ಬ್ಯಾಂಕ್ ಎಲ್ಲಿದೆ ಅನ್ನೋದೆ ಗೊತ್ತಿಲ್ಲ, ಸಾಲ ಪಡೆದಿಲ್ಲ ಈ ಮಹಿಳೆ ಮನೆಗೆ ಬಂತು 2 ಕೋಟಿ ಸಾಲದ ನೋಟಿಸ್

0 3

ನಾವು ಬ್ಯಾಂಕ್ ನಲ್ಲಿ ಸಾಲ ಪಡೆದರೆ ಇಷ್ಟು ಸಮಯ ಎಂದು ಇರುತ್ತದೆ ಅಷ್ಟರಲ್ಲಿ ಬಡ್ಡಿ, ಅಸಲು ಹಣವನ್ನು ಪಾವತಿಸಬೇಕು. ಒಂದು ವೇಳೆ ಹಣ ಪಾವತಿಸದೆ ಇದ್ದರೆ ಮನೆಗೆ ಬ್ಯಾಂಕ್ ನಿಂದ ನೊಟೀಸ್ ಬರುತ್ತದೆ ಇದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಬೆಂಗಳೂರಿನ ಮಹಿಳೆಯೊಬ್ಬರು ಸಾಲ ಮಾಡದೆ ಇದ್ದರೂ ಮನೆಗೆ ಬ್ಯಾಂಕ್ ನಿಂದ ನೊಟೀಸ್ ಬಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಲ ಪಡೆದು ನಿಗದಿತ ಸಮಯದಲ್ಲಿ ಬಡ್ಡಿ ಕಟ್ಟಿಲ್ಲದಿದ್ದರೆ ಮನೆಗೆ ಬ್ಯಾಂಕ್​ನಿಂದ ನೋಟಿಸ್​ ಬರುವುದು ಸಹಜ ಆದರೆ ಬೆಂಗಳೂರು ನಗರದಲ್ಲಿ ಸಾಲ ಮಾಡದೆ ಇದ್ದರು ಸಾಲದ ಬಡ್ಡಿ ಕಟ್ಟಲು ಮನೆಗೆ ನೊಟೀಸ್ ಬಂದಿದೆ. ಚಂಪಾಕಾವತಿ ಮಹಿಳೆಯೊಬ್ಬರ ಮನೆಗೆ ನೀವು ಸಾಲ ತೆಗೆದುಕೊಂಡಿದ್ದೀರಿ ಅದಕ್ಕೆ ಸಾಲದ ಅಸಲು ಮತ್ತು ಬಡ್ಡಿ ಸೇರಿ ಬರೋಬ್ಬರಿ ಎರಡುವರೆ ಕೋಟಿ ರೂಪಾಯಿಗಳನ್ನು ಕಟ್ಟಬೇಕು ಎಂದು ನೋಟಿಸ್​ ಬಂದಿದೆ.

ಶ್ರೀಗುರು ರಾಘವೇಂದ್ರ ಬ್ಯಾಂಕ್ ನಿಂದ ಚಂಪಾಕಾವತಿ ಎಂಬ ಮಹಿಳೆಗೆ ಈ ನೊಟೀಸ್ ಬಂದಿದೆ ಸಾಲ ಪಡೆದು ನೊಟೀಸ್ ಬಂದರೆ ಸರಿ ಆದರೆ ಒಂದು ರೂಪಾಯಿ ಸಾಲ ಮಾಡದೆ 2 ಕೋಟಿ ರೂಪಾಯಿ ಸಾಲದ ಬಗ್ಗೆ ನೊಟೀಸ್ ಮನೆಗೆ ಬಂದಾಗ ಮಹಿಳೆ ಬೆಚ್ಚಿ ಬಿದ್ದಿದ್ದಾರೆ. ಬ್ಯಾಂಕ್ ನಲ್ಲಿ ಯಾವುದೆ ಲೋನ್ ಪಡೆದಿಲ್ಲ ಅದಕ್ಕೂ ಮುಖ್ಯವಾಗಿ ಶ್ರೀಗುರು ರಾಘವೇಂದ್ರ ಬ್ಯಾಂಕ್ ಎಲ್ಲಿದೆಯೊ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಚಂಪಾಕಾವತಿ ಅವರು ಹೇಳಿದ್ದಾರೆ.

ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ನಿಂದ 35 ಲಕ್ಷ ಲೋನ್ ಪಡೆಯಲಾಗಿದ್ದು 10 ವರ್ಷಗಳ ಬಳಿಕ ಬಡ್ಡಿ ಎಲ್ಲಾ ಸೇರಿ ಎರಡುವರೆ ಕೋಟಿ ಲೋನ್ ಮೊತ್ತ ಕಟ್ಟುವಂತೆ ಮಹಿಳೆಗೆ ನೊಟೀಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಬ್ಯಾಂಕ್ ಆಡಳಿತ ಮಂಡಳಿಯ ಅವ್ಯವಹಾರಕ್ಕೆ ಮತ್ತೊಂದು ಉದಾಹರಣೆಯಾಗಿದ್ದು ಬ್ಯಾಂಕ್​ ಇಂತಹ ಅದೆಷ್ಟೊ ಅವ್ಯವಹಾರಗಳಲ್ಲಿ ಭಾಗಿಯಾಗಿದೆ ಎಂಬ ಅನುಮಾನಗಳು ಹುಟ್ಟುತ್ತಿವೆ.

ಈ ವಿಷಯದ ಕುರಿತು ಪೊಲೀಸ್ ಕಮಿಷನರ್ ಗೆ ಬ್ಯಾಂಕ್ ವಿರುದ್ಧ ಅವರು ದೂರು ನೀಡಿದ್ದಾರೆ. ಬೇರೆಯವರ ಹೆಸರಿನಲ್ಲಿ ಅವ್ಯವಹಾರ ನಡೆಸದಂತೆ ಭದ್ರತೆ ಒದಗಿಸಿದರು ಅವ್ಯವಹಾರ ಕಡಿಮೆ ಆಗಿಲ್ಲ ಇದು ವಿಷಾದನೀಯ ಸಂಗತಿ. ಬ್ಯಾಂಕ್ ನಿಂದ ಸಾಲ ಪಡೆಯುವಾಗ ಎಚ್ಚರದಿಂದಿರಿ ಹಾಗೆಯೆ ಬ್ಯಾಂಕ್ ವ್ಯವಹಾರದಲ್ಲಿ ಇನ್ನೂ ಹೆಚ್ಚಿನ ಭದ್ರತೆ ಒದಗಿಸಬೇಕಾಗಿದೆ. ನಿಮ್ಮ ಎಟಿಎಮ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳ ಬಗ್ಗೆ ಮಾಹಿತಿಯನ್ನು ಅಪರಿಚಿತರಿಗೆ ಕೊಡಬೇಡಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.