ಒಬ್ಬ ಸಾಮಾನ್ಯ ಬಸ್ ಡ್ರೈವರ್ ಮಗ ಇಂದು ನ್ಯಾಷನಲ್ ಸ್ಟಾರ್ ಆಗಿ ಮನೆ ಮಾತಾಗಿದ್ದರೆ ನಮ್ಮ ರಾಕಿಂಗ್ ಸ್ಟಾರ್. ಪ್ರತಿಭೆ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಮಧ್ಯಮವರ್ಗದ ಹುಡುಗ ಇವರು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದು ಇಂದು ಇಡೀ ದೇಶವೇ ಮೆಚ್ಚುವಂತಹ ಸ್ಟಾರ್ ಆಗಿದ್ದಾರೆ ಯಶ್. ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ರಾಕಿ ಬಾಯ್, ರಾಕಿಂಗ್ ಸ್ಟಾರ್, ಮಾಸ್ಟರ್ ಪೀಸ್ ಎಂದೇ ಖ್ಯಾತಿಯಾಗಿರುವ ನಮ್ಮ ಯಶ್ ಅವರು ನವೀನ್ ಕುಮಾರ್ ಇಂದ ಯಶ್ ಆಗಿ ಗುರುತಿಸಿ ಕೊಂಡಿದ್ದು ಸಾಮಾನ್ಯ ವಿಷಯವಲ್ಲ. ಇದರ ಹಿಂದೆ ಅವರ ಕಷ್ಟ, ನೋವು, ಪರಿಶ್ರಮ, ಅವಮಾನ, ಕಣ್ಣೀರು ಎಲ್ಲವೂ ಇದೆ.

ಇಂದು ಯಶ್ ಎಂದು ಹೆಸರುವಾಸಿಯಾಗಿರುವ ಇವರ ಹುಟ್ಟು ಹೆಸರು ನವೀನ್ ಕುಮಾರ್ ಗೌಡ. ಇವರು ಜನವರಿ8 1986ರಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪ ದಂಪತಿಗಳ ಮಗನಾಗಿ ಹಾಸನ ಜಿಲ್ಲೆಯ ಭುವನ ಹಳ್ಳಿಯ ಬಳಿ ಇವರು ಜನಿಸುತ್ತಾರೆ. ಇವರ ತಂದೆ ಅರುಣ್ ಕುಮಾರ್ ಅವರು ಕೆಎಸ್ಆರ್ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಆನಂತರ ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯಶ್ ಅವರು ತಮ್ಮ ಬಾಲ್ಯವನ್ನು ಸಾಂಸ್ಕೃತಿಕ ನಗರಿ ಎಂದು ಹೆಸರಾದ ಮೈಸೂರಿನಲ್ಲಿಯೇ ಕಳೆಯುತ್ತಾರೆ. ಇವರು ಮಹಾಜನ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಇವರು ಚಿಕ್ಕ ನಿಂದಲೂ ಶಾಲೆಯಲ್ಲಿ ಓದುವಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಿದ್ದರು.

ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕೂಡ ಗೆದ್ದು ಬರುತ್ತಿದ್ದರು. ಉಪೇಂದ್ರ ಅವರ ಸಿನಿಮಾದ ಸಮಾರೋಪ ಸಮಾರಂಭದಲ್ಲಿ ಯಶ್ ಅವರು ಒಂದು ಡ್ಯಾನ್ಸ್ ಅನ್ನು ಮಾಡುತ್ತಾರೆ ಅವಾಗ ಉಪೇಂದ್ರ ಅವರು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಾ ಎಂದು ಹೇಳಿರುತ್ತಾರೆ. ಯಶ್ ಅವರಿಗೆ ಉಪೇಂದ್ರ ಎಂದರೆ ಚಿಕ್ಕ ವಯಸ್ಸಿನಿಂದಲೂ ತುಂಬಾನೇ ಇಷ್ಟ. ನನಗೆ ಉಪೇಂದ್ರ ಅವರು ಇನ್ಸ್ಪಿರೇಷನ್ ಎಂದು ಹೇಳುತ್ತಾರೆ ಯಶ್ ಅವರು. ಚಿಕ್ಕ ವಯಸ್ಸಿನಿಂದಲೂ ಯಶ್ ಅವರು ಹೀರೋ ಆಗಬೇಕೆಂಬ ಕನಸನ್ನು ಕಾಣುತ್ತಿದ್ದರಂತೆ. ಬಾಲ್ಯದಿಂದಲೂ ಯಶ್ ಅವರು ತಮ್ಮ ಸ್ನೇಹಿತರೊಂದಿಗೆ ನಾನು ಹೀರೋ ಆಗಿ ಆಗ್ತೀನಿ ಎಂದು ಹೇಳಿದ್ದರಂತೆ.

10ನೇ ತರಗತಿ ಮುಗಿದ ಮೇಲೆ ಯಶ್ ಅವರು ತಮ್ಮ ಕುಟುಂಬವನ್ನು ಸರಿದೂಗಿಸಲು ನವೀನ್ ಸ್ಟೋರ್ ಕೆಲಸ ಮಾಡಿದ್ದರು. ಅಂಗಡಿಗೆ ಸಾಮಾನು ಮತ್ತು ತರಕಾರಿಗಳನ್ನು ತಂದು ಹಾಕಿ ಅಂಗಡಿಗೆ ನೆರವಾಗುತ್ತಿದ್ದರು. ಪಿಯುಸಿ ಮುಗಿದ ನಂತರ ಅವರು ತಮ್ಮ ಕುಟುಂಬದ ಕಷ್ಟಗಳನ್ನು ನೋಡಲಾಗದೆ ನಾನು ಓದುವುದಿಲ್ಲ ಹಾಗೆಯೇ ಬೆಂಗಳೂರಿಗೆ ಹೋಗಿ ನಾನು ಏನನ್ನಾದರೂ ಸಾಧಿಸಿ ಕೊಂಡು ಬರುತ್ತೇನೆ ಎಂದು ಬೆಂಗಳೂರಿಗೆ ಬಂದಿದ್ದರು ಯಶ್ ಅವರು. ಯಾರು ಪರಿಚಯವಿರದ ಯಶ್ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಗಾದರೂ ಸೇರಿಕೊಳ್ಳಬೇಕು ಎಂಬ ಆಸೆಯಿಂದ ಸ್ಟಾಪ್ ಎಂಬ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಕೆಲಸವನ್ನು ಮಾಡುವಾಗ ಯಶ್ ಅವರು ಟೀ-ಕಾಫಿ ಮತ್ತು ಸಿಗರೇಟನ್ನು ಕೂಡ ಎಲ್ಲರಿಗೂ ತಂದು ಕೊಡುತ್ತಿರುತ್ತಾರೆ. ದುರದೃಷ್ಟವಶಾತ್ ಸ್ಟಾಪ್ ಸಿನಿಮಾ ಒಂದು ವಾರಕ್ಕೆ ನಿಂತು ಹೋಗುತ್ತದೆ.

