ಜೂನ್ ತಿಂಗಳು ಯಾವ ರಾಶಿಯವರ ಪಾಲಿಗೆ ಅದೃಷ್ಟದ ತಿಂಗಳು ಆಗಲಿದೆ?

0 0

ಪ್ರತಿಯೊಂದು ರಾಶಿಯ ನಕ್ಷತ್ರ ಅನುಸಾರವಾಗಿ ಆ ರಾಶಿಯ ಗ್ರಹಗತಿಗಳ ಬಗ್ಗೆ ನಾವು ದಿನ ವರ ಹಾಗೂ ಮಾಸಿಕ ಭವಿಷ್ಯವನ್ನು ಗೋಚರ ಫಲದ ಮೂಲಕ ತಿಳಿಯಬಹುದು ಇಂದಿನ ಈ ಅಂಕಣ ಅಲ್ಲಿ ಜೂನ್ ತಿಂಗಳ ಹನ್ನೆರಡು ರಾಶಿ ಶುಭ ಹಾಗೂ ಅಶುಭ ಬಗ್ಗೆ ನೋಡೋಣ ಬನ್ನಿ

ಮೇಷ ರಾಶಿಯವರಿಗೆ ಜೂನ್ ತಿಂಗಳಲ್ಲಿ ಮೊದಲ ಅರ್ಧ ದಿನಗಳಲ್ಲಿ ಹಣಕಾಸಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ ಆದರೆ ದ್ವಿತೀಯ ಅರ್ಧ ಭಾಗದಲ್ಲಿ ಎಲ್ಲ ಪರಿಸ್ಥಿತಿ ಸಮತೋಲನ ಬರುವುದು ಇದಕ್ಕೆ ಮೇಷ ರಾಶಿ ಅವರು ಲಕ್ಷ್ಮಿ ದೇವಸ್ಥಾನ ಹೋಗುವುದು ಮಹಾಲಕ್ಷ್ಮಿ ಬೀಜಾಕ್ಷರಿ ಮಂತ್ರವನ್ನು ಜಪಿಸಿ ಶ್ರೀಂ ಎಂಬ ಮಂತ್ರವನ್ನು 24 ಬಾರಿ ಜಪಿಸಿ ಕುಬೇರ ಮಂತ್ರವನ್ನು ಜಪಿಸಿ ಮನೆಯ ಹತ್ತಿರ ಹತ್ತಿ ಗಿಡವನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟು ಪೂಜಿಸುವ ಮೂಲಕ ಲಕ್ಷ್ಮೀ ಅನುಗ್ರಹಕ್ಕೆ ಪಾತ್ರರಾಗಿ ಇನ್ನೂ ಒಮ್ಮೆ ಹಾಕಿದ ಬಟ್ಟೆಯನ್ನು ಒಗೆಯದೆ ಮತ್ತೊಮ್ಮೆ ಹಾಕಲು ಹೋಗ್ಬೇಡಿ ಲಕ್ಷ್ಮಿಗೆ ಮಲ್ಲಿಗೆ ಹೂವು ಕೊಟ್ಟು ಪ್ರಾರ್ಥನೆ ಸಲ್ಲಿಸಿ ಒಳ್ಳೆಯದು ಆಗುವುದು

ವೃಷಭ ರಾಶಿ ಅವರ ಸಮಯ ಬಹಳ ಚೆನ್ನಾಗಿ ಇದೆ ವಾಹನ ಮನೆ ಹಾಗೂ ಆಸ್ತಿ ಖರೀದಿ ಮಾಡಲು ಇಚ್ಚಿಸುವರಿಗೆ ಶುಭ ಸಮಯ ಅದಕ್ಕೆ ಸುಬ್ರಮಣ್ಯ ಸ್ವಾಮಿ ಆರಾಧನೆ ಪ್ರತಿ ಮಂಗಳವಾರ 900 ಗ್ರಾಂ ಅಷ್ಟು ತೊಗರಿಬೇಳೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಬೆಳಗಿನ ಸಮಯದಲ್ಲಿ ದೇವಾಲಯಕ್ಕೆ ನೀಡಬೇಕು ಹಾಗೂ ವಿಭೂತಿಯನ್ನು ದಿನಾಲೂ ಹಣೆಗೆ ಹಚ್ಚಿಕೊಂಡರೆ ಅತ್ಯಂತ ಶ್ರೇಷ್ಠ

ಮಿಥುನ ರಾಶಿ ಅವರಿಗೆ ಭಾಗ್ಯದ ಬಾಗಿಲು ಒಂಬತ್ತನೇ ಮನೆಯಲ್ಲಿ ಶನಿ ಇದ್ದು ಭಾಗ್ಯ ಬಾಗಿಲು ತೆರೆದಿದೆ ಎಂದು ಅರ್ಥ ಈ ರಾಶಿಯವರು ಬಡ್ತಿ ಹಾಗೂ ಹೊಸ ವ್ಯವಹಾರ ಪ್ರಾರಂಭ ಮಾಡಲು ಇಚ್ಚಿಸುವವರಿಗೆ ಶುಭ ಸಮಯ ಆದಷ್ಟು ವೃದ್ಧಾಶ್ರಮದಲ್ಲಿ ಊಟದ ವ್ಯವಸ್ಥೆ ಅನ್ನದಾನ ಹಾಗೂ ವೃದ್ಧರಿಗೆ ಬೆಡ್ಶೀಟ್ ದಾನ ಮಾಡಿ ಒಳ್ಳೆಯ ಫಲ ದೊರೆಯುವುದು

ಕರ್ಕಾಟಕ ರಾಶಿ ಅವರಿಗೆ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹಾಗೂ ಮನೆಯಲ್ಲಿ ಶುಭ ಕಾರ್ಯ ನಡೆಯುವುದು ಆದರೆ ಶನಿಯ ಪ್ರಭಾವ ಇಂದ ಕೆಲಸ ಕಾರ್ಯದಲ್ಲಿ ತೊಂದರೆ ಹಾಗೂ ವಿಳಂಬ ಆಗುವುದು ಶನಿವಾರ ಶನಿ ಮಹಾತ್ಮ ಒಂದು ಕಬ್ಬಿಣ ಬಾಣಲೆಯಲ್ಲಿ ಎಳ್ಳೆಣ್ಣೆ ಅನ್ನು ಹಾಕಿ ನಿಮ್ಮ ಮುಖ ತೋರಿಸಿ ಅಲ್ಲಿ ಕೊಟ್ಟು ಹಿಂದೆ ತಿರುಗದೆ ಬರಬೇಕು ಹಾಗೂ ಯಾರಿಗೂ ಕೂಡ ಹೇಳಬಾರದು ನಿಮ್ಮ ಕೈಯಲ್ಲಿ ಆದಷ್ಟು ವೃದ್ಧಾಶ್ರಮ ಅಲ್ಲಿ ಸೇವೆಯನ್ನು ಮಾಡಿ ಒಳಿತು ಆಗುವುದು

ಸಿಂಹ ರಾಶಿಯವರಿಗೆ ಹಣದ ಹರಿವು ಜಾಸ್ತಿ ಇದ್ದರೂ ಕೂಡ ಅಷ್ಟೇ ಖರ್ಚು ಜಾಸ್ತಿ ಆಗುವುದು ಇನ್ನು ಯಾವುದೇ ಕೆಲಸ ಮಾಡಲು ಹೋದರು ವಿಳಂಬ ಆಗುವುದು ಹಾಗೂ ಸೊಂಬೇರಿತನ ಉಂಟಾಗಿ ಕಾರ್ಯ ನಿಧಾನ ಗತಿಯಲ್ಲಿ ಸಾಗುವುದು ಸಾಯಿ ಬಾಬಾ ಇಲ್ಲವೇ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಮಾಡಿ ದೇವಸ್ಥಾನದಲ್ಲಿ ಅನ್ನದಾನ ಸೇವೆಗೆ ಸಹಾಯ ಮಾಡಿ ಉತ್ತಮವಾಗಿರುವುದು.

ಕನ್ಯಾ ರಾಶಿ ಅವರಿಗೆ ಸಮಯ ಚೆನ್ನಾಗಿ ಇದೆ ಮಂಗಳ ಕಾರ್ಯ ಮನೆಯಲ್ಲಿ ಶುಭ ಸಮಾರಂಭ ಒಳ್ಳೆಯ ಸಮಯ ಆದರೆ ವಾಹನದಲ್ಲಿ ಓಡಾಡುವ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ ಹಾಗೂ ಮುಂದೆ ಹೆಜ್ಜೆ ಇಡುವ ವೇಳೆ ಕಾಲುಜಾರಿ ಆಸ್ಪತ್ರೆ ಹಣ ಸುರಿಯುವ ಬದಲು ಎಚ್ಚರಿಕೆ ಇಂದ ಇದ್ದರೆ ಉತ್ತಮ ಹಾಗಾಗಿ ಈ ತಿಂಗಳ ಸೋಮವಾರ ಶಿವನಿಗೆ ಜೇನು ತುಪ್ಪ ಅಥವಾ ಒಣ ಕರ್ಜೀರ ದಾನ ಕೊಡುತ್ತಾ ಬನ್ನಿ ಒಳ್ಳೆಯದು

ತುಲಾ ರಾಶಿ ಅವರು ಆದಷ್ಟು ಮನೆದೇವರ ಪೂಜೆ ಹಾಗೂ ತೀರ್ಥ ಯಾತ್ರೆ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರರಾಗಿ ಹಾಗೂ ಶತ್ರುಗಳ ವಿನಾಶ ಈ ತಿಂಗಳು ಆಗುವುದು ಆದಷ್ಟು ಸೋಮವಾರ ಇಲ್ಲ ಗುರುವಾರ 700 ಗ್ರಾಂ ಹುರುಳಿಕಾಳನ್ನು ದೇವಸ್ಥಾನ ಅಥವಾ ಬಡವರಿಗೆ ದಾನ ಮಾಡಿದ್ದಲ್ಲಿ ಒಳ್ಳೆಯ ಪಲ ಸಿಗುವುದು

ವೃಶ್ಚಿಕ ರಾಶಿ ಅವರಿಗ ಗುರು ಬಲ ಚೆನ್ನಾಗಿ ಇದೆ ಸಂತಾನ ಅಪೇಕ್ಷೆ ಪಡುವರಿಗೆ ಶುಭ ಸಮಯ ಹಲಸಿನ ಹಣ್ಣು ರಸಾಯನ ಬೆಲ್ಲ ಹಾಗೂ ಕೊಬ್ಬರಿ ಹಾಕಿ ಗುರುವಾರ ರಾಘವೇಂದ್ರ ಸ್ವಾಮಿ ಅಥವಾ ಸಾಯಿಬಾಬ ದೇವಾಲಯ ಅಲ್ಲಿ ಹಂಚುವುದು ಮಾಡಿ ಒಳ್ಳೆಯ ಫಲ ಸಿಗುವುದು

ಧನಸ್ಸು ರಾಶಿ ಅವರಿಗೆ ಉನ್ನತ ವ್ಯಾಸಂಗ ಹಾಗೂ ಹೊರ ದೇಶ ಅಲ್ಲಿ ಕೆಲಸ ಹುಡುಕುತ್ತಿರುವ ವ್ಯಕ್ತಿಗೆ ಅವರ ಕನಸು ನನಸು ಆಗಿರುವುದರಿಂದ ವಿದೇಶ ಯಾನ ಪ್ರಾಪ್ತಿ ಆಗುವುದು ನಿಮ್ಮ ಕೈಲಾದಷ್ಟು ಬಡವ ಮಕ್ಕಳಿಗೆ ಓದಲು ಅಗತ್ಯ ಇರುವ ವಸ್ತುವನ್ನು ದಾನ ನೀಡುತ್ತ ಬನ್ನಿ ಹಾಗೂ ಕೈಲಾದಷ್ಟು ಸೇವೆಯನ್ನು ಮಾಡಿ

ಮಕರ ರಾಶಿ ಅವರಿಗೆ ಈ ತಿಂಗಳು ಚೆನ್ನಾಗಿ ಇದ್ದು ಸಂಬಳ ಹೆಚ್ಚಳ ಕೆಲಸ ಬೇರೆ ಕಡೆ ವರ್ಗಾವಣೆ ಹಾಗೂ ಬಡ್ತಿ ಪಡೆಯಲು ಒಳ್ಳೆಯ ಸಮಯ ಹಾಗಾಗಿ ಪ್ರತಿ ಶನಿವಾರ ಎಳ್ಳೆಣ್ಣೆ ಸ್ನಾನ ಮಾಡಿ ಕಪ್ಪು ಎಳ್ಳನ್ನು ಶನಿ ಮಹಾತ್ಮ ದೇವಸ್ಥಾನ ದಾನ ನೀಡಿ ಒಳ್ಳೆಯದು ಆಗುವುದು

ಕುಂಭ ರಾಶಿ ಅವರಿಗೆ ಸಮಯ ಚೆನ್ನಾಗಿ ಇದ್ದು ಅಂದುಕೊಂಡ ಕೆಲಸ ನಿಧಾನ ಆದರೂ ಕೂಡ ತಾಳ್ಮೆಯಿಂದ ಕಾಯಬೇಕು ಹಾಗಾಗಿ ಬಡವರ ಮನೆಯ ಹೆಣ್ಣು ಮಕ್ಕಳಿಗೆ ಮದುವೆ ಕಾರ್ಯದಲ್ಲಿ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಆದರೆ ಕನ್ಯಾದಾನ ಮಾಡಿ ಹಾಗೂ ಸಾಯಿಬಾಬಾ ಮತ್ತು ರಾಘವೇಂದ್ರ ದೇವಸ್ಥಾನ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಉತ್ತಮ

ಮೀನ ರಾಶಿಯವರಿಗೆ ಈ ತಿಂಗಳು ಹಣದ ಹರಿವು ಹೆಚ್ಚಾಗಿದೆ ಆದರೆ ಯಾವುದೇ ಕೆಲಸವನ್ನು ಮಾಡಲು ನಿಮ್ಮಲ್ಲಿ ಹಿಂಜರಿಕೆ ಇಂದ ಕಾರ್ಯ ನಿಧಾನಗತಿಯಲ್ಲಿ ಸಾಗುವುದು ಶನಿಯ ಪ್ರಭಾವದಿಂದ ಕೆಲಸ ಕಾರ್ಯದಲ್ಲಿ ವಿಳಂಬ ಇನ್ನೂ ಮಾತಿನ ಮೇಲೆ ಕಡಿವಾಣ ಇದ್ದರೆ ಉತ್ತಮ ಹಾಗಾಗಿ ಪ್ರತಿ ದಿನ ಬೆಳಗ್ಗೆ ನಾಲ್ಕು ಒಣ ದ್ರಾಕ್ಷಿಯನ್ನು ತಿನ್ನಿ ಸೋಮವಾರ ಶಿವನ ದೇವಸ್ಥಾನಕ್ಕೆ ಜೇನುತುಪ್ಪ ಅಭಿಷೇಕವನ್ನು ನೀಡುತ್ತ ಬನ್ನಿ ಒಳ್ಳೆಯದು ಆಗುವುದು.

Leave A Reply

Your email address will not be published.