Zodiac Signs in Kannada: ಅದೃಷ್ಟ ಅಥವಾ ದುರಾದೃಷ್ಟಗಳು ಕಾಲಚಕ್ರದ ಜೊತೆಯಲ್ಲಿ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುತ್ತವೆ. ಇವುಗಳು ಬೇಕು ಎಂದಾಗ ಬರುವುದಿಲ್ಲ. ಸಾಕು ಎಂದಾಗ ಹೋಗುವುದಿಲ್ಲ. ಇವುಗಳು ಇದ್ದಾಗ ಅನುಭವಿಸಿಯೆ ತೀರಬೇಕಾಗುತ್ತದೆ. ಕೆಲವರಿಗೆ ಅದೃಷ್ಟ ಹೆಚ್ಚಾಗಿದ್ದರೆ, ಕೆಲವರ ಜನ್ಮದಲ್ಲಿ ಕೇವಲ ದುರಾದೃಷ್ಟವನ್ನೇ ಕಂಡಿರುತ್ತಾರೆ. ಇಷ್ಟು ದಿನ ದುರಾದೃಷ್ಟವನ್ನು ಕಂಡಂತಹ ಈ ಐದು ರಾಶಿಯವರಿಗೆ ಈಗ ಅದೃಷ್ಟವನ್ನು ಪಡೆಯುವ ಕಾಲ ಒದಗಿ ಬಂದಿದೆ.

Zodiac Signs in Kannada

ಭರ್ಜರಿ 38 ವರ್ಷಗಳ ನಂತರ ಹನುಮಾನ್ ಕೃಪೆಯಿಂದ ಈ ಐದು ರಾಶಿಯವರಿಗೆ ಭಾರಿ ಅದೃಷ್ಟವು ಬರಲಿದೆ. ಇವರು ಮುಟ್ಟಿದ್ದೆಲ್ಲವು ಚಿನ್ನವಾಗಲಿದ್ದು, ಕೋಟ್ಯಾಧಿಪತಿಗಳಾಗುವ ಯೋಗವು ಇವರಿಗೆ ಸಿಗಲಿದೆ. ಜೀವನದಲ್ಲಿ ಇಷ್ಟು ದಿನ ಎಷ್ಟೇ ಕಷ್ಟಗಳನ್ನು ನಷ್ಟಗಳನ್ನು ಅನುಭವಿಸಿದ್ದರೂ ಸಹ ಅದರಿಂದ ಹೊರ ಬರುವ ದಾರಿಯು ಕಾಣಲಿದೆ. ಇದರಿಂದಾಗಿ ಈ ಐದು ರಾಶಿಯವರು ಉತ್ತಮ ಜೀವನವನ್ನು ನಡೆಸಲಿದ್ದಾರೆ. ಆಂಜನೇಯಸ್ವಾಮಿಯ ದಿವ್ಯ ಕೃಪೆಯು ಈ ಐದು ರಾಶಿಗಳ ಜನರ ಮೇಲೆ ಬೀಳುವುದರಿಂದ ಇವರ ಎಲ್ಲ ಸಮಸ್ಯೆಗಳು ದೂರವಾಗಲಿವೆ.

ಏಪ್ರಿಲ್ ತಿಂಗಳಿನ ಅಮವಾಸ್ಯೆಯ ನಂತರ ಈ ಐದು ರಾಶಿಯವರಿಗೆ ಕುಬೇರನ ಸಂಪೂರ್ಣ ಅನುಗ್ರಹವು ಆಂಜನೇಯ ಸ್ವಾಮಿಯಿಂದಾಗಿ ದೊರೆಯಲಿದ್ದು, ಇವರ ಕಷ್ಟಗಳೆಲ್ಲ ದೂರವಾಗುತ್ತವೆ. ಇಷ್ಟು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಈಗ ಕೂಡಿ ಬಂದಿದೆ. ಇಲ್ಲಿಯವರೆಗೂ ಈ ರಾಶಿಯವರು ಅನುಭವಿಸಿದ ಅವಮಾನಗಳಿಗೆಲ್ಲ ಸಮಯವೇ ಉತ್ತರವನ್ನು ನೀಡಲಿದೆ. ಇವರು ಕುಬೇರನ ನೇರ ದೃಷ್ಟಿಗೆ ಪಾತ್ರರಾಗುವುದರಿಂದ ಇವರ ಮನೆಯಲ್ಲಿ ಹಣದ ಪ್ರವಾಹವೇ ಸೃಷ್ಟಿಯಾಗಲಿದೆ. ಇವರ ಉದ್ಯೋಗಗಳಿಗೆ ಮನೆಯವರ ಹಾಗೂ ಬಂಧು ಮಿತ್ರರ ಸಹಕಾರವು ಪೂರ್ತಿಯಾಗಿ ದೊರೆಯುತ್ತದೆ.

ಈ ಐದು ರಾಶಿಯವರಿಗೆ ಏಪ್ರಿಲ್ 22 ರ ನಂತರ ಗಜಕೇಸರಿ ಯೋಗವು ಸಹ ಆರಂಭವಾಗುತ್ತದೆ. ಗಜಕೇಸರಿಯ ಯೋಗವೆಂದರೆ ಈ ರಾಶಿಯವರು ಯಾವ ಕೆಲಸವನ್ನು ಈ ಸಮಯದಲ್ಲಿ ಕೈಗೆತ್ತಿಕೊಳ್ಳುತ್ತಾರೋ ಆ ಎಲ್ಲ ಕೆಲಸಗಳು ಬಹುಬೇಗನೇ ಪೂರ್ಣವಾಗುತ್ತವೆ. ಇವರಿಗೆ ಗುರುವಿನ ಬಲವು ಸಹ ಚೆನ್ನಾಗಿದ್ದು, ಎಲ್ಲಿಯೂ ಹಣಕಾಸಿನ ಸಮಸ್ಯೆಗಳು ಉದ್ಬವವಾಗುವುದಿಲ್ಲ. ಈ ಹಿಂದೆ ಇದ್ದಂತಹ ಸಾಲಗಳು ಸಹ ಕ್ರಮೇಣವಾಗಿ ತೀರುತ್ತವೆ. ಮತ್ತು ಹೊಸ ಸಾಲ ಸಮಸ್ಯೆಗಳು ಹುಟ್ಟುವುದಿಲ್ಲ.

ಇದನ್ನೂ ಓದಿ..Scorpio Astrology: ವೃಶ್ಚಿಕ ರಾಶಿ, ಇಷ್ಟು ದಿನ ನಡೆದದ್ದು ಒಂದು ಲೆಕ್ಕ ಇನ್ಮುಂದೆ ನಡೆಯೋದು ಬೇರೆ

ಏಪ್ರಿಲ್ 20 ರ ಅಮವಾಸ್ಯೆಯು ಕಳೆಯುತ್ತಿದ್ದ ಹಾಗೆ ಈ ರಾಶಿಯವರು ಹೊಸ ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬಹುದು. ಸ್ವಂತ ಉದ್ಯೋಗವನ್ನು ಮಾಡುವವರಿಗೆ ಈ ದಿನಗಳು ಚೆನ್ನಾಗಿದೆ. ಇವರ ಗ್ರಹಗತಿಗಳು ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಲಿವೆ. ಮನೆಯ ಸ್ಥಿತಿ ಸಹ ಸುಧಾರಿಸಲಿದ್ದು, ಅತೀ ಶೀಘ್ರವಾಗಿ ಉನ್ನತಿಯನ್ನು ಕಾಣುತ್ತಾರೆ. ಇವರ ಯೋಗವು ರಾಜಯೋಗವಾಗಿದ್ದರಿಂದ ಇವರನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಕೆಲಸವಿಲ್ಲದವರಿಗೆ ಕೈ ತುಂಬಾ ಕೆಲಸಗಳು ದೊರೆಯುತ್ತವೆ‌.

ಇಲ್ಲಿಯವರೆಗೆ ವಿವಾಹದಲ್ಲಿದ್ದ ಅಡಚಣೆಗಳು ದೂರವಾಗಿ, ಬೇಗನೆ ಕಂಕಣ ಕೂಡಿ ಬರಲಿದೆ. ಇನ್ನು ಹತ್ತು ವರ್ಷಗಳ ಕಾಲ ಇವರಿಗೆ ಗಜಕೇಸರಿ ಯೋಗವು ಇರುವುದರಿಂದ ಬಂಧು ಬಾಂಧವರಿಂದಲೂ ಇವರಿಗೆ ಮನ್ನಣೆಗಳು ದೊರೆಯುತ್ತದೆ. ಇವರು ಸಮಾಜದಲ್ಲಿ ಬಹುಬೇಗನೆ ಗುರುತಿಸಿಕೊಳ್ಳಲಿದ್ದು, ಸ್ವಲ್ಪ ಪ್ರಯತ್ನ ಮಾಡಿದಲ್ಲಿ ಒಳ್ಳೆಯ ಜನನಾಯಕರಾಗುತ್ತಾರೆ‌. ಈ ರಾಶಿಯವರಿಗೆ ರಾಜಕೀಯವು ಹೇಳಿ ಮಾಡಿಸಿದ ವೇದಿಕೆಯಾಗಿದ್ದು, ಇವರ ಚಾಣಾಕ್ಷ ತನದಿಂದ ಎಲ್ಲರನ್ನು ಮೋಡಿ ಮಾಡುತ್ತ ತಮ್ಮ ಸ್ಥಾನವನ್ನು ಭದ್ರಗೊಳಿಸುತ್ತಾರೆ.

ಇದನ್ನೂ ಓದಿ..ಇಂದಿನ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಗುರುಬಲ ಪ್ರಾಪ್ತಿ, ಬದಲಾಗಲಿದೆ ಇವರ ಲೈಫ್

ಹಾಗಿದ್ದರೆ ಆಂಜನೇಯಯ ಕೃಪೆಗೆ ಪಾತ್ರರಾಗಿ ಈ ಯೋಗವನ್ನು ಪಡೆಯುವ ರಾಶಿಗಳು ಯಾವವೆಂದು ನೋಡೊಣ. ಮೊದಲನೆಯದಾಗಿ ಧನಸ್ಸು ರಾಶಿ. ಎರಡನೆಯದು ಕುಂಭರಾಶಿ‌ ಹಾಗೂ ಮಕರ ರಾಶಿ ಮೂರನೇಯ ರಾಶಿಯಾಗಿದೆ. ಮಿಥುನ ರಾಶಿಯು ಸಹ ಆಂಜನೇಯನ ಕೃಪೆಯಲ್ಲಿ ಸಿಲುಕಲಿರುವ ನಾಲ್ಕನೆಯ ರಾಶಿಯಾಗಿದ್ದು, ಕಟಕ ರಾಶಿಯು ಐದನೆಯ ರಾಶಿಯಾಗಿದೆ. ಈ ಐದು ರಾಶಿಯ ಜನರು ತಮ್ಮ ರಾಶಿಯ ಮೇಲಿರುವ ಆಂಜನೇಯನ ಕೃಪೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶನಿವಾರ ಅಥವಾ ಮಂಗಳವಾರದ ದಿನ ಆಂಜನೇಯ ಸ್ವಾಮಿಯ ದೇಗುಲಕ್ಕೆ ಎಳ್ಳೆಣ್ಣೆಯನ್ನು ನೀಡುತ್ತಾ ಬಂದಿದ್ದೆ ಆದಲ್ಲಿ ಅತೀ ಶೀಘ್ರವಾಗಿ ತಮ್ಮ ಉನ್ನತಿಯನ್ನು ಕಾಣಲಿದ್ದಾರೆ.

Leave a Reply

Your email address will not be published. Required fields are marked *