ಬೆಂಗಳೂರಲ್ಲಿ ಯಾರೂ ಪರಿಚಯವಿಲ್ಲದವರು ಆಗ ತುಂಬಾನೇ ಕಷ್ಟ ಪಡುತ್ತಾರೆ.ಅ ಲ್ಲಿ ಅವರಿಗೆ ಯಾರೂ ಪರಿಚಯ ಕೂಡ ಇರುವುದಿಲ್ಲ ಹಾಗೆಯೇ ಸಿನಿಮಾದ ಶೂಟಿಂಗ್ ಕೂಡ ನಿಂತು ಹೋಗಿರುತ್ತದೆ. ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಅವರು ಲಗೇಜನ್ನು ಇಡಲು ಸಂಬಂಧಿಕರೊಬ್ಬರಿಗೆ ಫೋನನ್ನು ಮಾಡುತ್ತಾರೆ. ಆಗ ಅವರು ನಾವು ಮನೆಯಲ್ಲಿ ಇಲ್ಲ ಊರಿಗೆ ಹೋಗಿದ್ದೇವೆ ಅಂತ ಹೇಳುತ್ತಾರೆ. ಯಶ್ ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಸ್ಟಾಪ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಅವರ ಸ್ನೇಹಿತ ಮೋಹನ್ ಅವರು ಮಾತನಾಡಿಸಿ ಬನ್ನಿ ನಮ್ಮ ಮನೆಗೆ ಹೋಗೋಣ ಎಂದು ಅವರನ್ನು ಕರೆದುಕೊಂಡು ಹೋಗುತ್ತಾರೆ. ಯಶ್ ಅವರು ಮೋಹನ್ ಅವರ ಮನೆ ಚಿಕ್ಕದಿದ್ದನ್ನು ನೋಡಿ ಅವರಿಗೆ ನಾನು ತೊಂದರೆ ಕೊಡಬಾರದು ಎಂದು ತಮ್ಮ ಲಗೇಜ್ ಮಾತ್ರ ಅಲ್ಲಿ ಇಟ್ಟು ಅವರ ಮನೆಯಿಂದ ಹೊರಡುತ್ತಾರೆ.

ಅಲ್ಲಿಂದ ಹೊರಬಂದ ಅವರು ಇಡೀ ರಾತ್ರಿಯನ್ನು ಮೆಜೆಸ್ಟಿಕ್ ನಲ್ಲಿ ಕಳೆಯುತ್ತಾರೆ. ಇಡಿ ರಾತ್ರಿ ಮೆಜೆಸ್ಟಿಕ್ನಲ್ಲಿ ಪ್ರಪಂಚ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಾರೆ ಯಶ್ ಅವರು. ಏನೇ ಆಗಲಿ ನಾನು ಗಾಂಧಿನಗರದಲ್ಲಿ ಹೀರೋ ಆಗಿ ನಿಲ್ಲುತ್ತೇನೆ ಎಂದು ದೃಢ ನಿರ್ಧಾರ ಮಾಡುತ್ತಾರೆ. ನಂತರ ತಮ್ಮ ಸ್ನೇಹಿತ ನಂಜುಂಡ ಅವರ ಸಹಾಯದಿಂದ ಬೆನಕ ನಾಟಕ ಮಂಡಳಿಯನ್ನು ಸೇರಿಕೊಳ್ಳುತ್ತಾರೆ. ಬೆನಕ ನಾಟಕ ಮಂಡಳಿಯಲ್ಲಿ ಯಾರಾದರೂ ಇಲ್ಲ ಎನ್ನುವಾಗ ಇವರಿಗೆ ಅವಕಾಶ ಸಿಗುತ್ತಿತ್ತು. ಸಿಕ್ಕ ಅವಕಾಶಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದರು ಯಶ್ ಅವರು.

ಯಶ್ ಅವರು ಬೆನಕ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಿದ್ದ ಅವರಿಗೆ ಸೀರಿಯಲ್ನಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ. ಮೊದಲಿಗೆ ಉತ್ತರಾಯಣ ಎಂಬ ಸೀರಿಯಲ್ನಲ್ಲಿ ಅಭಿನಯಿಸುತ್ತಾರೆ. ನಂತರ ನಂದಗೋಕುಲ ಎಂಬ ಸೀರಿಯಲ್ನಲ್ಲಿ ರಾಧಿಕಾ ಪಂಡಿತ್ ಅವರ ಜೊತೆಯಲ್ಲಿ ಅಭಿನಯಿಸುತ್ತಾರೆ. ಮಳೆಬಿಲ್ಲು, ಪ್ರೀತಿ ಇಲ್ಲದ ಮೇಲೆ ಎಂಬ ಸೀರಿಯಲ್ ಗಳಲ್ಲಿ ಅಭಿನಯಿಸುತ್ತಾರೆ. ಸೀರಿಯಲ್ನಲ್ಲಿ ಅಭಿನಯಿಸುತ್ತಾ ಇರುವಾಗ ಯಶ್ ಅವರಿಗೆ ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ಇಂದ ಕಾಲ್ ಬರುತ್ತದೆ.

ನಾವು ಒಂದು ಸಿನೆಮಾ ಮಾಡಬೇಕೆಂದಿದ್ದೇವೆ ಅದಕ್ಕೆ ನಮ್ಮ ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಅವರು ನೀವೇ ಬೇಕು ಅಂತ ಹೇಳುತ್ತಿದ್ದಾರೆ ಎಂದು ಅವರು ಯಶ್ ಅವರಿಗೆ ಹೇಳುತ್ತಾರೆ. ನಂತರ ಅವರು ಎಲ್ಲಿಗೆ ಬರಬೇಕು ಎಂದು ಕೇಳಿ ಅಲ್ಲಿಗೆ ಹೋಗುತ್ತಾರೆ. ಯಶ್ ಅವರು ಡೈರೆಕ್ಟರ್ ಅನ್ನು ಮೀಟ್ ಮಾಡಲು ಹೋದಾಗ ನೀವು ಯಾರು ಎಂದು ಕೇಳುತ್ತಾರೆ. ನಾನು ಯಶವಂತ ಸೀರಿಯಲ್ ಗಳಲ್ಲಿ ಆಕ್ಟ್ ಮಾಡಿದ್ದೇನೆ. ನೀವು ಕರೆದಿದ್ದೀರ ಎಂದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾರೆ. ಆಗ ಡೈರೆಕ್ಟರ್ ಅವರು ಫೋಟೋ ಇದ್ದರೆ ಕೊಟ್ಟು ಹೋಗಿ ಎಂದು ಹೇಳುತ್ತಾರೆ.

ಯಶ್ ಅವರು ನಿರಾಶೆಯಿಂದ ಅಲ್ಲಿಂದ ಹೊರ ಬರುತ್ತಾರೆ. ನಂತರ ಡೈರೆಕ್ಟರ್ ಅವರು ಯಶ್ ಅವರಿಗೆ ಕಾಲ್ ಮಾಡಿ ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯವನ್ನು ಹೇಳಿ ಎಂದು ಕೇಳುತ್ತಾರೆ.ಅವರು ಕೋಪಗೊಂಡು ನನ್ನ ಪ್ರತಿಭೆ ಮತ್ತು ಆಕ್ಟಿಂಗನ್ನೂ ನೋಡಿ ಅವಕಾಶವನ್ನು ಕೊಡಿ ಇಲ್ಲದಿದ್ದರೆ ಬೇಡ ಎಂದು ಕೋಪದಿಂದ ಕಾಲ್ ಕಟ್ ಮಾಡುತ್ತಾರೆ. ಈ ರೀತಿಯ ಹಲವಾರು ಅನುಭವಗಳನ್ನು ನಮ್ಮ ಯಶ್ ಅವರು ಅನುಭವಿಸಿದ್ದಾರೆ. ನಂತರ ಇವರು ಮೊಗ್ಗಿನ ಮನಸ್ಸು ಸಿನಿಮಾವನ್ನು ಮಾಡುತ್ತಾರೆ ಅದರಲ್ಲಿ ರಾಧಿಕಾ ಪಂಡಿತ್ ಅವರು ನಾಯಕಿ ಯಾಗಿರುತ್ತಾರೆ.

ಈ ಸಿನಿಮಾಗೆ ಒಳ್ಳೆ ಯಶಸ್ಸು ಕೂಡ ಸಿಗುತ್ತದೆ. ಮೊದಲ ಸಿನಿಮಾ ಯಶ್ ಅವರಿಗೆ ಫಿಲಂ ಫೇರ್ ಅವಾರ್ಡ್ ಕೂಡ ಸಿಗುತ್ತದೆ. ನಂತರ ರಾಕಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಈ ಸಿನಿಮಾದಲ್ಲಿ ಫೈಟಿಂಗ್ ಮಾಡುವಾಗ ತಮ್ಮ ಕೈಗೆ ಗಾಯವನ್ನು ಮಾಡಿಕೊಳ್ಳುತ್ತಾರೆ. ಆದರೂ ಸಹ ಯಾರಿಗೂ ಹೇಳದೆ ಸಿನಿಮಾದ ಶೂಟಿಂಗ್ ಮುಗಿಸುತ್ತಾರೆ. ನಂತರ ಕಳ್ಳರ ಸಂತೆ, ಗೋಕುಲ ಸಿನಿಮಾಗಳಲ್ಲಿ ನಟಿಸುತ್ತಾರೆ. ನಂತರ ಹಲವಾರು ಸಿನಿಮಾಗಳ ನಂತರ ಕಿರಾತಕ ಸಿನಿಮಾ ಅದ್ದೂರಿ ಯಶಸ್ಸನ್ನು ಕಾಣುತ್ತದೆ. ನಂತರ ಎಲ್ಲಾ ಸಿನಿಮಾಗಳ ಮೂಲಕ ಒಳ್ಳೆ ಯಶಸ್ಸನ್ನು ಪಡೆಯುತ್ತಾರೆ.

2013 ಅಲ್ಲಿ ಗೂಗ್ಲಿ ಸಿನಿಮಾ ಯಶ್ ಅವರನ್ನು ಸ್ಟಾರ್ ನಟನನ್ನಾಗಿ ಮಾಡುತ್ತದೆ. ನಂತರ ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ಸಂತು ಸ್ಟ್ರೈಟ್ ಫಾರ್ವರ್ಡ್ ಎಲ್ಲಾ ಸಿನಿಮಾಗಳು ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ. ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ ಮದುವೆ ಕೂಡ ಆಗುತ್ತಾರೆ. ಕೆಜಿಎಫ್ ಸಿನಿಮಾ ಇವರನ್ನು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತದೆ.

ಯಶ್ ಅವರು ತಮ್ಮನ್ನು ನಾನು ಇಷ್ಟೇ ಅಭಿವೃದ್ಧಿ, ಸಂಪಾದನೆ ಮಾಡಿದರು ಕೂಡ ಕೇವಲ ಇದೆಲ್ಲ ಅಭಿಮಾನಿಗಳಿಂದ ಎಂದು ಯಾವಾಗಲೂ ಹೇಳಿಕೊಳ್ಳುತ್ತಾರೆ ಇಷ್ಟು ಬೆಳೆಸಿದ ಅಭಿಮಾನಿಗಳಿಗೆ ಸಹಾಯ ಮಾಡಬೇಕು ಎಂದು ಯಶೋ ಮಾರ್ಗ ಫೌಂಡೇಶನ್ ಅನ್ನು ಸ್ಥಾಪನೆ ಮಾಡುತ್ತಾರೆ. ಏನು ಬ್ಯಾಗ್ರೌಂಡ್ ಇಲ್ಲದೆ ನನ್ನನ್ನು ಕೇವಲ ಪ್ರತಿಭೆಯಿಂದ ಬೆಳೆಸಿದ್ದಾರೆ ಯಾವಾಗಲೂ ನಾನು ನನ್ನ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ತಾನು ಸಂಪಾದಿಸಿರುವ ನಿಜವಾದ ಆಸ್ತಿ ಅಭಿಮಾನಿಗಳು ಎಂದು ಹೇಳುತ್ತಾರೆ. ಕಷ್ಟದಿಂದ ಮೇಲೆ ಬಂದ ಯಶ್ ಅವರು ಈಗ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *