ಎಲ್ಲರಿಗೂ ಪ್ರತಿ ತಿಂಗಳು ನಮ್ಮ ರಾಶಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಇರುತ್ತದೆ ಆದ್ದರಿಂದ ನಾವು ಇವತ್ತು ಆಗಸ್ಟ್ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಯಾವ ರೀತಿಯ ಫಲ ಇದೆ. ಏನಾದರೂ ದೋಷಗಳಿದ್ದರೆ ಅದನ್ನು ಯಾವ ರೀತಿಯಾಗಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಆಗಸ್ಟ್ ತಿಂಗಳಲ್ಲಿ ಯಾವಾಗಲೂ ವರಮಹಾಲಕ್ಷ್ಮಿ ಹಬ್ಬ ಬರುವುದು ಒಂದು ಖುಷಿಯಾದರೆ ಶುಕ್ರ ನೀಚ ಸ್ಥಾನಕ್ಕೆ ಬರುತ್ತಾನೆ ಅಂದರೆ ಕನ್ಯ ರಾಶಿಯಲ್ಲಿ ಶುಕ್ರ ನಿಚನಾಗಿರುತ್ತಾನೆ ಆಗ ದುಡ್ಡು ಕಾಸು ಸುಮ್ಮನೆ ಖರ್ಚಾಗುವಂತಹದ್ದು ಈ ತಿಂಗಳಲ್ಲಿ ಕೆಲವು ರಾಶಿಯವರಿಗೆ ಹಣದ ಸಮಸ್ಯೆ ಆರ್ಥಿಕ ಸಮಸ್ಯೆಯಾಗುತ್ತದೆ ಯಾವುದೋ ಒಂದು ರೀತಿಯಲ್ಲಿ ದುಡ್ಡುಬರುವುದಿದೆ ಅಂದುಕೊಂಡರೆ ಅದು ಬರುವುದಿಲ್ಲ ಹೂಡಿಕೆ ಮಾಡಿರುವುದಕ್ಕೆ ತಕ್ಕ ಲಾಭ ಬರುವುದಿಲ್ಲ ಈರೀತಿ ಆಗುವಂತಹದ್ದು. ಒಂದೊಂದು ತಿಂಗಳಲ್ಲಿ ಒಂದೊಂದು ಗ್ರಹಗಳ ವೈಶಿಷ್ಟ್ಯ ವಿರುತ್ತದೆ.

ಒಂದೊಂದು ತಿಂಗಳಲ್ಲಿ ಗ್ರಹಗಳು ಉಚ್ಛ ಸ್ಥಾನಕ್ಕೆ ಹೋಗಿ ಒಳ್ಳೆಯದಾಗುವಂತದ್ದು ಕೆಲವೊಮ್ಮೆ ನೀಚ ಸ್ಥಾನಕ್ಕೆ ಹೋಗಿ ಕೆಟ್ಟದಾಗುವಂತಿರುತ್ತದೆ ಅದಕ್ಕೆ ಭಯಪಡುವ ಅಗತ್ಯವಿಲ್ಲ ಆತಿಂಗಳು ನಮ್ಮ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಈಗ ನಾವು ಆಗಸ್ಟ್ ತಿಂಗಳಲ್ಲಿ ಯಾವ ರಾಶಿಗೆ ಯಾವ ರೀತಿಯ ಫಲ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಸ್ವಲ್ಪ ಆರ್ಥಿಕ ನಷ್ಟ ಉಂಟಾಗುತ್ತದೆ ವಿನಾಕಾರಣ ಹಣ ಖರ್ಚಾಗುತ್ತದೆ. ಸಣ್ಣ ಜ್ವರಬಂದು ಅದು ದೊಡ್ಡ ಕಾಯಿಲೆಗೆ ಹೋಗುವಂತದ್ದು ಇದರಿಂದ ಹಣ ವ್ಯಯವಾಗುವಂತದ್ದು. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಸಿಕ್ಕಸಿಕ್ಕದ್ದನ್ನು ತಿನ್ನುವುದು ಚಳಿಯಲ್ಲಿ ಓಡಾಡುವುದು ಈ ರಿತಿಯದ್ದನ್ನು ಮಾಡಬೇಡಿ.

ನೀವು ಆಗಸ್ಟ್ ತಿಂಗಳ ನಾಲ್ಕು ಶುಕ್ರವಾರ ಬೆಳಿಗ್ಗೆ ಅಥವಾ ಸಾಯಂಕಾಲ ಯಾವುದಾದರು ನೀಲಿಬಣ್ಣದ ಹೂವನ್ನು ತೆಗೆದುಕೊಂಡು ಮಹಾಲಕ್ಷ್ಮಿ ದೇವಸ್ಥಾನಕ್ಕೇ ಕೊಟ್ಟು ಅಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ಬನ್ನಿ ನಿಮಗೆ ಇರುವ ಹಣದ ಖರ್ಚು ಮತ್ತು ಆರೋಗ್ಯದ ಸಮಸ್ಯೆ ದೂರವಾಗುತ್ತದೆ.

ಇನ್ನು ವೃಷಭ ರಾಶಿ. ಈ ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭಿಸುವುದಕ್ಕೆ ಹೋದರು ಅದು ಪೂರ್ಣ ವಾಗುವುದಿಲ್ಲ ಆ ಕೆಲಸ ಅರ್ಧದಲ್ಲೇ ನಿಲ್ಲುವುದರಿಂದ ನಿಮಗೆ ಮಾನಸಿಕವಾಗಿ ಬೇಜಾರಾಗುತ್ತದೆ. ಆದ್ದರಿಂದ ನೀವು ಸೋಮವಾರದಂದು ಶಿವನ ದೇವಸ್ಥಾನಕ್ಕೆ ಚಿಕ್ಕ ಅಥವಾ ನಿಮಗೆ ಸಾಧ್ಯವಿದ್ದಲ್ಲಿ ದೊಡ್ಡಬಾಟಲಿಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡುಹೋಗಿ ದಾನ ಮಾಡಿ ಹೀಗೆ ದಾನಮಾಡುವುದರಿಂದ ಆ ಅರ್ಧ ಆಗುವಂತಹ ಕೆಲಸ ಉತ್ಸಾಹದಲ್ಲಿ ಇರಂಭಿಸಿದ ಕೆಲಸ ಬಿದ್ದುಹೋಗದ ಹಾಗೆ ಒಳ್ಳೆಯದಾಗುವುದಕ್ಕೆ ಈ ಪರಿಹಾರ ತುಂಬಾ ಸಹಾಯಕವಾಗಿದೆ.

ಮಿಥುನ ರಾಶಿ. ಈ ರಾಶಿಯವರಿಗೆ ಹೆಣ್ಣುಮಕ್ಕಳಿಂದ ತೊಂದರೆಯಾಗಬಹುದು ಮನೆಯಲ್ಲಿಯೇ ಅಕ್ಕತಂಗಿಯರು ಅಥವಾ ನೀವು ಹೊರಗಡೆ ಕೆಲಸ ಮಾಡುತ್ತಿದ್ದರೆ ಅವರಿಂದಇರಬಹುದು ಹಾಗಾಗಿ ಈ ತಿಂಗಳು ಹೆಣ್ಣುಮಕ್ಕಳಿಂದ ದೂರ ಇರಿ ಮಾತಿಗೆ ಮಾತುಬೇಳೆದು ಎಲ್ಲಿಗೋಹೋಗಿ ತೊಂದರೆ ಯಾಗುವಂತದ್ದು ಹೀಗಿರುವುದರಿಂದ ಆದಷ್ಟು ಎಚ್ಚರಿಕೆಯಿಂದ ಇರಬೇಕು.

ಇನ್ನು ಯಾವುದಾದರು ಅಮ್ಮನವರ ದೇವಸ್ಥಾನಕ್ಕೇ ಮಂಗಳವಾರ ಮಂಗಳವಾರ ಒಂದು ಪ್ಯಾಕ್ ಮೊಸರನ್ನು ದಾನ ಮಾಡಿ ಬೆಳಿಗ್ಗೆ ಹನ್ನೊಂದೂವರೆ ಒಳಗೆ ಕೊಟ್ಟರೆ ತುಂಬಾ ಒಳ್ಳೆಯದು ಅದು ಸಾಧ್ಯ ಆಗದಿದ್ದಲ್ಲಿ ಸಾಯಂಕಾಲ ಒಂದೊಂದು ಪ್ಯಾಕ್ ಮೊಸರನ್ನು ದಾನ ಮಾಡಬೇಕು ಇದರಿಂದ ಉತ್ತಮ ಪರಿಹಾರ ಸಿಗುತ್ತದೆ.

ಇನ್ನು ಕರ್ಕಾಟಕ ರಾಶಿ. ಈ ತಿಂಗಳಲ್ಲಿ ನಿಮ್ಮ ಬುದ್ದಿವಂತಿಕೆ ಕೆಲಸಮಾಡಲು ಪ್ರಾರಂಭಿಸುತ್ತದೆ ಹಾಗಾಗಿ ನೀವು ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸುವುದಕ್ಕೆ ಏನಾದರೂ ಹೊಸದನ್ನು ಮಾಡುವುದಕ್ಕೆ ಒಳ್ಳೆಯ ಸಮಯ ಇದಾಗಿರುತ್ತದೆ.ಇನ್ನು ನೀವು ತಾಮ್ರದ ಸಣ್ಣ ಚೊಂಬಿನಲ್ಲಿ ಅರ್ಧ ಕೆಜಿ ಹೆಸರುಕಾಳು ಹಾಕಿ ಅದನ್ನು ಶಿವನ ದೇವಸ್ಥಾನಕ್ಕೆ ಸೋಮವಾರ ಸೋಮವಾರ ಕೊಡಬೇಕು ಇದರಿಂದ ನಿಮ್ಮ ಬುದ್ದಿವಂತಿಕೆ ಕೆಲಸಮಾಡುತ್ತದೆ ಈ ತಿಂಗಳು ಏನಾದರೂ ವಿಶೇಷ ನಡೆಯುತ್ತದೆ ನಿಮಗೆ ಮಾನಸಿಕವಾಗಿ ಸಂತೋಷ ನೆಮ್ಮದಿ ಸಿಗುತ್ತದೆ

ಇನ್ನು ಸಿಂಹ ರಾಶಿ. ಈ ರಾಶಿಯವರು ನಿಮ್ಮ ಬಳಿ ಇರುವ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಬೇಕೆಂದರೆ ಅಂದರೆ ಮ್ಯೂಚುವಲ್ ಫಂಡ್ಸ್ ಅಥವಾ ಅಂಚೇಕಛೇರಿಯಲ್ಲಿ ಎಫ್ ಡಿ ಇದುವಂತದ್ದು ಅಥವಾ ಯಾರಿಗೋ ಬಡ್ಡಿಗೆ ಕೊಡುವಂತದು ಅಥವಾ ಮನೆ ತೆಗೆದುಕೊಳ್ಳುವ ಈ ತರಹದ ಹೂಡಿಕೆಯ ಉದ್ದೇಶಕ್ಕಾಗಿ ಹಣವನ್ನು ಇಟ್ಟುಕೊಂಡಿದ್ದರೆ ಅದನ್ನು ಹೂಡಿಕೆ ಮಾಡಬೇಡಿ ಅದನ್ನು ಮುಂದೆ ಹಾಕಿ.

ನೀವು ಮಲ್ಲಿಗೆ ಹಾರ ಅಥವಾ ಮಲ್ಲಿಗೆ ಹೂವನ್ನು ಒಳ್ಳೆ ಪರಿಮಳವಿರುವ ಅರಳಿರುವ ಹೂವನ್ನು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಶುಕ್ರವಾರ ಶುಕ್ರವಾರ ಕೊಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಜೊತೆಗೆ ನಿಮ್ಮ ಹಣ ನಿಮ್ಮ ಬಳಿಯೇ ಉಳಿಯುತ್ತದೆ.

ಇನ್ನು ಕನ್ಯಾ ರಾಶಿ. ಈ ರಾಶಿಯವರಿಗೆ ಏನೋ ಮಾಡಲು ಹೋಗಿ ಏನೋ ಆಗುವಂತದು ಇದನ್ನು ಮಾಡಬೇಕೋ ಬೇಡವೋ ಎನ್ನುವ ಗೊಂದಲವಾಗುವಂತದ್ದು ನೀವು ಸಹ ಯಾರಿಗಾದರೂ ದುಡ್ಡು ಕೊಡಬೇಕೆಂದು ಕೊಂಡಿದ್ದರೆ ಸ್ನೇಹಿತರಿಗೆ ಪರಿಚಿತರಿಗೆ ದಯವಿಟ್ಟು ಯಾರಿಗೂ ಕೊಡಬೇಡಿ ಈ ತಿಂಗಳು ನೀವು ಕೊಟ್ಟ ಹಣ ನಿಮಗೆ ಹಿಂತಿರುಗಿ ಬರುವುದಿಲ್ಲ ಎಚ್ಚರಿಕೆಯಿಂದ ಇರಿ.

ನೀವು ಒಂದು ಆರುನೂರು ಗ್ರಾಂ ಒಣಗಿದ ಅವರೇಕಾಳನ್ನು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕೊಡಿ ಇಲ್ಲದಿದ್ದರೆ ದೇವಸ್ಥಾನಕ್ಕೆ ಹೋಗಿ ಯಾವುದಾದರು ಬಡವರಿಗೆ ಅವರೆಕಾಳು ಕೊಡಿ. ನೀವು ದಾನ ಎಂದು ಕೊಡುವುದನ್ನು ದೇವರಿಗೆ ದೇವಸ್ಥಾನಕ್ಕೆ ಕೊಡಬೇಕೆಂದೆನಿಲ್ಲ ನೀವು ದೇವಸ್ಥಾನಕ್ಕೆ ಹೋಗಿ ಬಡವರಿಗೆ ಅಥವಾ ಅವಶ್ಯಕತೆ ಇರುವವರಿಗೆ ದಾನ ಮಾಡಿ.ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ.

ಇನ್ನು ತುಲಾ ರಾಶಿ.ಈ ರಾಶಿಯವರು ಅಂದುಕೊಳ್ಳುವುದು ಒಂದು ಆಗುವುದೇ ಒಂದು, ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದಿರಬಹುದು ಆದ್ದರಿಂದ ನೀವು ಪ್ರತಿ ಶುಕ್ರವಾರ ಶುಕ್ರವಾರ ಅರ್ಧ ಕೆಜಿ ಆಲೂಗಡ್ಡೆಯನ್ನು ಉಪ್ಪು ಹಾಕಿ ಬೇಯಿಸಿ ಹಸುವಿಗೆ ದಾನ ನೀಡಿ ಇದರಿಂದ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ.

ಇನ್ನು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಸ್ವಲ್ಪ ಆಲಸಿತನ ಈ ತಿಂಗಳು ಬರುತ್ತದೆ ಯಾವುದೇ ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ ಅದನ್ನು ಮುಂದೆ ಹಾಕುತ್ತೀರಿ ಸೊಂಬೇರಿತನದಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ಬೂದುಗುಂಬಳ ಕಾಯಿಯಿಂದ ಸಿಹಿ ಮಾಡಿ ಹಂಚುವಂತಹದ್ದು ಅಥವಾ ಇಡಿಯಾದ ಬೂದುಗುಂಬಳವನ್ನು ಶಿವನ ದೇವಸ್ಥಾನಕ್ಕೆ ಸೋಮವಾರ ಕೊಡುವುದು ಇದನ್ನು ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಇನ್ನು ಧನುರ್ ರಾಶಿ. ಈ ರಾಶಿಯವರು ನಿಮಗೆ ಬಹಳ ಹತ್ತಿರವಾದ ವ್ಯಕ್ತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಹಾಗಾಗಿ ನಿಮ್ಮಲ್ಲಿ ಯಾರಿಗಾದರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಅವರನ್ನು ತುಂಬಾ ಎಚ್ಚಿಕೆಯಿಂದ ನೋಡಿಕೊಳ್ಳಿ. ನೀವು ಮಂಗಳವಾರ ಮಂಗಳವಾರ ಗಣೇಶನ ದೇವಸ್ಥಾನಕ್ಕೆ ಕರ್ಪೂರದ ದಾನವನ್ನು ಮಾಡಿ ನಿಮ್ಮ ಪ್ರೀತಿಪಾತ್ರರ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಿ.

ಮಕರ ರಾಶಿ. ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರು ಅದರಿಂದ ನಿಮಗೆ ತೃಪ್ತಿ ಸಿಗುವುದಿಲ್ಲ ಕೆಲಸ ಆಗುತ್ತಿರುತ್ತದೆ ಆದರೆ ನೀವು ಅಂದುಕೊಂಡ ಹಾಗೆ ಕೆಲಸ ನಡೆಯುವುದಿಲ್ಲ ಅದರಿಂದ ನಿಮಗೆ ತೃಪ್ತಿ ಆಗುವುದಿಲ್ಲ. ಆದ್ದರಿಂದ ನೀವು ಯಾವುದಾದರೂ ವೃದ್ಧಾಶ್ರಮಕ್ಕೆ ಅಥವಾ ಬಡಬಗ್ಗರಿಗೆ ಯಾರಿಗೆ ಅವಶ್ಯಕತೆ ಇರುತ್ತದೆಯೋ ಅವರಿಗೆ ಶನಿವಾರ ಶನಿವಾರ ಸಾಧ್ಯವಾದಷ್ಟು ಬೇಡಶಿಟ್ ದಾನ ಮಾಡಿ ನೀಲಿ ಅಥವಾ ಕಪ್ಪುಮತ್ತು ಬಿಳಿ ಮಿಶ್ರಿತ ಬಣ್ಣದ್ದನ್ನು ಕೊಟ್ಟರೆ ಒಳ್ಳೆಯದು.

ಇನ್ನು ಕುಂಭ ರಾಶಿ. ನೀವು ವಿನಾಕಾರಣ ನೋವನ್ನು ಅನುಭವಿಸುತ್ತೀರಿ ಒಂಟಿತನ ನಿಮ್ಮನ್ನು ಕಾಡುತ್ತದೆ. ಈ ನೋವು ಒಂಟಿತನ ನಿಮ್ಮನ್ನು ಕಾಡಬಾರದೆಂದರೆ ನೀವು ತುಪ್ಪ ಅಥವಾ ಹಾಲನ್ನು ಮಂಗಳವಾರ ಮಂಗಳವಾರ ಅಮ್ಮನವರ ದೇವಸ್ಥಾನಕ್ಕೆ ಕೊಡುವುದರಿಂದ ಒಳ್ಳೆಯದಾಗುತ್ತದೆ.

ಇನ್ನು ಕೊನೆಯದಾಗಿ ಮಿನರಾಶಿ. ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಜಾಸ್ತಿಯಾಗುತ್ತದೆ ಆರೋಗ್ಯದಲ್ಲಿ ಚೇತರಿಕೆ ಕಾಣದಷ್ಟು ಹೆಚ್ಚಿನ ಕಾಯಿಲೆ ಬರುವಂತಹದ್ದು ಕಾಯಿಲೆ ಉಲ್ಬಣವಾಗುವಂತದ್ದು ಇರುವುದರಿಂದ ಈ ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ಎಚ್ಚರಿಕೆ ವಹಿಸಬೇಕು ಸೂರ್ಯ ನಮಸ್ಕಾರವನ್ನು ತಪ್ಪಿಸಬೇಡಿ ಇದರಿಂದ ಸೂರ್ಯನ ಬಿಸಿಲು ಮೈ ಮೇಲೆ ಬೀಳುವ ಹಾಗೆ ನೋಡಿಕೊಳ್ಳಿ.

ನೀವು ನಾಲ್ಕು ಬಾನುವಾರ ಅರ್ಧ ಕೆಜಿಯಷ್ಟು ಗೋಧಿಯನ್ನು ವೆಂಕಟೇಶ್ವರ ದೇವಾಲಯಕ್ಕೆ ದಾನ ಮಾಡಿ.ಇದರಿಂದ ನಿಮ್ಮ ಆರೋಗ್ಯ ಸಮಸ್ಯೆಯಲ್ಲಿ ಚೇತರಿಕೆ ಕಂಡು ಬರುತ್ತದೆ. ಸ್ನೇಹಿತರೆ ಈ ರೀತಿಯಾದ ಸಣ್ಣ ಸಣ್ಣ ಪರಿಹಾರವನ್ನು ಎಲ್ಲ ರಾಶಿಯವರು ಮಾಡಿಕೊಳ್ಳಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಮತ್ತು ನಿಮಗಿರುವ ದೋಷ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *