ಒಂದು ದಿನ ಗೌತಮ ಬುದ್ಧ ತನ್ನ ಶಿಷ್ಯರ ಜೊತೆ ಇರುವಾಗ ಅಲ್ಲಿಗೆ ಒಬ್ಬ ವ್ಯಕ್ತಿ ಬಂದು ತುಂಬಾ ದುಃಖದಲ್ಲಿ ಅಳುತ್ತಾನೆ. ಆಗ ಬುದ್ಧ ಆ ವ್ಯಕ್ತಿಯನ್ನು ಉದ್ದೇಶಿಸಿ ಸಮಾಧಾನದ ಮಾತುಗಳನ್ನು ಆಡಿ ಸಮಾಧಾನಿಸುತ್ತಾರೆ. ಹಾಗೂ ಏನಾಯಿತು ಏಕೆ ಇಷ್ಟೊಂದು ದುಃಖ ಪಡುತ್ತಿರುವೆ ಎಂದು ಕೇಳುತ್ತಾರೆ. ಆಗ ಆ ವ್ಯಕ್ತಿ ಬುದ್ಧನ ಬಳಿ ಏನೆಂದು ಹೇಳಲಿ ಸ್ವಾಮಿ ನನ್ನ ಬಳಿ ಸ್ವಲ್ಪವೂ ನೆಮ್ಮದಿ ಸಮಾಧಾನ ಶಾಂತಿ ಎನ್ನುವುದೇ ಇಲ್ಲ ಆಗಿದೆ ನನ್ನ ಜೀವನದಲ್ಲಿ. ಜೀವನ ಪೂರ್ತಿ ಯೋಚನೆಯೇ ಆಗಿದೆ ಎಂದು ಹೇಳುತ್ತಾನೆ. ಆಗ ಬುದ್ಧ ಅವನನ್ನು ಸಮಾಧಾನ ಮಾಡಿ ಈ ರೀತಿಯಾಗಿ ಹೇಳುತ್ತಾರೆ.

ಏನೂ ದುಕ್ಕಿಸಬೇಡ ಭಯ ಪಡಬೇಡ ಇವತ್ತಿನಿಂದ ನೀನು ನಾನು ಹೇಳಿದಂತೆ ಕೇಳು ಆಗ ಜೀವನದಲ್ಲಿ ನಿನ್ನ ಮನಸ್ಸಿಗೆ ಸಮಾಧಾನ ನೆಮ್ಮದಿ ಸಂತೋಷ ಎಲ್ಲವೂ ಸಿಗುತ್ತದೆ ಎಂದು. ಆಗ ಆ ವ್ಯಕ್ತಿ ಬುದ್ಧನ ಬಳಿ ಸರಿ ನೀವು ಹೇಳಿದಂತೆ ಮಾಡುತ್ತೇನೆ ನಾನು ಏನು ಮಾಡಬೇಕು ಎಂದು ಆತುರದಲ್ಲಿ ಕೇಳಿದಾಗ ಬುದ್ಧ ಹೇಳುತ್ತಾನೆ ಯಾರ ಬಳಿ ಆದರೂ ಎರಡು ಕಟ್ಟೆಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ನಿಮ್ಮ ಮನೆಯ ಒಳಗೆ ಕಟ್ಟಿ ಹಾಕು ಆಮೇಲೆ ನನ್ನ ಬಳಿ ಬಾ ಎಂದು ಹೇಳುತ್ತಾರೆ. ಆದರೆ ಬುದ್ಧ ಈ ರೀತಿ ಹೇಳಿದ್ದು ಯಾಕೆ ಎಂದು ಆ ವ್ಯಕ್ತಿಗೆ ಆಗಲೀ ಅಥವಾ ಬುದ್ಧನ ಶಿಷ್ಯರಿಗೆ ಆಗಲಿ ಅರ್ಥ ಆಗಲಿಲ್ಲ. ಆಮೇಲೆ ಕೆಲವು ದಿನಗಳ ನಂತರ ಆ ವ್ಯಕ್ತಿ ಮತ್ತೆ ಬುದ್ಧನ ಬಳಿ ಬರುತ್ತಾನೆ ದುಃಖದ ಛಾಯೆ ಹೊತ್ತು.

ಬುದ್ಧ ಆತನನ್ನು ನೋಡಿದ ಕೂಡಲೇ ಆ ವ್ಯಕ್ತಿಯ ಮುಖ ಕಳೆಗುಂದಿದ್ದನ್ನು ಕಂಡು ಕಾರಣ ಕೇಳುತ್ತಾರೆ. ಆಗ ಆ ವ್ಯಕ್ತಿ ಬುದ್ಧನಿಗೆ , ನೀವು ಹೇಳಿದ ಹಾಗೆಯೇ ಎರಡು ಕತ್ತೆಗಳನ್ನು ತೆಗೆದುಕೊಂಡು ಹೋಗಿ ಮನೆಯೊಳಗೆ ಕೂಡಿ ಹಾಕಿದೆ ಆದರೆ ಎರಡು ದಿನಗಳಿಂದ ರಾತ್ರಿ ಅವುಗಳಿಂದಾಗಿ ನಿದ್ರೆ ಇಲ್ಲದೆ ಒದ್ದಾಡುತ್ತಾ ಇದ್ದೇನೆ ಎಂದು ಹೇಳುತ್ತಾನೆ. ಆಗ ಬುದ್ಧ ಅವನನ್ನು ನೋಡಿ ನಿನ್ನ ಕಷ್ಟ ನನಗೆ ಅರ್ಥ ಆಯಿತು ಈಗ ನೀನು ಮನೆಗೆ ಹೋಗಿ ಆ ಎರಡೂ ಕತ್ತೆಗಳನ್ನು ಮನೆಯಿಂದ ಹೊರಗೆ ಬಿಡು ಆಮೇಲೆ ಒಂದು ವಾರ ಕಳೆದು ನನ್ನ ಬಳಿ ಬಾ ಎಂದು ಹೇಳಿ ಕಳುಹಿಸುತ್ತಾರೆ. ಈಗಲೂ ಸಹ ಆ ವ್ಯಕ್ತಿಗೆ ಹಾಗೂ ಬುದ್ಧನ ಶಿಷ್ಯರಿಗೆ ಬುದ್ಧ ಈ ರೀತಿ ಹೇಳಿದ್ದು ಯಾಕೆ ಎಂದು ಅರ್ಥ ಆಗಲಿಲ್ಲ.

ನಂತರ ಒಂದು ವಾರದ ಬಳಿಕ ಆ ವ್ಯಕ್ತಿ ಮತ್ತೆ ಬುದ್ಧನ ಬಳಿ ಬರುತ್ತಾನೆ ಆಗ ಅವನ ಮುಖದಲ್ಲಿ ಸ್ವಲ್ಪ ಸಮಾಧಾನ ಸಂತೋಷ ಇದ್ದಿತ್ತು. ಬುದ್ಧ ಕೇಳಿದಾಗ ಆ ವ್ಯಕ್ತಿ ಹೇಳುತ್ತಾನೆ ನಾನು ಮೊದಲು ನೀವು ಹೇಳಿದ ಹಾಗೇ ಕತ್ತೆಗಳನ್ನು ಮನೆಯ ಒಳಗೆ ಕೂಡಿ ಹಾಕಿದಾಗ ರಾತ್ರಿ ಇಡೀ ಅವುಗಳ ಕೂಗಿಗೆ ನಿದ್ರೆ ಬರುತ್ತಿರಲಿಲ್ಲ ಆದರೆ ನಂತರ ನೀವು ಹೇಳಿದ ಮೇಲೆ ಅವುಗಳನ್ನು ಮನೆಯಿಂದ ಹೊರಗೆ ಕಟ್ಟಿದೆ. ಅಷ್ಟರ ನಂತರ ಒಂದು ವಾರದಿಂದ ಬಹಳ ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದೇನೆ ಎಂದು ಹೇಳಿದಾಗ ಬುದ್ಧ ಈ ರೀತಿಯಾಗಿ ಹೇಳುತ್ತಾರೆ. ನಿನಗೆ ಕತ್ತೆಗಳನ್ನು ಮನೆಯ ಒಳಗೆ ಕಟ್ಟಿಹಾಕಿದ್ದಕ್ಕೆ ನಿದಿರೆ ಬರಲಿಲ್ಲ ಅದೆ ಕತ್ತೆಗಳನ್ನು ಮನೆಯ ಹೊರಗೆ ಕಟ್ಟಿ ಹಾಕಿದಾಗ ಚೆನ್ನಾಗಿ ನಿದ್ರೆ ಬಂತು ಆದರೆ ಈಗ ನಾನು ಹೇಳುವ ಮಾತುಗಳನ್ನು ಸರಿಯಾಗಿ ಕೇಳಿ ಅರ್ಥ ಮಾಡಿಕೋ ಇದರ ಪೂರ್ತಿ ಅರ್ಥವನ್ನು ಹೇಳುತ್ತೇನೆ , ನಾನಿಲ್ಲಿ ಕತ್ತೆಗಳನ್ನು ಎಂದು ಹೇಳಿದ್ದು ನಿನ್ನ ಮನಸ್ಸಿನಲ್ಲೀ ಇರುವ ಬೇಡದ ಯೋಚನೆಗಳು , ಸಮಸ್ಯೆಗಳು ಮನೇ ಎಂದು ಹೇಳಿದ್ದು ನಿನ್ನ ಮನಸ್ಸನ್ನು. ನೀನು ನಿನ್ನ ಮನಸ್ಸಿನಿಂದ ಬೇಡದ ವಿಚಾರಗಳು , ಸಮಸ್ಯೆಗಳೂ ಇವುಗಳನ್ನೆಲ್ಲ ತೆಗೆದುಬಿಡು ಅವು ಮನಸ್ಸಿನಲ್ಲಿಯೇ ಇದ್ದರೆ ನಿನ್ನ ಜೀವನವಿಡೀ ಅಶಾಂತಿ , ಯೋಚನೆಗಳಿಂದಲೆ ನೆಮ್ಮದಿ ಇಲ್ಲದೆ ಇರುತ್ತದೆ. ಆದರೆ ನಿನ್ನ ಮನಸ್ಸಿನ ಬೇಡದ ವಿಶಯಗಳನ್ನು ಮನಸ್ಸಿನಿಂದ ಹೊರ ಹಾಕಿದ ಆ ಕ್ಷಣದಿಂದ ನಿನ್ನ ಜೀವನದಲ್ಲಿ ನೆಮ್ಮದಿ ಸಂತೋಷ ಇರುತ್ತದೆ. ಯಾರೇ ಆಗಿದ್ದರೂ ಮನಸ್ಸಿನಲ್ಲಿ ಬೇಡವಾದ ಸಂಗತಿಗಳನ್ನು ಇಟ್ಟುಕೊಂಡು ಕೊರಗಬಾರದು ಮನಸ್ಸಿನಿಂದ ಅವುಗಳನ್ನು ಹೊರ ಹಾಕಿದಾಗ ಮಾತ್ರ ನೆಮ್ಮದಿಯ ಜೀವನ ಲಭಿಸುತ್ತದೆ.

Leave a Reply

Your email address will not be published. Required fields are marked *