Aquarius Horoscope: ಕುಂಭ ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ, ಮತ್ತೆ ಬಂದಿದೆ ಗುಡ್ ಟೈಮ್ ಆದ್ರೆ..

0 22,555

Aquarius Horoscope December 2023: ಡಿಸೆಂಬರ್ ಹದಿನಾರನೇ ತಾರೀಕು ಸೂರ್ಯನು ಧನು ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದು ಕುಂಭ ರಾಶಿಯವರಿಗೆ ಶುಭ ಫಲವನ್ನು ಉಂಟುಮಾಡುತ್ತದೆ ಹಾಗೆ ನಿಮ್ಮ ಪ್ರಯತ್ನಗಳನ್ನ ಕೂಡ ಈ ಸಮಯದಲ್ಲಿ ಹೆಚ್ಚಿಗೆ ಮಾಡಿಕೊಳ್ಳಬೇಕು ಈ ಸಮಯದಲ್ಲಿ ನೀವು ಮಾಡುವ ಪ್ರಯತ್ನದಿಂದ ಅಧಿಕ ಲಾಭವನ್ನು ನೀವು ನಿರೀಕ್ಷೆ ಮಾಡಬಹುದು.

ಇನ್ನು ಶನಿಯ ದೃಷ್ಟಿ ಕುಜನ ಮೇಲೆ ಹಾಗೂ ಕುಜನ ದೃಷ್ಟಿ ಶನಿಯ ಮೇಲೆ ಬೀಳುವುದರಿಂದ ಸ್ವಲ್ಪ ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಬೇಕು ಇದನ್ನು ಹೊರತುಪಡಿಸಿ ಯಾವುದೇ ದೊಡ್ಡ ಪ್ರಮಾಣದ ಸಮಸ್ಯೆಗಳು ಇರುವುದಿಲ್ಲ. ರಾಹು ನಿಮಗೆ ಬಲವನ್ನ ನೀಡುವಂತಹ ಗ್ರಹವಾಗಿದ್ದಾನೆ ಅಂತಹ ರಾಹು ನಿಮ್ಮ ವಾಕ್ ಸ್ಥಾನದಲ್ಲಿ ಇರುವುದರಿಂದ ಹಾಗೂ ಆಸ್ಥಾನದಲ್ಲಿ ಶನಿ ದೃಷ್ಟಿ ಇರುವುದರಿಂದ ನಿಮಗೆ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು ಆದ್ದರಿಂದ ನಿಮ್ಮ ಖರ್ಚು ವೆಚ್ಚಗಳನ್ನ ಸ್ವಲ್ಪ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಆದರೆ ಯಾವುದಾದರೂ ಒಳ್ಳೆಯ ಕಾರ್ಯಗಳಿಗೆ ನಿಮ್ಮ ಧನ ವ್ಯಯವಾಗಿದೆ ಎಂಬುದಾದ್ರೆ ಅದು ನಿಮಗೆ ಮುಂದೆ ಸಹ ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆ. ಗುರು ನಿಮ್ಮ ರಾಶಿಯಲ್ಲಿ ಕುಳಿತಿರುವ ಸ್ಥಾನ ಅಷ್ಟೊಂದು ಶುಭ ಆಗಿಲ್ಲದೆ ಇದ್ದರೂ ಸಹ ತಾನು ವೀಕ್ಷಿಸುವಂತಹ ಸ್ಥಾನವನ್ನ ಶುಭವಾಗಿಸುತ್ತಾನೆ ಹಾಗೆಯೇ ಗುರು ನಿಮ್ಮ ಒಡಹುಟ್ಟುಗಳ ನಡುವೆ ಮೈತ್ರಿ ವಾತ್ಸಲ್ಯವನ್ನ ವೃದ್ಧಿ ಮಾಡುತ್ತಾನೆ. ಸೋದರತ್ವದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಅನುಕೂಲಕರ ವಾತಾವರಣ ಕಂಡುಬರುತ್ತದೆ.

ಯಾವುದಾದರೂ ಬ್ಯಾಂಕಿನ ಸಾಲಗಳು ಹಾಗೂ ಇತರೆ ಹಣದ ನಿರೀಕ್ಷೆ ಮಾಡುತ್ತಿದ್ದರೆ ಸಮಯಕ್ಕೆ ಸರಿಯಾಗಿ ನಿಮಗೆ ಅದು ಸಿಗುತ್ತದೆ ಹಾಗೆಯೇ ವಿದ್ಯಾರ್ಜನೆ ಮಾಡುವಂತಹ ಮಕ್ಕಳಿಗೆ ಶುಕ್ರನ ಅನುಗ್ರಹದಿಂದ ಖಂಡಿತವಾಗಿ ಶುಭವಾಗುತ್ತದೆ ವಿಶೇಷವಾಗಿ ಮಾತೃವಿನ ಆರೋಗ್ಯದ ಮೇಲೆ ಸ್ವಲ್ಪ ಗಮನವನ್ನು ನೀಡಬೇಕು ಏಕೆಂದರೆ ಕುಜನ ದೃಷ್ಟಿ ಜನ್ಮ ನಕ್ಷತ್ರದ ಮೇಲೆ ಬೀಳುವುದರಿಂದ ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಭೂಮಿ ಖರೀದಿ ಹಾಗೂ ಇತರ ಆಸ್ತಿಗಳ ಖರೀದಿಯ ವಿಚಾರದಲ್ಲಿ ಹೂಡಿಕೆ ಮಾಡಲು ಹಿಂಜರಿಯುವ ಅವಶ್ಯಕತೆ ಇಲ್ಲ ಏಕೆಂದರೆ ಈ ಸಮಯದಲ್ಲಿ ನೀವು ಇಂತಹ ವಿಷಯಗಳಿಗೆ ಹೂಡಿಕೆ ಮಾಡಿದರೆ ನಿಮಗೆ ಖಂಡಿತವಾಗಿಯೂ ಶುಭವಾಗುತ್ತದೆ ಅಷ್ಟೇ ಅಲ್ಲದೆ ವಾಹನಗಳಿಂದಲೂ ಸಹ ನಿಮಗೆ ಈ ಸಮಯದಲ್ಲಿ ಲಾಭ ಕಂಡು ಬರುತ್ತದೆ.

ಡಿಸೆಂಬರ್ ಹದಿನಾರರ ನಂತರದಲ್ಲಿ ಬುಧಾರಿತ ಯೋಗ ನಿಮ್ಮ ರಾಶಿಯಲ್ಲಿ ಕಂಡು ಬರುವುದರಿಂದ ವಿಷ್ಣುವಿನ ಅನುಗ್ರಹ ನಿಮ್ಮ ಸಂತಾನದ ಮೇಲೆ ಇರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಡಿಸೆಂಬರ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಒಳ್ಳೆಯ ಕಾಲ ಎಂದು ಹೇಳಬಹುದು ಎಲ್ಲಾ ವಿಚಾರಗಳಲ್ಲಿಯೂ ಯಶಸ್ಸನ್ನ ಸಾಧಿಸಲು ಮುಕ್ತ ಅವಕಾಶವನ್ನು ನೀವು ಈ ಸಂದರ್ಭದಲ್ಲಿ ಪಡೆಯಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.