Alok Maurya Controversy: ಸೂರ್ಯವಂಶ ಸಿನಿಮಾ ನಿಮ್ಮಲ್ಲಿ ತುಂಬಾ ಜನ ನೋಡಿರಬಹುದು, ಈ ಸಿನಿಮಾದಲ್ಲಿ ಎರಡು ಕಥೆ ಬರುತ್ತದೆ ವಿಷ್ಣುವರ್ಧನ್ ಪ್ರಾರಂಭದಲ್ಲಿ ಪರಿಮಳ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಾರೆ .ಆ ಹುಡುಗಿಯನ್ನೇ ಮದುವೆಯಾಗಬೇಕು ಅಂದುಕೊಂಡಾಗ ಆ ಹುಡುಗಿ ನಾನು ತುಂಬಾನೇ ಓದಿದ್ದೇನೆ ನಿನ್ನಂತಹ ಅನಕ್ಷರಸ್ಥನನ್ನ ಮದುವೆಯಾಗಲು ಆಗುವುದಿಲ್ಲ ಎಂದು ತಿರಸ್ಕಾರ ಮಾಡುತ್ತಾಳೆ. ಮುಂದೆ ಮತ್ತೊಂದು ಹುಡುಗಿ ವಿಷ್ಣುವರ್ಧನ್ ಅವರ ಜೀವನದಲ್ಲಿ ಬರುತ್ತಾಳೆ ಆ ಹುಡುಗಿ ಸ್ವಲ್ಪ ಓದಿಕೊಂಡಿರುತ್ತಾಳೆ. ಆ ಹುಡುಗಿಯನ್ನು ಕಷ್ಟಪಟ್ಟು ವಿಷ್ಣುವರ್ಧನ್ ಓದಿಸುತ್ತಾರೆ ಅವಳು ಡಿಸಿ ಕೂಡ ಆಗುತ್ತಾಳೆ. ಇದು ಸೂರ್ಯವಂಶ ಕಥೆಯ ಶಾರ್ಟ್ ಸ್ಟೋರಿ.

ಬೆವರು ಸುರಿಸಿ ತನ್ನನ್ನು ಇಷ್ಟು ದೊಡ್ಡ ಸ್ಥಾನಕ್ಕೆ ತಂದು ಕೂರಿಸಿದ ಗಂಡನಿಗೆ ಆಸರೆಯಾಗುತ್ತಾಳೆ .ಆದರೆ ಇತ್ತೀಚಿಗೆ ಇದಕ್ಕೆ ವಿರುದ್ಧವಾದ ಒಂದು ಘಟನೆ ನಡೆದಿದೆ ಹೆಂಡತಿ ಓದಿದವಳು ಎನ್ನುವ ಕಾರಣಕ್ಕೆ ಆಕೆಯನ್ನು ಗಂಡ ಮತ್ತಷ್ಟು ಓದಿಸುತ್ತಾನೆ, ಆಕೆ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಕೂಡ ಪಡೆಯುತ್ತಾಳೆ ಇಷ್ಟೇ ಆಗಿದ್ದರೆ ಸೂರ್ಯವಂಶ ಸಿನಿಮಾ ತರ ಹ್ಯಾಪಿ ಎಡಿಂಗ್ ಆಗುತ್ತಿತ್ತು. ಆದರೆ ಕಥೆಯಲ್ಲಿ ನಡೆದಿದ್ದೇ ಬೇರೆ.

ಕಷ್ಟಪಟ್ಟು ಓದಿಸಿದ ಗಂಡನ ಮೇಲೆ ಕೇಸ್ ಹಾಕಿದ ಹೆಂಡತಿ, ಕಾರಣ ತನ್ನ ಬಾಯ್ ಫ್ರೆಂಡ್ ಜೊತೆಗಿನ ಸರಸ ಸಲ್ಲಾಪ. ಸರಕಾರಿ ಕೆಲಸ ಸಿಕ್ಕಿದ ಮೇಲೆ ಬದಲಾದ ಹೆಂಡತಿ ತನ್ನ ಅಂತಸ್ತಿಗೆ ಸರಿ ಹೋಗುವವರ ಜೊತೆಗೆ ಸರಸ ಸಲ್ಲಾಪ ನಡೆಸುತ್ತಾಳೆ.

ಪ್ರೇಮ, ವಿಶ್ವಾಸಕ್ಕೆ ಈ ಕಾಲದಲ್ಲಿ ಬೆಲೆನೇ ಇಲ್ಲ. ಇಲ್ಲಿ ಬೆಲೆ ಇರುವುದು ಅಂದ ಚಂದಕ್ಕೆ, ಬಣ್ಣ ಬಣ್ಣದ ಮಾತುಗಳಿಗೆ, ಹಾಗೂ ದುಡ್ಡಿಗೆ. ದುಡ್ಡೇ ದೊಡ್ಡಪ್ಪ, ನಿಮ್ಮ ಬಳಿ ದುಡ್ಡಿದೆ ಅಂದರೆ ನಿಮ್ಮ ಹಿಂದೆ ಬರುತ್ತಾರೆ ಇಲ್ಲದಿದ್ದರೆ ನಿಮ್ಮನ್ನು ತಿರುಗಿ ಕೂಡ ನೋಡುವುದಿಲ್ಲ. ನೀವು ಒಬ್ಬರಿಗೆ ಎಷ್ಟೇ ಸಹಾಯ ಮಾಡಿದರು ಕೂಡ ಅವರ ಬಳಿ ದುಡ್ಡು ಬಂದಾಗ ಅವರು ಬದಲಾಗಿ ಬಿಡುತ್ತಾರೆ .ಈ ಕಥೆನು ಹಾಗೆ ಇದೆ.

Alok Maurya Controversy

ಆಕೆಯ ಹೆಸರು ಜ್ಯೋತಿ ಮೌರ್ಯ ಇವಳು 2010 ರಲ್ಲಿ ಅಲೋಕ್ ನನ್ನು ಮದುವೆಯಾಗುತ್ತಾಳೆ. ಈತ ಪಂಚಾಯತ್ ಇಲಾಖೆಯಲ್ಲಿ ನಾಲ್ಕನೇ ವರ್ಗದ ಕೆಲಸ ಮಾಡುತ್ತಿದ್ದನು. ಈತನ ಕೆಲಸ ಕ್ಲೀನಿಂಗ್ ಮಾಡುವುದಾಗಿತ್ತು, ಆತನಿಗೆ ಜಾಸ್ತಿ ಸಂಬಳ ಇರಲಿಲ್ಲ ಆದರೂ ಕೂಡ ಇದ್ದಿದ್ದರಲ್ಲಿ ಖುಷಿಯಿಂದ ಜೀವನ ಸಾಗಿಸುತ್ತಿದ್ದರು. ಒಂದು ದಿನ ಹೆಂಡತಿ ತನ್ನ ಗಂಡನ ಬಳಿ ನನಗೆ ಒಂದು ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಇದೆ ಎಂದು ಹೇಳುತ್ತಾಳೆ. ಹೆಂಡತಿಯ ಆಸೆಯನ್ನು ಕೇಳಿದ ತಕ್ಷಣ ನನಗೆ ಎಷ್ಟು ಕಷ್ಟವಾದರೂ ಸರಿ ಓದಿಸಬೇಕು ಎಂದು ಅಂದುಕೊಳ್ಳುತ್ತಾನೆ.

ಹೆಂಡತಿಯನ್ನು ಒಳ್ಳೆಯ ಕೋಚಿಂಗ್ ಕ್ಲಾಸಿಗೆ ಕಳಿಸಿ ಪತ್ನಿಯನುನ್ನು ಕಾಂಪಿಟೇಟಿವ್ ಎಕ್ಸಾಮ್ ಗೆ ಪ್ರಿಪೇರ್ ಮಾಡುತ್ತಾನೆ. ತನ್ನ ಪತ್ನಿಗೆ ಏನೆಲ್ಲಾ ಬೇಕು, ಅದೆಲ್ಲದರ ವ್ಯವಸ್ಥೆಯನ್ನು ಕೂಡ ಮಾಡುತ್ತಾನೆ .ಅವಳು ಕೂಡ ಗಂಡನ ಶ್ರಮಕ್ಕೆ ಮೋಸ ಮಾಡಿದೆ ಕಷ್ಟಪಟ್ಟು ಓದುತ್ತಾಳೆ. 2016ರಲ್ಲಿ ಅವಳಿಗೆ ಸರ್ಕಾರಿ ಕೆಲಸವೂ ಸಿಗುತ್ತದೆ. ಗಂಡನಿಗೆ ಈ ವಿಷಯ ಕೇಳಿ ತುಂಬಾ ಖುಷಿಯಾಗುತ್ತದೆ ಆತನ ಶ್ರಮಕ್ಕೆ ಒಂದು ಫಲ ಸಿಗುತ್ತದೆ.

ಹಣ ಬಂದ ಮೇಲೆ ಅವಳು ಬದಲಾಗುತ್ತಾಳೆ ತನಗೆ ಬಂದ ಅಂತಸ್ತಿನ ಮುಂದೆ ತನ್ನ ಗಂಡ ಏನು ಅಲ್ಲ ಎಂದು ಅಂದುಕೊಳ್ಳುತ್ತಾಳೆ. ಎತ್ತರದ ಸ್ಥಾನಕ್ಕೆ ಹೋದ ಮೇಲೆ ತನ್ನನ್ನು ಕಷ್ಟಪಟ್ಟು ಓದಿಸಿದ ಗಂಡ ತನಗೆ ಸರಿ ಹೊಂದುವುದಿಲ್ಲ ಎಂದು ಅನಿಸಲು ಶುರುವಾಗುತ್ತದೆ. ಈ ಜ್ಯೋತಿಗೆ ಕಾವಲು ಪಡೆಯ ಕಮಾಂಡರ್ ಜೊತೆಗೆ ಪ್ರೀತಿ ಹುಟ್ಟುತ್ತದೆ ಆದರೆ ಗಂಡ ಕೆಲಸದ ವಿಚಾರವಾಗಿ ಏನೋ ಮಾತನಾಡುತ್ತಿರಬಹುದು ಎಂದುಕೊಂಡಿರುತ್ತಾನೆ.

ಒಂದು ದಿನ ಇವರ ಪ್ರೀತಿಯ ವಿಷಯ ಗಂಡನಿಗೆ ಗೊತ್ತಾಗುತ್ತದೆ ಆರಂಭದಲ್ಲಿ ಬುದ್ಧಿ ಹೇಳುತ್ತಾನೆ. ನಿನ್ನನ್ನು ಕ್ಷಮಿಸುತ್ತೇನೆ ಮತ್ತೆ ಈ ತಪ್ಪನ್ನು ಮಾಡಬೇಡ ಎಂದು ಬುದ್ಧಿ ಮಾತನ್ನು ಹೇಳುತ್ತಾನೆ ಆದರೆ ಇಲ್ಲಿ ಹೆಂಡತಿ ಗಂಡನ ಮಾತು ಕೇಳಲು ರೆಡಿ ಇರುವುದಿಲ್ಲ. ಗಂಡ ಇವರ ಸಂಬಂಧದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ 2023 ಮೇ 7ರಂದು ಜ್ಯೋತಿ ಮೌರ್ಯ ತನ್ನ ಗಂಡ ಹಾಗೂ ಮಾವನ ಮೇಲೆ ವರದಕ್ಷಿಣೆ ಕಿರುಕುಳ ದೂರು ದಾಖಲಿಸುತ್ತಾಳೆ. ನಮ್ಮಲ್ಲಿ ಹೆಣ್ಣುಮಕ್ಕಳ ಕಣ್ಣೀರಿಗೆ ಬೇಗ ಕರಗುವುದಕ್ಕೊಸ್ಕರ ನ್ಯಾಯಾಲಯ ಕೂಡ ಅನ್ಯಾಯವಾಗಿದೆ ಎಂದುಕೊಂಡು ಅಲೋಕ್ನನ್ನು ಜೈಲಿಗೆ ಹಾಕುತ್ತಾರೆ.

ಗಂಡ ಜೈಲಿಗೆ ಹೋದಾಗ ಅಧಿಕಾರಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾಳೆ. ಮುಂದೆ ಅವರ ಸರಸಸಲಾಪಕ್ಕೂ ಅಡ್ಡಿ ಬರಲು ಯಾರು ಇರಲಿಲ್ಲ. ಆದರೆ ಇವರ ಆಟ ತುಂಬಾ ದಿನ ನಡೆಯುವುದಿಲ್ಲ. ಇತ್ತೀಚಿನ ದಿನದಲ್ಲಿ ಅಲೋಕ್ ಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದ ಅಲೋಕ್ ಎಲ್ಲಾ ವಿಷಯವನ್ನು ಮೀಡಿಯಾ ಮುಂದೆ ಹೇಳಿಕೊಂಡಿದ್ದಾನೆ . ಆತ ತನಗಾದ ಅನ್ಯಾಯದ ಬಗ್ಗೆ ಕಣ್ಣೀರಿಡುತ್ತಾನೆ. ಅಷ್ಟೇ ಅಲ್ಲದೆ ನನ್ನ ಹೆಂಡತಿಯ ಡೈರಿ ಕೂಡ ಮೀಡಿಯಾ ಮುಂದೆ ತೆರೆದಿಟ್ಟಿದ್ದಾನೆ. ಅವಳು ಮಾಡಿದಂತಹ ಭ್ರಷ್ಟಾಚಾರ ಕೂಡ ಬಯಲಿಗೆ ಬಂದಿದೆ. ಇದನ್ನೂ ಓದಿ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಕೂಡಲೇ ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *