಂದರೆ..

0 32,821

Capricorn Horoscope October 2023 Prediction: ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. 3ನೇ ತಾರೀಕು ಕುಜ ಗ್ರಹ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, 17ನೇ ತಾರೀಕಿನಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. 18ನೇ ತಾರೀಕಿನಂದು ಬುಧ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..

ಗ್ರಹಗಳ ಸಂಚಾರ ಹೇಗಿರುತ್ತದೆ ಎಂದು ನೋಡುವುದಾದರೆ, ಸೂರ್ಯದೇವ 9ನೇ ಮತ್ತು 10ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಕುಜನ ಸಂಚಾರ 10ನೇ ಮನೆಯಲ್ಲಿ, ಬುಧನ ಸಂಚಾರ 9ನೇ ಮತ್ತು 10ನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ, ಗುರುವಿನ ಸಂಚಾರ 4ನೇ ಮನೆಯಲ್ಲಿ ಇರುತ್ತದೆ. ಶುಕ್ರನ ಸಂಚಾರ 8ನೇ ಮನೆಯಲ್ಲಿರುತ್ತದೆ, ಶನಿದೇವ 2ನೇ ಮನೆಯಲ್ಲಿ, ರಾಹು 4ನೇ ಮನೆ, ಕೇತು 10ನೇ ಮನೆಯಲ್ಲಿ ಸಂಚಾರ ಮಾಡಲಿದ್ದಾರೆ.

ಮಕರ ರಾಶಿಯ ಅಕ್ಟೋಬರ್ ತಿಂಗಳ ಭವಿಷ್ಯವನ್ನು ಎರಡು ವಿಭಾಗವಾಗಿ ಮಾಡಬೇಕಾಗುತ್ತದೆ, ಗ್ರಹಣಕ್ಕಿಂತ ಮೊದಲು ಹಾಗೆಯೇ ಗ್ರಹಣವಾದ ನಂತರ. ಗ್ರಹಣ ನಡೆಯುವುದು ತಿಂಗಳ ಕೊನೆಯಲ್ಲಿ, ಹಾಗಾಗಿ ಆ ಪರಿಣಾಮ ನವೆಂಬರ್ ತಿಂಗಳ ಮೇಲು ಬೀರುತ್ತದೆ. ಗ್ರಹಣದ ಬಳಿಕ ಅದರ ಪರಿಣಾಮ 15 ದಿನಗಳ ವರೆಗು ಇರಲಿದ್ದು, ಆ ಸಮಯ ಕಷ್ಟಕರವಾಗಿ ಇರುತ್ತದೆ. ಅಕ್ಟೋಬರ್ ತಿಂಗಳ ಶುರುವಿನಲ್ಲಿ ನಿಮಗೆ ಒಳ್ಳೆಯ ಸೂಚನೆಗಳು ಸಿಗುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ, ಯಶಸ್ಸು ನಿಮ್ಮದಾಗುತ್ತದೆ.

ಅಕ್ಟೋಬರ್ ನಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಈ ವೇಳೆ ಆಸ್ತಿ ಖರೀದಿ ಅಥವಾ ಮಾರಾಟ ಮಾಡಿ ಅದರ ದುಡ್ಡನ್ನು ಮತ್ತೊಂದೆಡೆ ಇನ್ವೆಸ್ಟ್ ಮಾಡಬೇಕು ಎಂದರೆ ಇದು ಸರಿಯಾದ ಸಮಯ. ಈ ವೇಳೆ ಒಳ್ಳೆಯ ಫಲ ಸಿಗುತ್ತದೆ, ಕೆಲಸಗಳು ಅಭಿವೃದ್ಧಿಯಾಗಿ, ಕೆಲಸದಲ್ಲಿ ಗೌರವ ಸಿಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ, ಈ ವೇಳೆ ಒಳ್ಳೆಯ ಸ್ಥಿತಿ ತಲುಪುತ್ತೀರಿ. ಈ ವೇಳೆ ನಿಮಗೆ ಮಾನಸಿಕವಾಗಿ ಸುಖ ಮತ್ತು ಸಂತೋಷ ಸಿಗುತ್ತದೆ.

ಶತ್ರುಗಳ ವಿರುದ್ಧ ಜಯ ಸಿಗುತ್ತದೆ, ಐಷಾರಾಮಿ ವಸ್ತುಗಳ ಖರೀದಿ ಮಾಡುತ್ತೀರಿ. ವಾಹನ ಖರೀದಿಗೆ ಇದು ಸೂಕ್ತ ಸಮಯ, ಹಿತಶತ್ರುಗಳ ಕಾಟ ಕಡಿಮೆ ಆಗುತ್ತದೆ. ಬೆಳ್ಳಿ ಮತ್ತು ಬಂಗಾರದ ಮೇಲೆ ಹೂಡಿಕೆ ಮಾಡುವವರಿಗೆ, ಟ್ರೇಡಿಂಗ್, ಶೇರ್ ಮಾರ್ಕೆಟ್ ಮೇಲೆ ಹೂಡಿಕೆ ಮಾಡುವವರಿಗೆ, ಡಾಕ್ಟರ್ಸ್, ಇಂಜಿನಿಯರ್ ಗಳು, ಔಷಧೀಯ ಉತ್ಪನ್ನ ಮತ್ತು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಪ್ರೇಮಿಗಳಿಗೆ ಸಕ್ಸಸ್ ಸಿಗುತ್ತದೆ, ಈ ರೀತಿ ಸುಖ ಸಂತೋಷ ಇರುತ್ತದೆ..

Capricorn Horoscope October 2023 Prediction

ಆದರೆ ಆರೋಗ್ಯದಲ್ಲಿ ಪಿತ್ತ ಮತ್ತು ಕಫದಿಂದ ತೊಂದರೆ ಆಗಬಹುದು. ಆಹಾರದ ವಿಚಾರದಲ್ಲಿ ಜಾಗ್ರತೆಯಿಂದ ಇದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಿ. ಕೆಲಸ ಮಾಡುತ್ತಿರುವವರಿಗೆ ಸ್ಥಾನ ಬದಲಾವಣೆ ಆಗುತ್ತದೆ, ಬೇರೆ ಕೆಲಸಕ್ಕೆ ಟ್ರೈ ಮಾಡುತ್ತಿರುವವರಿಗೆ ಒಳ್ಳೆಯ ಕಡೆ ಹೊಸ ಕೆಲಸ ಸಿಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಕಷ್ಟಗಳು ದೂರವಾಗಿ ನೆಮ್ಮದಿ ಸಿಗುತ್ತದೆ.

ಮಕರ ರಾಶಿಯವರಿಗೆ ಈಗ ಕೊನೆಯ ಹಂತದ ಸಾಡೇಸಾತಿ ನಡೀತಾ ಇದೆ, ಇದರ ಬಗ್ಗೆ ಜನ್ಮ ಜಾತಕದಿಂದ ತಿಳಿದುಕೊಂಡು ನಂತರ ಪರಿಹಾರ ಮಾಡಿಕೊಳ್ಳಿ. ಯಾರ ಜೀವನದಲ್ಲಿ ಸಾಡೇಸಾತಿ ಎರಡನೇ ಸಾರಿ ಬರುತ್ತೋ, ಅವರಿಗೆ ಒಳ್ಳೆಯ ಯೋಗ, ಬೆಳವಣಿಗೆ, ಆದಾಯ, ಕೀರ್ತಿ ಪ್ರತಿಷ್ಠೆ ಎಲ್ಲವನ್ನು ತಂದುಕೊಡುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಉತ್ತಮ ಲಾಭ ಇರುತ್ತದೆ. ಆದರೆ ಮೊದಲ ಅಥವಾ ಮೂರನೇ ಸಾರಿ ಸಾಡೇಸಾತಿ ನಡೆಯುತ್ತಿದ್ದರೆ ಅದರಿಂದ ಕಷ್ಟಗಳು ಇರುತ್ತದೆ. ಹಾಗಾಗಿ ಜಾತಕವನ್ನು ತೋರಿಸಿ ಸಾಡೇಸಾತಿಯ ಬಗ್ಗೆ ತಿಳಿದುಕೊಳ್ಳಬಹುದು.

ಒಂದು ವೇಳೆ ನಿಮ್ಮ ಜಾತಕದಲ್ಲಿ ಶನಿದೇವರು ಶುಭ ಸ್ಥಾನದಲ್ಲಿ ಇದ್ದರೆ, ಶನಿದೇವರಿಂದ ನಿಮಗೆ ಯಾವುದೇ ಸಮಸ್ಯೆ ಅಗುವುದಿಲ್ಲ.. ಮಕರ ರಾಶಿಯವರಿಗೆ ಪರಿಹಾರ ಏನು ಎಂದು ನೋಡುವುದಾದರೆ ಮೊದಲನೆಯದಾಗಿ ನೀವು ಸಾಮಾಜಿಕ ಪರಿಹಾರ ಮಾಡಿಕೊಳ್ಳಬೇಕು, ಅಂದರೆ ಈ ಭೂಮಿ, ಪರಿಸರ ಎಲ್ಲವನ್ನು ಉಳಿಸುವ, ಬೆಳೆಸುವ ಕೆಲಸ ಮಾಡಬೇಕು. ಇನ್ನು ಆಧ್ಯಾತ್ಮಿಕ ಪರಿಹಾರದ ಬಗ್ಗೆ ಹೇಳುವುದಾದರೆ, ಉತ್ತರಾಶಾಢ ನಕ್ಷತ್ರದ 2ನೇ, 3ನೇ ಮತ್ತು 4ನೇ ಪಾದದಲ್ಲಿ ಜನಿಸಿರುವವರು ಆದಿತ್ಯಹೃದಯ ಸ್ತೋತ್ರವನ್ನ ಪ್ರತಿದಿನ ಪಠಣೆ ಮಾಡಿ.

ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರು ಪ್ರತಿದಿನ ಲಕ್ಷ್ಮಿವೆಂಕಟೇಶ್ವರ ದೇವರ ಪೂಜೆ, ಆರಾಧನೆ ಮಾಡಿ, ಪ್ರತಿದಿನ ಸ್ತೋತ್ರ ಪಠಣೆ ಮಾಡಿ. ಧನಿಷ್ಠ ನಕ್ಷತ್ರದ 1ನೇ ಮತ್ತು 2ನೇ ಪಾದದಲ್ಲಿ ಹುಟ್ಟಿದವರು ಅಭಿರಾಮಿ ದೇವಿಯ ಪೂಜೆ, ಸ್ತೋತ್ರ ಪಠಣೆ ಮಾಡಿ ಇದರಿಂದ ದೇವರ ಆಶೀರ್ವಾದ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.