ನಾವು ಜೀವನದಲ್ಲಿ ಕೆಲವು ವರ್ತನೆಯಿಂದ ನಮ್ಮ ಸಂತೋಷವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಆದ್ದರಿಂದ ಬೇಸರವಾದಾಗ ಜೀವನದಲ್ಲಿ ನೊಂದಾಗ ಬುದ್ಧನ ಕೆಲವು ಮಾತುಗಳನ್ನು ತಪ್ಪದೇ ಪಾಲಿಸಬೇಕು. ಹಾಗಾದರೆ ಬುದ್ಧನ ಸುಖ ಜೀವನದ ಸೂತ್ರಗಳನ್ನು ಈ ಲೇಖನದ ಮೂಲಕ ತಿಳಿಯೋಣ

ಜೀವನದಲ್ಲಿ ಬುದ್ಧನ ಮಾತುಗಳನ್ನು ಪಾಲಿಸಿದರೆ ಒಳ್ಳೆಯದಾಗುತ್ತದೆ. ಅವು ಜೀವನದಲ್ಲಿ ನೆಮ್ಮದಿಯಾಗಿರಲು ಸೂತ್ರದಂತಿದೆ. ಎಲ್ಲರೂ ಒಳ್ಳೆಯವರಾಗಿರಬೇಕು ಆದರೆ ಅದನ್ನು ಸಾಬೀತುಪಡಿಸುವಲ್ಲಿಯೆ ಜೀವನವನ್ನು ಹಾಗೂ ಸಮಯವನ್ನು ಕಳೆಯಬಾರದು. ನಾವೇ ನಮ್ಮ ಜೀವನದ ಚಾಲಕರಾಗಿರಬೇಕು ಆ ಚಾಲನೆಯ ಅಧಿಕಾರವನ್ನು, ಸ್ಥಾನವನ್ನು ಬೇರೆಯವರು ಕದಿಯಲು ಅವಕಾಶ ಕೊಡಬೇಡಿ.

ಎಂದಿಗೂ ಬೇರೆಯವರ ಬಳಿ ಕ್ಷಮೆ ಕೇಳಬೇಡಿ ಏಕೆಂದರೆ ಅವರೇ ನಿಮ್ಮ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಯಾಕೆ ಕ್ಷಮೆ ಕೇಳಬೇಕು. ನಾವು ಒಂಟಿಯಾಗಿದ್ದರೆ ಅದರ ಅರ್ಥ ನಮಗೆ ಯಾರೂ ಇಲ್ಲ ಎಂದಲ್ಲ, ಎಲ್ಲ ವಿಷಯಗಳನ್ನು ಒಬ್ಬರೇ ಎದುರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಅರ್ಥ.

ಎಲ್ಲೇ ಆಗಲಿ ನಮ್ಮ ವ್ಯಕ್ತಿತ್ವ ಒಂದೇ ರೀತಿ ಇರಬೇಕು ಅದು ಸ್ವಂತ ವಿಷಯವಾಗಲಿ, ಸಾರ್ವಜನಿಕವಾಗಲಿ, ಖಾಸಗಿಯಾಗಲಿ. ಹಣ ಮನುಷ್ಯರ ಜೀವನದ ಒಂದು ಕೆಟ್ಟ ಸಂಶೋಧನೆ ಮತ್ತು ಅದು ನಂಬಿಕೆಗೆ ಅವನು ಅರ್ಹನೋ, ಅಲ್ಲವೋ ಅಥವಾ ಅವನ ಸ್ವಭಾವವನ್ನು ಪರೀಕ್ಷಿಸುತ್ತದೆ.

ಈ ಜಗತ್ತಿನ ತುಂಬ ರಾಕ್ಷಸರೇ ತುಂಬಿದ್ದಾರೆ ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿರುತ್ತಾರೆ. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಲು ಶಿಕ್ಷಣ ಕೊಡಿಸಬೇಡಿ, ಜೀವನದಲ್ಲಿ ಖುಷಿಯಾಗಿರಲು ಹೇಗೆ ಇರಬೇಕು ಎಂದು ಹೇಳಿಕೊಡಿ ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಬೆಲೆಯನ್ನು ತಿಳಿಯುವ ಜೊತೆಗೆ ಅದರ ಮಹತ್ವವನ್ನು ತಿಳಿಯುತ್ತಾರೆ.

ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸುತ್ತಾರೋ ಅಷ್ಟು ನೆಮ್ಮದಿಯಿಂದ ಇರುತ್ತೀರಿ. ಬಲಹೀನ ವ್ಯಕ್ತಿಗಳು ಪ್ರತೀಕಾರ ತೆಗೆದುಕೊಳ್ಳುತ್ತಾರೆ, ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ, ಬುದ್ಧಿವಂತ ವ್ಯಕ್ತಿಗಳು ನಿರ್ಲಕ್ಷ ಮಾಡುತ್ತಾರೆ. ನಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆಸಿಕೊಂಡು ಕೊರಗಬಾರದು, ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಆಗ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ.

ನಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನಾವೇ ಕಾರಣೀಕರ್ತರಾಗಬೇಕು, ಬೇರೆಯವರು ನಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ ಎಂದು ಅಂದುಕೊಂಡರೆ ಅದು ನಿರಾಸೆಯಿಂದ ಕೊನೆಗೊಳ್ಳುತ್ತದೆ. ನಾವು ಸತ್ಯವನ್ನು ಹೇಳುವವರನ್ನು ಗೌರವಿಸಬೇಕು. ನಾವು ಜೀವನದಲ್ಲಿ ಗಿಣಿಯ ರೀತಿ ಇರಬಾರದು ಬದಲು ಹದ್ದುಗಳಂತೆ ಇರಬೇಕು. ಗಿಣಿ ಹೆಚ್ಚು ಮಾತನಾಡುತ್ತದೆ ಆದರೆ ಹದ್ದು ಶಾಂತವಾಗಿ ಇರುತ್ತದೆ ಆದರೆ ಅದಕ್ಕೆ ಆಕಾಶವನ್ನು ಮುಟ್ಟುವ ಯೋಚನಾ ಶಕ್ತಿ ಇರುತ್ತದೆ.

ಜೀವನದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು. ಯಾವುದೋ ಒಂದು ಅಮೂಲ್ಯವಾಗಿರುವುದು ಕಳೆದುಕೊಳ್ಳುತ್ತೀರಿ ಜೊತೆಗೆ ಏನೋ ಒಂದು ಉತ್ತಮವಾಗಿರುವುದನ್ನು ಪಡೆದುಕೊಳ್ಳುತ್ತೀರಿ. ಸಾಮಾನ್ಯವಾಗಿ ನಾವು ನಮ್ಮ ತೊಂದರೆಗಳ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಆದರೆ ಅದು ತಪ್ಪು ಅದು ಹುಚ್ಚು ಛಟವಾಗಿದ್ದು, ಅಂತಹ ಅಭ್ಯಾಸವನ್ನು ಬಿಡಬೇಕು, ಕೇವಲ ಸಂತೋಷವನ್ನು ಹೇಳಿಕೊಳ್ಳಬೇಕು.

ಯಾವತ್ತೂ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದಬಾರದು ಏಕೆಂದರೆ ಅದು ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ನಿರೀಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ. ಅತಿಯಾದ ಯೋಚನೆ ಮಾಡುವುದರಿಂದ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖವನ್ನು ತರುತ್ತದೆ. ಇವುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *