Asadha Month: ಆಷಾಢ ಮಾಸ ಜುಲೈ ತಿಂಗಳಲ್ಲಿ ಕಂಡು ಬರುತ್ತದೆ ಹಾಗೆಯೇ ತುಂಬಾ ಜನರು ಆಷಾಢ ಮಾಸದ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ ಹಾಗೆಯೇ ಬಹಳ ಹಿಂದಿನ ಕಾಲದಿಂದಲೂ ಮೊದಲ ವರ್ಷದ ಆಷಾಢ (Asadha Month) ಮಾಸದಲ್ಲಿ ಅತ್ತೆ ಸೊಸೆ ಒಂದೇ ಮನೆಯಲ್ಲಿ ಇರಬಾರದು ಎನ್ನುವ ಉದ್ದೇಶದಿಂದ ಸೊಸೆಯನ್ನು ಈ ಒಂದು ಮಾಸದಲ್ಲಿ ತವರು ಮನೆಗೆ ಕಳುಹಿಸುತ್ತಾರೆ ಹಾಗೆಯೇ ಆಷಾಢ ಮಾಸದಲ್ಲಿ ತುಂಬಾ ಗಾಳಿ ಮಳೆ ಗುಡುಗು ಸಿಡಿಲು ಹೆಚ್ಚಾಗಿ ಇರುತ್ತದೆ .ಮಳೆಗಾಲದ ಸಮಯದಲ್ಲಿ ಮಾಸ ಕಂಡು ಬರುತ್ತದೆ

ಜುಲೈ ತಿಂಗಳಲ್ಲಿ ಮಳೆಗಾಲದ ಸಮಯವಾದ್ದರಿಂದ ಕೆಲಸ ಕಾರ್ಯಗಳು ಮಾಡಲು ಸಾಧ್ಯ ಆಗುವುದು ಇಲ್ಲ ಹಾಗೆಯೇ ಕೆಲಸ ವಿಳಂಬ ಆಗುತ್ತದೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೋಪ ಹೆಚ್ಚಾಗಿ ಕಂಡು ಬರುತ್ತದೆ ಇದರಿಂದ ಭಿನ್ನಾಭಿಪ್ರಾಯ ಆಗಬಾರದು ಎನ್ನುವ ಕಾರಣದಿಂದ ಹೆಚ್ಚಾಗಿ ಅತ್ತೆ ಸೊಸೆಯನ್ನು ಒಂದೇ ಮನೆಯಲ್ಲಿ ಇರಿಸುವುದು ಇಲ್ಲ ನಾವು ಈ ಲೇಖನದ ಮೂಲಕ ಆಷಾಢ ಮಾಸದ ಬಗ್ಗೆ ಹಾಗೂ ಯಾಕೆ ಆಷಾಢ ಮಾಸದಲ್ಲಿ ಗರ್ಭಧಾರಣೆ ಆಗಬಾರದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಂಕ್ರಾಂತಿಯನ್ನು ಪರ್ವ ಕಾಲ ಎಂದು ಕರೆಯಲಾಗುತ್ತದೆ ಹಾಗೆಯೇ ಉತ್ತರಾಯಣವನ್ನು ಪುಣ್ಯ ಕಾಲ ಎಂದು ಕರೆಯಲಾಗುತ್ತದೆ ದಕ್ಷಿಣಾಯನ ಪರ್ವ ಕಾಲ ಎಂದು ಕರೆಯಲಾಗುತ್ತದೆ ದೀಪಾವಳಿಯನ್ನು ಪರ್ವ ಕಾಲ ಎಂದು ಕರೆಯಲಾಗುತ್ತದೆ ಗ್ರಹಣಗಳನ್ನು ಸಹ ಪರ್ವ ಕಾಲ ಎಂದು ಕರೆಯಲಾಗುತ್ತದೆ ಯುಗಾದಿ ಹಬ್ಬವನ್ನು ಪರ್ವ ಕಾಲ ಎಂದು ಕರೆಯಲಾಗುತ್ತದೆ ಪರ್ವ ಕಾಲ ಎಂದರೆ ಶುಭ ಹಾಗೂ ಅಶುಭ ಎರಡು ಇರುತ್ತದೆ ಆಷಾಢ ಮಾಸದಲ್ಲಿ ಉತ್ತರಾಯಣ ಪುಣ್ಯ ಕಾಲ ಮುಗಿದು ದಕ್ಷಿಣಾಯನ ಆರಂಭ ಆಗುತ್ತದೆ ಇಂಗ್ಲಿಷ್ ಮಾಸ ಎಂದು ಜುಲೈ ಅನ್ನು ಕರೆಯಲಾಗುತ್ತದೆ

ಈ ಮಾಸದಲ್ಲಿ ಆಷಾಢ ಮಾಸ ಆರಂಭ ಆಗುತ್ತದೆ ತುಂಬಾ ಜನರು ಉತ್ತರಾಯಣದಲ್ಲಿ ಶುಭ ಕಾರ್ಯವನ್ನು ಮಾಡುತ್ತಾರೆ. ಆಷಾಢ ಮಾಸದಲ್ಲಿ ಪ್ರಾರಂಭ ಆಗುವುದು ದಕ್ಷಿಣಾಯನವಾಗಿದೆ ಹಾಗಾಗಿ ಇದೊಂದು ಕೆಟ್ಟ ಕಾಲ ಎಂದು ಕೆಲವರು ನಂಬಿಕೊಂಡಿದ್ದಾರೆ ಹಾಗೆಯೇ ಯಾವುದೇ ಶುಭ ಸಮಾರಂಭಗಳನ್ನು ಆಷಾಢ ಮಾಸದಲ್ಲಿ ಮಾಡುವುದು ಇಲ್ಲ ಆಷಾಢ ಮಾಸವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ ಮದುವೆಯ ಮೊದಲನೆಯ ವರ್ಷದಲ್ಲಿ ಆಷಾಢ ಮಾಸದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ತವರು ಮನೆಗೆ ಹೆಣ್ಣನ್ನು ಕಳುಹಿಸುತ್ತಾರೆ.

ಗಾಳಿ ಮಳೆಗಳು ಹೆಚ್ಚಾಗಿ ಇರುತ್ತದೆ ಕೆಲಸ ಮಾಡುವುದು ಸಹ ಕಷ್ಟಕರವಾದ ಸಮಯ ಇದಾಗಿ ಇರುತ್ತದೆ ಹಾಗೆಯೇ 12 ಮಾಸ ದಲ್ಲಿ ತುಂಬಾ ಕೋಪ ಬರುವ ಮಾಸ ಎಂದರೆ ಆಷಾಢ ಮಾಸವಾಗಿದೆ ಹಾಗಾಗಿ ಅತ್ತೆ ಮತ್ತು ಸೊಸೆ ಒಂದೇ ಮನೆಯಲ್ಲಿ ಇದ್ದಾಗ ಜಗಳ ಉಂಟಾಗುವ ಸಾಧ್ಯತೆ ಇರುತ್ತದೆ ಜೀವನದ ಮೊದಲ ಜಗಳ ಆಷಾಢ ಮಾಸದಲ್ಲಿ ಆದರೆ ಜೀವನ ಪೂರ್ತಿ ನೆನಪು ಇರುತ್ತದೆ ಎನ್ನುವ ಉದ್ದೇಶದಿಂದ ಅತ್ತೆ ಸೊಸೆಯನ್ನು ಆಷಾಢ ಮಾಸದಲ್ಲಿ ಒಂದೇ ಮನೆಯಲ್ಲಿ ಇಡುವುದು ಇಲ್ಲ ಇದೊಂದು ಪದ್ಧತಿಯಾಗಿದೆ ಆಷಾಢ ಮಾಸದಲ್ಲಿ ದಕ್ಷಿಣಾಯನ ಆರಂಭ ಆಗುವುದರಿಂದ ಗಂಡ ಹೆಂಡತಿ ಸೇರುವುದು ಹಾಗೂ ಗರ್ಭ ಧರಿಸುವುದು ಒಳ್ಳೆಯದು ಅಲ್ಲ.

ಗರ್ಭ ಧರಿಸಿದರೆ ವಿದ್ಯೆ ನಾಶ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಬುದ್ದಿ ನಾಶ ಆಗುವ ಸಾಧ್ಯತೆ ಇರುತ್ತದೆ ಆರೋಗ್ಯದಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಹೀಗೆ ತುಂಬಾ ಜನರಿಗೆ ಆಷಾಢ ಮಾಸದ ಬಗ್ಗೆ ತಿಳಿದು ಇರುವುದು ಇಲ್ಲ ಹಾಗೆಯೇ ಆಷಾಢ ಮಾಸದಲ್ಲಿ ಗರ್ಭ ದರಣೆ ಮಾಡಬಾರದು ಎಂದು ತಿಳಿಯದೇ ಹುಟ್ಟಿದ ಮಕ್ಕಳಿಗೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಎಲ್ಲ ಶುಭ ಕಾರ್ಯಗಳನ್ನೂ ಉತ್ತರಾಯಣದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಇದನ್ನೂ ಓದಿ Gemini Horoscope: ಮಿಥುನ ರಾಶಿಯವರ ಸುಖದ ದಿನಗಳಿಗೆ ಕಡಿವಾಣ ಬೀಳಲಿದೆ

Leave a Reply

Your email address will not be published. Required fields are marked *